Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ ಮಾಯೆ

ನಿನ್ನ ಪ್ರೀತಿಗಾಗಿ ನಾನು ಅಲೆದ ದಿನಗಳಿಲ್ಲಾ
ಕ್ಷಣಗಳಿಲ್ಲಾ,ಸ್ಥಳಗಳಿಲ್ಲಾ
ಆದರು ನಿ ನನ್ನ ತಿರುಗಿ ನೋಡಲಿಲ್ಲ
ನಿನ್ನ ಪ್ರೀತಿಗಾಗಿ ಏಳೆಳು ಜನ್ಮ ಎತ್ತೋದೇನು
ಅಸಾದ್ಯವಲ್ಲಾ,
ನಿನಗಾಗಿ ನನ್ನ ಜೀವಾ ಕೂಡೂದೇನ್ ದೂಡ್ಡದಲ್ಲಾ,
ಆದ್ರೆ ನೀ ನನ್ನ ಪ್ರೀತಿನಾ ಒಪ್ಕೋ ಬೇಕಲ್ಲಾ,
ನೀನು ನನ್ನ ಪ್ರೀತಿನಾ ಒಪ್ಕೋಂಡ್ರೆ
ಇವನ್ನೆಲ್ಲಾ ಮಾಡೋದ್ರಲ್ಲಿ ಮುಲಾಜೆ ಇಲ್ಲಾ.

- ಕಿರಣ ( ಮನಸಾರೆ )

12 Apr 2017, 12:24 am

ಹುಡುಕಬೇಡ....

...ಹುಡುಕಬೇಡ ಪ್ರಾಸವ
ನಾ ಬರೆದಿರುವ ಚಿಂದಿಯಲ್ಲಿ
ಬರೆಯಲು ಕವಿತೆಯ
ನಾನೇನು ಕವಿಯಲ್ಲ.

ತಲೆಗೆ ಬಂದ ಪದಗಳ
ಜೊತೆಗೊಂದು ಹಾವು ಏಣಿಯಾಟ,
ಮನಬಂದಂತೆ ಗೀಚಿದೆ,
ಆಳವಾದ ಮಾತುಗಳ ಬಣ್ಣಿಸುತ.

ಸ್ವಲ್ಪ ನೈಜ್ಯತೆಯೂ,
ಕೆಲವೊಮ್ಮೆ ಚಪಾಳೆ ಗುಂಗ್ಗಲಿ
ಮಸಾಲವು... ಬೆರಸಿ ಮಾಡಿದ
ಪೋಲಿಯೋಗರೆ ಈ ನನ್ನ
ಚಿಂದಿ ಬರಹವು.

ಸಂಧಿ ಸಮಾಸಗಳ ಅರಿವಿಲ್ಲ ,
ಲಘು ಗುರುವಿನ ಮಾರ್ಗದರ್ಶನವಿಲ್ಲ,
ಕವನದ ಗಂಧ ಗಾಳಿಯೂ ಗೋತಿಲ್ಲ.
ಆದರೂ ಹಿಂಗುತಿಲ್ಲ ಈ
ಮೊಂಡು ಬರೆಯುವ ಹುಚ್ಚು.

- MK Reddy

11 Apr 2017, 11:55 pm

ಬಿದ್ದ ನಗು...

ತಲೆಯಲ್ಲಿ ಬಿದ್ದ ಅವಳ ನಸು ನಗುವಿನ ಬೀಜಕೆ
ಮನದಲ್ಲಿ ಮೊಳಕೆ ಹೊಡೆದಿದೆ ಪ್ರೀತಿ
ಏನೋ ಹೊಸತನ ಏನೋ ನವನವೀನ

ತಪ್ಪು ಒಪ್ಪಿನ ಪ್ರಶ್ನೆ ಇದಲ್ಲ ,
ಹುಚ್ಚು ವಯಸ್ಸಿನ ಹಂಬಲ,
ನೊಂದ ಮನಸಿನ ಅನುಭವ ಪಡೆಯುವ
ಬೂದಿ ಮುಚ್ಚಿದ ಆತುರ.

