ನಿನ್ನ ಧ್ವನಿಯ ಕೇಳಿದಮೇಲೆ
ಸವಿಗಾನದ ಕೋಗಿಲೆ ಎಕೆ ?
ನೀ ನಗುವ ಅಂದ ನೋಡಿದಮೇಲೆ
ಆ ಚಂದ್ರನ ಬೆಳದಿಂಗಳೇಕೆ ?
ಜೋತೆಗೆ ನೀನೇ ನಡೆಯುವಾಗ
ಆ ಹಂಸದ ನೆನಪು ಯಾರಿಗೆ ?
ಕಣ್ಣು ತೆರೆದ ಕ್ಷಣವೇ
ನೀನೇ ಇರಲು ಬದುಕಿನಲ್ಲಿ
ನೋವು ಎಲ್ಲಿದೆ ?
ಒಂದಾನೊಂದು ಕಾಲದಲ್ಲಿ
ಹಳೇ ಕಾಲದ ರೇಡಿಯೋದಲ್ಲಿ
ಉಪೇಂದ್ರ ರಾವ್, ರಂಗ ರಾವ್
ಸುಧಾ ದಾಸ್ ಅವರುಗಳು
ವಾರ್ತೆ ಓದುತ್ತಿದ್ದುದು
ಬಹಳಾ ಚೆಂದವಿತ್ತು..
ಆರ್ಕೆ ದಿವಾಕರ
ಚಿತ್ತರಂಜನ್ ದಾಸ್
ಮುಂತಾದವರ ಪ್ರದೇಶ ಸಮಾಚಾರ
ಮುದವಾಗಿ ಕಿವಿಗೆ ಅಡರುತ್ತಿತ್ತು.
ಮುಂದೇನಾಯ್ತೆಂದರೆ..
ರೇಡಿಯೋಗಳ ಜಾಗದಲ್ಲಿ ಬಂದು ಕುಳಿತ
ಮೂರ್ಖರ ಪೆಟ್ಟಿಗೆಯಲ್ಲಿ
ದೂರ ದರ್ಶನವನ್ನು
ಅಡಚಣೆಗಾಗಿ ಕ್ಷಮಿಸುತ್ತ
ಹತ್ತಿರ ಮಾಡಿಕೊಂಡಂತೆಯೇ...
'ಉದಯ'ವಾದವು ಹೊಸ
ಖಾಸಗಿ ವಾಹಿನಿಗಳು...
ವಾರ್ತೆಗಳನ್ನು ಓದುತ್ತಿದ್ದವರ
ಕಾಲ ಸರಿದು..
ವಾಕರಿಕೆ ಬರುವಂತೆ ವದರುವವರ
ಕಾಲ ಸುರುವಾಯ್ತು.
ಸುದ್ದಿ ಹೆಕ್ಕಿ ತರುವವರೇ
ಸುದ್ದಿಯನ್ನು ಸೃಷ್ಟಿಸಲಾರಂಭಿಸಿ..
ಸುದ್ಧಿಗಿಂತ ಹೆಚ್ಚಾಗಿ
ಸದ್ದುಗಳೇ ತುಂಬಿ ಹೋಗಿ...
ಸಂದರ್ಶನಕ್ಕೆ ಕೂತರೆ..
ಉತ್ತರಕ್ಕಿಂತ ಪ್ರಶ್ನೆಗಳೇ ಉದ್ದವಾಗಿ..
ಮುಗಿಯದ ಪ್ರಶ್ನೆಗೆ ಉತ್ತರಿಸಲು
ಅತಿಥಿಗೆ ಸಮಯ ಸಾಲದೇ ಎದ್ದು ಹೋಗಿ...
ನೋಡುಗರ ತಿಥಿ ಆಗುವ ಹೊತ್ತಿಗೆ
ವಾರ್ತಾ ಪ್ರಸಾರ ಮುಕ್ತಾಯವಾಯಿತು !
