ಕೊರಗಿದೆ ಮನಸು ನಿನದೆ ನೆನಪಲಿ
ದಿನಾ ನಿನ್ನ ನೋಡುವೆ ಯಾವೋದೊ ಒಂದು ನೆಪದಲಿ
ಎಣಿಸಲಾರದಷ್ಟು ಕನಸ ಕಂಡಿರುವೆ ನಿನ್ನ ನೆನಪಲಿ
ಸಹಿಸಲಾರದಷ್ಟು ನೋವು ಅನುಭವಿಸಿದೆ
ನೀ ಇಲ್ಲದೆ ನನ್ನ ಈ ಬಾಳಲಿ
"ನನ್ನ ಕನಸ್ಸಲ್ಲಿ ಬಂದವಳು.
ನೇಸರದ. ಮಗಳಿವಳು.
ಕಪ್ಪೆ ಚಿಪ್ಪಿನಂತ ಹುಬ್ಬವಳು.
ನೇರಳೆಯ ಕಣ್ಣವಳು.
ದಾಳಿಂಬೆ ಹಣ್ಣಿನ ಹೆಸಳಿನಂತ ತುಟಿಯವಳು"
" ನನ್ನ ಉಸಿರಲ್ಲಿ ಬೆರೆತವಳು.
ಮನಸ್ಸನ್ನು ಕದ್ದವಳು.
ಹ್ರುದಯಾನ ಗೆದ್ದವಳು.
ಚಂದಿರನ ಮಡಿಲಲ್ಲಿ ಮಲಗಿಹಳು.
ಮಂಜಲ್ಲಿ ಬೆರೆತಿಹಳು "
"ಹನಿಯಾಗಿ ಧರೆಗಿಳಿಯಲು
ತುದಿಗಾಲಿನಲಿ ನಿಂತಿಹಳು.
ನನ್ನ ಮನಸ್ಸನ್ನು ಕದಿಯಲು ಬಾನಿನಂಗಳದಿ
ಬಣ್ಣದ ಕಾಮನ ಬಿಲ್ಲನ್ನು ಮೂಡಿಸಿಹಳು.
ಧರೆಗಿಳಿವೆ ಎಂದು. ಸಂದೇಶವನ್ನು
ಮಿಂಚಾಗಿ ಕಳಿಸಿದಳು "
"ಹನಿಯಾಗಿ ಬಂದು ಧರೆಯಲ್ಲಿ ನಿಂದು
ಪ್ರೀತಿಯೆಂಬ ಮೊಳಕೆಯನ್ನು ತಂದು
ಚಿಗುರೊಡೆದ ಗಿಡದ ಉಸಿರಾಗಿ ಬೆರೆತಳು.
ನೇಸರದಲ್ಲಿ ಕಲೆತಿಹಳು.
ನನಗಾಗಿ ಕಾದಿಹಳು // ನನ್ನವಳು //
ಗಗನತಾರೆ ನಿನ್ನ ನೋಡಿ ಮನಸು ಮೆಚ್ಚಿದೆ
ರಾಜಕೀಯ ವಲಯದಲ್ಲಿ ಅವಿನೀತಿಯ ಖಂಡಿಸಲೆಂದು ಹೋರಟ ನಿನ್ನ ಉಸಿರ ಲೇಖನ
ರಚಿಸಿದೆ ನಾವೆಂದಿಗೂ ಮರೆಯದಂತ ನಿನ್ನ ಜೀವನ ಶಾಸನ......................
ಇಲ್ಲದಿರಬಹುದು ನೀನಿಂದು ಈ ದುರ್ಜನರ ಮಧ್ಯದಲ್ಲಿ ಆದರೆ ನಿನ್ನ ನೋವಿಗೂ ನಲಿವಿಗೂ ಸ್ಪಂದಿಸಿದ ನಿನ್ನ ಪ್ರತಿಯೊಂದು ಹೆಜ್ಜೆಗುರುತಿಗೆ ಮಣ್ಣಾಗಿ ನಿನ್ನ ಹಿಂಬಾಲಿಸಿದ ಅಭಿಮಾನಿಗಳ ಹೃದಯದಲ್ಲಿ ನೀನೆಂದಿಗೂ ಜೀವಂತ............
ಕೊಂದಿರಬಹುದು ಒಂದು ಕಿಡಿಗೇಡಿಯ ಗುಂಡೇಟು ನಿನ್ನನ್ನು ಏಡಿಯಾದ ಗುಂಡು ನಿನ್ನ ಕಣ್ತಪ್ಪಿ ನಿನ್ನ ಶರೀರವ ಸೇರಿದೆ ಆದರೆ ಪರಿಶುದ್ಧ ಆತ್ಮವನ್ನಲ್ಲ ಎದೆಂದಿಗೂ ಅಜರಾಮರ ಗೌರಿ........
ಹೇಳಲಾಗದ ಮಾಂತೊದ ಹೇಳಲು
ಚಡಪಡಿಸುತ್ತಿದೆ ಈ ಗುಂಡಿಗೆ
ಜಗದೋಳಗೆ ಏನೇ ನಡೆದರು
ಗೊತ್ತಾಗದು ಈಗ ನನಗೆ
ನೀ ಆಶಾಕಿರಣವಾಗು ನನ್ನ ಈ ಬಾಳಿಗೆ
ನಿನ್ನ ನೋವೆಲ್ಲ ಇರಲಿ ನನಗೆ
ನಗು ನಗುತ ಇರು ನೀ ಎಂದು ಹೀಗೆ