Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ

ಮೊದಲ ದಿನವೇ ಕದ್ದಳಲ್ಲ ಮನಸ್ಸು
ದಿನಾಲು ಕಂಡೆನಲ್ಲ ಅವಳದೇ ಕನಸ್ಸು
ಅನ್ಕೊಂಡೆ ನಾ ಅವ್ಳು ಸಿಗಬೇಕಂದ್ರೆ ಬೇಕು ಯಶಸ್ಸು
ಯಶಸ್ಸೇನೋ ಸಿಕ್ತು ಆದ್ರೆ ಅಷ್ಟರಲ್ಲಿ ಅವಳಾದ್ಲು ಮಿಸ್
ರುದ್ರಮುನಿ.ಕೆ

- Rudramuni khandgadippi

19 May 2020, 08:13 pm

ಕತ್ತಲೆ ಕಾಡು

ಕತ್ತಲೆಯ ದಟ್ಟಡವಿಯಲ್ಲಿ
ಒಬ್ಬಂಟಿಯಾಗಿ ನಿಂತಿರುವೆ ನಾನಾ
ಬಂದು ನೀನು ದಾರಿ ತೋರುವಿಯಾ
ಜೀವದ ಗೆಳತಿ ನನ್ನಹೃದಯದ ಒಡತಿ

- santhu

19 May 2020, 03:00 pm

ಅಚಲ ಪ್ರೀತಿ ನೆನಪು

ಮನದಲ್ಲಿ ಮೂಡಿರುವ ಗೀತೆ,
ಸ್ವರದಿಂದ ಹೊಮ್ಮಲು ಸಾಧ್ಯವೇ ಆ ಗಂಭಿರ್ಯತೆ!
ಮೌನದಲ್ಲಿ ಸಿಲುಕಿರುವ ನನ್ನ ಚಿಂತೆ,
ಬಿಡಿಸಿ ಹೇಳಲಾಗುತಿಲ್ಲ ಆ ವ್ಯಥೆ!
ಮರೆಯಲು ಆಗುತ್ತಿಲ್ಲ ನಿನ್ನ ಮಾತಿನ ಕಂತೆ
ಮಾಸುತ್ತಿಲ್ಲ ನೆನಪಿನ ಬೊಂತೆ
ಸೇರಿಸುವೆ ನನ್ನ ಹೇಸರ ನಿನ್ನ ಜೊತೆ
ಮಾತುಗಳೆಲ್ಲ ನಿನ್ನಂತೆಯೇ ಕಲಿತೆ
ಬರಹಗಳೆಲ್ಲ ನುಡಿದವು ಕವಿತೆ
ಸ್ಮರಿಸದ ಕ್ಷಣವಿಲ್ಲ ನಿನ್ನ ಓ ವನಿತೆ
ಯಾಕೆ ಕಾಡುವೆ ನನ್ನ ಪ್ರಾಣಕಾಂತೆ
ಮನದಲ್ಲಿ ಸ್ಥಿರವಾಗಿ ಉಳಿದ ಓ ನನ್ನ ದೇವತೆ!

- Shivakumara S

18 May 2020, 10:24 pm

ಪ್ರಕೃತಿ ಮಾತೆಗೆ

ಓಂ ಪ್ರಕೃತಿ ನೀನೇಕೆ ಮೌನ?
ತಾಳಲಾದೀತೆ ನಿನ್ನಿಂದ ಈ ಸಹಜವ
ತಲೆಗೂದಲನೇ ಬೋಳಿಸಿ
ಸುಡುವ ಸೂರ್ಯನ ಉರಿ ಬಿಸಿಲಿಗೆ
ಕಬ್ಬಿಣದ ಸಲಾಕೆ ಹೇರಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!

ಹರಿವ ನೆತ್ತರನು ತಡೆದು
ಅಭಿಧಮನಿಯಲ್ಲಿ ಸೇರಿಸದೆ
ಬೇರೆಲ್ಲೋ ಹರಿಸಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!

ಎದೆಗೂಡಿನ ಮಧ್ಯದಲ್ಲಿ ಸಿಡಿಮದ್ದನ್ನಿರಿಸಿ
ಅತ್ಯಧಿಕ ಶಬ್ದದೊಂದಿಗೆ
ಎರಡಾಗುವಂತೆ ಸಿಡಿಸಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!

ಗರ್ಭಕೋಶವ ಕೂರೆದು
ಬೆಳೆವ ಭ್ರೂಣವ ತೆಗೆದು
ಬಂಜೆಯ ಮಾಡಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!

ಅಂಜದಿರು - ಹೆದರದಿರು
ಮರಳಿ ಶಪಥವ ಮಾಡು
ಇಂದಲ್ಲ ನಾಳೆ ಮಂದಹಾಸವ ಬೀರಿ
ಹಚ್ಚಹಸುರಿನ ಮೈಬಣ್ಣ ತೋರುವೆನೆಂದು!

