Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನವಳು

ನವಿಲಿಗೂ ನಾಚಿಕೆ ತರಿಸುವ
ಸೊಬಗಿನವಳು...

ಜಿಂಕೆಗೂ‌ ಅಸೂಯೆ ಮೂಡಿಸುವ
ಕಣ್ಣಿನವಳು...

ಕೊಳಲನೂ ಮೀರಿಸುವಂತಹ
ಕೊರಳಿನವಳು...

ಕೋಗಿಲೆಗೂ ಮೌನ ತರಿಸುವ
ಕಂಠದವಳು...

ನನ್ನೊಳಗಿರುವ ನನಗೆ ಕಾಣದ ನನ್ನವಳು...

--- ಧರ್ಮ ರಾಜ್

- ಧರ್ಮರಾಜ್

02 Aug 2017, 07:39 am

ಪ್ರೀತಿ ದೂರ ಸಾಗುವಾಗ

ಕಾಣದ ಪ್ರೀತಿ ಶುರುವಾಯಿತು ನನ್ನ ಮನದಲಿ.

ಪ್ರೀತಿಸದ ನನ್ನ ಮನಸ್ಸು ಕಾಣದ ಪ್ರೀತಿಯ ಬಲೆಗೆ ಬಿತ್ತು..

ಪ್ರೀತಿ ಹೇಳುವ ಆಸೆ ನನ್ನ ಪುಟ್ಟ ಮನಸಿಗೆ.‌. ಆದರೆ ಹೇಳಲಾಗದೆ ಚಟಪಡಿಸುತ್ತಿದೆ ನನ್ನ ಹೃದಯದ ಗೂಡು..


ಅವಳು ನನ್ನ ಹತ್ತಿರ ಬರುವಳು, ಆದರೆ

ಏಕೆ??? ಅವಳು ನನ್ನ ತಪ್ಪಾಗಿ ತಿಳಿಯ ಬಹುದು.

ಆದರೆ ಇಂದು ಹೇಳಿದಳು ಮನೆಯಲ್ಲಿ ನನ್ನ ಮದುವೆಗೆ ಹುಡುಗ ನನ್ನು ನೀಡುತ್ತಿದ್ದಾರೆ ಅಂತಾ.. ಅದು ನಿಜವೊ ಸುಳ್ಳೊ..

ಆದರೆ ನನ್ನ ಪ್ರೀತಿ ಸುಳ್ಳಲ್ಲ....

- ಪ್ರಭಾಕರ್

02 Aug 2017, 12:21 am

ನಿದ್ದೆ

ನಿನ್ನ ನೆನಪ ಚಾದರವ ಹೊದ್ದು ಮಲಗಿದ್ದೆ
ನೀನೇ ತುಂಬಿರುವಾಗ ಕಣ್ಣುಗಳಲ್ಲಿ, ಇನ್ನೆಲ್ಲಿ ನಿದ್ದೆ....

- ರಮೇಶ್

01 Aug 2017, 09:29 pm

ಬಂಧನ

ಬಂಧಿಯಲ್ಲದಿದ್ದರೂ
ಸುತ್ತಲೂ ಎತ್ತರದ ಗೋಡೆ ಕಟ್ಟದಿದ್ದರೂ
ಹೊರಬಾರೆನು ನೀ ಕರೆವ ಮುನ್ನ

ಮನಕೆ ಬಾಗಿಲು ಕಿಟಕಿಗಳೇ
ಇಲ್ಲದಿರುವಾಗ ಮುಚ್ಚಲು ವ್ಯರ್ಥ ಯತ್ನ ಅರಿ ನೀ ನನ್ನ

- ANITHAKRISHNAMURTHY

01 Aug 2017, 08:26 pm

ಗಜಲ್

ಗಜಲ್

ಭುವನೆಯಾಕೋ ಅಳುತಿರುವಳು ಸಂತೈಸುವವರಾರೂ ಇಲ್ಲ,
ದಿಕ್ಕು ಬದಲಿಸಿದ ಅವಳನು ಮರು ಸ್ವಾಗತಿಸುವವರಾರೂ ಇಲ್ಲ,

ಭುವನೆಯ ಬೆನ್ನೇರಿ ಆಂಗ್ಲನೆಂಬ ರಾಕ್ಷಸನು ಆರ್ಭಟಿಸಿರುವನು,
ಕೈ ಕಾಲನು ಹಿಡಿದು ಅವಳು ಕುಗ್ಗದೆ ನಿಲ್ಲಿಸುವವರಾರೂ ಇಲ್ಲ,

