Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕೂಸು ಕಂದಮ್ಮ
ಆಡಿ ನಗುತಾದ
ನಲಿದಾಡಿ ನಗುತಾದ
ಕಣಿದಾಡಿ ನಗುತಾದ!!
ಕಂದಮ್ಮ.... ಕೂಸು ಕಂದಮ್ಮ
ಜೋಲಿ ಜೋ.... ಸುವ್ವಾಲಿ ಕಂದಮ್ಮ,!!
ಬೆಳ್ಳೀಯ ತೇರಿನಲ್ಲಿ
ಮೂಡಿ ಚಂದ ಮಾಮ
ನಗುತಾನ ನಿನ್ನ ನಗು ಕಂಡು
ಅಳುತಾನ ನಿನ್ನ ಅಳು ಕಂಡು!!
ಆ ಬಾನ ಮುಟ್ಟಿತೀಗ
ಈ ತಾಯ ಜೋಲಿ ರಾಗ
ಕಂದಮ್ಮ.... ಕೂಸು ಕಂದಮ್ಮ!!
ಕನಸೀನ ಅಂಚಿನಲ್ಲಿ
ನಾ ಹಾಡುವಾಗ ಲಾಲಿ
ನಿದಿರೆಯ ಲೋಕದಲ್ಲಿ
ನಿನಗಾಗಿ ಒಂದು ಜೋಲಿ
ಹಿತವಾಗಿ ನಿನ್ನ ಸುಖಕಾಗಿ!!
ಕಂದಮ್ಮ ....ಕೂಸು ಕಂದಮ್ಮ
ಜೋಲಿ ಜೋ.... ಸುವ್ವಾಲಿ ಕಂದಮ್ಮ!!
- ಪಿ.ಜಿ.ಜ್ಯೋತಿ
17 Feb 2017, 09:51 am
ಬದುಕಿನ ಕಡಲಲಿ
ಪುಟ್ಟ ಮನಸಿನ ದೋಣಿ!!
ದೋಣಿಯ ಮೇಲೇರಿ
ಕುಳಿತಿರುವಳು ರಾಣಿ!!
ಸಣ್ಣ ಸಣ್ಣ ವಿಷಯಕ್ಕೂ
ಹುಸಿ ಮುನಿಸು!!
ಅಕ್ಕರೆಯ ಪ್ರೀತಿಗೆ ಅದು
ಮಗು ಮನಸು!!
ನಕ್ಕರೆ ಉದುರುವ
ಮುತ್ತುಗಳ ಸೊಗಸು!!
ಕಪ್ಪೆ ಚಿಪ್ಪಿನಲ್ಲಿ
ಅಡಗಿಸಿ ಇರಿಸು!!
ಅಲೆಗಳ ಸೆಳೆತಕೆ
ಅಲುಗಾಡುವ ದೋಣಿ!!
ಹೆದರದೇ ಕುಳಿತಿರು
ನನ್ನ ಮನಸಿನ ರಾಣಿ!!
ಈ ಬದುಕ ಕಡಲಿನ ತುಂಬ
ಕಾಣುತಲಿ ನಿನ್ನ ಬಿಂಬ!!
ಹಾಲು ನೊರೆಯ ಸುರಿದ
ಚಂದ್ರ ಈ ಅಲೆಗಳ ತುಂಬ!!
ಸಣ್ಣ ಸಣ್ಣ ಆಸೆಗಳ ತುಣುಕು
ಬಾನೇರಿ ನೋಡುತಿವೆ ಇಣುಕಿ!!
ಕಡಲಲ್ಲಿ ಹೊಳೆಯುತ್ತಲಿ
ಆ ನಕ್ಷತ್ರಗಳ ಬೆಳಕು!!
- ಪಿ.ಜಿ.ಜ್ಯೋತಿ
17 Feb 2017, 08:08 am
ಕಾಣುವ ಕಣ್ಣುಗಳಿಗೆ ಕತ್ತಲು
ಒಂದೇ ಬಣ್ಣ...
ಕಾಣದ ಮನದೊಳಗೆ ಜಗದ
ನೂರಾರು ಬಣ್ಣ....
- ವಿಧಾತ್ರಿ ಹರಿತಸ್ಯ
17 Feb 2017, 08:06 am
ನಾನೆ ಸೃಷ್ಟಿಸಿದ ಸಾಲುಗಳು
ನನ್ನೆ ಕೇಳುತ್ತಿವೆ
ಕಾರಣವ....