- ಕುಂತೂರು ತ ಸುಬ್ರಹ್ಮಣ್ಯ
9482119447

- KT Subramanya

18 May 2020, 02:48 pm

ಗೆಳತಿ ನೀ ಸೋತೆ

ಗೆಳತಿ ನನ್ನ ಭಾವನೆಗಳನ್ನ ತುಂಬಿ
ಮನದಾಸೆಗಳನ್ನ ಮನಬಿಚ್ಚಿ
ಬರೆದೆ ನಿನಗಾಗಿ ಕವಿತೆ.
ನೀ ಅದನ್ನ ಅರ್ಥ ಮಾಡಿಕೊಳ್ಳುವುದರಲ್ಲಿ ಸೋತೆ.
ಅದೇ ಹತಾಶೆಯಲ್ಲಿ ನಾ ಸತ್ತೆ.
ಇಂದು ಪ್ರತಿ ಸಾಲುಗಳನ್ನ ಪದೇ ಪದೇ ಓದುತ್ತಿರುವೆ
ನಿನಗೆ ಅರ್ಥವಾದರೂ ನಾ
ಪ್ರಪಂಚವೇ ಬಿಟ್ಟು ಹೋಗಿರುವೆ.
ನಿನ್ನ ಮನದಾಸೆಗಳನ್ನ ಅಂದು ಬಚ್ಚಿಟ್ಟು
ಇಂದು ರೋಧಿಸುತ್ತಿರುವೆ.
ಮುಗಿದು ಹೋದ ಸಮಯದ
ಬಗ್ಗೆ ಚಿಂತಿಸಿ ಫಲವೇನು ಗೆಳತಿ.
ಅಂದೂ ನೀ ಸೋತೆ.
ಇಂದೂ ನೀ ಬದುಕಿದ್ದು ಸತ್ತೆ.

✍️ಕನಸುಗಾರ

- varu

18 May 2020, 01:05 pm

ನನ್ನ ಗೆಳೆಯ

ನೀನು ಆಗಿರುವೆ ನನ್ನ ಪ್ರೀತಿಯ ಗೆಳೆಯ. ನನ್ನ ಮನದಂಗಳದಲ್ಲಿ ಕೀರ್ತಿ‌ಯ ಒಡೆಯ. ನೀನು ಕಬ್ಬಡ್ಡಿ ಯಲ್ಲಿ ಉಪಯೋಗಿಸಿವೆ ಚಾಣಕ್ಯನ ಪ್ರಮಯ. ನೀನು ಮಾಡುತ್ತಿಯ ಎಲ್ಲರನ್ನೂ ಮಾಯ. ಮಾಯೆಯನ್ನು ನೋಡಿ ಆಯಿತು ಹುಡುಗಿಯರಿಗೆ ಪ್ರೆಮದ ಗಾಯ. ನನ್ನೋಳಗಿನ ನೋವನು ಹೇಳಲು ನನಗೆ ಸ್ಪೂರ್ತಿಯ ಪ್ರಿಯ.
ಇದು ನನ್ನ ಗೆಳೆಯ ವಿಶ್ವನಾಥನ ಬಗ್ಗೆ ಇರುವ ಕಿರು ಸಾಲಿನ ಕವನದ ಚಾಯ...........

- Raju Baireddy

18 May 2020, 09:28 am

ಮೋಸದ ಪ್ರೀತಿ

ಕನಸಿಗೆ ರೆಕ್ಕೆ ಕಟ್ಟಿ
ಹಾರಲು ಕಲಿಸಿದ ಪ್ರೇಮ
ಹಾರುವ ಬರದಲ್ಲಿ ಕಣ್ಣಿಗೆ ಸಿಕ್ಕ
ಕಸದಲ್ಲಿ ಪ್ರೇಮದ ದಾರವು
ಹರಿದು ಕಣ್ಣಿಗೆ ಗಾಯ ಮಾಡಿ
ಹೊಯ್ತು....
.....✍️.ರಾಮ್.

- ರಾಮ್

17 May 2020, 09:35 pm

ಹೆಣ್ಣಿನ ಅಂದ

ಹಸಿರಿನ ರಾಶಿಗಳ ನಡುವಿನಲಿ
ಮಿಂಚಿನಂತೆ ಹೂಳೆದ ನಿನ್ನ ಕಂಗಳು
ಪರ್ವತಗಳಿಗೆ ದಾರಿ ತೋರಿಸುವಂತೆ
ನೀಳವಾದ ನಿಲುವು ನಿನ್ನದು
ಚಂದುಟಿಗಳಲಿ ನೀ ಬೀರುವ ಆ ನಸು ನಗು
ಅದು ನನ್ನ ಹೃದಯದ ಹೂಂಬೆಳಗು

