ಅಪರಂಜಿ ಬಣ್ಣದ ಚಲುವೆ.
ಎಷ್ಟು ಸುಂದರ...
ನಿನ್ನ ಕಣ್ಣ ಬೆಳಕಿಗೆ ಹೊಳಿತಾವೇ
ಎನೂ ಸುಂದರ
ಬಳ್ಳಿಯಲಿ ಮೊಗ್ಗುಗಳು ಹರಳಿದವು
ಇನ್ನೂ ಸುಂದರ....
ನಿನ್ನ ಕೆನ್ನೆಯಲಿ ಮೂಡಿದ
ಆ ಬಾನ ಚಂದಿರ...
ಹುಣ್ಣಿಮೆಯ ಬೆಳಕೇ ನೀನು
ಸೌಂದರ್ಯದ ರಾಣಿ ನೀನು
ಈ ಭೂರಮೆಯೇ.. ಸುಂದರ..
ಕನ್ನಡದ ಮಣ್ಣಿನ ಮಗಳೇ..
ಕನ್ನಡದ ಕಸ್ತೂರಿ ಸುರಿಮಳೆ
ಎಲ್ಲೆಲ್ಲೂ ಹೋಗುವ ನನ್ನ ಮನಸ
ನಿನ್ನ ಪಡಿಯುವ ಹೃದಯದ ಕನಸ
ಚಂದದ ಬಣ್ಣದ ಚಲುವೆ
ನೀನೇಷ್ಟು ಅಂದವೇ
ಮನದಲಿ ನೀ ತುಂಬಿರುವೆ
ನನ್ನೊಳಗೆ ಹೃದಯದಲಿ
ಕಾಡುತಳಿರುವೆ.....
ನೀನೆಂದು ಪ್ರೀತಿ ಹೃದಯದವೇ...
✍️ವೀರೇಶ್ ವಿ ಕುಂಬಾರ ಖೈರವಾಡಗಿ
ಕವಿ ಪರಿಚಯ
ಸ್ಥಳ :ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕು ಖೈರವಾಡಗಿ ಗ್ರಾಮ
ವಿದ್ಯಾಭ್ಯಾಸ : ಎಲ್ ವಿ ಡಿ ಕಾಲೇಜು ರಾಯಚೂರು
ಅನುಭವ : ಮುಕ್ತ ಮುಕ್ತ, ಮಿಂಚು 'ಶುಭಮಂಗಳ ಧಾರಾವಾಹಿಗಳ ಸಹ ಸಂಕಲನ.
ಹವ್ಯಾಸಗಳು : ಕವನಗಳು, ಸಾಹಿತ್ಯ, ಜಾನಪದ,
ಬರೆಯುವದು, ಓದುವುದು.
ಕವನ ಸಂಗ್ರಹಣೆ
"ಕನ್ನಡ ಕವನ ಇನ್ "ವೆಬ್ಸೈಟ್
ಇನ್ಸ್ಟಾಗ್ರಾಮ್ ನಲ್ಲಿ ನೀ ಇಷ್ಟಾವಾದೇ
ಫೇಸ್ಬುಕ್ ನಿನ್ನ ಫೋಟೋ ನೋಡಿದೇ
ವಾಟ್ಸಪ್ಪ್ ನಲ್ಲಿ ನಿನ್ನ ವಿಡಿಯೋ ನೋಡಿದೇ
ಟ್ವಿಟ್ಟರ್ ನಲ್ಲಿ ನೀ ಮೆಸೇಜ್ ಮಾಡಿದೆ
ಕಾಮೆಂಟ್ ಬಾಕ್ಸ್ ಕಾಮೆಂಟ್ ಮಾಡಿದೆ
ಇಷ್ಟೆಲ್ಲಾ ಆದಮೇಲೆ ಇನ್ನೇನಿದೆ...