ಗೋತಿಲ್ಲ ನನಗೆ ಇದು ಸರಿಯೋ ತಪೋ..
ಎಲ್ಲರಿಗೂ ಬಯಕೆ ಮನದಲ್ಲಿ,
ನನ್ನದು ಆಗಲಿ ಕಥೆಯೊಂದು
ಇನ್ನೊಬರ ಕಣ್ಣ ನೆನೆಸುವ ವ್ಯೆಥೆಯೆಂದು.
ಜಗಕೆ ಸಾರಿ ಹೇಳಬೇಕೆಂಬ ಹಂಬಲ,
ಮುದ್ದು ಮನಸಿನ, ಸುಂದರ ಪ್ರೀತಿಯ,
ಕಹಿ ಕೊನೆಯಿಂದ ನೊಂದ ಜೀವವಿದೆಂದು..

- MK Reddy

11 Apr 2017, 11:55 pm

ಯಾಂತ್ರಿಕತೆ

ಬರಡಾಯಿತು ಮನ, ಬರೆಯಲು ಕವಿತೆ
ಇಲ್ಲವಾದವು ಪದಗಳು.
ಕಡಲಾಚೆಗೆ ಮನ, ಬಯಸಲು ರಂಗು
ಇಲ್ಲವಾಯಿತು ಚೈತನ್ಯ.
ಜಗವ ದೂಡಲು ಮನಸ್ಸು,
ಜಂಜಾಟದಲಿ ಕಾಣೆಯಾದವು ಕನಸು.

#ಯಾಂತ್ರಿಕತೆ

- MK Reddy

11 Apr 2017, 11:53 pm

ಕೇಳಿರೋ...

ಕೇಳಿರೋ ಗೆಳೆಯರೇ
ಯಾಕಿಷ್ಟು ಆತುರ,
ಸಿಗುವರು ಹುಡುಗಿಯರು
ಇನ್ನಷ್ಟು ಸುಂದರ.

ಮಬ್ಬು ಮಂಕುತಿಮ್ಮಂದಿರ,
ಬೆಂಕಿಗೆ ಬಿದ್ದ ತುಪ್ಪದಂತೆ
ಉರಿದು ಕಾಲಿಯಾಗುತಿರೇ,
ಏನು ಹೇಳುವುದು ನಿಮಗೆ.

ಮದುವೆ ಆಗು ನೀ
ಪ್ರೀತಿ ಮಾಡಿ ,ಇಲ್ಲವೇ ಮನೆಯಲಿ ನೋಡಿ.
ವ್ಯತ್ಯಾಸವದು ಒಂದೇ...
ಒಂದು ನೀರಿಲ್ಲದ ಬಾವಿ,
ಇನ್ನೊಂದು ನೀರಿರುವ ಬಾವಿ....

- MK Reddy

11 Apr 2017, 11:53 pm

ಎಲವೋ ಮೂರ್ಖ......

ಎಲವೋ ಮೂರ್ಖ
ಗೊತ್ತಿರುವ ಮೂರು ಪದಗಳನ್ನೇ
ತಿರುಸಿ ಮರೆಸಿ ಬರೆಯುತ್ತಿರುವೆ ಕವನಗಳನ್ನ,
ಓದುಗರೇನು ಬೆಪ್ಪರೆಂದುಕೊಂಡೆಯಾ...?

ಪ್ರಾಸವ ಮುರಿದು,
ವ್ಯಾಕರಣವ ಹರಿದು,
ಹೊಸ ಶೈಲಿಯು ನನ್ನದೊಂದು ಎಂಬ ಭ್ರಮೆಯಲ್ಲಿ
ಗೀಚುತ ಏನೇನೋ
ಕವನವೆಂಬುದ ಬರೆದೆ ನೀನೊಂದು.

