Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬೆಳಕಾಗಿರಲಿ::::::::#

ಒಂದು "ನೆನಪು" ನೋವಾಗಿ ಕಾಡೋ ಮುಂಚೆ,
ಒಂದು "ಕನಸು" ನಗುವಾಗಿ ಬರಲಿ.
ಒಂದು "ಪ್ರೀತಿ" ಕಣ್ಣೀರಲ್ಲಿ ಕರಗುವ ಬದಲು,
ಒಂದು "ಸ್ನೇಹ" ಕಣ್ಣಿಗೆ ಬೆಳಕಾಗಿ ಬರಲಿ.
*RS*

- *RS*

25 Mar 2017, 03:12 pm

ಕನಸಿನ ರಾಜಕುಮಾರ

ಹೃದಯದ ಬಾಗಿಲಿಗೆ ತೋರಣವೆ ನೀನು
ಕನಸಿನ ಲೋಕಕೆ ಮಾಹಾರಾಜನೆ ನೀನು
ಮತ್ತೆ ಮತ್ತೆ ಹಾಡುವೆ ನಿನ್ನ ಜೊತೆಗೂಡಿ...ಪ

ಯಾವುದೋ ಲೋಕವೂ ಯಾವುದೋ ಶಾಕವೂ
ನನ್ನಯ ಮನಸಿಗೆ ಬಿಸಿಗಾಳಿ ತಾಕಿದೆ
ನಿನ್ನೊಲಗೂಡುವ ಇರಾದೆ ಮೂಡಿದೆ

ಹೂವಿನ ಹಾಗೆ ನಾ ನಾಚುತಲಿರುವಾಗ
ದುಂಬಿಯಾಗಿ ನೀ ಬರಲು ಮೈಮನ ಮರೆತೆ ನಾ
ಮರೆತು ಬೆರೆತೆ ನಾ ನಿನ್ನಲ್ಲಿ ಜೇನಾಗಿ

ನಿನ್ನ ಪ್ರೀತಿಗೆ ಸರಿಸಾಟಿ ಇಲ್ಲ ಏನೂ
ಬೇರೆನು ಬೇಡೆನು ಆ ದೇವ ನಾನಿನ್ನೂ
ಬಳಿಯಲಿ ನೀನಿರಲು ಬದುಕೆ ಬಂಗಾರವೂ

ನನ್ನ ಈ ಜಗದಲಿ ತುಂಬಿರುವೆ ನೀನು
ಒಂಟಿಯಾಗಿರಲು ನಾ ಬಯಸೆನು ಇನ್ನೆಂದು
ಕಣ್ಣಲ್ಲಿ ಕಣ್ಣಾಗಿ ನೀನೆ ತುಂಬಿರಲು...

- Irayya Mathad

25 Mar 2017, 01:47 pm

ಹುಡುಕಬೇಡ ಪ್ರಾಸವ......

ಹುಡುಕಬೇಡ ಪ್ರಾಸವ
ನಾ ಬರೆದಿರುವ ಚಿಂದಿಯಲ್ಲಿ
ಬರೆಯಲು ಕವಿತೆಯ
ನಾನೇನು ಕವಿಯಲ್ಲ.

ತಲೆಗೆ ಬಂದ ಪದಗಳ
ಜೊತೆಗೊಂದು ಹಾವು ಏಣಿಯಾಟ,
ಮನಬಂದಂತೆ ಗೀಚಿದೆ,
ಆಳವಾದ ಮಾತುಗಳ ಬಣ್ಣಿಸುತ.

ಸ್ವಲ್ಪ ನೈಜ್ಯತೆಯೂ,
ಕೆಲವೊಮ್ಮೆ ಚಪಾಳೆ ಗುಂಗ್ಗಲಿ
ಮಸಾಲವು... ಬೆರಸಿ ಮಾಡಿದ
ಪೋಲಿಯೋಗರೆ ಈ ನನ್ನ
ಚಿಂದಿ ಬರಹವು.

ಸಂಧಿ ಸಮಾಸಗಳ ಅರಿವಿಲ್ಲ ,
ಲಘು ಗುರುವಿನ ಮಾರ್ಗದರ್ಶನವಿಲ್ಲ,
ಕವನದ ಗಂಧ ಗಾಳಿಯೂ ಗೋತಿಲ್ಲ.
ಆದರೂ ಹಿಂಗುತಿಲ್ಲ ಈ
ಮೊಂಡು ಬರೆಯುವ ಹುಚ್ಚು.

