Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗಿಣಿ ರಾಮ

ಹಸಿರಾದ ಮರದಲ್ಲಿ
ಹಸಿರು ಗಿಣಿಯ ಗಾನ!!
ಹೆಸರೇನು ಕೇಳಲು ನಾನು
ನೀ ನುಡಿದೆ ರಾಮ ರಾಮ!!

ಕೆಂಪು ಕೊಕ್ಕಿನಿಂದ ನೀನು
ಇಂಪು ಮಾತನಾಡು ರಾಮ!!
ಕಣ್ಣು ಮಿಟುಕಿ ನೋಡುವುದೇಕೆ
ಅಯ್ಯೋ ರಾಮ ರಾಮ!!

ರೆಕ್ಕೆ ಬಿಚ್ಚಿ ಹಾರುವ ಮೊದಲು
ನೀ ಮುತ್ತ ನೀಡು ರಾಮ!!
ದೂರದಿಂದ ಬಂದೆ ನಾನು
ಮುದ್ದಿಸಲು ನಿನ್ನ ಗಿಣಿ ರಾಮ!!

- ಪಿ.ಜಿ.ಜ್ಯೋತಿ

01 Nov 2017, 08:24 pm

ಕಂದನಿಗಾಗಿ ತಾಯ ಹಂಬಲ

ಮೊಟ್ಟೆಯಿಂದ ಹೊರ ಬಂದ ಪುಟ್ಟ ಹಕ್ಕಿಗೆ
ಗುಟುಕು ನೀಡೋ ತಾಯಿ ಆಗೋ ಆಸೆ ಮನಸಿಗೆ!!
ರೆಕ್ಕೆ ಬರದೇ ಮುದುರಿ ಕುಳಿತ ಪುಟ್ಟ ಹಕ್ಕಿಗೆ
ರೆಕ್ಕೆ ಬಡಿದು ಹಾರ ಕಲಿಸೋ ಆಸೆ ಮನಸಿಗೆ!!

ಮಕ್ಕಳಿಲ್ಲ ಎಂದು ಕೊರಗೋ ತಾಯ ಮನಸಲಿ
ಮಮತೆ ತುಂಬಿ ಹರಿದಿದೆ ಕೂಸು ಕಾಣದೇ!!
ಮಡಿಲು ಬರಿದಾದರೂ ಮಮತೆ ಬರಿದಾಗದು
ಕಂದ ನೀ ಬಾ ಇಲ್ಲಿ ತಾಯಿ ಮಡಿಲು ಕಾದಿದೆ!!

ಬರಡು ಮರಕೆ ಚಿಗುರುವಂತಹ ಆಸೆ ಮನದಲಿ
ಎಲೆಗಳೇ ಇರದೇ ಆ ವಸಂತ ಹೇಗೆ ಕಾಣಲಿ!!
ಬರಡು ಮಡಿಲು ನಗುವ ಮಗುವ ಬೇಡಿ ಕಾದಿದೆ
ಬಾರದಿರುವ ಮಗುವ ನಾ ಹೇಗೆ ಕಾಣಲಿ!!

- ಪಿ.ಜಿ.ಜ್ಯೋತಿ

01 Nov 2017, 08:17 pm

ಬಿರಿದ ಹೂವಿನ ಮೇಲೆ

ಬಿರಿದ ಹೂವಿನ ಮೇಲೆ
ಬರೆದೆ ನಿನ್ನಯ ಹೆಸರು!!
ಅರಳಿ ನಗುತಿರೆ ನೀನು
ಸಂತಸದ ಸವಿ ಜೇನು!!

ನಿದಿರೆಯಲ್ಲಿ ಕಂಗೆಟ್ಟ
ಕನಸಿನಲ್ಲಿ ನೀ ಬಂದೆ!!
ನೀ ನಿಂತು ನಗುತಿರೆ
ಸಂತಸದ ಹೂ ಮಳೆ!!

ಅಳಬೇಕು ಎಂದು ಎನಗೆ
ಅನಿಸಿದರೂ ಅಳಲಾರೆ!!
ಜೊತೆಯಾಗಿ ನೀ ಇರಲು
ಸಂತಸದ ಸವಿಗಡಲು!!

- ಪಿ.ಜಿ.ಜ್ಯೋತಿ

01 Nov 2017, 08:07 pm

ನೋಂದ ಮನಸ್ಸಿನ ಮುಗ್ದ ಮನಸ್ಸು

ನನ್ನತ್ತ ನಾ ಹೋರಟಾಗ
ಅರಳಿದ ಗುಲಾಬಿ ಹೂ ಒಂದ ಕಂಡೆ
ಆದರೆ ಅದರ ಸುತ್ತಲೂ ಮುಳ್ಳಿರುವುದನ್ನ
ಲೆಕ್ಕಿಸದೆ ಮನಸೋತೆ
ಪ್ರತಿ ಕ್ಷಣ ಕ್ಷಣಕ್ಕೂ ಮುಳ್ಳು ಚುಚ್ಚಿದಾಗಲೋಮ್ಮೆ ಯವ್ವನ ಪ್ರಶ್ನಿಸುತ್ತಿದೆ ಉತ್ತರಿಸದೆ ಸುಮ್ಮನೆ ಮೂಕನಾಗಿ ಕುಳಿತಿರುವೆ ಮೂಕನಾಗಿ ಕುಳಿತಿರುವೆ

