Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

♤ಹೆರೆತ ತುಪ್ಪ♤

ಹೇಳದೆ ಕೇಳದೆ ಮಾಡಿದ ಸ್ನೇಹ
ಹೆರೆತ ತುಪ್ಪದಂತೆ ಅದರ ಮೋಹ
ಹಂಗಿನಲಿ ಮದರಂಗಿನಲಿ
ಹೊಂಬೆಳಕಾಗಿ ಬೆಳೆದು ಹೆಮ್ಮರವಾಗಲಿ
ಹಂಬಲದ ಹಲಸಿನಂತ ನಮ್ಮ ಈ ಸ್ನೇಹ

ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}

- ನಾಗರಾಜ ಬಾಕೆ೯ರ್

31 Mar 2017, 10:00 pm

ನಡೆದಾಡುವ ದೇವರು

ಕೋಟಿ ದೇವರಿದ್ದರು ನನಗ್ಯಾರು ಕಾಣಲಿಲ್ಲ
ಕೈ ಮುಗಿದು ಬೇಡಿದರು ವರವ ಯಾರು ಕೊಡಲಿಲ್ಲ

ನೊಂದುಬೆಂದ ನರಳಿದರು ಸಹಕಾರ ಮಾಡಲಿಲ್ಲ
ಕಣ್ಣು ಬಿಟ್ಟು ನೋಡುವ ಕೋಟಿಗೊಬ್ಬ ದೇವರು
ಅವರೆ ಇವರು ದೈವವು ನಡೆದಾಡುವ ದೇವರು

ಮಾನವೀಯ ಮೌಲ್ಯಗಳ ಮಕ್ಕಳಿಗೆ ಬಿತ್ತಿದರು
ಲಕ್ಷಲಕ್ಷ ಶಿಷ್ಯರಿಗೆ ಗುರು ಭೋದನೆ ಮಾಡರು
ಅನ್ನದಾಸೋಹದಿ ನೊಂದಜನರ ಸಲಹಿದರು
ಊರು ಊರು ತಿರಿಗಿ ದವಸಧಾನ್ಯ ತಂದರು

ಗುರು ಮಠದ ಮಕ್ಕಳಿಗೆ ಹೊತ್ತು ಸಾಕಿ ಬೆಳೆಸಿದರು
ಜ್ಞಾನ ದೇವರು ನಮ್ಮ ಮನುಜ ದೇವರು
ಶಿವನ ವರ ಪುತ್ರರು ಶಿವಕುಮಾರಸ್ವಾಮಿಗಳ ಸಿದ್ದಗಂಗಾ ಸ್ವಾಮಿಗಳು

ಕರುನಾಡಿನ ನಿಜದೇವರು 110 ವರುಷ
ತಪವ ಮಾಡಿದ ಕರುನಾಡ ದೇವರು
ಸತ್ಯ ಧರ್ಮ ತುಂಬಿಹ ಹಿಂದೂಗಳ ಜೀವವು
ಶಿವನ ಭಕ್ತರು ನಮ್ಮ ಸಿದ್ದಲಿಂಗ ಹೆಸರುಳ್ಳ ಶಿವಕುಮಾರಸ್ವಾಮಿಗಳು

- gtr

31 Mar 2017, 08:43 pm

ರಸಿಕ

ಈ ಋತುರಾಜ ಎಂತಹ ರಸಿಕ
ಗಿಡ ಗಿಡನು ಮನ ಮನನು
ಮರುಳ ಮಾಡಿ ಚುಂಬಿಸಿ
ಹೂದುಂಬಿಸಿ ಹುರಿದುಂಬಿಸಿ
ಬಣ್ಣ ಬಣ್ಣದ ಹೂ,ಅರಳಿಸಿ
ಕಲ್ಪನಾ ಲಹರಿಯಲ್ಲಿ
ವಿಹರಿಸುವಂತೆ ಮಾಡಿ
ಕವಿಯನು ಕಾವ್ಯದಮಲಿಗೆ
ಕಳಿಸಿದ , ಎಂತ ರಸಿಕ ,
ಕಸ್ತೂರಿ ಡಿ ಪತ್ತಾರ

- kasturi pattar

31 Mar 2017, 05:47 pm

ಬಿಸಿಯಾಗಿದೆ ಉಸಿರು

ಬಿಸಿಯಾಗಿದೆ ಉಸಿರು
ನಿನ್ನ ಕುಡಿಗಣ್ಣ ಶಾಖಕಿಂದು
ಬಸಿರಾಗಿದೆ ಹೃದಯ
ಪ್ರೀತಿ ಶಿಶುವಿಗೆ ಜನ್ಮ ನೀಡಲೆಂದು
ಮನಸಾಗಿದೆ ಸಿಹಿ ಮೊಸರು
ನೀ ಕಡೆಗೋಲಿಟ್ಟು ಕಡಿದು
ಕನಸಾಗಿದೆ ಕೆಸರು
ನಿನ್ನ ನಗುವಿನ ಕಮಲ ಚಿಗುರೊಡೆದು
ಹಸಿರಾಗಿದೆ ಪ್ರಣಯ
ನಿನ್ನ ತುಟಿಯಿಂದ ಸುರಿದ ಮುತ್ತಿನ ಮಳೆ ಕಂಡು

- ಅಕವಿ

31 Mar 2017, 02:37 pm

ಸಾಗುತಿರು ಮುಂದೆ...