- MK Reddy

25 Mar 2017, 03:28 am

ಸ್ನೇಹ

ಕಣ್ಣೀರಿನಿಂದ ಬರೆಯಲಾಗುತ್ತಿಲ್ಲ
ನಿನ್ನ ಹೆಸರ ,,,,,,,,,,,,,,,,,,,,,,,✍
ನಿನ್ನನ್ನು ಮರೆಯಲಾಗುತ್ತಿಲ್ಲ,,,,,,,,,,,,,

ಇಷ್ಟೆಲ್ಲ ನೆನಪುಗಳು ನೀ
ನನ್ನಲ್ಲಿ ಬಿಟ್ಟುಹೋದ ಮೇಲೆ
ನಾ ಹೇಗೆ ನಿನ್ನ ಮರೆಯಲಿ,,,,,,,,,,,,,,,

ಮಾತು ನನ್ನ ಮನದಲ್ಲೇ ಉಳಿದರೂ
ಕಣ್ಣೀರು ಮಾತ್ರ ಕಣ್ಮರೆಯಾಗುತ್ತಿಲ್ಲ
ನಿನ್ನ ನೋಡುವ ಆಸೆಯಿಂದ,,,,,,,,,,,,,,,

ನಿನಗಾಗಿ ಕಾಯುವೇನೋ,,,,,,,,,,,,,,,,,,
ನನ್ನನ್ನೇ ನಾ ಮರೆಯುವೇನೋ
ತಿಳಿಯುತ್ತಿಲ್ಲ,,,,,,,,,,,,,,,,,,

ನನ್ನ ನೋವೆಲ್ಲಾ ಸೇರಿಸಿ ಮಾಡಿದರೆ
ಒಂದು ಪ್ರಪಂಚ ಅದರಲ್ಲಿ ನಿನ್ನ ಹೊರೆತು
ಬೇರೆ ಯಾರು ಇರಲಾರರು ,,,,,,,,,,,,,,,,,,,,,,,,,

ಏಕೆಂದರೆ ಅದು ನಿನ್ನ ಸ್ನೇಹಕ್ಕೆ
ಮುಡುಪಿಟ್ಟ ನನ್ನ ಮನಸಿನ ಪ್ರಪಂಚ,,,,,,,,,,,,,,

- ಚುಕ್ಕಿ

24 Mar 2017, 11:43 pm

ನೀನು...

ನಿನ್ನ ಧ್ವನಿಯ ಕೇಳಿದಮೇಲೆ
ಸವಿಗಾನದ ಕೋಗಿಲೆ ಎಕೆ ?
ನೀ ನಗುವ ಅಂದ ನೋಡಿದಮೇಲೆ
ಆ ಚಂದ್ರನ ಬೆಳದಿಂಗಳೇಕೆ ?
ಜೋತೆಗೆ ನೀನೇ ನಡೆಯುವಾಗ
ಆ ಹಂಸದ ನೆನಪು ಯಾರಿಗೆ ?
ಕಣ್ಣು ತೆರೆದ ಕ್ಷಣವೇ
ನೀನೇ ಇರಲು ಬದುಕಿನಲ್ಲಿ
ನೋವು ಎಲ್ಲಿದೆ ?

- Anu...

24 Mar 2017, 09:32 pm

ಆಕಾಶವಾಣಿ... ವಾರ್ತೆಗಳು

ಒಂದಾನೊಂದು ಕಾಲದಲ್ಲಿ
ಹಳೇ ಕಾಲದ ರೇಡಿಯೋದಲ್ಲಿ
ಉಪೇಂದ್ರ ರಾವ್, ರಂಗ ರಾವ್
ಸುಧಾ ದಾಸ್ ಅವರುಗಳು
ವಾರ್ತೆ ಓದುತ್ತಿದ್ದುದು
ಬಹಳಾ ಚೆಂದವಿತ್ತು..

ಆರ್ಕೆ ದಿವಾಕರ
ಚಿತ್ತರಂಜನ್ ದಾಸ್
ಮುಂತಾದವರ ಪ್ರದೇಶ ಸಮಾಚಾರ
ಮುದವಾಗಿ ಕಿವಿಗೆ ಅಡರುತ್ತಿತ್ತು.

ಮುಂದೇನಾಯ್ತೆಂದರೆ..
ರೇಡಿಯೋಗಳ ಜಾಗದಲ್ಲಿ ಬಂದು ಕುಳಿತ
ಮೂರ್ಖರ ಪೆಟ್ಟಿಗೆಯಲ್ಲಿ
ದೂರ ದರ್ಶನವನ್ನು
ಅಡಚಣೆಗಾಗಿ ಕ್ಷಮಿಸುತ್ತ
ಹತ್ತಿರ ಮಾಡಿಕೊಂಡಂತೆಯೇ...
'ಉದಯ'ವಾದವು ಹೊಸ
ಖಾಸಗಿ ವಾಹಿನಿಗಳು...

