ಸಂತೋಷದ ಹೃದಯವು ವಿಪರೀತವಾಗಿ ಪಿಸುಗುಟ್ಟಿತು..
ಅವರು ಅನೇಕ ನಿರ್ಬಂಧಗಳನ್ನು ಹೇರಿ ಹುಡುಗಿಯ ಹೆಸರಿನಲ್ಲಿ ನಿನ್ನನ್ನು ಸೆರೆಹಿಡಿದಿದ್ದರೂ
ನಾನು ನಿನ್ನೊಳಗೆ ಇರುವ ಪಕ್ಷಿಯಾಗಿದ್ದೇನೆ.
ಪವಿತ್ರ ಹೃದಯ ರಹಸ್ಯವಾಗಿ ಹೇಳಿದ್ದು,
ಒಂದು ದಿನ ನೀನು ಪ್ರಪಂಚದ ಮುಂದೆ
ನಿಲ್ಲುವಂತೆ ಮಾಡುತ್ತೇನೆ..
ಮತ್ತು ಅದು ನಿಮ್ಮನ್ನು ನೋಡುತ್ತದೆ ಮತ್ತು ನಾವು ಹುಡುಕುತ್ತಿದ್ದೇವೆಂದು ಹೇಳುತ್ತೇವೆ.
ನಾನು ಒಬ್ಬ ಹುಡುಗಿ
ನಿಮ್ಮ ಕುರುಡು ನಂಬಿಕೆಗಳ ಖುಷಿಯೊಳಗೆ
ಎಂದಿಗೂ ನನ್ನನ್ನು ಇಡಬೇಡಿ..
ನನ್ನನ್ನು ಪಾಪವೆಂದು ಪರಿಗಣಿಸಬೇಡಿ
ನಾನು ಮಾಡದಿರುವ ಪಾಪ ನಿಮಗೆ ಶಾಪವಾಗಬಹುದು...
ಹೌದು ನಾನು ಉತ್ಸಾಹಭರಿತ ಕನಸೊಂದಿಗೆ ಒಬ್ಬ ಹುಡುಗಿಯಾಗಿದ್ದೇನೆ,
ಹೌದು, ನಾನು ತಾಯಿಗೆ ಆರೈಕೆಯೊಂದಿಗೆ
ಮತ್ತು ತಂದೆಗೆ ಧೈರ್ಯವಿದ್ದೇನೆ.
ಆಳವಾದ ಕತ್ತಲೆಯಲ್ಲಿ ಒಂದು ಮೋಂಬತ್ತಿ ಕೂಡ ಹೊಳೆಯುತ್ತದೆ ಎಂದು ನೆನಪಿಡಿ.
ನಾನು ನನ್ನ ಬಡತನದ ಕತ್ತಲೆಯಲ್ಲಿ ಮತ್ತು
ನನ್ನ ಪದಗಳ ಹಿಂದೆ ನಾನು ಮರೆಮಾಡುವ ಧೈರ್ಯದಿಂದಾಗಿ ನಾನು ಬಹಳಷ್ಟು ದಿನವನ್ನು ಬಲಪಡಿಸುವೆನು,
ನಾನು ನಿನ್ನ ಹೃದಯದಲ್ಲಿ ಎಂದಿಗೂ ಆಕರ್ಷಕ ನಟನಾಗಿರುತ್ತೇನೆ
ಕಿಶೋರನಾಗಿದ್ದಾಗ
ಜಗದ ಜನರ ಮನಸ್ಸನ್ನು ಬದಲಾಯಿಸುವ ಕನಸಕಂಡೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ವಿದ್ಯಾರ್ಥಿಯಾಗಿದ್ದಾಗ
ಛಾತ್ರ ಸಂಘಟನೆಯ ಮೂಲಕ ಅವರ ಮನಃ ಪರಿವರ್ತನೆಯ ಕನಸ ಕಂಡೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಯುವಕನಾಗಿದ್ದಾಗ
ಯುವ ಶಕ್ತಿಯ ಸಂಘಟನೆಯ ಮೂಲಕ ಅವರಲ್ಲಿ ಬದಲಾವಣೆಯ ಆಶೆ ಪಟ್ಟೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಗೃಹಸ್ಥಾಶ್ರಮದಲಿ
ಅರ್ಧಾಂಗಿಯಲ್ಲಾದರೂ ಬದಲಾವಣೆ ತರಲು
ಶತ ಪ್ರಯತ್ನವ ಪಟ್ಟೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಮಕ್ಕಳಾದ ಮೇಲೂ
ಛಲ ಬಿಡದೆ ಅವರಲ್ಲಾದರೂ ಬದಲಾವಣೆಯ ಪರ್ವ ಬಯಸಿದೆ,
ಸಾಧ್ಯವಾಗಲಿಲ್ಲೆನಗೆ ಸಾದಿಸಲದನು;
ಮರಣ ಶಯ್ಯೆಯಲಿರುವಾಗಲನಿಸಿತ್ತು
ಇಷ್ಟೆಲ್ಲಾ ಸೋಲುಗಳ ಬದಲು ನನ್ನಲ್ಲೇ ಬದಲಾವಣೆ ತಂದುಕೊಳ್ಳಬೇಕಿತ್ತೆಂದು,
ಸಮಯ ಸರಿದು ಹೋಗಿತ್ತು ಸಾದಿಸಲದನು.
*ಗುರುಪೂರ್ಣಿಮ, ಜುಲೈ, 2018
ಡಾ!ಸಿ.ಮುರಳೀಧರ
ಮುದ್ದು ಮಾಡುತಾ
ಮನವ ಕಲಕುತಾ
ಮನೆಯ ಬೆಳಗುತಾ
ಬೆಳೆದೆ ನೀನು ನನ್ನ ತಂಗಿ
ಜಗಳ ಜಗ್ಗುತಾ
ಜಗವ ನೋಡುತಾ
ಜಿಗಿದು ಆಡುತಾ
ಜೊತೆಯಾದೆ ನೀ ನನ್ನ ತಂಗಿ
ಹರುಷ ಚಿಮ್ಮುತಾ
ಹರೆಯ ಮೆರೆಯುತಾ
ಹಿರಿಯಳಾಗಿ ಮರುಗುತಾ
ಹೊರಟು ನಿಂತಳು ನನ್ನ ತಂಗಿ
ತೆರೆಯ ಮರೆಯಲಿ
ಬರುವ ಕಂಬನಿ
ಹೇಳುತಿದೆ ನೂರು ಕಾಲ
ಬಾಳಿಬದುಕು ನೀ ನನ್ನ ತಂಗಿ