ಯಾರೋ ಏನೋ ಹೇಳುವರೆಂದು
ಅಂಜದಿರು ನೀನೆಂದು...!!

ಸತ್ಯದ ಹಾದಿಯಲ್ಲಿ ನೀನಿರುವಾಗ ಯಾರು
ಏನು ಮಾಡರು ನಿನ್ನ...!!

ಕಣ್ಣ ಮುಂದಿರಲಿ ನಿನ್ನ ಗುರಿ ಆ ದೇವರೆ
ಬರುವನು ನಿನ್ನ ಗುರುವಾಗಿ...!!

ಮುನ್ನಡೆಯಲು ನಿನ್ನಲಿ ಬಲವಿರುವಾಗ
ಹಿಂದಿರುಗಿ ನೋಡದಿರು...!!

ನಮ್ಮ ಶ್ರಮದ ಫಲವಾಗಿ ದೊರೆಯುವುದು ಮುಕುತಿ...!!

ಬೇರೆನು ಬೇಕು ಸಾಕಲ್ಲವೇ ಈ ಜನುಮಕೆ...??

- chinmayi

31 Mar 2017, 11:31 am

ವಿರಹಿ ಮನ

ಕಾಗದದ ಚೂರಿನಂತೆ ಅಲೆದಾಡಿದೆ ಮನ
ಅತ್ತಲಿಂದತ್ತ,
ಏನು ಮಾಡದ ವಿರಹಿಯಾಗಿದೆ,
ನಲುಗಾಡುತಿದೆ ನೆನಪುಗಳ ಸುತ್ತ.....

- ಅರಿಂಜಯ ರು ಕಟ್ಟಿಮನಿ

31 Mar 2017, 08:46 am

ಮುಖವಾಡ

ನಗುವೊಂದು ಮುಖವಾಡ ಅಳುವೊಂದು ಮುಖವಾಡ,
ಬದುಕಿತ್ತಿರುವೆವು ನೀಚ ಮನದ ಸಂಗಡ.......
ಇಲ್ಲಿ ಎಲ್ಲರೂ ಸರಿ ತಮ್ಮ ದೃಷ್ಟಿಯಲ್ಲಿ ,
ನಟಿಸಬಲ್ಲರು ಅಂತರಾತ್ಮವ ದೂರತಳ್ಳಿ.....

ಯಾರ ಮೇಲೂ ಇಲ್ಲ ನಂಬಿಕೆ,
ಹೆಯ್ಯ ಮಾಡಲು ಇಲ್ಲದ ನಾಚಿಕೆ....
ಬದುಕುವರು ಸತ್ತ ಹೆಣೆಗಳಂತೆ ,
ಜ್ಯೋತಿ ಆರಿದ ಹಣತೆಯಂತೆ....

ಕೇಳಿದರೆ ಹೇಳುವರು ನೂರೆಂಟು ಮಾತು,
ನೀತಿ ಹುದುಗಿ ಕೊಂಡಿದೆ ನೆಲದಲ್ಲಿ ಹೂತು.....
ಸಂಬಂಧ ಆಗಿವೆ ಒಳಿತು ಕೆಡುಕಿನ ಲೆಕ್ಕಚಾರ,,
ಇದೋ ನೋಡಿ ಮಾನವ ಕುಲದ ಸ್ವ ಅತ್ಯಾಚಾರ......

- ಅರಿಂಜಯ ರು ಕಟ್ಟಿಮನಿ

31 Mar 2017, 08:36 am

ಕಣೀರು

ಪ್ರತಿ ಆಸೆಗೂ ವರ ಸಿಗೋಲ್ಲ ಪ್ರತಿ ಮಾತು ನಾಲಿಗೆ ಹೇಳೊಲ್ಲ.

ಈ ಜಗತಿನಲ್ಲಿ ಬದುಕಬೇಕಾದರೆ ಮುಖದಲ್ಲಿ ನಗು ಇರಬೇಕು
ಯಾಕೆ ಅಂದರೆ?

ಕಣ್ಣೀರಿಗೆ ಕಣ್ಣಲ್ಲೇ ಜಾಗ ಸಿಗೋಲ್ಲ...

- adilsha

31 Mar 2017, 07:26 am

ಬೆಳಕು

ನಾನು ಕರುಡ
ನೀನು ಕುರುಡಿ
ಬದುಕು ಬೆಳಕ
ಕಂಡಿತು

- ram purshi

31 Mar 2017, 02:03 am

ಅರಸನಾಗಬೇಕೆ...?

ಹರಸುವ ಹಿರಿಯರು........
ಹಾರೈಸುವ ಗೆಳೆಯರು...........
ಪ್ರೀತಿಸುವ ಆತ್ಮೀಯರು ಇದ್ದರೆ ಸಾಕು........
ಅರಸನಾಗೊ ಅಗತ್ಯನೆ ಇಲ್ಲ.....
ಅನು...

- Anu...

30 Mar 2017, 10:19 pm