ಅವುಗಳೂ ಸಾರಿ ಸಾರಿ
ಹೇಳುತ್ತಿವೆ ನೀನಿರದ
ಬೇಸರವ.....
ಪ್ರತಿಯೊಂದು ಸಾಲುಗಳು
ಪ್ರಶ್ನೆಯೇ,ನಿರೀಕ್ಷಿಸಿದೆ
ಉತ್ತರವ....
ನಾ ಹೇಗೆ ಹೇಳಲಿ ಅವುಗಳಿಗೆ
ನೀ ಬರಲಾರೆಯೆಂದು
ಸಮಾಧಾನವ.....
- ವಿಧಾತ್ರಿ ಹರಿತಸ್ಯ
17 Feb 2017, 08:04 am
ಮೋಡ ಮಳೆಯಾಗಿ ಸುರಿದು
ನೀರು ಅಲೆಯಾಗಿ ಹರಿದು|
ಕೆರೆ-ಕಟ್ಟೆಗಳ ಸರಿದು
ನದಿಯನ್ನು ಸೇರುವುದೇ ಸಂಗಮ||೧||
ಮಳೆಯಾಗಿ ಬಂದ ನೀರು ಅಲೆಯಾಗಿ
ಅಲೆಯಾಗಿ ಬಂದ ನೀರು ಕಳೆಯಾಗಿ|
ಕಳೆ ಹಚ್ಚ-ಹಸಿರ ಬೆಳೆಯಾಗಿ
ಫಸಲು ನೀಡುವುದೇ ಸಂಗಮ||೨||
ಸೂರ್ಯ ಹಗಲು ಹುಟ್ಟಿದರೂ
ಚಂದಿರ ರಾತ್ರಿ ಹುಟ್ಟಿದರೂ|
ಅಮಾವಾಸ್ಯೆ ಚಂದಿರನ ಮರೆಮಾಡಿದರೂ
ಜಗಕೆ ಬೆಳಕು ಇರ್ವರ ಸಂಗಮ||೩||
ಸಮುದ್ರ ವಿಶಾಲವಾಗಿದ್ದರೂ
ದ್ವೀಪ ಚಿಕ್ಕದಾಗಿದ್ದರೂ|
ಕರಾವಳಿ ತೀರ ತಂಪಾಗಿದ್ದರೂ
ಉಪ್ಪು ತನ್ನಲ್ಲಿ ವಿಲೀನವಾಗಿರುವುದೇ ಸಂಗಮ||೪||
ಗಾಳಿಯು ಹಗುರವಾಗಿದ್ದರೂ
ಮಳೆಯನ್ನು ಭುವಿಗೆ ತಂದು|
ಮರ-ಗಿಡ ಹಸಿರಾಗಿಸಿ
ಶುದ್ಧಗಾಳಿಯನ್ನು ನೀಡುವುದೇ ಸಂಗಮ||೫||
ದೇಹಗಳು ಎರಡಾದರೂ
ಮನಸ್ಸು ಒಂದೆಂಬಂತೆ|
ಜೊತೆಯಾಗಿ ಬಾಳಲು ಆಗದಿದ್ದರೂ
ಸತ್ತರೂ ಕಥೆಯಾಗಿ ಉಳಿಯುವುದೇ ಸಂಗಮ||೬||
ದೇಶಗಳು ಎರಡಾದರೂ
ಪ್ರಪಂಚ ಒಂದೆಂಬಂತೆ|
ಏಕತೆಯ ಮನೋಭಾವದಿಂದ
ಎಲ್ಲರೂ ಒಟ್ಟಾಗಿ ಬಾಳುವುದೇ ಸಂಗಮ||೭||
ಕಣ್ಣುಗಳು ಎರಡಾದರೂ
ಕನಸ್ಸು ಒಂದೆಂಬಂತೆ|
ಗುರಿಯೆಡೆಗೆ ಸಾಗಲು
ಮನಸ್ಸು ಮಾಡುವುದೇ ಸಂಗಮ||೮||
ಬೇಡದೆ ಪಡೆದ ವರ ಜನನ
ಬೇಡಿದರೂ ತಪ್ಪದು ಮರಣ|
ಎಷ್ಟು ತಿಳಿದರೂ ತಿಳಿಯದು ಜೀವನ
ಆದರೂ ಜೀವನವು ಸುಖ-ದುಃಖಗಳ ಸಂಗಮ||೯||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
16 Feb 2017, 08:48 pm
ಗುಡಿಯ ಮೇಲೆ ಗೋಪುರ ಕಟ್ಟಿ,
ಒಳಗೆ ದೇವರನಿಟ್ಟು ಮತ್ತೇನು ಹುಡುಕತ್ತಲಿರುವೆ...