- ಬಾಲು ಶಿರಗುಂಪಿ

01 Nov 2017, 07:07 pm

ನೆನಪು

ಭಾವನೆಗಳ ಮೆಲುಕು
ನೈಜ್ಯ ದೃಶ್ಯಗಳ ತುಣುಕು
ಕಳೆದ ಜೀವನದ ಚಿತ್ರಣ
ಮರುಕಳಿಸುವ ಮನದಂಕಣ
ಸಿಹಿ ಕ್ಷಣಗಳ ಸವಿ ಸಿಂಚನ
ಕಹಿ ಕ್ಷಣಗಳ ಕಟು ಚಿಂತನ
ಜೀವನದ ಅನುಭವಗಳ ಬುತ್ತಿ
ಭಾವನಾ ಲೋಕದ ಮಳೆಬಿಲ್ಲು
ನೆನಪೇ....ನೀ...ನೆನಪಿಸುತ್ತಾ...
ನೆನಪಿನಲ್ಲಿರು........
                                            
                                                 -  ಮೋಹನ

- ಮೋಹನ್ ಕುಮಾರ್ ಎನ್

01 Nov 2017, 04:57 pm

ಕನ್ನಡ ಸವಿಗನ್ನಡ.....

ಕನ್ನಡಾಂಭೆಯ ಕೀರ್ತಿಯ ಕಳಶವು ಕನ್ನಡ
ಶರಣರ ಜ್ಞಾನ ದೀಪವು ಕನ್ನಡ
ಕವಿಗಳ ಕಲ್ಪನಾ ಲೋಕವು ಕನ್ನಡ
ವಚನಾಕಾರರ  ದಿವ್ಯ ಸಾಹಿತ್ಯವು ಕನ್ನಡ
ದಾಸರ ಸಾತ್ವೀಕ ಸವಿ ನುಡಿಯು ಕನ್ನಡ
ಸಾಹಿತಿಯ ಸಿರಿವಂತಿಕೆಯು ಕನ್ನಡ
ವೀರ ಕಲಿಗಳ ಅಮರ ಜ್ಯೋತಿಯು ಕನ್ನಡ
ಜನಪದ ಶೈಲಿಯ ಸೊಗಡು ಕನ್ನಡ
ಕಲೆಗಾರರ ಅದ್ವಿತೀಯ ಕೌಶಲ್ಯವು ಕನ್ನಡ
ಗಿರಿವನಗಳ ಸಮೃದ್ಧಿಯ ಸಂಪತ್ತು ಕನ್ನಡ
ಗಾನ ಕೋಗಿಲೆಗಳ ಸುಮಧುರ ಸ್ವರವು ಕನ್ನಡ
ನದಿಝರಿಗಳ ಸಡಗರದ ಸೊಬಗು ಕನ್ನಡ
ಕನ್ನಡಿಗರ ಹೃದಯ ಮಿಡಿತವು ಕನ್ನಡ
ಕನ್ನಡ....ಸವಿಗನ್ನಡ......

                                                  - ಮೋಹನ

- ಮೋಹನ್ ಕುಮಾರ್ ಎನ್

01 Nov 2017, 04:50 pm

ಕವನಗಳು

ನೋಡಿದೆನು ಮೊದಲನೆಯ ದಿನ
ಇಷ್ಟಪಟ್ಟೆನು ಎರಡನೆ ದಿನ
ಮಾತನಾಡಿಸಬೇಕೆನಿಸಿತು ಮರುದಿನ
ನೀನು ಸಿಗುವೆ ಯಾವದಿನ ......

ಕನಸು ತುಂಬಾ ಕರುಣೆಇರಲಿ
ಮನಸು ತುಂಬಾ ಮಮತೆ ಇರಲಿ
ತುಟಿತುಂಭಾ ನಗುಇರಲಿ
ನೀನು ಖಂಡಾಗ ನನ್ನ ನೆನಪಿರಲಿ
ಕುಂತರು ನಿಂತರು ನಿನ್ನದೆ ನೆನಪು ಗೆಳತಿ ......

ಹಕ್ಕಿ ಇದರೆ ಹಾರಿ ಭಾ
ನದಿ ಇದ್ದರೆ ಹರಿದು ಭಾ
ನನ್ನ ಮೇಲೆ ಪ್ರೀತಿ ವಿಶ್ವಾಸ
ಇದ್ದರೆ ನಾ ಕರೆದಲಿ ಬರುವೆಯಾ.........

