Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕಾರ್ಮೋಡ ಕವಿದಿದೆ
ಸೋನೆಯಾಗಿ ಸುರಿದಿದೇ
ಹರುಶದಿ ಮನ ತುಂಬೀ ತಣಿದಿದೆ
ಎಲೆ ಚಿಗುರು ಬಯಕೆಯ ತೀರಿ ನಲಿದಿದೆ
ಮಳೆ ಬಂದಿದೇ, ಮಳೆ ಬಂದಿದೆ
ಭೂರಮೆಯ ಚುಂಬಿಸಿ ಹರಿದಿದೇ
ತಕಥೈ,ತಕಥೈ ಕುಣಿದಿದೇ
ಮಯೂರ ಮನವು ತಣಿದಿದೆ
ಮಾಮರದಲಿ ಕುಳಿತು ನಲಿದ
ಕೋಗಿಲೆಯೋ ಯದೆತುಂಬೀ
ಹಾಡಿದೆ, ಕವಿ ಮನವ ಕೆಣಕಿದೆ.....ಡಿ.ಸಿ....
- ಡಿ.ಸಿ.ನಾಗೇಶ್
08 Nov 2017, 09:17 am
ನಂಬಿಕೆ ಮರಾಟಕ್ಕಿದೆ
ಕೊಳ್ಳುವವರಿಲ್ಲದೆ ಕೊಚ್ಚೆಯಲ್ಲಿ ಬಿದ್ದಿದೆ
ಯಾರಿಗೂ ಬೇಕಿಲ್ಲದೆ
ಬಣ್ಣ ಕಳೆದುಕೊಂಡು ಬಡವಾಗಿದೆ.
ಸುಳ್ಳುಕೋರರ ಸಂತೆಯಲ್ಲಿ,
ಬೋರಲು ಬಿದ್ದು ಹೆಣವಾಗಿದೆ.
ಹೆಣ ಹೊರುವ ಬುಜಗಳಿಗೆ
ಹೊರಲಾರದಷ್ಟು ಮಣ ಭಾರವಾಗಿದೆ.
ಸ್ನೇಹಿತರ ನಡುವೆ ನೀತಿಗೆಟ್ಟು
ನಯವಂಚನೆಯ ಮಂಚದಲ್ಲಿ ಮತಿಗೆಟ್ಟು
ಹೊರಳಾಡಿದೆ,
ದುಷ್ಟ ದುರುಳರ ಸಂಗವ ಮಾಡಿ
ದಾರಿ ತಪ್ಪಿ ಎಲ್ಲೆಲ್ಲೋ ನರಳಾಡಿದೆ.
ಬೆಲೆ ಕಳೆದುಕೊಂಡ ನಂಬಿಕೆ
ನೆಲೆ ಇಲ್ಲದೆ ಅಲೆಯುತ್ತಿದೆ ಚೆಂದಕೆ
ಬೇಕಿಲ್ಲ ಯಾರಿಗೂ, ಉಳಿಸಿಕೊಳ್ಳುವ ಹಂಗಿಲ್ಲ
ಅದಕ್ಕಾಗಿಯೇ ನಂಬಿಕೆ ಯಾರಲ್ಲೂ
ಇದುವರೆಗೂ ತಂಗಿಲ್ಲ !
- ಶ್ರೀಗೋ.
07 Nov 2017, 09:47 pm
ಬಾ ನೋಡು ಗೆಳತಿ
ನಿನ್ನ ಕನಸಲಿ ಇನ್ಮೇಲೆ ಬರುವುದು ನನ್ನದೇ ಸರತಿ.
ಇರುಳಲಿ ಇರುವ ಚಂದಿರನಿಗೂ ಹೊಟ್ಟೆಕಿಚ್ಚು
ನಿನ್ನ ಕಂಗಳಲಿ ಬರಲು ಮಾಡುತಿರುವನು ಸಂಚು.
ಕರಿ ಮೋಡಗಳ ಮರೆಯಲ್ಲಿ ಮರೆಯಾಗುವ ತಾರೆಯಂತೆ ನಾ
ಸುರಿವ ಸೋನೆಯ ಹನಿಯಂತೆ ಇರಲೆ ನಾ.
ನಿನ್ನ ಕಿವಿಯಲಿ ಹೇಳಲೆ ನನ್ನ ಒಂದು ಆಸೆಯ ಪಿಸುಮಾತು
ನಿನ್ನ ಸನಿಹದಲಿ ಹೇಳಬೇಕು ಮೌನದ ಮಾತೊಂದು ತುಸು ಕೂತು.
ನಿನ್ನ ಕಾಲ್ಗೆಜ್ಜೆಯ ಜತೆ ಹೆಜ್ಜೆ ಹಾಕುವ ಹುಚ್ಚು ಬಯಕೆ ನನ್ನದು
ನಡುದಾರಿಯಲಿ ಮಂಡಿಯೂರಿ ಹೇಳುವೆ ನನ್ನ ಮನದ ಕೋರಿಕೆ ಇಂದು.
- ಉಮೇಶ್.
