Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗುರು

ಓ ಗುರುವೇ........
ಮನಸು ಬಯಸಿದ್ದು ನಿಮ್ಮನ್ನು
ಆಗಿಯೇ ಬಿಟ್ಟಿರಿ ಜೀವನದ ಒಂದು ಭಾಗವಾಗಿ.........
ಕಲಿಸಿದಿರಿ ಕ್ರಿಯೆಯನ್ನು ಉತ್ತಮ ಗುರುಗಳ ಮೂಲಕ ತಿಳಿಯಿತು ಅದರ ಒಳಗಿತ್ತು ಪಂಚ ಸೂತ್ರಗಳು
ಎಲ್ಲಿರಿಗೂ ಒಳಿತನ್ನು ಮಾಡಿರಿ ಎಂದು
ಫಲಿಸಿತು ಆ ನಿಮ್ಮ ಮೌನ ಧ್ಯಾನ
ತಿಳಿಯಿತು ಆ ಧ್ಯಾನದ ಮರ್ಮ
ಅರಿತು ಕೇಳುವೆ ನಾ ನಿಮ್ಮ ಧ್ಯಾನ
ಪರವಶಳಾಗುವೇ ನಾ ಆಗ.
ಭಾವುಕತೆಯ ಆ ನಿಮ್ಮ ಸತ್ಸಂಗ
ಎಲ್ಲರೊಳಗಾಗುವುದು ಆ ನನ್ನ ಮನ.
ಮನಸಲ್ಲಿ ನೆಲೆಯಾದಿರಿ ನೀವು ದೇವಾ
ಇದೋ ಈ ನನ್ನ ಪುಟ್ಟ ಕವನ.........
ಜೈ ಗುರುದೇವ್

- An

01 Apr 2020, 09:59 pm

ಜೋತೆಜೋತೆಯಲಿ

ಒಲವೆಂಬ ಹೋತ್ತಿಗೆಯ ಬಂಧಿಸಲೆ ನಿನ್ನ ಎದೆಯಲಿ
ಪ್ರತಿಕ್ಷಣವು ಕಳೆಯ ಬಯಸಿದೆ ಮನ ನಿನ್ನೆದೆಯ ಗೂಡಲಿ
ನಿನ್ನೋಂದಿಗೆ ಆಡ ಬಯಸುವೆ ನನ್ನ ಜೀವನದ ಜೋಕಾಲಿ
ನೀನಿಲ್ಲದೆ ಬರೀ ಮೌನವೆ ತುಂಬಿಹುದು ಬಾಳಲಿ
ಬೆರಳ ಹಿಡಿದು ನಡೆಯುವೆಯಾ ಎಂದಿಗೂ ನನ್ನ ಜೋತೆಜೋತೆಯಲಿ

- Chaitra Kulkarni

01 Apr 2020, 06:28 pm

ಮೌನ ಮಾತಾದಾಗ...

ಕವಿತೆ ಬರೆಯಲು ಪ್ರಾರಂಭಿಸಿದ್ದೆ ನಾ ನೀನಗಾಗಿ
ನೀ ಸಿಕ್ಕೆ ಅಂದು ನನಗೆ ವರವಾಗಿ
ನಾ ಕಾಯುವೆ ಎಂದಿಗೂ ನಿನ್ನ ಪ್ರೀತಿಗಾಗಿ
ಬಿಗಿ ಹಿಡಿದಿರುವೆ ಜೀವವ ಆ ಕ್ಷಣಕ್ಕಾಗಿ
ಮೌನ ಯಾವಾಗ ಬದಲಾಗುವುದು ಮಾತಾಗಿ
ಹೇಳಿಬಿಡು ಒಮ್ಮೆ ಪ್ರೀತಿಯ ಸಿಹಿಯಾಗಿ
ಮರುಕ್ಷಣವೆ ಬರುವೆ ನಾ ನಿನ್ನ ಜೋತೆಯಾಗಿ...

- Chaitra Kulkarni

01 Apr 2020, 06:19 pm

...ಉತ್ತರ ಹೂಡಿಕೊಡುವೆಯಾ...

ನಿನ್ನ ಮುಖದದಂಚಿನ
ಕಿರು ಮುತ್ತಿನ ಮುಗುಳುನಗೆ
ನಿನ್ನ ಆ ಸುಂದರವಾದ
ಕಣ್ಣಂಚಿನ ಕುಡಿನೋಟ.....

ನಿನ್ನ ಸೌಂದರ್ಯಕ್ಕೆ
ನನ್ನ ಮನ ಸೋತು ನಿಂತಿದೆ
ನೀ ಆ ಮುಖದಲ್ಲಿನ ನಗು
ನನ್ನ ಹೃದಯದ ಬಾಗಿಲು ತೆರೆದಂತಾಗಿದೆ...

ಇದು ಭ್ರಮೆನಾ, ಪ್ರೀತಿನಾ,
ಸ್ನೇಹನಾ, ಇಲ್ಲ ಆಕರ್ಷಣೆನಾ ?
ಇದಕ್ಕೆ ಕಾರಣವನ್ನು
ನಾ ಅರಿಯದೆ ಕಾಗಳಾಗಿದ್ದೇನೆ...

