Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮನದ ನೋವು ಮರೆಯಲು ಮಸಣದ ದಾರಿ ಹುಡುಕುವುದು ಎಷ್ಟು ಸರಿ
ಬಿಟ್ಟುಹೋದ ಹುಡುಗಿಯ ಪ್ರೇಮವನ್ನು ಮರೆಯಲು ಬಾರಿನ ದಾರಿ ನೋಡುವುದು ಅದೆಷ್ಟು ಸರಿ
ಆದರೆ ಜೀವನದಲ್ಲಿ ಯಾವುದೇ ರೀತಿ ಮಳೆ ಗಾಳಿ ಎನ್ನದೆ ತನ್ನ ಆಹಾರ ಹುಡುಕುತ್ತಾ ಹೋಗುವ ಇರುವೆಯನ್ನು ನೋಡಿ ನೀನು ಅರಿ
ಅದುವೇ ಜೀವನದಲ್ಲಿ ಜೀವಿಸುವ ಜೀವನದ ಶೈಲಿಯ ಪರಿ
- hanumanaik lamani
20 Feb 2020, 09:49 pm
ಬಂದಿದೆ ಬಂದಿದೆ ಕಲಿಗಾಲ
ಬೀಸಿದೆ ತನ್ನಯ ಜಾಲ
ತುಂಬಿದೆ ನಾಡಲಿ ದ್ವೇಷದ ಜ್ವಾಲೆ
ಕೊಲೆ ದರೋಡೆ ದೊಂಬಿಗಳ ಸರಮಾಲೆ //
*ಕಿದ್ವಾಯಿ ರಾಜಶೇಖರ್.
- Raj Raj
20 Feb 2020, 09:40 pm
ಭಕ್ತಿಯಲಿ ನಿಷ್ಠೆಯಿಲ್ಲದೆ/ಮಾತಲ್ಲಿ ಗುಣವಿಲ್ಲದೆ
ನಡೆಯಲ್ಲಿ ನುಡಿಯಿಲ್ಲದ ಮನುಜ/
ದಾನವನಿದಂತೆ ನೋಡ ಶ್ರೀ ಷಡಕ್ಷರದೇವ //
ಒಳಗೆ ಕುಟಿಲ,ಹೊರಗೆ ವಿನಯತೋರಿ ನೀ ಕೆಡಬೇಡಯ್ಯ/
ತನು-ಮನ-ಧನವ ನಾಕೊಟ್ಟೆನೆಂದು ನುಡಿಯ ಬೇಡಯ್ಯ/
ಮಾಡುವಾತನಾವಲ್ಲ ನೀಡುವಾತ ನಮ್ಮ ಶ್ರೀ ಷಡಕ್ಷರದೇವ ಕಾಣಯ್ಯ//
*ಕಿದ್ವಾಯಿ ರಾಜಶೇಖರ್.
- Raj Raj
20 Feb 2020, 09:24 pm
ಆಕಾಶದಂತೆ ಜೀವನವು ಕೂಡ ವಿಸ್ತಾರವಾಗಿ ಇರಬೇಕು
ಪಕ್ಷಿಗಳಂತೆ ಸ್ವಚ್ಚಂದವಾಗಿ ನಾವು ಹಾರಾಡಬೇಕು
ಮೋಡಗಳು ಒಂದಾಗಿ ಮಳೆ ಬರುವಂತೆ
ಜೀವನದಲ್ಲಿ ಸುಖ ಸಂತೋಷಗಳು ಬರಬೇಕು
ಮಿಂಚಿನಂತೆ ತೊಂದರೆಗಳು ತಟ್ಟನೆ
ಮಾಯವಾಗಬೇಕು
ಸಿಡಿಲಿನ ಶಬ್ದವು ಸುಮಧುರ ಧ್ವನಿಯಾಗಿ ಮೊಳಗಬೇಕು
ಸುತ್ತಲೂ ನೋಡಿದರೆ ಶಾಂತವಾಗಿ ಕೂಡಿದ
ವಾತಾವರಣ ಇರಬೇಕು
ಬಿಳಿ ಬಣ್ಣದಂತೆ ಯಾವುದೇ ಕೊಳಕು
ಇಲ್ಲದೆ ಮನಸ್ಸು ಶುದ್ಧವಾಗಿ ಕಾಣಬೇಕು
ಮನ ಬೇಸರದಲ್ಲಿ ಇದ್ದಾಗ ಗಾಳಿ ಬೀಸಿ ಹೋದಂತೆ ದುಃಖಗಳು ಕೂಡ
ಅದರಲ್ಲಿ ಕಾಣೆ ಆಗಬೇಕು.
- azna
20 Feb 2020, 07:47 pm
ಕನಸು ಕಾಣುವ ಕಣ್ಣಿಗೆ
ನನಸಂತೆ ಬಂದೇಯಾ
ನಸುನಗುವ ಬೀರುತಾ ನಲಿಯುತಾ ನಿಂದೇಯಾ?