ವಾರ್ತೆಗಳನ್ನು ಓದುತ್ತಿದ್ದವರ
ಕಾಲ ಸರಿದು..
ವಾಕರಿಕೆ ಬರುವಂತೆ ವದರುವವರ
ಕಾಲ ಸುರುವಾಯ್ತು.
ಸುದ್ದಿ ಹೆಕ್ಕಿ ತರುವವರೇ
ಸುದ್ದಿಯನ್ನು ಸೃಷ್ಟಿಸಲಾರಂಭಿಸಿ..
ಸುದ್ಧಿಗಿಂತ ಹೆಚ್ಚಾಗಿ
ಸದ್ದುಗಳೇ ತುಂಬಿ ಹೋಗಿ...

ಸಂದರ್ಶನಕ್ಕೆ ಕೂತರೆ..
ಉತ್ತರಕ್ಕಿಂತ ಪ್ರಶ್ನೆಗಳೇ ಉದ್ದವಾಗಿ..
ಮುಗಿಯದ ಪ್ರಶ್ನೆಗೆ ಉತ್ತರಿಸಲು
ಅತಿಥಿಗೆ ಸಮಯ ಸಾಲದೇ ಎದ್ದು ಹೋಗಿ...
ನೋಡುಗರ ತಿಥಿ ಆಗುವ ಹೊತ್ತಿಗೆ
ವಾರ್ತಾ ಪ್ರಸಾರ ಮುಕ್ತಾಯವಾಯಿತು !

- ಶ್ರೀಗೋ.

24 Mar 2017, 09:04 pm

ಜೀವನ --- ಪ್ರೀತಿ

ಜೀವಕ್ಕಿಂತ "ಜೀವನ" ಮುಖ್ಯ.
ಪ್ರೀತಿಗಿ೦ತ "ಪ್ರೀತ್ಸೋರ್" ಮುಖ್ಯ.
ಅದಕ್ಕೆ
ಪ್ರೀತಿಗೆ "ಜೀವ" ಕೊಡಿ.
ಪ್ರೀತ್ಸೋರಿಗೆ "ಜೀವನ" ಕೊಡಿ.
*RS*

- *RS*

24 Mar 2017, 06:59 pm

ನಿನ್ನೊಳಗಿರುವೆ ನಾನು

ದೇವಾ ಓ ದೇವಾ ನಿನ್ನ ಕಾಣಬಯಸುವೆ ಆ ಸರ್ವ ಶಕ್ತಿಯ
ದಯಮಾಡಿ ಕಣ್ತೆರೆಯಿಸು ಕಾಪಾಡು ನನ್ನನು
ಕರುಣಾಳು ಬಂಧುವೆ ಕಾರುಣ್ಯ ಸಿಂಧುವೆ...ಭಕ್ತ

ಗುಡಿಯಲಿಂದು ಪೂಜೆ ಮಾಡಿ
ಮಸೀದಿಯಲ್ಲೂ ನಮಾಜು ಮಾಡಿ
ಚರ್ಚಿನಲ್ಲಿ ಪ್ರಾರ್ಥಿಸಿ ನಿನಗಾಗಿ ಕಾಯುವೆ
ನಿನ್ನನೆ ಭಜಿಸುವೆ...ಭಕ್ತ

ನಿನ್ನ ಪ್ರಾರ್ಥನೆಯ ಎಲ್ಲ ಮೂಲ ಒಂದೆ
ನಿನ್ನ ಭಕ್ತಿ ಭಾವದಲ್ಲಿ ತುಂಬಿರಲಿ ನಿಸ್ವಾರ್ಥವು
ಅದುವೆ ನನಗೆ ಸಲ್ಲುವ ಮೊದಲ ಭಕ್ತಿ ಕಾಣಿಕೆ...ದೇವರು

ಅ‌ನುದಿನವು ನಿನ್ನ ಜಪಿಸುವೆ ಹರಿಯುವ ಜರಿಯಂತೆ
ಕಾಣದು ಇನ್ನಿಂದು ನಿನ್ನಯ ಆ ರೂಪವೂ
ಬದುಕಿದರೇನರ್ಥವು ಈ ನನ್ನ ಜನ್ಮವು...ಭಕ್ತ

ನಿನ್ನ ಕಾಯಕವೆ ಸ್ವರ್ಗದ ದಾರಿಯು ಅದರಲಿ ತೋರು ನೀ ಪ್ರಾಮಾಣಿಕತೆಯ
ಶ್ರದ್ಧೆಯ ಶಕ್ತಿಯು ಶುಭವೆ ನಿನಗದು
ಮರೆಯದಿರು ನೀ ನಿನ್ನ ಕಾಯಕವ...ದೇವರು

