Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವಿಯು ಬರೆದ ಪ್ರೇಮಗೀತೆ

ಕವಿಯು ಬರೆದ ಪ್ರೇಮಗೀತೆಯ
ಸಾಲು ಕಠಿಣವೇ ಆಗಿದೆ!!
ಎದೆಯ ಕಡಲ ದಡದ ಮೇಲೆ
ಒಂಟಿ ಪಯಣ ಸಾಗಿದೆ!!

ಹರಿವ ನದಿಯ ಮೂಲ ಹುಡುಕಿ
ಧುಮುಕುವ ಆಸೆ ಮೂಡಿದೆ!!
ದಟ್ಟ ಕಾನನದ ನಟ್ಟ ನಡುವೆ
ಕುಳಿತು ಅಳಬೇಕು ಎಂದೆನಿಸಿದೆ!!

ನಲಿವ ಒಲಿಮೆಯ ಸಿರಿಯ ಕಂಡು
ಮನದಿ ಮರುಕವು ಹುಟ್ಟಿದೆ!!
ಯಾರಿಗೆ ಯಾರೂ ಇಲ್ಲ ಎನ್ನುವ
ಸತ್ಯವು ಸಂಭ್ರಮ ಪಡುತಿದೆ!!

- ಪಿ.ಜಿ.ಜ್ಯೋತಿ

16 Feb 2020, 12:15 pm

ಜೊತೆಯಾಗಿ ನೀ ಇರಲು

ಕಲ್ಲಾದರೇನು ಶಿವ
ಮಣ್ಣಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರಲು!!

ಹೂವಾದರೇನು ಶಿವ
ಮುಳ್ಳಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರವು!!

ನೆರಳಾದರೇನು ಶಿವ
ಬಿಸಿಲಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರಲು!!

ಹಗಲಾದರೇನು ಶಿವ
ಇರುಳಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರಲು!!

ಕಡಲಾದರೇನು ಶಿವ
ಮುಗಿಲಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರಲು!!

ಹುಟ್ಟಾದರೇನು ಶಿವ
ಸಾವಾದರೇನು ಶಿವ
ನಾ ನಡೆಯೋ ಹಾದಿಯಲ್ಲಿ
ಜೊತೆಯಾಗಿ ನೀ ಇರಲು!!

- ಪಿ.ಜಿ.ಜ್ಯೋತಿ

16 Feb 2020, 09:45 am

*ಕನಸು*

ನೀ ಸಮಯದ ಮುಳ್ಳಾಗು
ನಾ ಘಂಟೆಯ ಮುಳ್ಳಾಗುವೆ
ಕಾಲ ಕೂಡಿಬಂದಾಗ
ಖಂಡಿತ ಭೇಟಿಯಾಗೋಣ

- Palappa NG Pala

16 Feb 2020, 07:38 am

ಚೆಲುವೆ

ದೀಪದ ಬೆಳಕಿನ ಕಿರಣಗಳು
ನಿನ್ನ ಮೈ ಸೊಕಿದಾಗ
ಆ ಮೈ ಬಣ್ಣದ ಅಂದವನ್ನು
ಸೆಳೆಯುವ ಕಣ್ಣುಗಳು
ದೃಷ್ಟಿತಾಗಿಸಿ ಬಿಡುತ್ತವೆ

dj vishal ❤❤❤

- Vishal Hiremath

15 Feb 2020, 11:15 pm

ಮನ❣️

ಭಾವಗಳ ಬಾರವ್ವ ಹೊತ್ತು ನಡೆಯುವೆ ನಾ
ಕುದಿಯುವ ಆಸೆಯಲ್ಲಿ ನೊಂದು ಬೆಂದಿದೆ ಹೃದಯ.

ಕಿರಿದು ಕಿರಿದು ನಲಿವಿನೊಳಗೆ ಅಡಗಿದೆ ನನ್ನ ಬದುಕು ನಲಿವೆಲ್ಲ ಕನಸಾಗಿ ಕರಗಿ ಹರಿಯುವ ಕಡಲಲ್ಲಿ ಸಾಗಿದೆ ನನ್ನ ಹಡಗು.

