Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಾ ಕಂಡೆ ಗೆಳತಿ ನಾ ಕಂಡೆ

ನಾ ಕಂಡೆ ಗೆಳತಿ ನಾಕಂಡೆ ನಿನ್ನ.....

ನವಿಲು ಗರಿ ಬಚ್ಚಿ ಕುಣಿಯುತ್ತೀದೆ ಗೆಳತಿ,...
ಪ್ರತಿ ನವಿಲು ಗರಿಯಲ್ಲಿ ನಾ ನಿನ್ನ ರೂಪವ ಕಂಡೆ ಗೆಳತಿ

ಗಗನದಲ್ಲಿ ಕಾಮನಬಿಲ್ಲ ಕಂಡೆ ನಾ ಗೆಳತಿ...
ಪ್ರತಿ ಬಣ್ಣದಲ್ಲು ನಿನ್ನ ಮಗವಾ ಕಂಡೆ ಗೆಳತಿ

ಮಳೆಯಲ್ಲಿ ಮಳೆ ಹನಿ ಕಂಡೆ ಗೆಳತಿ...
ಪ್ರತಿ ಹನಿಯಲ್ಲು ನಾ ನಿನ್ನ ನೆನೆದೆ ಗೆಳತಿ....

ದೀಪವು ಬೆಳುಗುವುದಾ ಕಂಡೆ ಗೆಳೆತಿ....
ಪ್ರತಿ ಕಿರಣದಲ್ಲು ನಾ ನಿನ್ನ ನಗುವ ಮಗವಾ ಕಂಡೆ ಗೆಳತಿ...
ನಾ ಕಂಡೆ ನಿನ್ನ ಗೆಳತಿ,ನಾ ಕಂಡೆ...

- Girish

22 Jun 2018, 01:37 am

ನಿನ್ನ ಮೌನಕೆ...

ಮೌನವನು ತಾಳದಿರು
ಮನವೆ...........
ನಿನ್ನ ಮೌನಕೆ ನಾನಾಗಿಬಿಡುವೆ
ಮೂಗ.....
ನೀನಾಡುವ ಮಾತುಗಳಿಗೆ
ನಾ ಹಂಬಲಿಸುವೆ ಸದಾ...............

ಕೇಳದಿರು
ಏನಿದೇ ಅದರಲಿ ?

ಜೇನಿದೆ ಅದರಲಿ
ನಿಜ ಹೇಳುವುದೇ ಆದರೆ
ನನ್ನ ಜೀವವೂ ಇದೆ
ಅ ದ ರ ಲಿ !

- shruthi AS

22 Jun 2018, 12:09 am

ಸೀರೆ ಉಟ್ಟ ಚೆಲುವೆ..

ಗಂಧದ ಗೊಂಬೆ ಚಂದದ ಸೀರೆಯುಟ್ಟು ಬಂದಂತಿದೆ ನಿನ್ನ ನೋಡುತಿರಳು ಚೆಲುವೆ.

ಕಣ್ಣ ಅಂಚಿಗೆ ಕೊಂಚ ಹೇಳು ನೋಟದ ಚೂರಿಯಿಂದ ಚುಚ್ಚದಿರಳು ನನ್ನ ಎದೆಗೆ
ಎಡವಿ ಬೀಳುವೆನೆಂದು ಭಯವಾಗಿದೆ
ನನಗೆ ನಿನ್ನ ಕಿರುನಗೆಯ ಕೊನೆಯಲ್ಲಿ.

ಮುಂಗುರುಳ ಮುನಿಸು ತಾಳಲಾರೆನೆ ಬೆಡಗಿ ಬಾಡಿಹೋದೀತು ನನ್ನ ನಗುವು ಏಕದಾಟಿಗೆ.

ಕೈಬೆರಳ ಹಿಡಿದ ಸೆರೆಗ ಕೆಳಗಿಳಿಸು ಒಮ್ಮೆ ತುಸು ಮೆಲ್ಲನೆ ಉಸಿರಾಡುವೆ ಇನ್ನಾದರೂ ಬಾಗಿದ ನಡು ನೋಡಿ.

ಪಾದದಂಚಿಗೆ ಮೆತ್ತಿದ ಅಂದವ ಸ್ವಲ್ಪ ಕರಗಿಸಿ ಬಿಡುವ ಆಸೆ ಕಾಲ್ಗೆಜ್ಜೆ ತೊಡಿಸಿ ನಿನ್ನ ಕಿರುಬೆರಳಿಗಂಟಿದ ಮಣ್ಣ ಒರೆಸಿ
ನನ್ನ ಪ್ರೀತಿಯ ಬೆರೆಸಿ.