ನಿನ್ನ ಚಟಕ್ಕೆ
ಬಲಿಯಾದ ಆ ಪದಗಳೆಷ್ಟೋ...?
ನಿನ್ನ ದೌರ್ಜನ್ಯಕ್ಕೆ
ಮಾನ ಕಳೆದುಕೊಂಡ ಆ ಕವನಗಳೆಷ್ಟೋ...?
ವಿಮರ್ಶೆಗೆ
ತಡವಿಲ್ಲದೆ ನಿಡುವೇ ಅಶುಕಾರಣವ....
ಹೊಸ ಪದಗಳ ಹುಟ್ಟುಹಾಕುತ
ಹೂತು ಹಾಕಿರುವೆ ಶಬ್ದಕೋಶವ.....

ಮನಬಂದಂತೆ ಬರೆದು
ಬರೆದದ್ದೆ ಕವನಗಳೆಂದು ಕೊಚ್ಚಿಕೊಂಡು
ಹೊಗಳುವರ ಸಂಘವ ಕಟ್ಟಿ
ಚಪಾಳೆಗಳ ಬಾವಿಯಲ್ಲಿ ಮಿಂದು
ಕಡಲ ಕಡೆದಂತೆ ಬೀಗುತಿಯೆ
ಬುದ್ದಿ ನಿನಗುಂಟೆ?

ಯಾರ ಭಾವನೆಗಳಿಗೆ
ಯಾರು ಬೇಲಿ ಹಾಕಲು ಸಾಧ್ಯ .?
ಹಾರುವ ಹಕ್ಕಿಗೆ ಬಂಧನಗಳಿಲ್ಲ.
ಆದರೂ ಗೊತ್ತಿರಲಿ ಗೆಳೆಯ
ಓದುಗರು ನಿರುದ್ಯೋಗಿಗಳಲ್ಲ...

- MK Reddy

11 Apr 2017, 11:53 pm

ಪ್ರೀತಿಯೊಳಗೇನಿದೆ...

ಪ್ರೀತಿಯೊಳಗೇನಿದೆ ನಾಕಾಣೆ
ಹತ್ತಿರವಿದ್ದರು ದೂರ ಇದ್ದಹಾಗೆ
ದೂರವಿದ್ದರೆ ಹತ್ತಿರ ಇದ್ದಹಾಗೆ

ತಂಪಾದ ಮನದೊಳಗೆ ನೆನಪುಗಳ ಓಲೆಯ ಹಾಗೆ
ಆಕಾಶದಿ ಗರಿಗೆದರಿ ಹಾರುವ ಹಕ್ಕಿಯ ಹಾಗೆ
ಮತ್ತೆ ಬೀಸುವ ವಿರಹದ ಬಿಸಿಗಾಳಿಯ ಹಾಗೆ

ನೆನೆದಾಗ ಬರದ ತಂಗಾಳಿಯ ಹಾಗೆ
ಮಿಡಿದಾಗ ಮನ ಕೇಳದ ಸ್ವರಗಳ ಹಾಗೆ
ಅರೆಕ್ಷಣ ಬಂದು ಮರೆಯಾಗುವ ಮೋಡದ ಹಾಗೆ

ಮುಗುಳುನಗೆಯ ಹೂದೋಟದ ಹಾಗೆ
ಮೈಮರೆತು ಮನದೊಳಗೆ ಸೋತ ಹಾಗೆ
ಮತ್ತೆ ಪ್ರೀತಿಯ ತುಂತುರು ಹನಿಯಹಾಗೆ

ಕನಸಿನ ಅರಮನೆಗೆ ದಾರಿಯ ಹುಡುಕಾಟದ ಹಾಗೆ
ಭಾವನೆಗಳ ಸಾಗರದ ಮೇಲೆ ಅನುರಾಗದ ಅಲೆಯ ಹಾಗೆ
ಮೋಹಿಸಿ ಮರೆಯಾಗುವ ಮಾಯೆಯ ಹಾಗೆ...

