Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಮ್ಮೆ ನೋಡು...!

ನಿನ್ನಿಂದ ನಿನಗಾಗಿ ನಿನಗೋಸ್ಕರ
ಬದುಕುತೇನಿ ಎಂಬ ಹಂಬಲವಿಲ್ಲ
ನೀನಿಲ್ಲದೇ ನಿನಗಿಂತ ಒಂದು ಕೈ
ಜಾಸ್ತಿ ಬದುಕಿ ತೋರಿಸ್ತಿನಿ ಯಾಕಂದ್ರೆ
ನಾನು ನಿನಗಾಗಿ ಬದುಕುತ್ತಿಲ್ಲ
ನನಗಾಗಿ ನಾನು ಬದುಕತ್ತಿದ್ದೇನೆ....

{ನಾಗರಾಜ ಬಿ}

- ನಾಗರಾಜ ಬಾಕೆ೯ರ್

08 Jun 2018, 11:23 am

ಹಾಗೇ ಸುಮ್ಮನೆ

ಜಿನುಗುಟ್ಟುವ ಮಳೆಹನಿಯಲಿ
ಬಾಡಿ ಹೋಗಿಹುದು ಮೈ-ಮನ ಚಳಿಯಲಿ
ಮಂಪರು ನಿದ್ದೆಯೊಂದಿಗೆ
ಗೊರಕೆ ಹೊಡೆಯುವುದೇ ನಿಂತಿಲ್ಲ
ಬೀಸುವ ಚಳಿಮಳೆಯಲಿ
ನಾ ಹೇಗೆ ಎದ್ದೇಳಲಿ ಈ ಮಳೆಯಲಿ
ಬೆಚ್ಚನೆಯ ಬೆಡ್ಸೀಟ್ನ ಅಡಿಯಿಂದ

- ಎಸ್.ಬಿ

08 Jun 2018, 06:25 am

ಮನಸ್ಸೆಂಬ ಮಾಯಾನಗರಿಯಲಿ

ಮನಸ್ಸೆಂಬ ಮಾಯಾನಗರಿಯಲಿ
ಯಾರಿದ್ದರೇನು ಯಾರಿರದಿದ್ದರೇನು....
ಸದಾ ನಿನ್ನದೇ ಪ್ರೀತಿಯ
ಸದ್ದು-ಗದ್ದಲ....

ಮೌನವಾದರೂ ನೀ ಒಂದು ಘಳಿಗೆ
ಸಿಡಿಲ ಸಡಿಲ ಸವಾರಿ
ಬಿಡುವಿಲ್ಲದಂತೆ
ನನ್ನೊಳಗೆ....

ಕಡಲಾಳದ ಸ್ವಾತಿಮುತ್ತಂತೆ
ನೀನು
ಕಳೆದೋಗದಂತೆ ಕಾಪಾಡಿಕೊಳ್ಳುವೆ
ನಾನಿನ್ನು!

- shruthi AS

08 Jun 2018, 12:54 am

ಮುದ್ದು...

ಅಪ್ಪಿ ಬಿಡಲೆ ಒಮ್ಮೆ ನಿನ್ನ
ಸ್ವಲ್ಪ ಪ್ರೀತಿಯಿಂದ
ಕಚ್ಚಿ ಬಿಡಲೆ ನಿನ್ನ ಕೆನ್ನೆಯನ್ನ
ಮುದ್ದು ಮನಸ್ಸಿನಿಂದ.....

