Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬಾನಿನಲ್ಲಿ ಅವಿತ ಚುಕ್ಕಿಯಂತೆ,
ಹೂವಿನಲ್ಲಿ ಅವಿತ ಪರಿಮಳದಂತೆ,
ಕಣ್ಣಿನ ರೆಪ್ಪೆಯ ಹಿಂದೆ ಅವಿತು,
ಯಾರು ಇರದ ಸಮಯ ಬರುವೆ.
ರಸ್ತೆಯಲ್ಲಿ ನಾ ಓಡುವಾಗ,
ಕಲ್ಲು ತಗುಲಿ ಎಡವಿದಾಗ,
ಇರಲಿಲ್ಲ ಯಾರು ನನ್ನ ಜೊತೆ,
ಕ್ಷಣಮಾತ್ರದಲ್ಲಿ ಬಂದೆ ಮುತ್ತಿನ ಹನಿಯಂತೆ.
ಹಸಿವಿನಿಂದ ಕರು ದೂರವಾದಂತೆ,
ಹತ್ತಿರದವರು ದೂರವಾದಗ,
ಮೇಲಿನಿಂದ ಆಲಿಕಲ್ಲು ಉದುರುವಂತೆ,
ಮನಸ್ಸು ಚುಚ್ಚವಂತೆ ಬರುವೆ.
ಬಡಿಯುವ ಹೃದಯವ ನೋಡಿದೆ,
ಅದರ ಬಡಿತವನ್ನು ಕೇಳಿದೆ,
ಮಿಟಕ್ಕಿಸುವ ಕಣ್ಣರೆಪ್ಪೆಯನ್ನು ನೋಡಿದೆ,
ದುಃಖಪಟ್ಟೆ ನೀ ಕಾಣದೆ.
ಹೊಸ ಲೋಕ ನೋಡಲು ಬಂದಾಗ,
ನನ್ನ ಬಳಿಯಿರುವೆ,
ಸ್ವರ್ಗ ಲೋಕಕ್ಕೆ ಹೋದಾಗ,
ಬೇರೆಯವರ ಬಳಿಯಿರುವೆ.
ರೈತನ ಒಣಗಿದ ಭೂಮಿಯಲ್ಲಿ,
ಬರುವ ಮಳೆ ಹನಿಯಂತೆ,
ನನ್ನ ಮನಸ್ಸು ಬತ್ತಿ ಹೋದಾಗ,
ಎಲ್ಲಿಂದಲೊ ನೀ ಬರುವೆ.
ದೇವರು ಸೃಷ್ಟಿಸಿದ ನಿನ್ನನ್ನು,
ನೋವು-ನಲಿವು ಪ್ರತಿಬಿಂಬದಂತೆ,
ಕೊನೆಯಾಗಿ ತಿಳಿಯಿತು ನಿನ್ನ ಹೆಸರು,
ನಿನ್ನನ್ನು ಕರೆಯುತ್ತಾರೆ ಕಣ್ಣಿರು............
- manu
01 Jan 2018, 12:47 pm
ಕಣ್ಣಂಚಿನ ಈ ಮಾತು,
ಕ್ಷಣದಿ ಮನವ ಕದಡಿತು,
ತುಟಿಯಂಚಿನ ಈ ಮುಗುಳ್ನಗು,
ಮರೆಸಿತು ನೂರೆಂಟು ನೋವನು,
ಶ್ರುಂಗಾರ ಕಾವ್ಯದ ಈ ಹೆಸರು, ಚಡಪಡಿಸಿತು ಮಗ್ನ ಕನಸಲ್ಲು....®
- Sri....
01 Jan 2018, 11:22 am
ನಮನ
""""""""""""""""
ಕನಸುಗಳಿಲ್ಲದ ಕವನಗಳು .
ಲೇಖನಿ ಇಲ್ಲದ ಬರಹಗಳಂತೆ.
ಪಲ್ಲವಿ ಇಲ್ಲದ ಚರಣಗಳು.
ಹ್ರುದವೇ ಮಿಡಿಯದ ಮನಸುಗಳಂತೆ
ಗಮನವ ಸೆಳೆಯುವ ಪ್ರಕೃತಿಯು.
ತಾಯಿಯ ಮಡಿಲಿನ ಹಾಸರೆಯು.
ರೆಪ್ಪೆಯಲ್ಲಿ ಮಿಡಿಯುವ ಕಣ್ಣುಗಳು
ಕನಸೇ ಕಾಣದ ಬಲ್ಬುಗಳಂತೆ.
ರಸ್ತೆಯಲ್ಲಿ ಇರುವ ಬೀದಿ ದೀಪಗಳು.
ಬಡವರ ಪಾಲಿಗೆ ದೇವತೆಯು.
ಹೊಸವರುಷವು ತರುತಿದೆ ಹರುಷವನು.