ದೇವಾ ಓ ದೇವಾ ನಿನ್ನ ಕಾಣಬಯಸುವೆ ಆ ಸರ್ವ ಶಕ್ತಿಯ
ದಯಮಾಡಿ ಕಣ್ತೆರೆಯಿಸು ಕಾಪಾಡು ನನ್ನನು
ಕರುಣಾಳು ಬಂಧುವೆ ಕಾರುಣ್ಯ ಸಿಂಧುವೆ...ಭಕ್ತ
ಗುಡಿಯಲಿಂದು ಪೂಜೆ ಮಾಡಿ
ಮಸೀದಿಯಲ್ಲೂ ನಮಾಜು ಮಾಡಿ
ಚರ್ಚಿನಲ್ಲಿ ಪ್ರಾರ್ಥಿಸಿ ನಿನಗಾಗಿ ಕಾಯುವೆ
ನಿನ್ನನೆ ಭಜಿಸುವೆ...ಭಕ್ತ
ನಿನ್ನ ಪ್ರಾರ್ಥನೆಯ ಎಲ್ಲ ಮೂಲ ಒಂದೆ
ನಿನ್ನ ಭಕ್ತಿ ಭಾವದಲ್ಲಿ ತುಂಬಿರಲಿ ನಿಸ್ವಾರ್ಥವು
ಅದುವೆ ನನಗೆ ಸಲ್ಲುವ ಮೊದಲ ಭಕ್ತಿ ಕಾಣಿಕೆ...ದೇವರು
ಅನುದಿನವು ನಿನ್ನ ಜಪಿಸುವೆ ಹರಿಯುವ ಜರಿಯಂತೆ
ಕಾಣದು ಇನ್ನಿಂದು ನಿನ್ನಯ ಆ ರೂಪವೂ
ಬದುಕಿದರೇನರ್ಥವು ಈ ನನ್ನ ಜನ್ಮವು...ಭಕ್ತ
ನಿನ್ನ ಕಾಯಕವೆ ಸ್ವರ್ಗದ ದಾರಿಯು ಅದರಲಿ ತೋರು ನೀ ಪ್ರಾಮಾಣಿಕತೆಯ
ಶ್ರದ್ಧೆಯ ಶಕ್ತಿಯು ಶುಭವೆ ನಿನಗದು
ಮರೆಯದಿರು ನೀ ನಿನ್ನ ಕಾಯಕವ...ದೇವರು
ಯಾವ ಧರ್ಮವು ಯಾವ ಕರ್ಮವು
ನಿನ್ನ ನೋಡಲು ನಾ ಪಾಲಿಸ ಬಯಸಲಿ
ಭವಬಂಧನದಲಿ ಮುಕ್ತಿಯ ಪಡೆಯಲು ಮಾರ್ಗವ ತೋರಿಸು ಸಾರ್ಥಕಗೊಳಿಸು ನನ್ನ ...ಭಕ್ತ
ನೀ ಕರೆಯುವ ಎಲ್ಲ ನಾಮವು ಒಂದೆ ನನಗೆ
ಜಾತಿ ಕುಲಗಳ ಬಣ್ಣವು ಇಲ್ಲ ನನಗೆ
ಮಾನವತೆಯ ಸಾರುವ ಸಂಕೇತವೆ ಧರ್ಮವು ನನಗೆ
ನಿನ್ನಲಿ ಇರುವೆ ನಾ ಎಲ್ಲೆಲ್ಲು ತುಂಬಿಹೆ ನಾ
ಬಡವ ಬಲ್ಲಿದ ಅರಿತುಕೊ ಗುಣದಲಿ ಬರದು ಧನಕನಕ ನಿನ್ನ ಕೊನೆ ಕ್ಷಣದಲಿ...ದೇವರು
ಧನ್ಯನಾದೆನು ಧನಿಕನಾದೆನು ನೀ ತೋರಿದ ದಾರಿಯ
ನಾನಿನ್ನು ಮೀರೆನು
ಕತ್ತಲೆ ಕಳೆಯಿತು ನನ್ನ ಮತಿ ಬೆಳಗಿತು
ಅರಿವಾಯಿತು ನನಗೆ ಬದುಕಿನ ಸಾರವು
ಎಲ್ಲೆಲ್ಲೂ ಹರಡುವೆ ಪ್ರಿತಿಯ ಪುಷ್ಪವ
ಎಲ್ಲವೂ ಗೆಲ್ಲುವೆ ಪ್ರೇಮದಿ ಈ ಜಗವ...ಭಕ್ತ