Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರೆಯಾದ ಗೆಳತಿ

ಒಮ್ಮೆ ನಗಿಸಿದೆ,ಒಮ್ಮೆ ಕಣ್ಣೋರಿಸಿದೆ
ನಿ ಯಾರೆಂದು ತಿಳಿಸದೆ!
ಕುಟುಂಬವೋ ಸ್ನೇಹಿತೆಯೋ..
ಎಂದು ನಾ ಕೊನೆಗೂ ಅರಿಯದೆ ಹೋದೆ...

- Vinuu

07 May 2017, 02:56 pm

ನೀ ನನಗೆ ಕೊಟ್ಟ ಮಾತು........

ನನ್ನ ನಗುವನ್ನು ಕಳೆದುಕೊಂಡೆನೆ
ಮಗುವಿನ ರೂಪದಲ್ಲಿ.......

ಕಣ್ಣೀರ ಕೊನೆಗೂ ಕರುಣೆ ಇಲ್ಲ
ಅವಳ ನೆನೆಯಲು ಇದು ಅಡ್ಡಿಯಾಗಿದೆಯಲ್ಲಾ....

ನೋಡೇ ನನ್ನ ಮುದ್ದು ಮಗಳೇ
ಮಾತಿಲ್ಲದೆ ಮಲಗಬೇಡ ನನ್ನ ಉಸಿರೆ ನಿಂತೋಗುತ್ತೆ...........

ನಿನ್ನ ಮುದ್ದು ಮಾತಲ್ಲಿ ನನ್ನ ಅಪ್ಪ
ಎಂದು ಕರಿಯಮ್ಮಾ ಪುಟ್ಟಿ............

ಇನ್ಮುಂದೆ ನೀನಿಲ್ಲವೆಂಬ ಕನಸಲ್ಲೂ
ಒಪ್ಪಲು ಸಾಧ್ಯವಿಲ್ಲ ನನ್ನಿಂದ ಪಾಪು..........

ಇವರೆಲ್ಲಾ ನೀನಿಲ್ಲವೆಂದು ಆ ದೇವರ ಬಳಿ
ಹೋಗಿರುವೆಯೆಂದು ಅಳುತ್ತಿದ್ದಾರೆ ಚಿನ್ನ.......

ನೀ ನನಗೆ ಕೊಟ್ಟ ಮಾತು ಈ ಜನರಿಗೆ
ತಿಳಿದಿಲ್ಲ ಅಲ್ವಾ ಅಪ್ಪ ನಿನ್ನ ನಾನೆಂದು
ಬಿಟ್ಟಿರಲಾರೆ ಎಂದೂ............

- ಶಶಿ

07 May 2017, 10:54 am

ಕವಿತೆ.....

ನಿಂತಾಗಲೊಮ್ಮೆ ಮನವ ಸೇರಿದ ಸೊಲ್ಲ ನೆನೆದು
ಕುಳಿತಾಗಲೊಮ್ಮೆ ಕಲಿತ ನುಡಿಯ ಸೇರಿಸಿ
ಮನಸೊಳಗೆ ಕಾಣದೆ ಬಚ್ಚಿಟ್ಟು ಕುಳಿತ ಪದವ ಹುಡುಕಿ
ಮರೆಯಾಗದೆ ಕಣ್ಮುಂದೆ ಸುಳಿದಾಡುವ ಶಬ್ಧವ ಹೆಕ್ಕಿ
ಮನಸ ಕಾಡುತಿರುವ ಮರೆಯಲಾಗದ ನೆನಪ ಪದಗಳಲೆ ಜರಿದು
ಬದುಕ‌ ಹಸನಾಗಿಸಿದ ಸವಿಯ ನನಸ ಮತ್ತೊಮ್ಮೆ ನೆನೆದು
ಜೊತೆಯಾಗಿಯೇ ಇದ್ದು ನನಸಾಗದ ಕನಸ ಮೇಲೆ ಮುನಿದು
ಬದುಕ ಜೊತೆ ಜೊತೆಗೆ ‌ಬಂದವರ ಹರಸಿ ಹಾರೈಸಿ
ಅರ್ಧಹಾದಿಯಲೆ ಸರಿದು ನಿಂತವರ ಮೇಲೆ ವರದಿ ಒಪ್ಪಿಸಿ
ಪಾಠ ಕಲಿಸಿದ ಕ್ಷಣ ಮನಕೆ ಮತ್ತೊಮ್ಮೆ ವಂದಿಸಿ
ಕಾಪಾಡಿದ ಜೀವಗಳಿಗೆ ಧನ್ಯವಾದ ಅರ್ಪಿಸಿ
ಹೇಳಬೇಕಾದ ಮಾತು ರೀತಿ ನೀತಿ ಶಾಂತಿ‌‌ ಕ್ರಾಂತಿಗಳ ಪದಗಳಲೇ ಬೆರೆಸಿ
ಜೀವ ಜೀವಗಳ ವಿವಿಧ ಭಾವ ಭಾವನೆಗಳ ಸಾಲುಗಳಲಿ ಮೇಳೈಸಿ

