ಕಂಬನಿಯನು ಕರಗಿಸಿ ಮಂಜಾಗಿಸಲೆ
ನನ್ನ ಪ್ರೀತಿಯ ಸಾಕ್ಷಿಗೆ,
ಮುಸುಕಿದಾ ಮಂಜಲಿ ಹುಡುಕುತಾ ಬಾರೆ
ಕಾಯುತಲಿರುವೆ ಕೊನೆಯವರೆಗೆ,
ಸೂರ್ಯನ ಬೇಡಿ ಮಂಜನು ಕರಗಿಸಿ
ನಾನೆ ಅರಸಿ ಬರುವೆ ಸಿಗುವೆಯ ಒಲವೆ,
ಮುನಿಸೇನೊ ನಿನಗೆ ಮುಸುಕಿದೆ ಮೋಡ
ಮಳೆಯಾದರೀಗ ಕರಗೀತೆ ಗಾಢ ಮೌನ,
ಮೌನವೆ ಸಮ್ಮತಿ ಎಂದುಕೊಳ್ಳಲೆ,
ಮೌನವೆ ಅಂತ್ಯ ಎಂದುಕೊಳ್ಳಲೆ,
ಅರಗಿಸಿಕೊಳ್ಳಲಾಗದ ಸತ್ಯಕ್ಕೆ
ನನ್ನ ಅರೆಜೀವವಾಗಲೆ ಹೋಗಿದೆ,
ಜಗವೇಕೆ ಬೇಡವೆನಿಸಿತು ನಿನಗೆ
ನನ್ನ ನೆನಪಾಗಲಿಲ್ಲವೆ,
ನೀನಿಲ್ಲದ ಬದುಕು ಇನ್ನೇಕೆ,
ನಾನು ನಿನ್ನೊಡನೆ ಬರುವೆನೆಂದುಕೊಂಡರು,
ನೀ ಬರೆದಿಟ್ಟ ಹಾಳೆಯ ಪದಗಳು
ಕಟ್ಟಿ ಕೂರಿಸಿವೆ ನನ್ನ,
ಇದ್ದರೆ ನನಗೆ ಇನ್ನೊಂದು ಜನ್ಮ
ನಿನಗಾಗೆ ಕಾದಿರುವೆ,
ಒಂಟಿಯಾಗಿರುವೆ ನಾ, ಮತ್ತೆ ಬರುವೆಯಲ್ಲವೆ...!
ರೆಕ್ಕೆ ಇರದ ನಾನು ಮೂಕವಿನ್ನು
ನಗುವ ತುಂಬಿ ಹಾಡಲಾಗದ ಹಕ್ಕಿ ನಾನು
ಹಾರಿ ಹುಡುಕಿ ಹೆಕ್ಕಿ ತಿನ್ನುವಾಸೆ ಸುಳ್ಳಾಯಿತೇನು
ದೂರ ಸಾಗುವ ಆಸೆ ಬಹು ದೂರವಿನ್ನು
ನನಗೇನೆ ನಾನು ಭಾರವಾದೆನು
ಆಗಸವು ಕನಸಷ್ಟೆ ಉಸಿರೋಗುವವರೆಗೆ ಇನ್ನು
ಕೆಟ್ಟ ಮರೆವು , ಒಳ್ಳೆ ನೆನಪು
ಎಂದೂ ಗೆಳೆಯರಲ್ಲ
ಮರೆತು ಹೋದ ಗಳಿಗೆಯನು
ನೆನಪು ಜಪಿಸುತಿಲ್ಲ
ನೆನೆಯುವ ಹಿತ ಕ್ಷಣವನು
ಮರೆವು ಅಳಿಸಿತಲ್ಲ
ನೆನಪು ಉಳಿಯುವುದು ಮರೆಯುವರೆಗು
ಮರೆವು ಇರುವುದು ನೆನಪಾಗುವವರೆಗು
ಮರೆವು ನೆನಪು ಎಂದೂ ಸ್ನೇಹಿತರಲ್ಲ
ಅವರಿಲ್ಲದೆ ಜೀವನ ಮುಂದೆ ಸಾಗುವುದಿಲ್ಲ
ಯಾರು ನೀನು ಮಾಯಾವಿ
ಎಲ್ಲಿ ಕದ್ದೆ ಮನಸಿನ ಮನೆಯ ಛಾವಿ
ಎದೆಯಲಿ ತುಂಬಿದೆ ಸಿಹಿ ಪ್ರೀತಿಯ ಸವಿ
ನಾನಿನ್ನ ಸೇರುವ ಮುನ್ನ ನಾನಾದೆ ನಿನ್ನಾಸೆ ಬಟ್ಟಲಿಂದ ಆವಿ
ಮನಸ ತುಂಬಿದ ನೋವುಗಳೇ ಪ್ರೀತಿಗೆ ಬಳುವಳಿ
ನೆನ್ನೆಗಳ ನೆನಪಲಿ ನಡೆಯುತಿದೆ ಎದೆಯಲಿ ಚಳುವಳಿ
ಅರುಕು ಮುರುಕು ಭಾವಗಳೆ ಜೀವಕಿನ್ನು ಉಸಿರು
ಮನಸಿಗಿಲ್ಲ ಇನ್ನೂ ಸಹಜ ನಗುವಿನ ಅಲಂಕಾರದ ತಳಿರು
ಹೊರಟದ್ದಾಗಿದೆ ಈ ನನ್ನ ಮನಸು ಗೂಡ ತೊರೆದು
ನೋಡಲಾರದೆ ಹೋದೆ ನೀನು ಮನಸಿನ ಕಣ್ಣ ತೆರೆದು
ಬದುಕಬೇಕು ಬಣ್ಣವಿರದ ಕನಸಿಗೆ ತೇಪೆಯ ಬಣ್ಣ ಬಳಿದು
ಬಚ್ಚಿಡಬೇಕು ಆಸೆ ಕನಸುಗಳ ಎದೆಯಾಳದಲಿ ಕನ್ನ ಕೊರೆದು
ಸ್ವಾತಿ ಮುತ್ತಿಗಾಗಿ ಬರದೆ ಪ್ರೇಮದ ಸಂದೇಶ
ಕಣ್ಣಂಚಿನಲಿ ನೋಟದ ನಗೆ ಬೀರಿ
ಬಂಧಿಸಿದಳು ಹೃದಯ ಅಂತರಾಳದಲ್ಲಿ
ಏನೋ ಹರುಷದಲ್ಲಿ ತೂಗುತ್ತಿತು ಪ್ರೀತಿಯ ಜೋಕಾಲಿ
ಈಗೇ ಸಾಗುತ್ತಿರುವಾಗ ಹರಿದು ಬಂತು ಪ್ರೀತಿಯ ಆದೇಶ
ಮನಸ್ಸು ಒಪ್ಪಲಿಲ್ಲ ಆವಳ ಉಪದೇಶ
ಅದಕ್ಕೇ ಬಿಟ್ಟು ಆರಿಸಿದಳು ಹೊರದೇಶ
ಪ್ರೀತಿ ಹಾ(ಆ)ರಿ ಹೋಯಿತು ಆ ದೇಶಕ್ಕೇ
ಆದರೂ ನೆನಪುಗಳಿಂದ ನೆನಯುತ್ತಿರುವೇ ಸ್ವಾತಿ ಮಳೆಯಲ್ಲಿ....
ಎ ಜಿ ಶರಣ್