ಹೊಟ್ಟಾಗಿ ಸ್ಮರಿಸೋಣ ಹಿಂದಿನ ದಿನಗಳನು.
ಕೈ ತಟ್ಟಿ ಕರೆಯೋಣ ಮುಂದಿನ ವರುಷವನು
ಮನಸ್ಸಾರೆ ಕಳಿಸೋಣ ಹಿಂದಿನ ದಿವಸಗಳನು......
( ನೆನಪಿನ ನಾವಿಕ ಸಂತೋಷ್ )
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
- ಸಂತೋಷ್//ಜೀತು
31 Dec 2017, 09:29 pm
ಕನಸುಗಳು ಮಾತಾಡಿಕೊಂಡಿವೆ
ನಾ ನಿದ್ರೆಗೆ ಜಾರುವ ಮುನ್ನವೇ....
ಮನಸ್ಯಾಕೋ ಬೇಜಾರಿನಲ್ಲಿದೆ
ಸಿಹಿಕನಸುಗಳು ಮೂಡದೆ...
ಕನಸ್ಯಾಕೊ ಹಠವ ಮಾಡುತ್ತಿದೆ
ಮತ್ತೆ ಜೊತೆಯಾಗಿ ಸೇರಲು...
ನೀನಾದರೂ ತಿಳಿಸಬಾರದೆ
ಹೃದಯವು ಅಳುತ್ತ ಕುಳಿತಿವೆ..
ಎಲ್ಲವನು ತಿಳಿದು ತಿಳಿಯದಂತಿರುವೆಯಲ್ಲಾ
ಸುಮ್ಮನೆ ಬಂದುಬಿಡು ಕನಸಲ್ಲಿ....
- ಪ್ರಿಯಾಂಕ
31 Dec 2017, 09:05 pm
ಹಕ್ಕಿಗಳ ಇಂಚರದಿ
ತಂಪಾದ ಮುಂಜಾವಲಿ
ನಗುಮೊಗದಿ ಬರುವ
ಪೂರ್ವದಲಿ ನೇಸರ..!
ಹಗಲೆಲ್ಲ ಉರಿದು
ದಘದಹಿಸಿ ಮೆರೆದು
ಸಂಜೆ ಹೊರಡುವ ಮುನ್ನ
ಅವನ ವದನದಲೂ
ಅದೆಕೋ ಕೊಂಚ ಬೇಸರ..!!
#ಸಿದ್ದು_ಗುಂಡ
- - ಸಿದ್ದು ಕನ್ನಡಿಗ
31 Dec 2017, 05:37 pm
ನಸು ನಸುಕಿನ ಇಬ್ಬನಿಯ ಮಂಜಿನಲ್ಲಿ
ಸೂರ್ಯನ ಕಿರಣ ಮಂಜಿನಲ್ಲಿ ಸ್ಪರ್ಶಿಸಿದಾಗ
ಆ ಇಬ್ಬನಿಯ ಮಂಜು ಮಾಯಾವಾಯಿತೆ
ಬದುಕು ಎಂಬ ಜಂಜಾಟದಲ್ಲಿ ಸುಖ ದುಃಖಗಳು
ಆಹ್ವಾನಿಸಿದಾಗ ಜೀವನ ಸುಗಮವಾಯಿತೆ
- ಮಲ್ಲೇಶ್ವರ ನಾಯಕ
31 Dec 2017, 11:51 am
ಕನಸಾಗ್ ಬಂದು
ಕಾಡ್ತಾಳಲ್ಲೋ
ಏಂಥಾದ್ ಅವಳ ರೂಪ..!
ಕತ್ತಲ್ ಕೋಲ್ಯಾಗ
ಹಚ್ದಂಗೈತೆ
ಬೆಳ್ಳಿ ಬಟ್ಲಾಗ ದೀಪ...!
ಬೊಮ್ಮ ಏನ್ ಇವಳ
ಮಾವ್ನಿರಬೇಕು
ಜಾಸ್ತಿ ಕೊಟ್ಟವ್ನೆ ಅಂದ..!
ನಾನೇ ಶ್ಯಾಮ
ಅವಳೆ ಭಾಮ
ನಮ್ದು ಜನುಮದ್ ಬಂಧ..!
ಸೀರೆ ಉಟ್ಕೊಂಡ್
ಮಲ್ಗೆ ಮುಡ್ಕೊಂಡ್
ತಳುಕ್ತಾ ಬಳುಕ್ತಾ ಬಂದ್ರೆ..!
ಉರಿಯೋ ಸೂರ್ಯನೆ
ತಣ್ಣಗ್ ಆತಾನೆ
ಇವ್ಳ್ ಹಂಸದ ನಡಿಗೆ ಕಂಡ್ರೆ..!
ಗಂಧದ ವನದೊಳು
ಚಂದದಿ ಅರಳಿದ
ಘಮ್ಮೆನ್ನುವ ಹೂವಿನ ಘ್ರಾಣ..!
