ಗವಿಗಟ್ಟಿದ ಮೋಡದ ನಡುವೆ
ಬಡ ಬಡಿಸುತ್ತಿದೆ ಅಬ್ಬರದ ಸಿಡಿಲು
ಮಳೆ ಮುಯ್ಯುವ ಸಮಯದ ಕವಲು
ಒಬ್ಬಂಟಿಯಾಗಿ ನಿಂತಿರುವೆ ನಾ ಮರದ ಕೆಳಗೆ
ಬರಡು ಭೂಮಿಗೆ ಮಳೆ ಉಯ್ಯಲು
ಸಂತಸ ಪಡಲ ಒಬ್ಬಂಟಿಯ ಭಯದ ನಡುವೆ
ಅಬ್ಬರದ ಮಳೆಯ ಸೂಚನೆಯ ಕಡುಗತ್ತಲು
ಯಾವ ಮಾನವನ ಸುಳಿವಿಲ್ಲ ಅತ್ತಿರದಲ್ಲಿ
ಪ್ರಾಣಿ ಪಕ್ಷಿಗಳೇ ಹೆದರಿ ಗೂಡು ಸೇರಿಕೊಂಡಂತಿದೆ
ಕಾಲ ಭಯದಲ್ಲಿ ಒಬ್ಬಂಟಿ ತನದ ರುಚಿ
.... ತೋರಿಸುತ್ತದೆಂದು ಕಾಣುತ್ತಿದೆ
ಮಳೆಗೆದರಿ ಪೈರು ಮುದುರಿ ಕುಂತಂತಿದೆ
ಸುಂಟರಗಾಳಿಯ ರಭಸಕ್ಕೆ ಮರಗಳು
ಬಳಲಿ ಬೆಂಡಾಗಿವೆ
ಭಯದ ಅಮಲು ಹೆದೆ ಬಡಿತವನ್ನ ಹೇರಿಸುತ್ತಿದೆ
ಎಂದು ಒಬ್ಬಂಟಿ ಯಾದವನಲ್ಲ
ಇಂತಹದೊಂದು ... ಅಪರೂಪದ ಮಳೆಯಲ್ಲಿ
ಚಿಕ್ಕಂದಿನಿದೇಕೋ ಮಳೆ ಸಿಡಿಲ ಕಂಡರೆ
ತಳಮಳ ಹೃದಯದಲ್ಲಿ........
ಮುಂಗಾರು ತುಂತುರು ಮಳೆಯ
ಸೂಚನೆಯ ತಂಗಾಳಿಯಲ್ಲಿ ತೇಲುತಿಹದು
ಕರಾವಳಿಯ ಕಡಲಂತೆ ಕೇಶರಾಶಿ!!
ಸೂರ್ಯನ ಬೆಳಗಿನ ಹೊಂಗಿರಣವನ್ನು
ನಾಚಿಸುವಂತಿಹದು ನನ್ನಾಕೆಯ ಕಣ್ಣೋಟ
ತಡೆದಿಹುದು ಬೆರೆಯೆಡೆಗೆ ದೃಷ್ಟಿ ಹರಿಸದಂತೆ! ಚಂದಿರನಿಲ್ಲದ ಬಾನಿನಲ್ಲಿ......
ಶುಕ್ರನಂತೆ ಕಂಗೊಳಿಸುತಿಹದು ಆಕೆಯ
ಮೂಗಿನಂಚಲ್ಲಿ ಮುದ್ದು ಮುಗುತಿ
ರಚ್ಚೆ ಹಿಡಿದು ಅಳುವ ಪುಟ್ಟ ಮಗುವನ್ನು
ಸಮಾಧಾನ ಪಡಿಸಲು ಸಾಕು....
ಅವಳ ತುಟಿಯಂಚಿನ.... ಕಿರುನಗು
ತಪಗೈದು ಸಾಧಿಸಿದ ಸಾಧಕರ......
ಮುಗ್ದತೆ ಅವಳ ಮುಖದಲ್ಲಿ
ಎಲ್ಲಿ ದೃಷ್ಟಿಯಾಗಿ ಬಿಡುವುದೋ ಎಂದೆನಿಸುತಿಹದು ನನ್ನಾಕೆಗೆ ನನ್ನಿಂದ
ಮನಸ್ಸು ಚಿಟ್ಟೆಯಂತೆ ಹಾರಡುತಿದೆ
ಆಕೆಯ ಗುಂಗಲ್ಲಿ....
ಒಂದು ಪುಟ್ಟ ಸ್ಥಾನಕೊಡು ಗೆಳತಿ...
ನಿನ್ನಿ ಹೃದಯದಲ್ಲಿ ಸೇವಕನಾಗಿ
ದುಡಿವೆ ನಿನಗಾಗಿ ನಾ ಎಂದೆದು...
ಒಂದು ಬಾರಿಯಾದರೂ ಅವಳೆದುರು ನಿಂತು
ನೋಡಬೇಕು ನನ್ನ ಪ್ರತಿಬಿಂಬ ಆಕೆಯ
ಕಣ್ಣಲ್ಲಿ........
ನಾನು ನನ್ನದು ಎನ್ನುವುದು
ಕ್ಷಣಕಾಲದ ಮಾತುಗಳಷ್ಟೇ
ಇಂದು ನೀ ಒಡೆಯ ನಾಳೆ
ಇನ್ನಾರೋ ಯಾರು ಬಲ್ಲವರು
ನಾನು ನನ್ನಿಂದಲೇ ಎಂದವನ ಸ್ಮಶಾನಕ್ಕೆ
ಭೇಟಿಕೊಂಡೆಂದ ಪರಮಾತ್ಮ
ಯಾರು ನೀಡಿದರು ಹುಟ್ಟು ಮಾತ್ರ ನಿನಗೆ ಗೊತ್ತು
ಮರಣ ಬಗ್ಗೆ ಪರಿಚಯ ಕೂಡ ನಿನಗಿಲ್ಲ
ಬರುವಾಗ ನೀ ಅಳುತ್ತಲೇ ಬರುವೆ
ಹೋಗುವಾಗ ಅಲವರನ್ನು ಅಳಿಸುವೆ
ಅವರು ನನ್ನವರು ಇವರು ನನ್ನವರೆನ್ನುವೆಯಲ್ಲ
ಹೊರಡುವಾಗ ಜೊತೆಗೆ ಬರುವವರ್ಯಾರು
ಎಲ್ಲವೂ ನನ್ನಿಂದಲೇ ಎನ್ನುವ ಅಗತ್ಯವಿಲ್ಲ
ಅದಕ್ಕೆ ಕಾರಣಕರ್ತರು ಇದ್ದೇ ಇರುತ್ತಾರೆ
ನೀ ಬರುವ ದಿನಾಂಕ ನೀ ತಿಳಿದಿರುವೆ
ನಿನ್ನ ಜೀವನದ ಕೊನೆಯ ದಿನಾಂಕ ನಿ ಬಲ್ಲೆಯ
ಅಂಹಕಾರ ಜಂಭದಿಂದ ಬೀಗಬೇಡ
ಇಂತವರು ಮಣ್ಣಲ್ಲಿ ಮಣ್ಣಾದ ಚರಿತ್ರೆ ಅಲವು
ಬರುವಾಗ ಹೊತ್ತುತಂದದ್ದು ಏನು ಇಲ್ಲಾ ಎಂದ ಮೇಲೆ ಹೋಗುವಾಗ ಕೊಂಡೊಯ್ಯಲು ಏನಿದೇ