ಯಾವ ಧರ್ಮವು ಯಾವ ಕರ್ಮವು
ನಿನ್ನ ನೋಡಲು ನಾ ಪಾಲಿಸ ಬಯಸಲಿ
ಭವಬಂಧನದಲಿ ಮುಕ್ತಿಯ ಪಡೆಯಲು ಮಾರ್ಗವ ತೋರಿಸು ಸಾರ್ಥಕಗೊಳಿಸು ನನ್ನ ...ಭಕ್ತ

ನೀ ಕರೆಯುವ ಎಲ್ಲ ನಾಮವು ಒಂದೆ ನನಗೆ
ಜಾತಿ ಕುಲಗಳ ಬಣ್ಣವು ಇಲ್ಲ ನನಗೆ
ಮಾನವತೆಯ ಸಾರುವ ಸಂಕೇತವೆ ಧರ್ಮವು ನನಗೆ
ನಿನ್ನಲಿ ಇರುವೆ ನಾ ಎಲ್ಲೆಲ್ಲು ತುಂಬಿಹೆ ನಾ
ಬಡವ ಬಲ್ಲಿದ ಅರಿತುಕೊ ಗುಣದಲಿ ಬರದು ಧನಕನಕ ನಿನ್ನ ಕೊನೆ ಕ್ಷಣದಲಿ...ದೇವರು

ಧನ್ಯನಾದೆನು ಧನಿಕನಾದೆನು ನೀ ತೋರಿದ ದಾರಿಯ
ನಾನಿನ್ನು ಮೀರೆನು
ಕತ್ತಲೆ ಕಳೆಯಿತು ನನ್ನ ಮತಿ ಬೆಳಗಿತು
ಅರಿವಾಯಿತು ನನಗೆ ಬದುಕಿನ ಸಾರವು
ಎಲ್ಲೆಲ್ಲೂ ಹರಡುವೆ ಪ್ರಿತಿಯ ಪುಷ್ಪವ
ಎಲ್ಲವೂ ಗೆಲ್ಲುವೆ ಪ್ರೇಮದಿ ಈ ಜಗವ...ಭಕ್ತ

- Irayya Mathad

24 Mar 2017, 05:57 pm

ನನ್ನ ಹೃದಯ

ನನ್ನ ಹೃದಯ ಎಲ್ಲಿ ಜಾರಿ ಬಿತ್ತು
ಬಹುಶಃ ನಿನ್ನ ನಗುವಲ್ಲಿ
ಕಳೆದೊಗಿದಿಯೇನೋ...!!!

ಬಾರೆ ಮರಳಿ ಹೃದಯವೇ
ನಾನೆಗೊ ಅವನಲ್ಲೇ ಮರೆಯಾಗಿರುವೆ
ನೀನಾದರು ನನ್ನಲ್ಲಿರು...!!!

ಅವನ ಒಂದು ನೋಟಕ್ಕೆ ನಾ ಮನಸೋತೆ .
ಅವನಂದ ಒಂದು ಮಾತಿಗೆ
ನನ್ನ ಜೀವವೇ ಕೊಟ್ಟೆ...!!!

ನನ್ನ ಮೇಲೆ ನನಗೇ ಇಲ್ಲದ
ನಂಬಿಕೆ ಅವನಲ್ಲಿ ನಾ ಕಂಡೇ.
ನಾನಂದೇ ಒಂದು ಮಾತು ಅವನಲ್ಲಿ.....!!!

ನಾ ಕೇಳಿದೆ ಅವನಿಗೆ ನಾನೆದಾರು ತಪ್ಪು
ಮಾಡುತಿರುವೆನಾ ಎಂದು........
ಅವನಂದ ನನ್ನ ಹೃದಯ ಎಂದಿಗೂ
ಯಾವ ತಪ್ಪು ಮಾಡಲ್ಲವೆಂದು...!!!

ಕಂಬನಿಯು ನನ್ನ ಕೆನ್ನೆಯ
ಮೇಲೆ ನಿಂತಿತ್ತು ನೋವಿನಿಂದಲ್ಲ...
ನನಗಾಗಿ ಒಬ್ಬರಿರುವರೆಂಬ ಸಂತೋಷದಿಂದ...!!!

- ಚುಕ್ಕಿ

24 Mar 2017, 10:59 am

ಮನಸoದ ಮಾತು

ಮನಸoದ ಮಾತು ನನ್ನ
ಮೌನಿ ಮಾಡಿತು.
ನಿನ್ನ ನೆನದಾಗ ನನ್ನಲ್ಲೇ
ನಾನಿರುವುದಿಲ್ಲ ಎಂದು
ನನಗೆ ತಿಳಿಸಿತು.......

- ಚುಕ್ಕಿ

24 Mar 2017, 10:58 am