ಮಂಜು ಹೊಳಲ್

- ನಾಗರಾಜ ಬಾಕೆ೯ರ್

07 Jun 2018, 08:27 pm

ದೇವರು

ಅಣ್ಣ ಕಂಡೀರ, ಅಜ್ಜ ಕಂಡೀರ
ನನ್ನ ಹೆಂಡೀರ
ಅಕ್ಕ ಕಂಡೀರ,ತಮ್ಮ ಕಂಡೀರ
ನನ್ನ ಹೆಂಡೀರ
ಜನಗಳ ಬಾಯಿಗೆ ಹಣ್ಣಾದವಳು
ರಸಿಕರ ಪಾಲಿಗೆ ಹೆಣ್ಣಾದವಳು                         
ಹಗಲಿರುಳು ನನ ನೆರಳ ಜೊತೆಗಿದ್ದವಳು                          
ಮನೆದೀಪ ಹಚ್ಚಿರಲು ಹೊರ ಹೋದವಳು

ಘಮಘಮ ಮಲ್ಲಿಗೆ ತಂದಿರುವೆ
ರುಚಿಸುವ ಹಣ್ಗಳ ಇಟ್ಟಿರುವೆ
ಸಂಜೆಗು ಮುನ್ನ ಮಡಿಯಾಗಿದೆ                     
ನಿದಿರೆಯು ನನ್ನ ಹೊರ ನೂಕಿದೆ                                
ತಡವಾಗಿದೆ ಹಸಿವಿದೆ ಕೇಳಿರಿ
ದಾರೀಲಿ ಸಿಕ್ಕರೆ ಮರೆಯದೆ ಕಳಿಸಿರಿ

ನೆನ್ನೆ ತನಕ ನಮಗೆ ಮುನಿಸಿಲ್ಲ                                 
ಹೆಂಡಿರ ತೊರೆಯಲು ಮನಸಿಲ್ಲ
ಸರಸಕೆ ಕರೆದರೆ ಬರುತಿಲ್ಲ
ಮೈತ್ರಿಗೆ ಸಮಯದ ಅರಿವಿಲ್ಲ
ಕದ್ದು ತಿನ್ನುವ ಆಸೆಯು ನನಗಿಲ್ಲ
ಒಪ್ಪಿ ಬಂದರೆ ದಂಡಿಸಿ ಸುಖವಿಲ್ಲ

- ಜಿ. ಪ್ರಕಾಶ್

07 Jun 2018, 04:28 pm

ಮುಂಜಾನೆಯ ನಮನಗಳು

ಹಕ್ಕಿಗಳ ಇಂಚರಗಳ ನಡುವೆ
ಬೆಳ್ಳಿರಥವನ್ನೇರಿ ಬಂದ ಬಾಸ್ಕರ
ಸೋಗಸಾದ ಮುಂಜಾನೆಯಲಿ
ಮಂಜುಗಳ ಬಿತ್ತರಿಸಿ ಮುದ ನೀಡಿದ ರವಿತೇಜ
ಕತ್ತಲೆಯ ಕರಗಿ ಬೆಳಕಿನ ಹಾಲು ಚೆಲ್ಲಿದ ನೇಸರ
ಎದ್ದೇಳಿ ಸ್ನೇಹಿತರೆ ನಿಮಗಿದೋ
ಮುಂಜಾನೆಯ,ನಮನ
ಶುಭ್ರವಾಗಿರಲಿ ನಿಮ್ಮ ಮನ
ಖುಷಿಖುಷಿಯಿಂದಿರಲಿ ಈ ದಿನ
ಶುಭದಿನ

- ಎಸ್.ಬಿ

07 Jun 2018, 06:05 am

ಮಲಗೆನ್ನ ಮಗುವೆ

ಮಲಗೆನ್ನ ಮಗುವೆ ಈ ಬಾಳ ನಗುವೆ
ಮಲಗೆನ್ನ ಮುದ್ದು ಮರಿ
ನೀನೇನೆ..... ಎಲ್ಲ ಸಿರಿ
||ಮಲಗೆನ್ನ ಮಗುವೆ||

ತಂಗಾಳಿ ತಂಪು ಸೂಸಿ
ಮಲಗೆನ್ನ ಮಗು ಎಂದು ಹರಸಿ
ನಿದಿರೆಗೆ ಜಾರುವ ಮುನ್ನ
ಲಾಲಿ ಹಾಡಿ ಮಲಗಿಸುವೆ ನಿನ್ನ
||ಮಲಗೆನ್ನ ಮಗುವೆ||