ಹೇ ಜೀವವೇ
ನೀ ಒಮ್ಮೆ ಬಂದು ಈ ಪ್ರಶ್ನೆಗೆ
ಉತ್ತರ ಹೂಡಿಕೊಡುವೆಯಾ
ನೀ ಬರುವ ದಾರಿಯನ್ನೇ ನಾ ನೋಡುವೆ....

- Ajay

01 Apr 2020, 06:06 pm

ಹರೆಯ ಕದ್ದಾಕಿ ಪ್ರೀತಿರಾಮನಾ

ರೆಪ್ಪೆ ನಸುಕು ಮುಗಿಲಲಿ
ಸಪ್ಪಳಿಲ್ಲದೆ ತೆರೆವ ಕಣ್ಣಸೂರ್ಯನ
ತೆಪ್ಪಹಿಂಡ ಹೊಂಗಿರದಲಿ
ಎರಕ ಇಟ್ಟಾಕಿ ಎದೆಗೆ ಮುತ್ತ ನನ್ನಾ

ತನುವನದ ಜೀಕಡವ್ಯಾಗೆ
ನಗೆತಂಗಾಳಿಯ ನಾಗಸಂಪಿಗೆ ತಂಪಿನಲಿ
ನಡಿಗೆನವಿಲ ನಾಚತಲೆ ಅಟ್ಟಿ
ಹಗಲಸ್ವಪ್ನಕೆ ಮನ ಅಲೆಸಿದಾಕಿ ನನ್ನಾ

ಕೂದಲ ದಟ್ಟ ಕಪ್ಪಿನಲ್ಲಿ
ಮುಖಚಂದ್ರನ ತೇಲಿಬಿಟ್ಟು ಮೆಲ್ಲನೆ
ಕುಪ್ಪೆ ಇಂಗಳ ನೋಟದ ಹಿಟ್ಟಚೆಲ್ಲಿ
ಅರಳಿಸಿದಾಕಿ ಪ್ರೇಮಮೊಗ್ಗ ನನ್ನಾ

ಉಬ್ಬುತಗ್ಗ ಬೆಟ್ಟಕಣಿವೆಯಲಿ
ಅಂದವ ಮಾಯಜಿಂಕೆಯ ಮಾಡಿ
ಹಿಡಿಯಲಿಟ್ಟ ತುಂಟು ಆಟದಲಿ
ಹರೆಯ ಕದ್ದಾಕಿ ಪ್ರೀತಿಯೆಂಬ ರಾಮನಾ

- samna

01 Apr 2020, 11:50 am

ಹುಚ್ಚು ಪ್ರೀತಿ

ಕಾಣದ ಹುಡುಗಿಯ ಅದೆಷ್ಟು ಪ್ರೀತಿಸುವೆ
ಆಕೆಯ ಬಗ್ಗೆ ಅದೆಷ್ಟು ಯೋಚಿಸುವೆ
ಆಕೆ ಎಲ್ಲಿರುವಳೋ ಹೇಗಿರುವಳೋ
ನಿನಗೆ ತಿಳಿಯದಿದ್ದರೂ ಆಕೆಯ ಮನದಲ್ಲಿಟ್ಟು ಪೂಜಿಸುವೆ.
ಕನಸಿನ ಲೋಕದಲ್ಲೇ ತೇಲುತ್ತಿರುವೆ.
ಹೇ ಹುಚ್ಚು ಮನಸ್ಸೇ ಅವಳು
ನಿನ್ನನ್ನು ಸ್ವೀಕರಿಸುವಳೆಂದೂ
ಅದೇಗೆ ಬಲ್ಲೇ ನೀ.
ಕಣ್ಣೆದುರು ಕಂಡು ಪ್ರೀತಿಸಿ
ಜೊತೆಯಲ್ಲಿಯೇ ಸುತ್ತಾಡಿ
ಮೂರು ದಿನದಲ್ಲೇ ಮುಗಿದು ಹೋಗುವ
ಹೆಚ್ಚು ಪ್ರೇಮ ಸಂಬಂಧಗಳ ನಡುವೆ
ಪ್ರತಿದಿನ ಕಣ್ಣಿಗೆ ಕಾಣದವಳ ಕೈಗೆ ಸಿಗದವಳ
ವರ್ಷಕೊಮ್ಮೆ ದರ್ಶನ ನೀಡುವವಳ ಹುಚ್ಚನಂತೆ ಪ್ರೀತಿಸುವೆ
ಮನಸ್ಸೇ ನೀ ಏಕೆ ಹೀಗೆ.

