ಚಂದಿರ ನೀ ಆಗುವೆಯ ನನ್ನ ಗೆಳೆಯ
ಈ ಕತ್ತಲ ರಾತ್ರಿಗೆ ತೋರುವೆಯ ದಾರಿಯ
ಒಪ್ಪಿ ಕೊಳ್ಳಲಾರೆನು ನಾನು ಸೋಲ
ಕೊಡುವೆಯ ನಿನ್ನ ಕಾಂತಿಯ ಕೊಂಚ ಸಾಲ
ಎಲ್ಲರಿಗೂ ಕಾಣಸಿಗುವುದು ನಾ ಕಂಡ ಸೋಲುಗಳು
ಎಸೆಯುವರು ಗಾಸಿ ಮಾಡುವ ಮಾತಿನ ಕಲ್ಲುಗಳು
ಇಲ್ಲವಾಗಿವೆ ಮನಸನರಿತು ಮುನ್ನಡೆಸುವ ಮನಸುಗಳು
ನಾ ಬದುಕಲಿ ಗಟ್ಟಿಯಾಗಬೇಕು ಖಾಲಿಯಾಗುವ ಮುನ್ನ ಕನಸುಗಳು
ಸೋಲುಗಳಾಗಬಹುದು ಬಾಳಿಗೆ ಕಪ್ಪು ಛಾಯೆ
ಆಗಬಹುದೆ ಸೋಲುಗಳೇ ಮುಂದಿನ ಬದುಕಿಗೆ ಮಾಯೆ
ಕಾಯುತಲೆ ಇರುವೆ ನೋಡಲೊಮ್ಮೆ ನಾನಾಗಬಹುದು ವಿಜಯೆ
ಆ ಗೆಲುವ ನೋಡದೇನೆ ನಾನು ಸಾಯೆ
ಚಂದ್ರನೆ ನಿನ್ನಳೊಗಿದ್ದರು ಅಷ್ಟು ಕಪ್ಪು ಕಲೆಗಳು
ಮರೆಸಿ ಕದ್ದಿರುವೆ ನಿನ್ನ ಕಾಂತಿಯಲೆ ಮನಸುಗಳು
ನಾನೂ ಕಲಿಯಬೇಕಿದೆ ನೋವ ಮರೆಯುವ ಕಲೆಯ
ಒಮ್ಮೆ ಕೆಳಗಿಳಿದು ಬಂದು ಆ ರಹಸ್ಯವ ಕಲಿಸೆಯ
ನಾನು ಈ ಜಗದೊಟ್ಟಿಗೆ ಸೇರಬೇಕು ನಗುವಿನಲೆ ಆಗಿ ತನ್ಮಯ
ಸುಮ್ಮನಿರು ಕಣ್ಣೀರೆ …ಸುಮ್ಮನಿರು
ನಿನ್ನ ನೋವು ಅರ್ಥ ಮಾಡಿಕ್ಕೊಳ್ಳುವ ಇನ್ನೊಂದು ಮನಸ್ಸಿಲ್ಲ ಇಲ್ಲಿ…..
ನಿನ್ನ ಅಳು ವ್ಯರ್ಥ ಸುಮ್ಮನಿರು……
ಮುಗಿಲು ಮುಟ್ಟಲು ಹೋದ ಪ್ರೀತಿ ಇಂದು ಕಳಚಿ ಪಾತಳ ಸೇರಿದೆ …
ನಿನ್ನ ಅಳುವಿನಿಂದ ಮರಳಿ ಬಾರದು ಸುಮ್ಮನಿರು….
ನನ್ನಲ್ಲಿ ನಾ ಇಂದು ಕೊರಗಲು ಕಾರಣ ಮನಸ್ಸೆ ಹೊರತು..ನಿನ್ನಲ್ಲ ಸುಮ್ಮನಿರು….ಕಣ್ಣೀರೆ ನೀ ಸುಮ್ಮನಿರು……………………………….
ಸುಮ್ಮನಿರು ಕಣ್ಣೀರೆ ...ಸುಮ್ಮನಿರು
ನಿನ್ನ ನೋವು ಅರ್ಥ ಮಾಡಿಕ್ಕೊಳ್ಳುವ ಇನ್ನೊಂದು ಮನಸ್ಸಿಲ್ಲ ಇಲ್ಲಿ.....
ನಿನ್ನ ಅಳು ವ್ಯರ್ಥ ಸುಮ್ಮನಿರು......
ಮುಗಿಲು ಮುಟ್ಟಲು ಹೋದ ಪ್ರೀತಿ ಇಂದು ಕಳಚಿ ಪಾತಳ ಸೇರಿದೆ ...
ನಿನ್ನ ಅಳುವಿನಿಂದ ಮರಳಿ ಬಾರದು ಸುಮ್ಮನಿರು....
ನನ್ನಲ್ಲಿ ನಾ ಇಂದು ಕೊರಗಲು ಕಾರಣ ಮನಸ್ಸೆ ಹೊರತು..ನಿನ್ನಲ್ಲ ಸುಮ್ಮನಿರು....ಕಣ್ಣೀರೆ ನೀ ಸುಮ್ಮನಿರು......................................ಸುರೇಶ್ ಸೂರಿ ದಾವಣಗೆರೆ
ಖುಷಿಯಲಿ ತೇಲಾಡಿದೆ ಮನವಿಂದು,
ನನಗೂ ಮನಸ್ಸಿದೆ ಎಂದು ತಿಳಿದವ
ನೀನೆ ಏನು ?
ತಿಳಿಯದೆ ಆದ ಸ್ನೇಹವಿದು,
ಯಾವುದೊ ಜನುಮದ ಬಂಧವಿದು,
ಕೂರಿಸಿದೆಯಲ್ಲೊ ಸ್ನೇಹದ
ಗೋಪುರದ ಮೇಲೆ,
ನೆಲೆಸು ಬಾರೊ ನನ್ನ ಗೆಳೆಯ,
ಸ್ನೇಹದ ಸನ್ನಿಧಿಯೊಳಗೆ….
ಸ್ಥಳ ಒಂದೇ ಆದರು ಎಷ್ಟು ಅಂತರ,
ಜೊತೆಯಿರೆ ಸಾಕು ನಮ್ಮ ಸ್ನೇಹ
ಜನುಮ ಜನುಮಾಂತರ….