- ಚುಕ್ಕಿ

21 Jun 2018, 10:25 pm

ನನ್ನ ಕೋನೆಯ ಬೇಟಿಯ ಸಮಯ

ನನ್ನ ಜೀವನದ ಈ ನಮ್ಮ ಬೇಟಿಯ
ಕೋನೆಯ ದಿನ ಮುಸ್ಸಂಜೆಯಲ್ಲಿ.
ಹಿಂದಿರುಗಿ ನೋಡದೇ
ಮುನ್ನಡೆಯುವ ವೇಳೆಯೂ

ಹಿಂದಿನಿಂದ ಒಂದು ಕರೆಗಾಗಿ
ಮನಸ್ಸು ಆಶಿಸಿದರೆ
ಅಗಲುವಿಕೆಯ ಆ ಮೂಕ ವೇದನೆಯನ್ನು
ಪ್ರೀತಿ ಎನ್ನಬಹುದು….!!

ನನ್ನ ಕನಸುಗಳನ್ನ ಕಳೆದುಕೊಂಡ ..
ತಂಪಾದ ಮುಸ್ಸಂಜೆ ಇದು...!!

- ನಗುವ ಮನಸ್ಸಿನ ಹುಡುಗ ಶಿವು

- Shivakumara

21 Jun 2018, 08:17 pm

ನೀನಗಾಗಿ ಕಾಯುತ್ತಿರುವೆ ಗೆಳತಿ

ಕಾಯುತ್ತಿರುವೆ ನಾ ಒಂದಲ್ಲಾ ಒಂದು ದಿನ
ನೀ ನನ್ನ ಬಳಿ ಬರುವೆ ಎಂದು..
ನನ್ನ ಉಸಿರು ನಿಲ್ಲುವವರೆಗೂ ನಾ ನಿನಗಾಗಿ ಕಾಯುತ್ತಿರುವೆ

ಮತ್ತೆ ನನ್ನ ಬಳಿ ಬರುವೆಯಾ ನಿನ್ನ ಬಿಟ್ಟು ಇರಲು ಸಾಧ್ಯವಿಲ್ಲ ಗೆಳೆಯ ನಿನ್ನ ಮಾತು ಕೇಳದೆ ನಿನ್ನ
ಧ್ವನಿಯನ್ನು ಕೇಳದೆ ನಾ ಹೇಗೆ ಇರಲೊ ಗೆಳೆಯ...

ನಾ ಸಾಯುವವರೆಗೂ ನಿನಗಾಗಿಯೇ ಕಾಯುತ್ತೇನೆ.
ನೀ ಮತ್ತೆ ನನ್ನ ಬಳಿ ಬರಲ್ಲ ಅಂತ ಗೊತ್ತಿದ್ದರು ನಾ ಕಾಯುತ್ತಿರುವೆ ನಿನ್ನ ಪರಿಶುದ್ಧವಾದ ಪ್ರೀತಿ ನಾ...


-ನಗುವ ಮನಸ್ಸಿನ ಹುಡುಗ ಶಿವು

- Shivakumara

21 Jun 2018, 03:07 pm

ಒಬ್ಬಂಟಿ ನಾ ಆ ಮಳೆಯಲ್ಲಿ.....

ಗವಿಗಟ್ಟಿದ ಮೋಡದ ನಡುವೆ
ಬಡ ಬಡಿಸುತ್ತಿದೆ ಅಬ್ಬರದ ಸಿಡಿಲು
ಮಳೆ ಮುಯ್ಯುವ ಸಮಯದ ಕವಲು
ಒಬ್ಬಂಟಿಯಾಗಿ ನಿಂತಿರುವೆ ನಾ ಮರದ ಕೆಳಗೆ
ಬರಡು ಭೂಮಿಗೆ ಮಳೆ ಉಯ್ಯಲು
ಸಂತಸ ಪಡಲ ಒಬ್ಬಂಟಿಯ ಭಯದ ನಡುವೆ
ಅಬ್ಬರದ ಮಳೆಯ ಸೂಚನೆಯ ಕಡುಗತ್ತಲು
ಯಾವ ಮಾನವನ ಸುಳಿವಿಲ್ಲ ಅತ್ತಿರದಲ್ಲಿ
ಪ್ರಾಣಿ ಪಕ್ಷಿಗಳೇ ಹೆದರಿ ಗೂಡು ಸೇರಿಕೊಂಡಂತಿದೆ
ಕಾಲ ಭಯದಲ್ಲಿ ಒಬ್ಬಂಟಿ ತನದ ರುಚಿ
.... ತೋರಿಸುತ್ತದೆಂದು ಕಾಣುತ್ತಿದೆ
ಮಳೆಗೆದರಿ ಪೈರು ಮುದುರಿ ಕುಂತಂತಿದೆ
ಸುಂಟರಗಾಳಿಯ ರಭಸಕ್ಕೆ ಮರಗಳು
ಬಳಲಿ ಬೆಂಡಾಗಿವೆ
ಭಯದ ಅಮಲು ಹೆದೆ ಬಡಿತವನ್ನ ಹೇರಿಸುತ್ತಿದೆ
ಎಂದು ಒಬ್ಬಂಟಿ ಯಾದವನಲ್ಲ
ಇಂತಹದೊಂದು ... ಅಪರೂಪದ ಮಳೆಯಲ್ಲಿ
ಚಿಕ್ಕಂದಿನಿದೇಕೋ ಮಳೆ ಸಿಡಿಲ ಕಂಡರೆ
ತಳಮಳ ಹೃದಯದಲ್ಲಿ........