ಸುತ್ತಲೂ ಬಲವಂತವಾಗಿ ಆವರಿಸಿದೆ ನಮದಲ್ಲದಿದ್ದರೂ,
ಮೈಕೊಡವಿ ಅದಕೆ ಚೀಮಾರಿ ಹಾಕುವವರಾರೂ ಇಲ್ಲ,

ಮಲಿನವಾದ ಕನ್ನಡಿಯು ಮರು ಹೊಳೆಯಲೆತ್ನಿಸಿದೆ ಹೊಳಪ,
ಅದನು ಮನಸೊಳಗಿನ ಧೈರ್ಯವೆಂಬ ಕಣ್ಣೀರಿನಿಂದ ತೊಳೆಯುವವರಾರೂ ಇಲ್ಲ,

ಅವಳು ಮೇಲೆದ್ದು ನಿಂತು ನಡೆಯಲು ಆಗದೆ ಕೂತಿಹಳು,
ಕೈ ಹಿಡಿದು ಪ್ರಮಾಣಿಸಿ,ಪ್ರಾಮಾಣಿಕವಾಗಿ,ನಡೆಯುವವರಾರೂ ಇಲ್ಲ,

ಈ ಭುವನೆಯ ಸ್ವಂತ ಮಗನಂತೆ ನೀನು "ಓ ಸಮಂಥ",
ನಿನ್ನನು ಕರೆದು ಅವಳಿಗಾಗಿ ಕೈ,ಕೈ ಸೇರಿಸುವ ಹೃದಯವಂತರಾರೂ ಇಲ್ಲ,


- ಮಂಜುನಾಥಸರ್ಜಾಪುರ.ವಿ

01 Aug 2017, 07:34 pm

ಕೊಡೆ

ನಾ ಹಿಡಿದೆ ಕೊಡೆಯೊಂದ
ನೆನೆಯುತ್ತಿದ್ದಾಳೆಂದು
ಮಳೆಯಲಿ ನನ್ನವಳು...

ಆದರವಳು ಆ ಕೊಡೆ ಪಡೆದು
ಹಿಂದಿರುಗಿ ನೋಡದೆ ಹೋದಳು
ನಾ ನೆನೆಯುತ ನಿಂತಿರಲು...

ಬೇಸರವೇನಿಲ್ಲ ನನಗೆ..ಕಾರಣ
ನಾ ಕೊಟ್ಟ ಆ ಕೊಡೆ
ನನ್ನ ನೆನಪಾಗಿ ಅವಳ ಬಳಿಯಿರಲು....

--- ಧರ್ಮ ರಾಜ್

- ಧರ್ಮರಾಜ್

01 Aug 2017, 06:15 pm

ಬೆಲೆಯೋ ಬೆಲೆ

ಮಳೆ ಸೋತಮೇಲೆ ಹನಿಗೆಲ್ಲಿ ಬೆಲೆಯೋ
ಮಾನ ಹೋದಮೇಲೆ ಮಾತಿಗೆಲ್ಲಿ ಬೆಲೆಯೋ
ಮೋಹ ಮೋಳಗಿದ ಮೇಲೆ ನೀತಿಗೆಲ್ಲಿ ಬೆಲೆಯೋ
ಮನು ಮೋಸನಾದಮೇಲೆ ಸತ್ಯಕ್ಕೆಲ್ಲಿ ಬೆಲೆಯೋ

ನಮ್ರತೆ ಅಡಗಿದ ಮೇಲೆ ಆಚರಣೆಗೆಲ್ಲಿ ಬೆಲೆಯೋ
ನಟನೆ ಅತಿಯಾದ ಮೇಲೆ ವಿಶ್ವಾಸಕ್ಕೆಲ್ಲಿ ಬೆಲೆಯೋ ನನ್ನತನ ಅಳಸಿದಮೇಲೆ ವಾದಕ್ಕೆಲ್ಲಿ ಬೆಲೆಯೋ
ನಗು ಅರಳದಮೇಲೆ ಜೀವನಕ್ಕೆಲ್ಲಿ ಬೆಲೆಯೋ

ಕಷ್ಟಕ್ಕೆ ಪರಿಹಾರವಿಲ್ಲದ ಮೇಲೆ ಪ್ರಯತ್ನಕ್ಕೆಲ್ಲಿ
ಬೆಲೆಯೋ
ಕಾರ್ಯ ಫಲಪ್ರದವಾಗದ ಮೇಲೆ ಯೋಜನೆಗೆಲ್ಲಿ ಬೆಲೆಯೋ
ಕ್ರೌರ್ಯ ಪ್ರಭಾವ ಬೀರಿದ ಮೇಲೆ ಮಾನವೀಯತೆಗೆಲ್ಲಿ ಬೆಲೆಯೋ
ಕ್ರಾಂತಿಗೆ ಗೃಹಣ ಹಿಡಿದ ಮೇಲೆ ಹೊಸತನಕ್ಕೆಲ್ಲಿ ಬೆಲೆಯೋ