ಮೂಡುತಿರುವ ಕವಿತೆಗಳು

ಮಾಡುತಿಹುದು ಮನವ ಸೊಗಸು,
ಅಡಗಿ ಕುಳಿತಿದ್ದ ಕವಿ ಮನವ ಜಗಕೆ ಪರಿಚಯಿಸಿ

- ಶ್ರೀಕಾವ್ಯ

06 May 2017, 10:40 pm

ಒಗ್ಗಟ್ಟು

ಬನ್ನಿರಿ ಬನ್ನಿರಿ ಸಾಗೋಣ
ಗುರಿ ತಲುಪಲು ಸೇರೋಣ

ಭಿನ್ನಗಳನ್ನು ಮರೆಯೋಣ
ಸಮಭಾವಗಳನ್ನು ಬಿತ್ತೋಣ
ಹಮ್ಮುಗಳನ್ನು ಕಳೆಯೋಣ
ಹೆಮ್ಮೆಯ ನಾವು ಗಳಿಸೋಣ

ತರ್ಕಕೆ ನಾವು ಕಾಯೋಣ
ಸಗ್ಗದ ಯಶವ ಪಡೆಯೋಣ
ಕಗ್ಗದ ಅರ್ಥವ ತಿಳಿಯೋಣ
ಬಗ್ಗದ ರೀತಿ ನಡೆಯೋಣ

ಬಂಡಾಯವ ನಾವು ಏಳೋಣ
ಗರ್ವದಿ ಗೆದ್ದು ಬೀಗೋಣ
ಕನಸಿನ ಮಹಾಮನೆ ಕಟ್ಟೋಣ
ಅದರೊಳು ಗಂಧದಿ ಮಥಿಸೋಣ

ಕ್ರಾಂತಿಯ ಹಾದಿಯ ಕ್ರಮಿಸೋಣ
ಶಾಂತಿಯ ತ್ರಿಪಿಟಿಕ ಕೇಳೋಣ
ಮಹೋನ್ನತ ಚಿಂತನೆ ಬೆಳೆಸೋಣ
ಜಗಕೆ ಮಾದರಿಯ ತೋರೋಣ







- ಚಂದ್ರಶೇಖರ ಹೆಗಡೆ

06 May 2017, 09:00 pm

ವಿಶ್ರಾಂತಿ

ನೀ..... ದೂರ ಹೋದ ಮೇಲೆ ಎಲ್ಲಿದೆ

ಮನಸ್ಸಿಗೆ ಶಾಂತಿ?

ನೋವುಗಳು  ತುಂಬಿ  ಸೃಷ್ಟಿಯಾಗಿದೆ ಅಶಾಂತಿ

ನೀ.... ದೂರ ಹೋದ ಮೇಲೆ ಎಲ್ಲವೂ, ಸತ್ತು ಹೋಗಿದೆ ಗೆಳತಿ,

ಅದಕ್ಕಾಗಿ ಬೇಕಿದೆ ಈಗ ನನಗೆ ವಿಶ್ರಾಂತಿ


✍ ಶೇಖರ್ ಬೆಳಾಲ್

- ಎಸ್.ಬಿ

06 May 2017, 07:43 pm

ವಿಶ್ರಾಂತಿ

ನೀ..... ದೂರ ಹೋದ ಮೇಲೆ ಎಲ್ಲಿದೆ

ಮನಸ್ಸಿಗೆ ಶಾಂತಿ?