...... ಮಂಜು

- ಮಂಜು

20 Jun 2018, 05:21 pm

ಪ್ರತಿಬಿಂಬ ನೋಡುವ ಹಂಬಲ ಅವಳ ಕಣ್ಣಲ್ಲಿ....

ಮುಂಗಾರು ತುಂತುರು ಮಳೆಯ
ಸೂಚನೆಯ ತಂಗಾಳಿಯಲ್ಲಿ ತೇಲುತಿಹದು
ಕರಾವಳಿಯ ಕಡಲಂತೆ ಕೇಶರಾಶಿ!!
ಸೂರ್ಯನ ಬೆಳಗಿನ ಹೊಂಗಿರಣವನ್ನು
ನಾಚಿಸುವಂತಿಹದು ನನ್ನಾಕೆಯ ಕಣ್ಣೋಟ
ತಡೆದಿಹುದು ಬೆರೆಯೆಡೆಗೆ ದೃಷ್ಟಿ ಹರಿಸದಂತೆ! ಚಂದಿರನಿಲ್ಲದ ಬಾನಿನಲ್ಲಿ......
ಶುಕ್ರನಂತೆ ಕಂಗೊಳಿಸುತಿಹದು ಆಕೆಯ
ಮೂಗಿನಂಚಲ್ಲಿ ಮುದ್ದು ಮುಗುತಿ
ರಚ್ಚೆ ಹಿಡಿದು ಅಳುವ ಪುಟ್ಟ ಮಗುವನ್ನು
ಸಮಾಧಾನ ಪಡಿಸಲು ಸಾಕು....
ಅವಳ ತುಟಿಯಂಚಿನ.... ಕಿರುನಗು
ತಪಗೈದು ಸಾಧಿಸಿದ ಸಾಧಕರ......
ಮುಗ್ದತೆ ಅವಳ ಮುಖದಲ್ಲಿ
ಎಲ್ಲಿ ದೃಷ್ಟಿಯಾಗಿ ಬಿಡುವುದೋ ಎಂದೆನಿಸುತಿಹದು ನನ್ನಾಕೆಗೆ ನನ್ನಿಂದ
ಮನಸ್ಸು ಚಿಟ್ಟೆಯಂತೆ ಹಾರಡುತಿದೆ
ಆಕೆಯ ಗುಂಗಲ್ಲಿ....
ಒಂದು ಪುಟ್ಟ ಸ್ಥಾನಕೊಡು ಗೆಳತಿ...
ನಿನ್ನಿ ಹೃದಯದಲ್ಲಿ ಸೇವಕನಾಗಿ
ದುಡಿವೆ ನಿನಗಾಗಿ ನಾ ಎಂದೆದು...

ಒಂದು ಬಾರಿಯಾದರೂ ಅವಳೆದುರು ನಿಂತು
ನೋಡಬೇಕು ನನ್ನ ಪ್ರತಿಬಿಂಬ ಆಕೆಯ
ಕಣ್ಣಲ್ಲಿ........


ಮಂಜು

- ಮಂಜು

20 Jun 2018, 11:21 am

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ....

ಗೆಳೆಯನಾಗಿ ಬಂದಾ ಸ್ನೇಹಿತ ನೀ.......
ನಿನ್ನೆಲ್ಲಿಂದಲೋ ಬಂದೆ ,ಅಪರಿಚಿತನಂತೆ ಪರಿಚಿತನಾದೆ ....
ಇಂದು ಎಂದು ಬಿಡಲಾಗದ ಸಂಬಂಧದಂತೆ ಅಣ್ಣ ನಾ ಸ್ಥಾನ ತುಂಬಿದವ ನೀ ......

ಇಂದು ಅದೇ ಅಣ್ಣನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳ ಕೋರುತಲಿರುವೆ .....