ತೆರೆದು ನೀ ಒಳಗಣ್ಣ ನೋಡುವ ಮನಮಾಡಿದೊಡೆ, ತಾಯಿಗಿಂತ ಮಿಗಿಲಾದ ದೇವರ ಕಾಣಲು ಸಾಧ್ಯವೇ...
ಎಲ್ಲುಂಟು ಎಲ್ಲಿಲ್ಲ ಎಂದೇಕೆ ಹುಡುಕುವೆ
ಹಡೆದವ್ವನಿಲ್ಲವೇ ಕಣ್ಣೆದುರೇ....
ಸಕಲವು ಅವಳಲ್ಲೆ ನೆಲೆಯಾಗಿ ಇರುವಾಗ
ಮತ್ತೂ ತಡಕಾಡುವುದೇಕೆ...
ಅರಿವಿನ ಗುರುವಾಗಿ ಬದುಕಿಗೆ ನೆರವಾಗಿ ದಾರಿಯ ತೋರುವ ತಾಯಿಯ ಮರೆಯುವುದು ಸರಿಯೇ...
- ನಮಿತ ಗಟ್ಟಿ
16 Feb 2017, 08:14 pm
ಆಯಿತು ಜೀವಿಯ ಉಗಮ
ನಿನ್ನ ಕಡೆಗೆ ಆಗಮನ|
ಆಗುವುದೆಂದೋ ಅದು ನಿರ್ಗಮನ
ಅದರೆಡೆಗೆ ಇರಲಿ ನಿನ್ನಯ ಗಮನ||೧||
ಹುಟ್ಟಿದ ಪ್ರತಿ ಜೀವಿಯ ಉರುಗೋಲು
ನಿನ್ನಿಂದ ತಾನೇ ಸಾಗುವುದು ಈ ಬಾಳು|
ಓ ಬಾಳೇ ನೀ ಕೇಳು
ನಿನ್ನನ್ನೇ ನೀ ಆಳು||೨||
ಅರ್ಥ ಇಲ್ಲದ ಪದವೇ ಜೀವನ
ತಿಳಿದರೆ ಆಗುವುದು ಜನ್ಮ ಪಾವನ|
ನೋವು-ನಲಿವುಗಳ ಸಾಗರ
ಪ್ರೀತಿ-ಪ್ರೇಮದ ಆಗರ||೩||
ಸುಖ-ಸಂತೋಷದ ಅನುರಾಗ
ಇದಕ್ಕಾಗಿ ಮಾಡಲೇ ಬೇಕು ತ್ಯಾಗ|
ಕಳೆದು ಹೋಗುವುದು ಇದು ಬಹುಬೇಗ
ಕಡೆತನಕ ಉಳಿಯದು ಈ ತ್ಯಾಗ||೪||
ಸಾಹಸಕ್ಕೆ ಇಲ್ಲಿ ಜಯವುಂಟು
ಆವೇಶಕ್ಕೆ ಶತೃತ್ವ ನಂಟು|
ಪ್ರೀತಿಗೆ ಇಲ್ಲಿ ಬೆಲೆಯುಂಟು
ನೀತಿಗೆ ಇಲ್ಲಿ ಕಾಲವುಂಟು||೫||
ಎಲ್ಲರ ಜಾತೆಗೂಡುವ ಅನುಬಂಧ
ಇದು ಪ್ರತಿ ಜೀವಿಯ ಬಾಳಿನ ಸಂಬಂಧ|
ಅರಿತರೆ ನಾವು ಈ ಬಂಧ
ನಮ್ಮ ಬಾಳು ಆಗುವುದು ಮಕರಂಧ||೬||
ವ್ಯಕ್ತಿ-ವ್ಯಕ್ತಿಗಳ ಕಲಹಗಳು
ಜನತೆಯ ಯೋಚನಾ ಲಹರಿಗಳು|
ಇರುವೆವು ಹಲವು ಗುರಿಗಳು
ಸಾಧಿಸಲು ಹಲವು ದಾರಿಗಳು||೭||
ಜೀವನವೆಂಬ ಸಾಗರ ಆಗದು ಈಜಲು
ಈಜಲು ಈ ಬಾಳು ಬರೀ ಗೋಜಲು|