ಅವಳದೇ ಧ್ಯಾನ
ಅವಳದೇ ಗ್ರಾಣ
ಅವಳೇ ಗುಂಡನ್ ಕವಿತೆಯ ಪ್ರಾಣ..!
~ ಸಿದ್ದು ಗುಂಡ
- - ಸಿದ್ದು ಕನ್ನಡಿಗ
31 Dec 2017, 11:44 am
ಸಿಂಗಾರದ ಗೊಂಬೆ ಬಂಗಾರ
ತೊಟ್ಟು ಕುಂತಿಹಳು,
ಹರೆಯದ ಹೊಸ ಮಿಂಚಲಿ
ಕಣ್ಣಂಚಿನ ಪನ್ನೀರ ಮಳೆಯಲಿ.
ಬೇಡಿ ಬಂದ ವರನ ಮನ
ಒಲಿಸಿಕೊಳ್ಳಲು ನೂರೆಂಟು ಕನಸು
ಕಾಣುತಿಹಾಳು,
ಸೆರಗಿನ ಹಿಂದೆ ಮುಂದಿನ ಜೀವನದ್ದೆ.
ಲಕ್ಷಗಟ್ಟಲೆ ಹಣವ ಪಡೆದು
ಮಾರಿಕೊಂಡರು ಮಗಳನ್ನು
ಹೆತ್ತ ತಂದೆ - ತಾಯಿ,
ಎಲ್ಲಿಲ್ಲದ ಖುಷಿಯಲ್ಲಿ ಮದುವೆ
ನಡೆಸಿದರು ಕೋಟ್ಯಾದೀಶನ ಕೈ
ಸೇರಿದಳು ತಮ್ಮ ಮುದ್ದಿನ ಮಗಳೆಂದು.
ಅದ್ದೂರಿಯಿಂದ ಮುಗಿಯಿತು
ಮದು ಮಂಗಳ ಮಂತ್ರ,
ಮೆಟ್ಟಿದಳು ಗಂಡನ ಮನೆಯ
ಹೊಸಳನ್ನು ಸರಸತಿ.
ನಿಬ್ಬೆರೇಗಾಗಿ ಕುಸಿದು ಬಿದ್ದಳು
ಅರಮನೆಯಿಂದಿರುವ ಗುಡಿಸಲು
ತಾನಿರುವ ಮನೆಯೆಂದು ತಿಳಿದು,
ಕೊಟ್ಟ ವಧುದಕ್ಷಿಣೆ ರಾಜರ ಬಳಿ
ಸಾಲವೆಂದು ಅರಿತು.
- ಚುಕ್ಕಿ
31 Dec 2017, 10:58 am
ತವರಿಗೆ ಹೊಗ್ಯಾಳೆ ನನ್ನಾಯ ಹೆಂಡಾತಿ.
ತಮ್ಮನ ಮದುವಿ ಇನ್ನಾ ತಿಂಗಳೈತಿ.
ಹೇಳಾಕ ಕೇಳಾಕ ಏನ್ ಇಲ್ಲದಂಗ ಹಾಗೈತಿ.
ಯಾರಿಗೂ ತೀಳಿತಿಲ್ಲ ನಮ್ಮ ಪಚೀತಿ..
ಬಯ್ಯೊಕೆ ಮನಸ್ಸಿಲ್ಲ ಗದರೋಕೆ ಮನಸ್ಸಿಲ್ಲ
ಯಾಕೆಂದರೆ ಅವಳೇ ನನ್ನ ಮನದ ಒಡತಿ.
ಪ್ರೀತಿಯಾ ಮುತ್ತಿನ ಪಲ್ಲಕ್ಕಿಯನ್ನು
ಏರಿ ಬಂದಳು ನನ್ನಾಯ ಗೆಳತಿ
ಅಂತಾ ನನಗೆ ಬಾಸವಾಗ್ತೈತಿ
- ಅಮರ್ತ್ಯ ಮಾರುತಿ
30 Dec 2017, 11:34 pm
ಇದ್ದಾಗ ಜೊತೆಯಲ್ಲಿ ಕೇಳಲು ನಿನ್ನ ಮಾತು ಪುರುಸೊತ್ತೆ ಇರಲಿಲ್ಲ
ನಿನ್ನಿಂದ ಇರಲು ಇಷ್ಟು ದಿನ ದೂರದಲಿ
ಕಿವಿಗಳು ಕಾದಿರುವುವು ಇಂದು ಮತ್ತೆ ಕೇಳಲು
ಆ ನಿನ್ನ ಮಾತುಗಳನು
ಮನನೊಂದೆ ನಾನಿಂದು
ಮೆಲುಕು ಹಾಕುತ್ತಾ ಆ ನಿನ್ನ ಮಾತು
- ರಘು
30 Dec 2017, 09:55 pm