✍️ಕನಸುಗಾರ

- varu

01 Apr 2020, 11:08 am

ಒಲವೇ

ಹೊತ್ತು ನೀಡುವೆ ಸಂಭಾವನೆಯ ಈ ಮನಕ್ಕೆ
ನನ್ನೀ ಭಾವದ ಅಲೆಗೆ ಪದವ ನೀಡಲಿಕ್ಕೆ
ಹರಿಸು ನೀನೀ ಒಲವ ಪರಿತಪಿಸೊ ಜೀವಕ್ಕೆ


- ಹಂಸ ಕುಲಾಲ್✍️✍️✍️

- ಹಂಸವೇಣಿ

01 Apr 2020, 09:40 am

!! ಬಿರುಕು !!

ಹೇ ಹುಡುಗಿ
ತುಂಬದಿರು
ಆಸೆಯೆಂಬ
ಕನಸುಗಳ
ಸರಕು !

ನಿನ್ನ ಪ್ರಯಾಣದ
ಗಾಡಿ
ಹಳಿ ತಪ್ಪಿದರೆ
ಬಾಳೆಲ್ಲ ಬಿರುಕು !!

ಕಿದ್ವಾಯಿ ರಾಜಶೇಖರ್.

- Raj Raj

01 Apr 2020, 08:42 am

*ನೆನಪು*

ಯೌವನದಲಿ
ಪಲ್ಲವಿಸಿ
ನಿದ್ದೆ ಗೆಡಿಸುವ
ಕನಸುಗಳು !!

ಮುಪ್ಪಿನಲ್ಲಿ
ಪಲಾಯನದ ಹಾದಿ ಹಿಡಿದು
ಉಳಿಸಿ ಹೋಗುತ್ತದೆ
ಬರೀ ನೆನಪುಗಳ !!

ಕಿದ್ವಾಯಿ ರಾಜಶೇಖರ್.

- Raj Raj

01 Apr 2020, 08:35 am

ಓ ಸಖಿ

ಓ ನನ್ನ ಸಖಿಯೆ ಆಗು ನೀ ಸತಿಯೆ
ಹೀಗೆ ನೀ ನನ್ನ ಸತಾಯಿಸುವುದು ಸರಿಯೆ.

ಕಪೋತ ಪಕ್ಷಿ ತಂದೈತೆ ನಿನಗಾಗಿ ಚಿಕ್ಕ ಸಂದೇಶ.
ಯುಗಯುಗಳ ಆದಿ ಆಗಮಿಸಿ ಬಂದು.
ಚೈತ್ರದ ಈ ಗಾಳಿ ತಂದೈತೆ ಒಲವು
ಮೋಡ ಕವಿದ ಗಗನ ನಯನ ನೀರ ಕಥನ
ನೀ ಅದಕೆ ಸಿಗದೆ ಹೋದೆ ಅದುವೆ ಅದಕೆ ಮಥನ..

ಅಂಬುಜನು ಬಂದ ಕೈಚಾಚಿ ಎಂದ
ನೀಡು ಅವಳನು ನನಗೆ, ತಗೋ ನೀ ಬ್ರಹ್ಮಾಂಡ
ಊರ ಕೆರೆ ಯಂಚಲ್ಲಿ ಬೆಳೆದ
ಆ ತಾವರೆ ನೀನಲ್ಲವೆ .
ನೀನಿಲ್ಲದೆ ನಾ ನಿಲ್ಲವೆ.

ಸಮುದ್ರ ಮಥನದ ಕಥೆಯಲ್ಲಿ ಬಂದ
ಶ್ರೀ ಹರಿ ಸತಿಯು ನೀನೆನಾ.
ಕಲಿಯುಗದ ಕೃಷ್ಣ ನಾ ನಿನಗೆ ಸಖಿಯೆ
ಕಲಿಯುಗ ರುಕ್ಮಿಣಿ ಆಗಲು ಏನು ಬಾಧೆ.

ಕಪೋತ ಪಕ್ಷಿ ತಂದೈತೆ ನಿನಗಾಗಿ ಚಿಕ್ಕ ಸಂದೇಶ.
ಯುಗಯುಗಳ ಆದಿ ಆಗಮಿಸಿ ಬಂದು.
ಚೈತ್ರದ ಈ ಗಾಳಿ ತಂದೈತೆ ಒಲವು

ಆ ಮನ್ಮಥನು ಸೋತಿಹನು ನಿನ್ನಲ್ಲಿ
ರತಿ ರಾಣಿ ಆಗಿರುವೆ ನೀ ನನ್ನಲ್ಲಿ.
ಗಂಡು ಹೆಣ್ಣು ಬರಗೆಟ್ಟಾಗ್ಲೇ ಮುದ್ದು ಮುದ್ದಾದ ಮಕ್ಕಳಾಗೋದು.
ಬಾರೆ ಬಾ ಬಾರೆ ನಕ್ಷತ್ರಗಳ ಮಹಿಷಿ.
ಇಳೆಗಿಳಿದು
ಈ ಭೂಮಿಯ ಪಾರಿಜಾತ ಹೂಗಳ ಮೇಲೆ
ಅಂದ್ವಾದ ಚಕ್ಕಚಂದ ಆಡೋಣ...

- Abhishek yogi

31 Mar 2020, 08:01 pm