ಈಜಲೇ ಬೇಕು ಮುಂದಕ್ಕೆ ಸಾಗಲು
ಸಾಗಲೇ ಬೇಕು ದಡ ಸೇರಲು||೮||
ಉಳಿಯದು ಯಾವುದು ಕೊನೆತನಕ
ಅರಿಯದು ಇದು ನಮ್ಮ ಮನಕ|
ಆಸೆಯೆಂಬುದು ತೀರದ ತವಕ
ಆಶಯವೇ ಬೇಕು ನಮಕ||೯||
ಜೀವನ ಒಂದು ಸಾಗರ
ಬಾಳೇ ಕಣ್ಣೀರಿನ ಆಗರ|
ತುಂಬಿಸಿಕೊಳ್ಳಲು ನಮ್ಮ ಉದರ
ತೋರಲೇ ಬೇಕು ಎಲ್ಲರಿಗೂ ಆದರ||೧೦||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
16 Feb 2017, 08:03 pm
ಕುಲದೊಳಗೆ ಕಲೆಯೊಂದಿಹುದು
ಆ ಕಲೆಯಿಂದ ಕುಲವಾಯಿತೇನೊ...
ನನ್ನ ಎದೆಯೊಳಗೆ ಮನೆಯೊಂದಿಹುದು
ಆ ಮನೆಯೊಳಗೆ ಮಗುವಂದಿದೆಯೇನೊ..
ಆ ಕಂದ ಮನವಾಗಿ ಈ ತಾರೆಯಾಕಂಡು
ಆ ಚುಕ್ಕಿ ಬೇಕೆಂದು ಹೃದಯಕೆ
ಹಠ ಮಾಡಿದೆ...
ಓ ವಲವೆ.... ಈ ಹೃದಯ ಹೇಳದು
ಯಾವೊಂದು ಮಾತನು
ಈ ಕಣ್ಣಲಿ ಕಾಣು ಅದರ
ಕೊರಗನು.....
... ಅಸಿತ...
- ಪಿ ಅನಿ...
16 Feb 2017, 07:08 pm
ಅವಳು ಎಂದರೆ ನನ್ನ ಪಾಲಿಗೆ ವರ
ಅವಳಿಗಿಲ್ಲ ನನ್ನ ಮೇಲೆ ಪ್ರೀತಿಯಲ್ಲಿ ಬರ
ಫೈಝಾ
- ನನ್ನ ಹೃದಯ
16 Feb 2017, 05:42 pm
ಅಕಾಲಿಕ ಮಳೆಯೂ
ಧೋ ಎಂದ್ಯುಯಬಹುದು,
ಕ್ಲೇಷ ಹೊಂದಿರುವನ ಪಂಜರದಿಂ
ಗಿಳಿಗಳ ಕಿಚಿಪಿಚಿ ಮಾರ್ಧನಿಸಬಹುದು,
ಪಾರಂಗತನೂ
ಒಮ್ಮೊಮ್ಮೆ ಪೆಚ್ಚಾದಾನು,
ಪಳಿಯುಳಿಕೆಗಳಿಂ
ಅಸ್ತಿತ್ವಗಳ ಪರಿಶೋಧಿಸಬಹುದು,
ತಾರೆಯಮೇಲಾಸೀನನಾಗುವ ಬಯಕೆ
ಚಂದ್ರ ಮಂಡಲಕ್ಕೊಯ್ಯಬಹುದು,
ನಿನ್ನೊಪ್ಪಿಗೆಯ ಪಡೆಯಲೊಲ್ಲೆನಾದೆನೇ
ಏಕಾಂತ ಚಂದ್ರಿಕೆಗೆ ಮನಸೋತ
ನತದೃಷ್ಟ....!!!!!
-ಕನ್ನಡದ ಭಕ್ತ
- ಕನ್ನಡದ ಭಕ್ತ
16 Feb 2017, 04:54 pm