ನೂರಾರು ವರ್ಷಗಳ ಕಾಲ ಸುಖವಾಗಿ ಬಾಳು ಎಂದು ಆಶಿಸುವ ಪುಟ್ಟ ಮನಸ್ಸು ನನ್ನದು ಅಣ್ಣ

- Acchu love

20 Jun 2018, 12:24 am

ಸ್ನೇಹಾನೇ ಹೀಗೆ

ಹೇಗೆ ತೀರಿಸಲಿ
ನಾ ನಿನ್ನ ಪ್ರೀತಿಯ ಋಣವನು
ಗೆಳೆಯಾ...
ತೀರಿಸಿದರೂ
ತೀರಿಸಲಾರದು
ಸಾಕಷ್ಟಿದೆ........
ಸಾಕಾಗದೇನೋ
ನಾ ಪಡೆದು ಬಂದರೂ
ಏಳೇಳು ಜನುಮಾ......
ಸ್ನೇಹನಾ ಹೀಗೆ!

- shruthi AS

19 Jun 2018, 09:51 pm

ಎಲ್ಲ ನಶ್ವರ ಮಾನವ.....

ನಾನು ನನ್ನದು ಎನ್ನುವುದು
ಕ್ಷಣಕಾಲದ ಮಾತುಗಳಷ್ಟೇ
ಇಂದು ನೀ ಒಡೆಯ ನಾಳೆ
ಇನ್ನಾರೋ ಯಾರು ಬಲ್ಲವರು
ನಾನು ನನ್ನಿಂದಲೇ ಎಂದವನ ಸ್ಮಶಾನಕ್ಕೆ
ಭೇಟಿಕೊಂಡೆಂದ ಪರಮಾತ್ಮ
ಯಾರು ನೀಡಿದರು ಹುಟ್ಟು ಮಾತ್ರ ನಿನಗೆ ಗೊತ್ತು
ಮರಣ ಬಗ್ಗೆ ಪರಿಚಯ ಕೂಡ ನಿನಗಿಲ್ಲ
ಬರುವಾಗ ನೀ ಅಳುತ್ತಲೇ ಬರುವೆ
ಹೋಗುವಾಗ ಅಲವರನ್ನು ಅಳಿಸುವೆ
ಅವರು ನನ್ನವರು ಇವರು ನನ್ನವರೆನ್ನುವೆಯಲ್ಲ
ಹೊರಡುವಾಗ ಜೊತೆಗೆ ಬರುವವರ್ಯಾರು
ಎಲ್ಲವೂ ನನ್ನಿಂದಲೇ ಎನ್ನುವ ಅಗತ್ಯವಿಲ್ಲ
ಅದಕ್ಕೆ ಕಾರಣಕರ್ತರು ಇದ್ದೇ ಇರುತ್ತಾರೆ
ನೀ ಬರುವ ದಿನಾಂಕ ನೀ ತಿಳಿದಿರುವೆ
ನಿನ್ನ ಜೀವನದ ಕೊನೆಯ ದಿನಾಂಕ ನಿ ಬಲ್ಲೆಯ
ಅಂಹಕಾರ ಜಂಭದಿಂದ ಬೀಗಬೇಡ
ಇಂತವರು ಮಣ್ಣಲ್ಲಿ ಮಣ್ಣಾದ ಚರಿತ್ರೆ ಅಲವು

ಬರುವಾಗ ಹೊತ್ತುತಂದದ್ದು ಏನು ಇಲ್ಲಾ ಎಂದ ಮೇಲೆ ಹೋಗುವಾಗ ಕೊಂಡೊಯ್ಯಲು ಏನಿದೇ

ಯಾರಿಗಾಗಿ ಯಾವುದಕ್ಕಾಗಿ ಹೊಡೆದಾಟ
ಬಡಿದಾಟ ನೀನೇ ಶಾಶ್ವತವಲ್ಲವೆಂದಮೇಲೆ

ಷಡ್ಯಂತ್ರಗಳ ರೂಪಿಸಿ ದುರ್ಯೋಧನ ಗೆದ್ದದ್ದೇನು
ಅಧರ್ಮದ ರೂವಾರಿ ರಾವಣ ಸಾದಿಸಿದ್ದೇನು

ಮಾನವ ಧರ್ಮಕ್ಕೆ ತಲೆ ತಗ್ಗಿಸಿ ನಿ ಬಾಳು

ಇರುವ ವರೆಗೆ ದುಡಿದು ನಿನ್ನೆ ಹೆಸರ
ಭೂಮಿಯಲ್ಲಿ ಬಿತ್ತಿ ಹೋಗು ಕರ್ಣ ನಂತೆ


ಮಂಜು

- ಮಂಜು

19 Jun 2018, 08:36 pm