ನಾ ನಿನ್ನ ಜೊತೆಯದೆ ಚಲುವೆ
ನೀ ನನ್ನ ಉಸಿರಾದೆ ಚಲುವೆ
ಬಾ ಬಾರೆ ಹೋ ಚಲುವೆ
ಎಂದೆಂದಿಗೂ ನಾ ನಿನ್ನ
ಮರೆಯಲಾರೆ ಓ ಚಿನ್ನ
ನಮ್ಮಿಬ್ಬರ ಒಂದೇ ಟೀನ್ಏಜ್
ನಾವು ಹೋಗೋಣ ಕಾಲೇಜು
ಕಳೆದರೂ ಬಾರದ ವಯಸ್ಸು
ನಮ್ಮಿಬ್ಬರ ಒಂದೇ ಕನಸು
ಜೊತೆಯಾಗಿ ಇರೋಣ
ಜೊತೆಗೆ ನೆಡೆಯೋಣ
ಬದಲಿಸಬೇಡ ನಿನ್ನ ಮನಸು
ಕುಡಿದಾಸೆ ನೀ ಈಡೇರಿಸು
ಪ್ರೀತಿಯಲಿ ಇರಲಿ ಸಿಹಿ ಮುತ್ತು
ಪ್ರೀತಿಯ ದೋಣಿಯಲಿ ಸಾಗೋಣ
ಪ್ರೀತಿ ಸಾಂಬ್ರಾಜ್ಯ ಕಟ್ಟಿ ಮೇರಿಯೋಣ
ಜೋಡಿ ಹಕ್ಕಿಯಂತೆ ಹಾರೋಣ
ಪ್ರೀತಿ ಗೂಡು ಸೇರಿ ಹೋಗೋಣ
ನೋವು..
ಅನುಭವಿಸುವುದಕ್ಕೋ?ಮರೆಯುವುದಕ್ಕೋ??
ಹೆದರಿಸುವುದಕ್ಕೋ?ಎದುರಿಸುವುದಕ್ಕೋ??
ಕಲಿಸುವುದಕ್ಕೋ? ಕೆರಳಿಸುವುದಕ್ಕೋ??
ನೋವುಂಡವನ ಮನಸ್ಥಿತಿ ಮತ್ತು ಪರಿಸ್ಥಿತಿಯಲ್ಲೇ
ಅಡಗಿದೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ.
ನೋವು ನೇರ,ಮನಸಿಗೆ ಗುರಿ ಇಟ್ಟ ಬಾಣ.
ಮನಸೊಳಗೆ ಮನೆ ಮಾಡಿ ಕುಳಿತುಕೊಳ್ಳುವ ಭ್ರೂಣ.
ಹೆರಿಗೆ ಯಾಗದೆ ಪ್ರತಿದಿನ ಹಿಂಡುವುದು ಪ್ರಾಣ.
ಕೊನೆಯಿಲ್ಲ ಇದಕೆ ಮುಗಿಯುವವರೆಗೆ ನಮ್ಮ ಜೀವನ ಯಾಣ.
ಲಾ ಲಾ.....ಹೊ ಹೊ....
ಚಲುವೆ ನೀ ಬಂದೆ
ಮಲ್ಲಿಗೆ ಪರಿಮಳ ಎಲ್ಲೆಲ್ಲೂ ಹರಡಿದೆ
ಸುಗಂಧ ಸುವಾಸನೆ ಎಲ್ಲೆಲ್ಲೂ ಬೀರಿದೆ
ಮಾಯದ ಲೋಕದೊಳಗೆ
ನೀ ಬಂದೆ ಹೃದಯದ ಅರಮನೆಗೆ
ನೀ ಬಂದೆ ಹೃದಯದ ಆರಮನೆಗೆ
ನಿನ್ನ ಮಾತು ಮುತ್ತು
ನಿನ್ನ ಮಾತು ಮುತ್ತು
ಮನಸು ನಿನ್ನ ಸಿಹಿ ಮುತ್ತು
ಮನಸು ನಿನ್ನ ಸಿಹಿ ...
ಮನದೊಳಗೆ ಮನೆ ಕಟ್ಟಿ
ಮನಸೆಳೆದ ಸುಂದರಿ, ವಯ್ಯಾರಿ
ಮನಮೋಹಕ ಮದನಾರಿ
ನೀನ್ನದೆ ಸೌಂದರ್ಯ, ಮುದ್ದು
ಮುದ್ದು ಸುಂದರಿ
ಮನಮೆಚ್ಚಿಸೋ ಸಿಂಗಾರಿ
ಮನದೊಳಗೆ ಮನೆ ಕಟ್ಟಿ
ಮನಸೆಳೆದ ಸುಂದರಿ, ವಯ್ಯಾರಿ
ಮನಮೋಹಕ ಮದನಾರಿ
ನೀನ್ನದೆ ಸೌಂದರ್ಯ,
ಮುದ್ದು ಮುದ್ದು ಸುಂದರಿ
ಮನಮೆಚ್ಚಿಸೋ ಸಿಂಗಾರಿ
ನಿನ್ನಂದವ ನೋಡಿದೆ ವಯ್ಯಾರಿ
ನಿನ್ನಂದವ ನೋಡಿದೆ ವಯ್ಯಾರಿ
ಧರೆಗಿಳಿದೆ ಹುಣ್ಣಿಮೆ.... ನೀ
ಮಳೆ ಹೂ.. ಮಳೆ... ಓ...ಹೂ
ಮೋಡಗಳೇ ಹೊತ್ತು ತನ್ನಿ... ಮಳೆಯನು..