- Umesh
07 Nov 2017, 08:14 pm
ನೆನಪುಗಳ ದಾರಿಯಲ್ಲಿ ನೋವುಗಳ
ಜಾರಿಬಿಟ್ಟು ಏಕೆ ನಡೆದಿರುವೆ ಸುಮ್ಮನೆ...?
ನಗುವಿನ ಛಯೆ ನಿನ್ನಲ್ಲಿಟ್ಟು
ಬೆಳದಿಂಗಳ ಸೊಬಗು ಅಕಾಶಕ್ಕಿಟ್ಟು ಏಕೆ ನೀ ಮೌನಿಯಾಗಿರುವೆ ಆ ಮಾತಿಲ್ಲದ ಮೌನಕ್ಕೆ ಸ್ನೇಹಿತನಾಗಿ...?
- ಚುಕ್ಕಿ
07 Nov 2017, 06:57 pm
ಈ ಅಂಭರದಿಂ ಆ ಅಂಭರದಿಂ
ಅಂಭರದೊಂದಾಚೆಗೆ,
ಸಗ್ಗವೇ ನಾಚುವ ಲೋಖವಿದೆ
ಅಲ್ಲೀ.........
ಜಠಿಲ ಕಾನನಗಳ ಹೊಳಪಿದೆ
ಸ್ವಚ್ಛ ಸಿಹಿನೀರಿಂದ ತುಳುಕಿದೆ
ನದಿ,ಜರಿ,ತೊರೆಗಳಲ್ಲಿ ಇಂಪ ಧನಿಯಿದೆ
ಹುಲ್ಲು ಹಾಸಿದ ಶಿಖರಗಳ ಸಾಲಿದೆ
ಕಣ್ಣರಳಿಸುವ ಹೂ. ತೋಟಗಳ ಬೀಡಿದೆ
ರೆಂಬೆ,ಕೊಂಬೆಗಳಲಿ ಬಯಸಿದ ಫಲವಿದೆ
ಹಕ್ಕಿ-ಪಕ್ಕಿಗಳ ಲಯವಾದ ಹಾಡಿದೆ
ನೀರಲ್ಲೆಲ್ಲಾ ಜಲಚರಗಳ ಸಂತಸದ ಆಟವಿದೆ
ಅಲ್ಲಲ್ಲೊಂದು ಹುಲ್ಲೆಂಚ ಮನೆಗಳಿದೆ
ಒಮ್ಮೆ ಅಲ್ಲಿಗೆ ಹಾರೋಣವೇ
ನೀನು ನನ್ನೊಡನೆ ಬರುವೆಯಾ
ಓ ಗುಬ್ಬಿ ಮರಿ, ಇಲ್ಲಾಗುತ್ತಿಲ್ಲವೇ
ನಾ ಉಳಿಯಲು, ನಿನ್ನುಳಿಸಲು........ಡಿ.ಸಿ..
- ಡಿ.ಸಿ.ನಾಗೇಶ್
07 Nov 2017, 06:41 pm
ಕಂಕಳಲಿ ಮಗು
ಬಿಕ್ಕಿ,ಬಿಕ್ಕಿ ಅಳುತಿದೆ
ಕುಡಿಯಲು ಹಾಲಿಲ್ಲ
ನಿಲ್ಲಲು ನೆರಳಿಲ್ಲ
ಆದರೂ.....
ಅಮ್ಮನ ತೆಕ್ಕೆಯ ಮರೆತಿಲ್ಲ
ಮೃಷ್ಟಾನ್ನವ ಬಸಿದು
ಬಿಸಾಡುತಿಹರು ತಿಪ್ಪೆಗೆ
ತುತ್ತನ್ನ ನನಗಿಲ್ಲ
ನಂಬಿಕೆಯುಂಟು ನನ್ನವ್ವ
ನನ್ನ ಮರೆತಿಲ್ಲ, ಮರೆಯೊಲ್ಲ
ದಾರಿಹೋಕರು ನಾವು
ದಾರಿಯೇ ತಿಳಿದಿಲ್ಲ ಎಲ್ಲಿಗೆಂದು
ಗುಡಿಮಂಟಪ ಮರದಡಿಯೇ ಹಾಸಿಗೆ
ಹೇಳಲು ಊರಿಲ್ಲ, ಕೂರಲು ಸೂರಿಲ್ಲ
ಆದರೂ.........
ಅಮ್ಮನ ಕೈಹಿಡಿದು ನಡೆಯುವುದು
ಮರೆಯೊಲ್ಲ, ಮರಿತಿಲ್ಲ
ಕಣ್ಣು ಮಂಪರಾಗುತಿದೆ
ಕರುಳಿನ ಬೇನೆಗೆ
ತಡೆಯಲಾಗುತ್ತಿಲ್ಲ ಸಿರಿವರ
ಬಿಸಿಲ ಧಗೆಗೆ
ಬೇಯುತಲೂ, ನಲಿಯುತಿಹೆವು
ನಿನ್ಗೆಲುವಲಿ...