ಸ್ನೇಹವೆಂಬ ನಿಧಿಯ ಹುಡುಕಿ ಸಾಗಿದೆ ದಿನವು ಪಯಣ ಗೆಳೆಯರಿಲ್ಲದೆ ಬರಿದಾಗಿದೆ ನನ್ನ ಈ ಹರಣ

ಯಾರು ಇಲ್ಲದ ಒಂಟಿ ಹೃದಯಕ್ಕೆ ಸ್ನೇಹವಾಯಿತು ಎರಡು ಸಾಲಿನ ಕವನ.
~ ಕಿರಣ್ ಕ್ರೀಸ್

- Kris

15 Feb 2020, 06:09 pm

ನೇನಪು

ನೆನಪೆಂಬ ಅಂತರಂಗ ಅವಳಿರುವ ಕನಸೆಡೆಗೆ ಅರಿವಿಲ್ಲದೆ ಸಾಗುತ್ತಿದೆ...
ಪ್ರಶ್ನಿಸಿದಾಗಲೆಲ್ಲಾ ಬರೀ ನಗುವಲ್ಲೇ ಉತ್ತರಿಸಿದರೆ
ನಿನ್ನ ನಗುವ ಒಗಟ ಹೇಗೆ ಬಿಡಿಸಲಿ ತಿಳಿಸು ಈಗಲಾದರು...
ನಿನ್ನ ಉಸಿರೊಡನೆ ಉಸಿರಾಗಿ ಬೆರೆತುಹೋದ ಈ ಜೀವನ
ನೀನಿರದ ಕಲ್ಪನೆಯು ನನಗಿಲ್ಲ ಗೆಳತಿ...

ಹುಚ್ಚು ಕಲ್ಪನೆಯದು ನಿನ್ನಲ್ಲೇ ಬೆರೆಯಲೆಂದು ಅಚ್ಚು ಒತ್ತಿದ ಹೃದಯ ಬೆಚ್ಚಿ ಹೆದರಿದೆ ಗೆಳತಿ...
ಕಚ್ಚಿದ ಕೆನ್ನೆಯ ಗುರುತು ಕೆರಳಿ ಅಣಕಿಸುತ್ತಿದೆ ಬಂದೊಮ್ಮೆ ಹೇಳಿ ಬಿಡು ಈ ಜಗಕ್ಕೆ ನಾನೆಂದು ನಿನ್ನವಳು ಎಂದು...!!

ವಿರೇಶಗೌಡ

- VeereshaVeeresha

15 Feb 2020, 03:05 pm

ನೀ ನನ್ನ ಕಣ್ಣಲ್ಲಿ

ನೀ ನನ್ನ ಕಣ್ಣಲ್ಲಿ
ಕಣ್ಣಟ್ಟು ನೋಡಿದರೆ
ಕಾಣುವುದು ನಿನ್ನ ಬಿಂಬ...
ನೀ ಕಣ್ಣೆದುರು ಕಾಣದೇ
ಮರೆಯಾಗಿ ನಿಂತಿರಲು
ಕಂಬನಿಯು ಕಣ್ಣ ತುಂಬ...

- ಪಿ.ಜಿ.ಜ್ಯೋತಿ

15 Feb 2020, 12:26 pm

" ಅರಿವು "

ಪ್ರೇಮರಾಗವ
ಮಿಡಿಸುವ ಮುನ್ನ
ನಿನ್ನ ಗುಣವ ಅರಿತರೆ
ಎನಿತು ಚೆನ್ನ !!

*ಕಿದ್ವಾಯಿ ರಾಜಶೇಖರ್.

- Raj Raj

14 Feb 2020, 08:38 pm

ಕವಿತೆಯು ನಾನು

ಕವಿತೆ ಬರೆಯುವ ಮನಸು ಅದೆಂತ ಸೊಗಸು ಕಾಗದದ ಮೇಲೆ ಗೀಚುವಾಗ.

ಭಾವಗಳ ನುಡಿಯಾಗಿಸಿ ಬರೆಯೋವಾಗ
ಜೊತೆಯದ ಆಸೆಗಳ ಕನಸು.

ಕನಸುಗಳ ಅಮಲಿನಲ್ಲಿ ಮುತ್ತಿನಂತ ಮಾತುಗಳ ವರಿಸೆ ಅದು ಮನಗಳ ಸೆಳೆದವು.

ಸಾಲುಗಳ ಗೀಚುತ.... ಗೀಚುತ....
ಗೆಳೆಯರಾಗಿ ಹೋದೆವು ಕವಿತೆಯು ನಾನು!

ಗೆಳೆತನದ ಆತುರದಲ್ಲಿದ ಮನಸಿಗೆ ಆಪ್ತನಾದ ನೀನು ನನಗೆ ಆಪ್ತಮಿತ್ರ ನಾಗಬೇಕೆಂಬ ಅಪೇಕ್ಷೆ ನನ್ನದು.

