ಊರೂರು ಸುತ್ತಾಡಿ
ಸಮಯ ಕಳೆಯಲು
ಸ್ನೇಹಿತರು ಕರೆಯುತ್ತಿದ್ದರು
ಕರೆ ಮಾಡಿ ಪದೇ ಪದೇ,
ಒಂದೆಡೆ ಕುಳಿತು
ಯೋಚಿಸಿದಾಗ ಅರಿತೆನು
ತಾಯಿಯ ಮಡಿಲಿಗಿಂತ
ಮಿಗಿಲಾದ ಸ್ವರ್ಗ ಸುಖ
ಬೇರಾವುದಿದೆಯೆಂದು..!
ಹಾಳಾಯಿತು ಹೃದಯ ಹಳೆ ಹುಡುಗಿಯ ನೆನಪಿನಲ್ಲಿ
ಮತ್ತೆ ಯಾರಾದರು ಸಿಗುವರೇ ನನ್ನ ಬಾಳ ದಾರಿಯಲ್ಲಿ
ಸಿಗುವವರು ಬರುವವರೆ ಕೊನೆವರೆಗೂ ನನ್ನ ಬಾಳ ದಾರಿಯಲ್ಲಿ
ಪ್ರೀತಿಸುತ್ತೇನೆಂದು ಮೋಸ ಮಾಡುವವರೆ ತುಂಬಿರುವ ಈ ಜಗದಲಿ
ನೊಂದ ಹೃದಯದ ಮಾತು ಕೇಳಿ ಅಳುತಿಹೇನು ನಾನಿಲ್ಲಿ
ಸಿಗದಿದ್ದರೂ ಪರವಾಗಿಲ್ಲ ಅವರೆಲ್ಲರಲ್ಲಿ ಸುಖವಾಗಿ
ಕೊನೆವರೆಗೂ ಸಾಗುತಿಹನು ನಾನವಳ ನೆನಪಲ್ಲಿ
ಅವಳು ಇರಬಹುದೇ ನನ್ನ ನೆನಪಲ್ಲಿ ಅದು ಒಂದೇ ನನ್ನಗೆ ನಂಬಿಕೆ ಬದುಕಿನಲ್ಲಿ
ಇಂತಿ
ಭರತ್ ಕುಮಾರ್ ಆರ್ ಬಿ
೯೯೭೨೬೬೪೫೮೯
9972664589
ನೀ ಬರುವ ಸಮಯದೋಳ್:
ಕತ್ತಲೆ; ಉಸಿರು ಗಟ್ಟಿ ಹಿಡಿದು ನಿಂತಿದೆ.
ತಂಗಾಳಿ; ದೀರ್ಘ ಉಸಿರು ಎಳೆದುಕೊಂಡು ಸ್ತಬ್ದವಾಗಿದೆ.
ಚಂದ್ರ; ಹಲ್ಲು ಕಿಸಿದು, ಕಣ್ಣು ಮಿಟುಕಿಸದೆ, ಕಣ್ಣರಳಿಸಿ ನಿಂತಿದ್ದಾನೆ.
ಮೋಹಕ ಅಲೆಗಳು
ಮುತ್ತಿಟ್ಟು ಹೋದ
ಮರಳು ರಾಶಿಯ
ಎದೆಯ ಮೇಲೆ
ಬಿದ್ದ ಹಸಿರಾದ
ಹಸಿ ಎಲೆಯಂತೆ
ನಿನ್ನ ನೆನಪು,
ಹಾಲ್ನೊರೆತದ ಧಾಳಿಗೆ
ಸಿಲುಕಿ ಇನ್ನೇನು
ನೀರ ಪಾಲಾಗುತ್ತಿದ್ದಂತೆ
ಅಲೆಗಳ ಅಬ್ಬರಕ್ಕೆ
ಸೋತು ಬಿಟ್ಟು
ಮತ್ತೆ ಪುನಃ
ದಡ ಸೇರುತ್ತಿದೆ.!
ನನ್ನೂರಲಿ ಬಜಾರ ಸೇರುವ ಬೀದಿ ಅಂಗಾತ ಬತ್ತಲೆ ಮಲಗಿದೆ.