ಕಣ್ಣಾ ಕಂಬನಿ ಜಾರದಂತೆ ರೆಪ್ಪೆ ಕಾವಲು
ನಿನ್ನ ನೆನಪು ಮಾಸದಂತೆ ಈ ನನ್ನ ಮನವು ಕಾವಲು
ಓ ನನ್ನ ಗೆಳೆಯ
ಇನ್ನಾದರೂ ಅರ್ಥೈಸಿಕೋ ನನ್ನ ಪ್ರೀತಿಯ
- Veena
20 Feb 2020, 06:18 pm
ಮರೆತ ನೆನಪುಗಳ
ಜೊತೆ ಜೊತೆಗೆ ಈ ಕ್ಷಣ
ಕ್ಷಣಗಳ ನೆನೆದು ಹೇಳುವ
ಮಾತುಗಳಾದವು ಕವನ
ಪ್ರೀತಿಗೆ ಎದುರಾಯಿತು
ಅನುಮಾನದ ಆಗಮನ
ದೂರವಾದವು ಇಬ್ಬರ ಮನ
ಮನಸ್ಸಿನ ಮಾತು ಕೇಳದೆ
ನುಡಿಯುವ ನಾಲಗೆಯ ನಡೆಗೆ
ಕೊಟ್ಟರು ಅರಿಯದೆ
ಮಾಡದ ತಪ್ಪಿಗೆ ಶಿಕ್ಷೆ
ಸಿಕ್ಕೀತೆ ನನಗೆ ಅನುಮಾನದ
ತಪ್ಪಿಗೆ ನೋವಿನ ಭಿಕ್ಷೆ....!?
ಗುಡುಗು ಸಿಡಿಲುಗಳಂತೆ ತುಂಬಿವೆ
ಸಂಶಯ ನಿನ್ನ ಮನದಾಳದಲೆಲ್ಲ,
ಮಿಂಚಂತೆ ಮರೆಯಾಗಿದೆ
ಪ್ರೀತಿ ನಿನ್ನ ಕಣ್ಣೋಟದಿಂದ….
ದೂರಕ್ಕೆ ಸರಿಸು ಸಂಶಯದ ಪರದೆಯ
ಮತ್ತೆ ದೊರಕದು ನಿನಗೆ ಕಳೆದ ಸಮಯ…
- Pb
20 Feb 2020, 12:49 pm
ಪದ್ಯ ಹೇಳುವ ಮರ
ಬೆಳೆವ ಸಸಿಗಳಿಗೆ ಆಧಾರ
ನಿಮ್ಮ ಒಂದೊಂದು ಪದ್ಯವು
ಬಹು ಅರ್ಥವ ಸೂಚಿಸಿ
ಬೆಳೆಸುವುದು ನಮ್ಮಲ್ಲಿ ಒಲವು
ಸಾಗಲಿದು ಸದಾ ಹೀಗೆ ನಮ್ಮೆಲ್ಲರರಸಿ
ಇರಲು ನಿಮ್ಮ ರಾಮಧಾನ್ಯ ಚರಿತೆ
ಜ್ಞಾನಕ್ಕೇನಿದೆ ಕೊರತೆ?
ಶಾರದ
- ಶಕುಂತಲಾ
20 Feb 2020, 09:41 am
ನಿನ್ನ ಹಂತೇಕ ಅಂತಾದೇನೈತಿ
ಈ ಜೀವ ನೀ ಕಂಡಾಗೋಮ್ಮೆ
ನಿನ್ನ ಸಲುವಾಗಿ ಹಾತೋರಿತೈತಿ
ಮನಸಿನ್ಯಾಗ ನಿನ್ನ ಧ್ಯಾನಿಸಿ ಧ್ಯಾನಿಸಿ
ಜೀವ ಶವ ಆಗುದಂತೂ ಖಾತ್ರಿ ಆಗೇತಿ.
ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ
ತಾಲೂಕ...ಜಿಲ್ಲೆ...ಗದಗ
- Marulasiddappa Doddamani
20 Feb 2020, 08:22 am
ಪ್ರೀತಿ ಮಾಡೋರಿಗೆ
ಸಾಕ್ಷಿನ ಇರಂಗಿಲ್ಲ
ಮನಸಾಕ್ಷಿಯೊಂದಿದ್ದರ
ಬಾಳು ಸುಂದರವಾಗಿರತಲ್ಲ.
ಮರುಳಸಿದ್ದಪ್ಪ ದೊಡ್ನಮನಿ
ಹುಲಕೋಟಿ
- Marulasiddappa Doddamani
20 Feb 2020, 08:20 am
ಶಾಯರಿ
ಪ್ರೀತೆಂದ್ರ ಒಂದು ನಮೂನಿ
ಕೊರೆಯು ಹುಳಾ ಇದ್ದಂಗ
ಒಬ್ಬೊಬ್ಬರಿಗೆ ಒಂದೊಂದು ರೀತಿ
ಅದು ಕೊರಿದ ಬಿಡಂಗಿಲ್ಲ .
ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ
- Marulasiddappa Doddamani
20 Feb 2020, 08:19 am