ಹೇಳಿಬಿಡುವೇ ನನ್ನ ಮನವ ಕವಿತೆಗಳ ಎರಡು ಸಾಲಿನಲ್ಲಿ ಕೇಳಲು ಬರುವುದೊಂದು ಮನವೇಂದು ಕಾಯದೆ.

ಕಷ್ಟಗಳನ್ನು ಹೇಳಿಬಿಡುವೇ !!
ಖುಷಿಗಳನ್ನು ಹೇಳಿಬಿಡುವೇ !!
ಕವಿತೆಯ ಎರಡು ಸಾಲಿನಲ್ಲಿ

ಕಣೀರ ಒರೆಸಿಕೊಳ್ಳುವೇ !!
ಖುಷಿಯನ್ನು ಹಂಚಿಕೊಳ್ಳುವೇ !!
ಈ ಕವಿತೆಯ ಎರಡು ಸಾಲಿನಲ್ಲಿ

ಭಾವಗಳ ಬೆರೆಸಿ
ಭಾವನೆಗಳ ವರ್ಣಿಸಿ
ಹಾಲುನೀರಾಗಿ ಬೆರೆತುಹೋಗುವೇ
ಈ ಕವಿತೆಯ ಎರಡು ಸಾಲಿನಲ್ಲಿ.

ಕವಿತೆಗಳ ಬರೆಯುವ ಕವಿಯು ನಾನ್ನಲಾ
ಆದರೆ ಭಾವನೆಗಳ ಗೀಚುವ ಒಂದು
ಹುಚ್ಚನಾದೇ ನಾ.

- Kris

14 Feb 2020, 08:59 am

ಗೆಳೆಯನೆಂಬ ಏಕಾಂತ !

ಕಾದು ಕಳೆದಿಹೇ ವರುಷಗಳ
ಒಂದು ಒಳ್ಳೆ ಗೆಳೆಯನ ಹುಡುಕಿ,
ಭಾಗ್ಯಾ ವಂಚಿತನಾದೆ ಸ್ನೇಹಿತರ ಸಂಗತಿಯಲ್ಲಿ,
ಸಿಕ್ಕರು ಸಿಹಿಯಾದ ಸ್ನೇಹಿತರು ದೂರವಾಗಿ ಹೋದರು ನನ್ನಿಂದ.

ಏನು ಹೇಳಲಿ ನಾ ವಿಧಿಯ ವಿರಹ ಒಂದು ವಿಷವಾಗಿ ವದಿಸಿ ಕಾಣದಂತೆ ಹುದುಗಿ ಹೋಹಿತು ಕಾಲವೆಂಬ ಗೋರಿಯಲ್ಲಿ ನನ್ನ ಗೆಳೆತನ.

ಕಾದು ಕಾಲಗಳು ಉರುಳಿದವು,
ಮರೆಯಗುತ್ತಿದೆ ನನ್ನ ಯವನವು,
ಮಾಯವಾದವು ನಗುವಿನ ಹೆಜ್ಜೆ ಗುರುತುಗಳು ಅನರ್ಥವಾಯಿತು ನನ್ನ ಮನದ ಭಾವಗಳು
ಬೇಡವಾಗಿ ಹೋಗಿದೆ ಈ ಬಾಳು
ಹರುಷ ತರುವ ಒಬ್ಬ ಗೆಳೆಯನಿಲ್ಲದೆ.


ನೀರಮೇಲಿನ ಬರಹದಂತಾಗಿದೇ ನನ್ನ ನಂಬಿಕೆಗಳು ಸೊರಗಿ ಸೋತು ಹೋಗಿವೇ ನನ್ನ ಬಣದ ಕನಸುಗಳು ಇಲ್ಲವಾಯಿತೊಂದು ಅವಕಾಶ ಪಶ್ಚತ್ತಾಪ ಪಡಲು ಮಾಡದ ಪಾಪಗಳಿಗೆ.

ಮೌನಗಳು ಹಿತವಾಗಿ ವೇದನೆಗಳು ವಿಷವಾಗಿ ಹೋದವು ನೋವುಗಳೆ ನೆನಪಾಗಿ ಉಳಿದವು
ನನ್ನ ಎದೆಯಲ್ಲಿ ಏಕಾಂತದ ಗುರುತುಗಳೇ
ನನ್ನ ದಾರಿಯಲ್ಲಿ.

ವಿರಸಗಳೇ ಮೋಡವಾಗಿ ವೇದನೆಗಳ ಮಳೆಯೊಂದು ಸುರಿದಿದೇ ನನ್ನ ಬದುಕಿನ ಭೂಮಿಯಲ್ಲಿ.

- Kris

13 Feb 2020, 07:44 pm