ಮೈ ಮೇಲೆ ಇದ್ದ ಒಂದಿಷ್ಟು ಹರಕು ಮುರಕು ಬಟ್ಟೆಯನ್ನು ಮೊನ್ನೆ ದಿವಸ ಕಿತ್ತುಕೊಂಡರು.
ಗರತಿಯರ ನೀರಿಗೆಗೆ ಕೈ ಹಾಕಿ, ನೀರಿಗೆ ಸಡಿಲು ಮಾಡುವ ಬೌಗಬೆಕ್ಕುಗಳ ದರಬಾರು.
ನಾಯಿ ಬಾಯಿಯೊಳಗೆ ಕಚ್ಚಿ ಹಿಡಿದ; ಮಾಂಸದ ತುಂಡು ಕಸಿಯಲು; ಎರಡು ಕಾಲಿನ ನಾಯಿಗಳ ಸಾಲೇ ಸಾಲು.
ಬೀದಿ ಗೂಳಿ ದನಗಳ ಹೆಂಡಿ ಕದೆಯಲು, ಹೆಂಡೆಬುಟ್ಟಿ ತಲೆಮೇಲೆ ಹೊತ್ತ, ಹೆಂಡಿ ಕಳ್ಳರ ಕಚ್ಚಾಟ.
ನಿಬ್ಬು ಮುರಿದ ಪೆನ್ನುಗಳಲ್ಲಿ; ಶಾಯಿ ಖಾಲಿ ಮಾಡಿಕೊಂಡು, ಮತ್ತೊಬ್ಬರ ಪೆನ್ನು ತಮ್ಮ ಜೇಬು ಮೇಲೆ ಸಿಕ್ಕಿಸಿಕೊಂಡು, ಪೋಜು ಕೊಡುವ ಶಂಡರ ದಂಡು.
ತಮ್ಮ ಮನೆಯ ಪಲ್ಲಂಗಗಳ ಕಾಲಮುರಿದು, ಪಕ್ಕದ ಮನೆಯ ಬೆಡರೂಮ ಕಿಡಕಿಗೆ, ದುರಬೀನ ಇಟ್ಟು, ಜೊಲ್ಲು ಸುರಿಸುವ, ನಾಮಾರ್ಧಗಳ ಸಾಲು.
ತಮ್ಮ ಹೊಲವನು ಊಳಲು; ಮತ್ತೊಬ್ಬರಿಗೆ ಕೊಟ್ಟು, ಮತ್ತೋಬ್ಬರ ಹೊಲದಲಿ; ಕಸ ಬೆಳೆಯಲು, ತಿನಕುವ ಹೇಕಡ್ಯಾಗಳು.
ತಮ್ಮ ಜೋಳವ ಮತ್ತೊಬ್ಬರಿಗೆ ಕೊಟ್ಟು ಮತ್ತೊಬ್ಬರ ಜೋಳವ ತಂದು ಹಾರಾಡಿ ಹಾರಾಡಿ ಬೀಸುವ ಗಂಡು ಸೂಳೆಯರು.
ಹೊತ್ತು ಮುಳಗಿದ ಮೇಲೆ ನನ್ನೂರ ಬಜಾರ ಬೀದಿಯಲಿ, ಇವರ ಶೂರತನದ; ಬಂಡ ಬಯಲಾಟಗಳ ಅನಾವರಣ.
ಚಂದಿರನ ಅಂಗಳದಿ ಬೆಳದಿಂಗಳ ಬಾಲೆ ನೀ
ಸುಂದರ ಬನದಲ್ಲಿ ಅರಳಿದ ಹುವು ನೀ
ಬಯಸಿ ಕೋಳುತೀರುವೆ ನೀನ್ನ ಪ್ರೀತಿಯನು
ಏಕೆ ಹೆಳುತ್ತಿಲ್ಲ ನಿನ್ನ ಮನಸ್ಸಿನ ಮಾತನ್ನು
ಕೋರಗಿ ಸಾಯುತ್ತಿರುವುದು ನನ್ನ ಆಸೆಯನದು
ಇತ್ತಿ ಭರತ ಕುಮಾರ್ ಆರ್ ಬಿ.
9972664589