ತಾಯಿಯಂತೆ ನಿನ್ನ ಮಮತೆ
ಗೆಳತಿಯಂತೆ ನಿನ್ನ ಆತ್ಮೀಯತೆ
ಸೋದರಿಯಂತೆ ನಿನ್ನ ಕಾಳಜಿ
ಹೋಲಿಸಲಾರೆ ನಿನ್ನ ಪ್ರೀತಿಯನ್ನು ಯಾರೊಂದಿಗು
ಇಷ್ಟೆಲ್ಲ ಗುಣವತಿ ನನ್ನ ಮಡದಿ ಇವರೇ ಭಾರತೀಯ ನಾರಿ ಹೇ ನಾರಿ ದಯಮಾಡಿ ಮುನಿಯದಿರು ಇನ್ನೂಂದು ಬಾರಿ

ನಾನು ನನ್ನದು ಎನ್ನುವುದು ಏನೂ ಇಲ್ಲ
ಪರಮಾತ್ಮನೇ ನೀನೆ ನನಗೆಲ್ಲ
ಬಾ ನನ್ನ ತಂದೆಯೇ ಸೇರಿಯಸು ನನ್ನ ಬಾಳ ದಡೆಗೆ ಅಲ್ಲಿದೆ ನನ್ನ ಮಮತೆಯ ತಾಯಿಯ
ಮಡಿಲು ಅದುವೆ ಎಲ್ಲಕ್ಕಿಂತ ಮಿಗಿಲು....

- RoopaGowtham

16 May 2020, 08:48 pm

ಕಾಣೆಯಾಗಿರುವೆ..

ಕಾಣೆಯಾಗಿರುವೆ ನನ್ನಿ ಮನದಿ
ಸಂಚಾರಿ ಸೂಚನೆ ತಿಳಿಸದೆ!
ಸ್ವಾಗತ ಕೋರುವ ಗೋಜಿರಲಿಲ್ಲ
ಅಂದು ಪ್ರೀತಿಯಲ್ಲಿ ಎಡವಲು.
ಕಣ್ಣಿನ ಸಲಹೆಯಲ್ಲಿ ಪ್ರಾರಂಭ....
ಕಣ್ಣಂಚಿಗು ಸಿಗುವ ಸೊಲ್ಲಿಲ್ಲವಿಂದು!
ಕನ್ನಡಿಯೆ ಬಿಂಬಿಸುತ್ತಿಲ್ಲ ಪ್ರತಿಬಿಂಬ
ನೀ ಇಲ್ಲದೆ ನನ್ನೊಂದಿಗೆ........
ನೀರಿಲ್ಲದ ಈ ಹೃದಯದ ಕೆರೆಯಲ್ಲಿ
ನಿನ್ನ ನೆನಪುಗಳ ಗೋಲಿಯಾಟ!
ಬಂದು ಬಿಡು ನನ್ನರಸಿ ಆದಷ್ಟು ಬೇಗ
ನನ್ನಿ ಹೃದಯದರಮನೆಗೆ
......................ಹಿಂತಿರುಗಿ

- ಮಂಜು

16 May 2020, 08:20 pm

ಮನ...

ಮನವೆಂಬ ಮರ್ಕಟದ ಎದುರು
ಮನಬಂದಂತೆ ನಟಿಸುವರು ಎಲ್ಲರು...

ಯಾರಿಗೂ ತಿಳಿಯದ ಮನದ ಮಾತನು ಕೇಳುವನು
ಇಂದಿಗೂ ಕಾಣಸಿಕ್ಕಿರದ ಆ ದೇವನು...

ಮನಕುಲ್ಲಾಸ ತರಲು ಸಾಧ್ಯವಿರುವುದು ಒಬ್ಬನಿಗೆ
ಅದುವೇ ನಿನ್ನೊಳಗಿರುವ ಅಪರಿಚಿತನಿಗೆ...

ಹೇಳತೀರದು ನನ್ನೆಲ್ಲಾ ಮನದ ಮಾತು
ಕೇಳಿದರೆ, ಕರಗಿ ನೀರಾಗುವಿರಿ ಸೋತು...

ಭ್ರಮೆಯೊಳಗಿನ ಬದುಕೇ ಸುಂದರ
ವಾಸ್ತವತೆಗೆ ನಿಲುಕದ ಅಂದರ....

ಮನವೆಂಬ ಮರ್ಕಟದ ಎದುರು
ಮನಬಂದಂತೆ ನಟಿಸುವರು ಎಲ್ಲರು... (2)

-ಸ್ವರಚಿತ

"ಮನವೇ ಮನುಷ್ಯನ ಬಂಧ - ಚೆಂದಗಳಿಗೆ ಕಾರಣ"

- RameshHG

16 May 2020, 01:06 pm