ಮಳೆಯನು
ಒಮ್ಮೆ ಬಂದು ಹೋಗು
ಒಮ್ಮೆ ಬಂದು ಹೋಗು..ಮಳೆಯೇ..
ತುಂತುರು.. ತುಂತುರು.. ಹನಿಯೇ
ಮಳೆ... ಮುತ್ತಿನ ಹನಿ...
ಈ ಭೂಮಿಯಸಿರಿ ಹಸಿರಾಗಿರಲಿ..
ಈ ಭೂಮಿಯಸಿರಿ ಸ್ವರ್ಗವಾಗಲಿ.
॥ ಪಲ್ಲವಿ ॥
ಬರಡುಭೂಮಿ ಮಳೆ ಬಂದು ವನವಾಗಲಿ..
ಪಶು, ಪ್ರಾಣಿಗಳಿಗೆ ಹಸಿರಾಗಿರಲಿ...
ಹಸಿವು ನಿಗಲಿ ಚೈತನ್ಯತುಂಬಲಿ..
ಹಕ್ಕಿ ಹಾರಾಡಿ ಚಿಲಿಪಿಲಿ ಕಲರವ
ಎಲ್ಲಲ್ಲೂ ಕೇಳಲಿ...
ಗಿಡ, ಮರ, ಹೂ ಬಳ್ಳಿಅಬ್ಬಿ ಹಸಿರು
ಉಲ್ಲಾಸಾಗಲಿ....॥1॥
ಕೆರೆ, ಕಟ್ಟೆ, ಹಳ್ಳ ಕೊಳ್ಳ,ತುಂಬಲಿ,
ನದಿಯಾಗಿ, ಹರಿಯಲಿ...
ಮಳೆ ಬಂದು ರೈತರಿಗೆ ಮನ
ಹಸಿರಾಗಲಿ, ಅವರ, ಉಸಿರಾಗಲಿ..
ಈ ಭೂಮಿ ತಾಯಿ ಮಡಿಲು..
ಮಕ್ಕಳು, ಮನ ಸುಂದರ ಗೊಳಿಸು.
ಮನ ತುಂಬಾ ಉಲ್ಲಾಸ, ಸಂತಸ,
ತುಂದು.ನಕ್ಕು ನಲಿಸು...॥ 2॥
ಕನ್ನಡ ಪದವು ಕನ್ನಡ ನೆಲವು ಜಲವು
ಎಂದೆಂದಿಗೂ
. ನಮ್ಮಯ ಉಸಿರು
ನಮ್ಮಸುಂದರ ದೇವಾಲಯವು
ಬನಾನಿನಗಲಕ್ಕೂ
ಎತ್ತರಕ್ಕೂ ಕಾನನ ಮರವು ನಮ್ಮದೇ
ನಾಡಿನ ಸೌಂದರ್ಯ ಸಿಮೀಯೂ
ಕಡಲಿನ ತೀರವು ಕಂಪಿನ ತಾಣವು
ಕಡಲ ಒಡಲಲಿ ತೆಲಿದ ಬರುವ ತೆರೆವೂ
ದೂರದ ಪ್ರಯಾಣ ಚಂದದ ಆ ಕ್ಷಣ
. ನೆನಪಿನ ಮನ ಸುಂದರ ಜೀವನ
. ಎದೆಯಲ್ಲಿ ಚಿಮ್ಮಿದೆ
. ಹೃದಯದ ಹೊಮ್ಮಿದೆ
ನಮ್ಮ ಕನ್ನಡ ನಾಡಿನ ಹಿರಿಮೆ ಗರಿಮೆ
. ಜೋಗವು ಅಂದ
. ಜಲಪಾತವು ಚಂದ
. ಈ ನಾಡ ಗುಡಿಯಲಿ ಇಲ್ಲಿಯೇ
. ಸ್ವರ್ಗವೋ
ಈ ನಾಡ ನುಡಿಗಳ ನುಡಿಯುದೆ
. ಎಂದೆಂದಿಗೂ ಚಂದವೋ
. ಎಂದೆಂದಿಗೂ ಆನಂದವೋ
✍️ ವೀ.ವೀ.ಕುಂ