ಸಂಸಾರ ನೆಮ್ಮದಿ ಇಲ್ಲವೆಂದ ಮೇಲೆ ಒಡಗೂಡಿಬಾಳಿಗೆಲ್ಲಿ ಬೆಲೆಯೋ
ಸಾಹಿತ್ಯ ನಿಜವಿಲ್ಲದ ಮೇಲೆ ಓದಿಗೆಲ್ಲಿ ಬೆಲೆಯೋ
ಸಂಪತ್ತು ನಿಧಿಯಾದ ಮೇಲೆ ಒಡನಟಕ್ಕೆಲ್ಲಿ ಬೆಲೆಯೋ
ಶ್ರೀ ಹಿರೇಉಳ್ಳಿಗೇರಿ ಕರೆಮ್ಮಳನ್ನು ನೆನೆಯದಮೇಲೆ ಬರವಣಿಗೆಲ್ಲಿ ಬೆಲೆಯೋ

- MB

01 Aug 2017, 04:54 pm

ಹರಟೆ..!!

ಹೊಡೆಯಬೇಡ ನೀ ಹರಟೆ,
ಹೊಡೆದರೆ ಬಾರಿಸಬೇಕಾದಿತು ಜಾಗಟೆ,
ಹೊಡೆದರೆ ಹೀಗೆ ನೀ ಹರಟೆ,
ಕಡೆಗೆ ದೇವಸ್ಥಾನದಲ್ಲೂ ಸಿಗದು ಬಾರಿಸಲು ಘಂಟೆ..!
ಅರ್ಥ ಮಾಡಿಕೊ ತಮ್ಮ,
ಇದ ತಿಳಿ ಹೇಳಲಾರ ಯಾವ ಬ್ರಹ್ಮ,
ನಿನ್ನ ನಂಬಿದ ಜೀವಕೆ ನೀನೇ ಆಧಾರ ತಿಳಿಯೋ ಮಂಕುತಿಮ್ಮ..

- Spb...@#

01 Aug 2017, 04:35 pm

ಪ್ರೇಮ ಚಂದ್ರಮ

ಹೇಳೋ ಚಂದ್ರಮ
ಆ ಬಾನು ಚಂದವೇ
ಪ್ರೀತಿಯಲ್ಲಿ ಬಿದ್ದ ಮೇಲೆ
ನೀನು ಚಂದವೇ!!

ನನ್ನ ಮನದ ಹೂವಿನ ತೋಟ
ಕಂಡು ಬಂದ ಚಂದ ಮಾಮ
ಹೂವಿನಲ್ಲಿ ಅವನಿಗೆ
ಎನೋ ಅನುರಾಗವು!!

ರಾಶಿ ರಾಶಿ ಕನಸಿನ ಹೂವು
ಅರಳಿ ನಿಂತ ಚಂದವ ಕಂಡು
ಬಾನ ಮರೆತ ಚಂದಿರನು ತಾ
ಮನದಿ ಬಂದು ನೆಲೆಯುರಿದ!!

ತಾರೆಗಳ ಬಂಧವ ಕಳಚಿ
ಮನದ ಹೂವಿನ ಮೋಹವ
ಬೆಳೆಸಿ ಆಸೆಯಿಂದ ಬಂದನು
ಇಲ್ಲಿ ಪ್ರೇಮ ಚಂದ್ರಮ!!

- ಪಿ.ಜಿ.ಜ್ಯೋತಿ

01 Aug 2017, 04:11 pm

ಮನುಷ್ಯನೊಳಗಿನ ಕ್ರೌರ್ಯ

ಮನುಷ್ಯನೊಳಗಿನ ಕ್ರೌರ್ಯ

ತನ್ನ ತನವನು ಮರೆತು

ಅವನಿಂದ ಹೋರಬಂದು

ಅಟ್ಟಹಾಸದಿ ಮೆರೆದು

ಹಿಂಸಾಚಾರಕ್ಕೆ ತಿರುಗಿ

ಎಲ್ಲವನ್ನೂ ನಾಶ ಮಾಡಿ

ಗರ್ವದಲಿ‌ ಸೊಕ್ಕಿ

ರೋಷದಲ್ಲಿ ಬೀಗಿ

ಕೊನೆಯಲ್ಲಿ ಒಂದು ದಿನ

ಅವನನೇ ಬಲಿ ಪಡೆಯಿತೇ!!

- ಪಿ.ಜಿ.ಜ್ಯೋತಿ

01 Aug 2017, 04:02 pm