ನೋವುಗಳು  ತುಂಬಿ  ಸೃಷ್ಟಿಯಾಗಿದೆ ಅಶಾಂತಿ

ನೀ.... ದೂರ ಹೋದ ಮೇಲೆ ಎಲ್ಲವೂ, ಸತ್ತು ಹೋಗಿದೆ ಗೆಳತಿ,

ಅದಕ್ಕಾಗಿ ಬೇಕಿದೆ ಈಗ ನನಗೆ ವಿಶ್ರಾಂತಿ

- ಎಸ್.ಬಿ

06 May 2017, 07:41 pm

ಏಳೇಳು ಜನುಮ

ಇರಲಾರೆ ಕ್ಷಣಬಿಟ್ಟು ನಾ ನಿನ್ನನು
ನೀನಿರದ ಆ ಕ್ಷಣವೇ ನಾ ಬದುಕೆನು
ನಿಜ ಹೇಳು... ನಿನ್ನೊಳಗೆ ನಾನಿಲ್ಲವೆ ?
ಜೊತೆಯಲಿ ಬೆರೆತೆವು ಜಗವನೆ ಮರೆತೆವು
ಏಳೇಳು ಜನುಮದಲಿ
ನಿನ್ನಲಿ ಬೆರೆತು ಒಂದಾಗುವಾಸೆ
ನನಗೆ ನೀನು ನಿನಗೆ ನಾನು
ಬರೆಯಬಹುದು ಮನದಲಿ
ಬಿಡುವಿಲ್ಲದೆ ಕವನ
ನನಗರಿವಿಲ್ಲದೆ ನನ್ನನು
ಕವಿಯಾಗಿಸಿದ ನಿನಗೆ
ನನ್ನ ಕೋಟಿ ನಮನ

- Pb

06 May 2017, 06:00 pm

ಪ್ರೀತಿ ಕೊನೆಯಾಯಿತು.

ಪ್ರೀತಿ ಕೊನೆಯಾಯಿತು
ಹೃದಯ ಕೊಲೆಯಯಿತು
ಅಂತ್ಯ ಸಂಸ್ಕರಕ್ಕೆ ಬಂದಾ ನನ್ನ ನಯನಗಳು ಕಣ್ಣೀರು ಹಾಕುತ್ತವೆ
ನೆನಪುಗಳಿಂದ ಸುಡಬೇಕಾ??
ಇಲ್ಲಾ ಸಮಾಧಿಯಾಲ್ಲಿ ಕೋಳೆಯಾಬೇಕಾ??ಎಂದು ತಿಳಿಯಾದೆ ಬೀದಿಯಲ್ಲಿ
ಅನಾಧ ಶವವಾಗಿ ಬಿದ್ದಿದೆ ನನ್ನ ಹೃದಯ???
ಅನಾಮಿಕ...........✍

- ಅನಾಮಿಕ..........

06 May 2017, 05:51 pm

ಗೆಳೆತಿ

ದೀಪ ಆರಿತೆಂದು ಹಣತೆಯನ್ನು
ಎಸೆಯಬೇಡ ಗೆಳತಿ....
ಹೂ ಬಾಡಿತೆಂದು ಗಿಡ
ಕಿತ್ತೆಸೆಯಬೇಡ ಗೆಳತಿ
ಇನ್ನೋಬ್ಬ ಗೆಳೆಯ ಸಿಕ್ಕನೆಂದು
ಈ ಗೆಳೆಯನನ್ನು ಮರೆಯಾಬೇಡ
ಗೆಳತಿ. ..
ಅನಾಮಿಕ........

- ಅನಾಮಿಕ..........

06 May 2017, 03:25 pm

ಪ್ರೀತಿ.............

ಮನದ ಮಾತು ಮೌನದಲ್ಲಿ ಕಲಿತು
ಮರೆಯಲ್ಲಿ ನಿಂತು
ಮುದ್ದ ಮಗವ ಕಂಡು
ಎದುರು ನಿಂತರೆ
ತೋದಲ ಮಾತಲ್ಲಿ ಬೆರತು ಉಸಿರಾಡುತ್ತಾ
ಕಾಯುತ್ತಿರುವೆ ನಿನಗಾಗಿ ನಿನ್ನ ಪ್ರೀತಿಗಾಗಿ

.............

- stylish⭐⭐AA

06 May 2017, 03:22 pm