- Irayya Mathad

11 Apr 2017, 10:26 pm

ನೀನಿರುವೆ ಎಂದು........✍

ನಿನ್ನ ರೂಪವೇ ತುಂಬಿದೆ
ನನ್ನ ಕಣ್ಣೆಲ್ಲಾ.......

ನಿನ್ನ ನಗೆಯ ಸದ್ದೇ
ತುಂಬಿದೆ ನನ್ನ ಹೃದಯವೆಲ್ಲಾ.........

ನಿನ್ನ ಕರೆಗೆ ಓಗೊಡುವ ನನ್ನ ಮನಕೆ
ಹೇಳೋ ಗೆಳಯ ಅಷ್ಟೊಂದು ಆತಂಕ
ಬೇಡವೆಂದು ನನಗಾಗಿ ನೀನಿರುವೆ ಎಂದು.....

- ಚುಕ್ಕಿ

11 Apr 2017, 09:30 pm

ಕಣ್ಣಂಚಿನ‌ ನಗುವ ಕಂಡು

ನಿನ್ನ ಕಣ್ಣಂಚಿನ ನಗುವ ಕಂಡು
ಸೆಳೆಯಿತು‌‌ ಹೃದಯವು ನಿನ್ನೆಡೆಗೆ ಅಂದು

ನೀ‌ ಒಡೆದಿರಲು‌ ಮನಸ ‌ನಗುವ ಕೊಂದು
ಜಾರುತಿಹುದು‌ ನೀರಹನಿಯು ಕಣ್ಣಂಚಲಿ‌‌ ಇಂದು

ಮೊದಲ‌ ಮಳೆಯ ಕಾಯುತಿರುವ ಜಾತಕ ಪಕ್ಷಿಯು ನಾನು
ಸುಡುವ ಬಿರು‌ ಬಿಸಿಲಾದೆಯಲ್ಲ‌ ನೀನು

ಕಣ್ಣೊಡಲಲಿ‌ ತುಂಬಿದೆ ಬಣ್ಣದ ಕಾಮನಬಿಲ್ಲು
ಕಾಣುವ ಮೊದಲೇ ಸುರಿದೆಯಲ್ಲ ಇರುಳಿನ‌ ಕಡಲು

ಕನಸುಗಳ‌ ತೋಟದೊಳಗಿನ‌ ಹಾರುವ ಪತಂಗವು ನಾನು
ರೆಕ್ಕೆಯ ಮುರಿದು ಹಾರಲು‌ ಹೇಳುತಿರುವೆ ನೀನು

ನಗುವ ತುಟಿಯ ಅಂಚಲು ನೋವಿನ ಜೋಕಾಲಿ
ಮುಂಗುರುಳ ಹಾರಾಟದಲು ನೆನಪಿನ ಲಾಲಿ

ನನಸಲು ಕಾಣದ ನಿನ್ನದೆ ಮಾರ್ದನಿ
ಕಂಡ ಕನಸಲು‌ ಹೇಳಲಾಗದ ನೋವಿನದೆ‌ ದನಿ

- ಶ್ರೀಕಾವ್ಯ

11 Apr 2017, 09:12 pm

ನೆನಪಿನ ಮಾತು..

ಮರಿಬೇಕು ಅನ್ಕೋತ್ತಿನಿ ಆದರೆ ಮನಸ್ಸು ಒಪೋಲ್ಲ
ದೂರ ಅಗ್ಬೇಕು ಅನ್ಕೋತ್ತಿನಿ ಆದರೆ ನೆನಪುಗಳು ಕೆಳೋಲ್ಲ
ಪ್ರೀತಿಸಬಾರದು ಅನ್ಕೋತ್ತಿನಿ ಆದರೆ
ಹೃದಯ ಬಿಡೋಲ್ಲ
ಅನು..

- Anu...

11 Apr 2017, 07:04 pm