ಆಕಾಶದ ತುಂಬಾ ನಕ್ಷತ್ರಗಳು ಕಂಡೆ
ಅದರಲ್ಲಿ ಒಂದನ್ನು ಮಾತ್ರ ಆರಿಸಿಕೊಂಡೆ
ಆ ನಕ್ಷತ್ರದ ಅಮೂಲ್ಯವಾದ ಸ್ನೇಹ ಬೆಳಸಿಕೊಂಡೆ
ಆ ನಕ್ಷತ್ರ ನಿನಾಗಿರುವೇ ಎಂದು ಕೊಂಡೆ ಗೆಳತಿ...
ಇಂತಿ ನಿಮ್ಮ ಪ್ರೀತಿಯ (ಹುಚ್ಚಲಿಂಗೇಶ ಭಾವಿಕಟಿ)

- ಮುತ್ತು ಭಾವಿಕಟಿ

01 Nov 2017, 04:29 pm

ನೋಂದ ಮನಸ್ಸಿನ ಮುಗ್ಧ ಮಾತು

ಓ ನನ್ನ ಗೆಳತಿ ಮತ್ತೆ ಬರಬೇಡ ಬಾಳಲ್ಲಿ
ನಿನಗೆ ಕೊಡುವದಕ್ಕೆ ಮತ್ತೊಂದುಹೃದಯವಿಲ್ಲ
ಸತ್ತು ಹುಟ್ಟಿ ಬಂದಿರುವೆ ಸಾಧನೆ ಮಾಡಲು
ಸಾಧನೆ ಮಾಡಿ ಸಾಧಕನಾಗಲು ಗೆಳತಿ..........

- ಬಾಲು ಶಿರಗುಂಪಿ

01 Nov 2017, 03:44 pm

ಮುಖ ತೋರದ ಚೆಲುವೆ

ನಿನ್ನ ಮುಖವ ನೋಡಲು ತಡವಡಿಕೆ ನನಗೆ...
ಮುಖಕ್ಕಿಂತ ,ಒಳಮನಸ್ಸಿನ ಸೌಂದರ್ಯದ ಫಲಾನುಭವಿ ನಾನು..
ನಿನ್ನ ಮುಖವ ನೋಡದೆ ಮೋಹಿಸಿದವನು ನಾನು....
ನಿನ್ನ ಮುಖದ ಯೌವ್ವನದ ಮೊಡವೆಯ ತೋರುವೆಯಾ??

ನಿನ್ನ ಸಿಟ್ಟನು ಕೊಂಡುಕೊಳ್ಳುವ ಗ್ರಾಹಕ ನಾನು..
ನಿನ್ನ ಮನಸನ್ನು ಪೀಡಿಸುವ ಪಿಶಾಚಿ ನಾನು...
ನಿನ್ನ ಕನಸಲಿ ಬರಬೇಕೆನ್ನುವ ಆಸೆಬುರಕ ನಾನು...
ನಿನ್ನ ತೋಲಲಿ ಮಲಗಿ ಕಥೆ ಹೇಳಬೇಕೆನ್ನುವ ಕಥೆಗಾರ ನಾನು..

ಒಬ್ಬರನ್ನು ಪ್ರೀತಿಸಿ ಮೊಸಹೋದವನು ನಾನು..
ಮೊಸಹೋದರು ಆಶಾಭಾವನೆಯನು ಹುಡುಕುತಿರುವವನು ನಾನು
ಪ್ರೀತಿಯ,ಸೊಗಸಾದ ಕನಸನು ಕಾಣುತಿರುವವನು ನಾನು..
ಆ ಕನಸಿಗೆ,ಪ್ರೇಮದ ನನಸನು ಮಾಡುವಿಯಾ ?ಮುಖತೋರದ ಚೆಲುವೆ..!!!!

- ಆರ್. ಎಸ್ .ಸುಗ್ಗಿ

01 Nov 2017, 02:32 pm

ಕಳೆದು ಹೋದ ಕನ್ನಡ

ಕನ್ನಡ ಕರುಳಿನ ಕೂಗು
ಕೇಳಿ ಒಂದಿಷ್ಟು ನಿಂತು,
ಕನ್ನಡವ್ವನ ಹೊರ ಹಾಕಿ
ಕಂಗ್ಲಿಷರಾಣಿ ಹೃದಯ ಸಿಂಹಾಸನದಲಿ ಕುಳ್ಳಿರಿಸಿ ಕನ್ನಡ ಉಳಿಸಿ ಉಳುಸಿ
ಎಂದೆದೆಯ ಬಡಿದುಕೊಂಡು ವರು ನೂರಾರು ಜನ
ಅಂದು,ಕನ್ನಡ ಸತ್ಯ ಕನ್ನಡ ನಿತ್ಯ ಎಂದರು
ಇಂದು, ಕಂಗ್ಲಿಷ್ ಸತ್ಯ ಕಂಗ್ಲಿಷ್ ನಿತ್ಯ ಎಂದರು
ಅಂದು, ಕನ್ನಡಕ್ಕಾಗಿ ಕೈಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂದರು
ಇಂದು, ಕಂಗ್ಲಿಷಕ್ಕಾಗಿ ಕೈಎತ್ತಿ ಕೈತುಂಬಾ ಕಾಸು ಮಾಡಿಕೊಂಡರು

- Revanasidda Goudar

01 Nov 2017, 02:22 pm