ಓಂ ನನ್ನ ಬಂಗಾರದ ಗಿಣಿಯೆ
ನೀನೇನೆ ಈ ಬಾಳ ನಿಧಿಯೆ
ನಿದಿರಮ್ಮ ಬರುವ ಹೊತ್ತು
ಕೊಡುವೆನು ಸಿಹಿ ಮುತ್ತು
||ಮಲಗೆನ್ನ ಮಗುವೆ||

- sharadhashekar

06 Jun 2018, 06:46 pm

ಸೋಲು

ನಿನ್ನೆಯ ಪರಿಸರ ದಿನವನ್ನು
ಆಚರಿಸಲೋಸುಗ ಅವನು
ಊಟ, ನೀರು, ಉಸಿರಾಟವನ್ನೆಲ್ಲ ಬಿಟ್ಟ !
ಇವತ್ತು..
ಅವನ ಕೊನೆಯ ಎಸಕವ ಮುಗಿಸಲು ಜನ
ಸೌದೆ ಒಟ್ಟು ಮಾಡುತ್ತ ಇದ್ದಾರೆ !!

- ಶ್ರೀಗೋ.

06 Jun 2018, 06:54 am

ವಿಪರ್ಯಾಸ

ಕಾಡನ್ನು ಕಡಿದು
ಪರಿಸರವ ನಾಶ
ಮಾಡಿ
ಕಾಂಕ್ರೀಟು ನಾಡು ಕಟ್ಟಿ
ಶುದ್ದ ಗಾಳಿಯ
ಕೊರತೆಯಾದಾಗ
ಬದುಕುವಾಸೆಗೆ
ಕೊನೆ ಕ್ಷಣದಲ್ಲಿ

ಗಿಡ ನೆಡುವುದು

✍ ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

05 Jun 2018, 10:18 pm

ಪರಿಸರ

ಬೆಳೆ ಬೆಳೆದು ಕಾಡು
ನಿಂತುಪುದು ಬೀಡು
ವನವೆಲ್ಲ ಜೇನುಗೂಡು
ಕಡಿಕಡಿದು ನೀವು
ಮಾಡಬೇಡಿ ನೋವು
ಎಂದೆಂದೂ ಇರಲಿ ಅರಿವು

ನನ್ನಿಂದ ನಾ ಹುಟ್ಟಿ ಬರುವೆ
ನನ್ನ ಮೇಲೆ ಕೋಪವೇಕೆ???
ಹೂ ಹಣ್ಣು ಕೊಡುವೆ ನೆರಳನ್ನು ನೀಡುವೆ
ನನ್ನನ್ನು ಕಡಿವಿರೇಕೆ??
ಬಿಸಿಲಲ್ಲಿ ನಾನು ನೆರಳಿನಲ್ಲಿ ನೀವು
ನಿಮಗಾಗಿ ನಾನು ಇರುವೆ
ಯಾರಿಂದ ನನಗೆ ಆಸರೆಯು ಬೇಡ
ನನ್ನ ಮೇಲೆ ಕರುಣೆವಿರಲಿ
ನನ್ನನ್ನು ಕಡಿಯದಿರಿ

ನನ್ನನ್ನು ಕಡಿದು ಹಣಕ್ಕಾಗಿ ಮಾರಿ
ಕ್ಷಣಕಾಗಿ ಬಾಳಬೇಡಿ
ಕಾಡನ್ನು ಉಳಸಿ ನಾಡನ್ನು ಬೆಳಸಿ
ಉಸಿರಾಗರಲಿ ಹಾಡು
ನೆನಪಿರಲಿ ನನ್ನ ಹಾಡು

-------ಪ್ರಕಾಶ್

- Prakash Angadi

05 Jun 2018, 09:52 am