ನಿನ್ನಾ ಆಶಾಕಿರಣ ಎಂದುದಯಿಸುವುದೋ
ನಮ್ಮ ಬಾಳನೆಂದು ಬೆಳಗುವುದೋ
ಆದರೂ......
ಚಿಂತೆಯಿಲ್ಲ, ಮಕ್ಕಳ ಮರೆತು ತಾಯಿ
ನಿದ್ರಿಸುವುದು ನಾನೆಂದು ಕಂಡಿಲ್ಲ.......ಡಿ.ಸಿ..
- ಡಿ.ಸಿ.ನಾಗೇಶ್
07 Nov 2017, 06:41 pm
ದೇಶದ ಹಿತಕಾಗೆ
ಆ ನಿನ್ನ ನಗು
ಇಂಪಾದ ನಗು
ಶತ್ರುವಿನ ಗುಂಡಿಗೆ ಸೀಳಿದ
ಆ ನಿನ್ನ ನಗು
ಹಿಗ್ಗದ, ಕುಗ್ಗದ,ಜಗ್ಗದ ನಗು
ರಕ್ತ ಚಿಮ್ಮಿಸುವ
ಆ ನಿನ್ನ ನಗು
ಭರವಸೆಯ ನಗು
ಬೆಟ್ಟ,ಗುಡ್ಡಗಳ ಬಾಚಿತಬ್ಬಿದ
ಆ ನಿನ್ನ ನಗು
ಹಿತದ ನಗು
ಕಂಗಾಲಲಿ ಕಣ್ಮುಚ್ಚಿ ನಿದ್ರಿಸದ
ಆ ನಿನ್ನ ನಗು
ಘರ್ಜಿಸಿ ಹಿಮ್ಮೆಟ್ಟಿದ ನಗು
ಸರ್ವವೂ ಮರೆತು, ನಾಡ್ಗೆ ಅರ್ಪಿಸಿದ
ಆ ನಿನ್ನ ನಗು
ಜಯದ ನಗು
ಯೋಧನೇ ನಿನ್ನ ನಗು
ಭಾರತಾಂಬೆಯ ಚಿರನಗು.....ಡಿ.ಸಿ..
- ಡಿ.ಸಿ.ನಾಗೇಶ್
07 Nov 2017, 06:37 pm
ಭಯ
ಬಿಡುಗಡೆಯ ಹಾದಿಗೆ
ಕಾಯುತಿದೆ ಎನ್ನ ಮನವು
ಅವಳ ಒಲವ ಯಾತನೆಯ
ಸರಪಳಿಯಿಂದ| ನಾ
ಬಿಡುಗಡೆಯಾದರೆ
ಅವಳ ಪಾಡೇನು ಎಂಬ ಭಯ||
✍ಅನಿಲ್ ಕುಲಕರ್ಣಿ
- ಅನಿಲ್ ಕುಲಕರ್ಣಿ
07 Nov 2017, 06:27 pm
ಅವನು ಕವಿತೆಯಾಗಿದ್ದರೆ ಬರೆದು ಮುಗಿಸುತ್ತಿದ್ದೆ ,ಅವನಿನ್ನು ಮುಗಿಯದ ಕಥೆ ನಾ ಬರೆಯುತ್ತಲೆ ಇದ್ದೆನೆ ಪದಗಳು ಸಾಯುತ್ತಲೆ ಗೋರಿ ಸೆರುತ್ತಿದ್ದಾವೆ
✍ಶ್ರೀ
- saipreethi
07 Nov 2017, 11:20 am
ಕಾಗದದ ಮೇಲೆ ಬರಹಗಳನ್ನು ಗೀಚಿ
ಬರಹದಲ್ಲಿ ತುಂಬಿದ್ದಳು ಹೃದಯದಲ್ಲಿನ ಪ್ರೀತಿ.
ಪ್ರೀತಿ ಕಾಣದಂತೆ ಇಟ್ಟಿದ್ದಳು ಮರೆಮಾಚಿ
ದುರ್ಯೋಧನ ನೀರಿನಲ್ಲಿ ಅವಿತು ಕುಳಿತ ರೀತಿ||
ಮರೆತಿದ್ದಳು ಭೀಮನಂತ ಅಣ್ಣನಿರುವುದನ್ನು
ಹುಡುಕಿ ಎಳೆತಂದ ಪತ್ರದ ಜೊತೆ ಅವಳನ್ನು.
ಯಾರಿಗಾಗಿ ಈ ಪತ್ರ ಬರೆದೆ ಎಂದು ಗರ್ಜಿಸುತ
ನಿಧಾನವಾಗಿ ತೆರೆದನು ಅವಳು ಬರೆದಿದ್ದ ಓಲೆಯನ್ನು||
ನೋಡನೋಡುತ್ತಲೇ ಸೆಳೆಯಿತವನ ಅವಳ ಪ್ರೇಮ
ಬರಹ.
ಮರುಮಾತಾಡದೆ ಮಾಡಿ ಬಿಟ್ಟ ಅವರಿಬ್ಬರ ವಿವಾಹ||
- ನಾಗರಾಜ್
07 Nov 2017, 10:53 am