ಹುಣ್ಣಿಮೆಯ ಬೆಳದಿಂಗಳು….
ಆ ನಿನ್ನ ಕಂಗಳು…!
ನೋಡಲೆಂದು ಬಳಿಗೆ ಬಂದಾಗ,
ಮೈಮರೆತು ಜೊತೆಯಲಿ ನಿಂತಾಗ!
ಸೆಳೆಯಿತು ಮನಸನ್ನ ಆ ನಿನ್ನ ಕಣ್ಣೋಟ.!!
ಆವರಿಸಿಕೊಂಡಿತು ನನ್ನನ್ನ ಆ ನಿನ್ನ ಮೈಮಾಟ..!!!
ಸೀತೆ ಉಂಡಳು ನೋವ ರಾಮ ರಾವಣನ ಹಗೆಯಲಿ
ಮಾಡಿದ ರಾಮ ಅವಳ ಕಾಡುಪಾಲು ಅಗಸನ ಮಾತನು ಒಪ್ಪಿ ಧರ್ಮ ಸಂಕಟದಲಿ
ಸೇರಿದಳವಳು ಕಾಡ ಮಗುವ ಹೊತ್ತು ಗರ್ಭದಲಿ
ಹೇಳಲೂ ಆಗದೆ ಅವಳ ರೋದನವ ಅವನಲಿ
ದ್ರೌಪದಿಯ ಜನನಕೂ ಕೂಡ ಕಾರಣವು ಮನ ತುಂಬಿದ ಹಗೆ
ಜನನ ಕಾಲದಲ್ಲಿ ನುಡಿದಿತ್ತಂತೆ ಕುಲ ನಾಶಕ್ಕೆ ಇವಳೆ ನೆಪದ ಸೋಗೆ
ಹೆಣ್ಣ ಕೆಣಕಿ ಮಾಡಿ ತಪ್ಪ, ಸೇರಿದರು ಮಣ್ಣ ಒಳಗೆ
ಆದರೂ ನಿಲ್ಲಲಿಲ್ಲ ನೋವು ನಾಶಕ್ಕೆಲ್ಲ ಹೆಣ್ಣೆ ಕಾರಣವೆಂದು ಸಾರುವ ಹೊಗೆ
ಆ ಮೇನಕೆ, ಶಾಕುಂತಲೆ ನೋವೇನು ಇದಕ್ಕಿಂತ ಭಿನ್ನವಲ್ಲ
ಮೇನಕೆಯಾದಳು ತಪಸ್ವಿಯ ದಾಸಿ , ಎತ್ತಲಾಗದೆ ಇಂದ್ರನೆದುರು ಸೊಲ್ಲ
ತನ್ನೂರ ರಾಜನ ಆಜ್ಞೆಗೆ ಹೆದರಿ ಹೆತ್ತ ಮಗಳನ್ನು ತ್ಯಜಿಸಬೇಕಾಯಿತಲ್ಲ
ತಾಯಿ ತಂದೆಯರೂ ಇಲ್ಲದೆ ಯಾವುದೊ ಆಟಕೆ ಬಲಿಯಾಯಿತು ಪತಿಯ ನೆನೆಪಿನಲ್ಲೂ ಉಳಿಯದೆ ಶಾಕುಂತಲೆ ಬದುಕೆಲ್ಲ
ಅಂದಿಗೂ ಇಂದಿಗೂ ಹೆಣ್ಣ ಮೇಲಿನ ಶೋಷಣೆ ನಿಂತಿಲ್ಲ
ರಾಜ್ಯ ಯುದ್ಧಗಳ ಗೆಲ್ಲಲು ಹುಡುಕುವರು ಅವಳ ಮೇಲಿನ ಅತ್ಯಾಚಾರವನೆ ಮೂಲ
ತಮ್ಮ ತಪ್ಪ ಅರಿತು ಬದುಕಲು ಬಿಟ್ಟು ಬದುಕುವ ಮನಸು ಯಾರಿಗೂ ಇಲ್ಲ
ಶತಶತಮಾನಗಳೇ ಕಳೆದರು ಜೀವನದ ವ್ಯಾಖ್ಯಾನವೆ ಬದಲಾದರು ಹೆಣ್ಣಿನ ಸ್ಥಿತಿ ಬದಲಾಗದಾಯಿತಲ್ಲ
ಪರರ ನಗು ಗೆಲುವು ಕುಹಕಕ್ಕೆಲ್ಲ ಹೆಣ್ಣಾದಳಲ್ಲ ಸರಕು
ಅರಿಯಿರೊ ಅವಳಿಗೂ ಇದೆ ಅವಳದೆ ಆದ ಬದುಕು
ಸಾಕು ಬಿಡಿರೋ ಮನದಲಿ ಮರವಾದ ಕೆಟ್ಟ ಚಟದ ಕುಹಕ
ಅವಳ ಮೇಲೆ ಅತ್ಯಾಚಾರವೆಸಗಿ ಪಡೆದದ್ದಕೆಲ್ಲ ಪಡೆಯಲೆ ಬೇಕು ನೋವಿನ ನರಕ
ನನ್ನೀ ಹ್ರುದಯ ನಿನ್ನ ನೆನಪುಗಳಿಂದ, ನೊಂದು ಬೆಂದು ಚಿದ್ರ ಚಿದ್ರವಾಗಿ ಹೊಡೆದು, ನುಚ್ಚು ನೂರಾದರೂ, ಈ ಮನಸೆಲ್ಲಾ ಕರಗಿ ನೀರಾದರೂ, ಆ ನೀರು ಹರಿದು ಕಡಲು ಸೇರಿದರೂ, ನನ್ನೀ ದುಃಖ ತಡೆಯಲಾರದೆ ಕತ್ತಲೆಯೂ ಸಹ ಕಣ್ಣೀರು ಸುರಿಸಿದರೂ, ನಿನ್ನಯ ಮನಸ್ಸು ಕರಗುವುದಿಲ್ಲವೇನೋ ಎಂದು ನಿರಾಸೆಯಾಗಿ ಹೋಗಿದ್ದೆ ಗೆಳೆತಿ. ಆದರೆ ನನಗಿಂದು ಅರ್ಥವಾಯಿತು,,, ನಿನಗೂ ಒಂದು ಮನಸ್ಸಿದೆ ಅನ್ನೋದು. ಭಗವಂತನು ಪರೀಕ್ಷೆ ಮಾಡಿ ಭಕ್ತನಿಗೆ ಪ್ರತ್ಯಕ್ಷ ಕೊಟ್ಟಂಗಾಯಿತು, ನಿನ್ನೀ ಬರುವಿಕೆಯಿಂದಾಗಿ!!
ಮನದ ಮಂದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು......
ಹ್ರುದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು .....
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು ........
ನೆನಪಿರಲಿ ಪ್ರೀಯೆ....
ದೀಪ ಆರದಿರಲಿ ,ಮುತ್ತು ಒಡೆಯದಿರಲಿ ,ಪುಷ್ಪ ಬಾಡದಿರಲಿ .........