ಭಗವಂತನಿಗೆ ಈಗಿಗ ಹೋಮ್ ಗಾರ್ಡ ಕೆಲಸ ಜೋರ.
ಡ್ರೆಸ್ ಇಲ್ಲ, ಪಗಾರ ಇಲ್ಲ, ರೆಸ್ಟ್ ಅಂತೂ ಬೇಕಾಗೇ ಇಲ್ಲ.
ಮನೆ ಕಂಪೌಡ ಗೋಡೆಗೆ ಆನಿಸಿ ಕೂಡಿಸಿದರೆ ಸಾಕ.
ಬಾಯ ಗಡಗಿ ಕಿಡ್ನಿ ಗಡಗಿ ತುಂಬಕೊಂಡ ಸನಿಹ ಬಂದವರಿಗೆ ಹಲ್ಲ ಕಿರಿದು ಕೈ ಮುಗಿದ ಮುಂದಕೆ ಕಳಸ್ತಾನೆ.
ಭಗವಂತನಿಗೆ ಈಗಿಗ ರಸ್ತೆಗೆ ಜಾಗ ಹೋಗದಂತೆ ಕಾಯೋ ಕೆಲಸ ಜೋರು.
ಆ ಜಾಗದಲ್ಲಿ ಸಣ್ಣದೊಂದು ಗುಡಿ ಕಟ್ಟಿ
ಹಣೆಗೆ ಒಂದಿಷ್ಟು ಕೂಕಮಾ ಇಬತ್ತಿ ಬಳಿದು ಊದಕಡ್ಡಿ ಬೇಳಗಿಸಿ ಇಟ್ರ ಸಾಕ.
ಯಾವ ಕೋರ್ಟ ಕಛೇರಿಯಂದ ಆರ್ಡರ ತಂದ್ರು ಅಳಗಾಡಂಗಿಲ್ಲ ಒಂದೈವತ್ತವರ್ಷ.
ಗೆಳತಿ ನಾ ನಿನ್ನ ಸನಿಹದಲ್ಲಿ ಎಷ್ಟು ಸಮಯ ಕಳೆದರೂ ಅದು ನನಗೆ ಕಡಿಮೆ...
ನನ್ನ ಬಯಸಿ ಬಳಿ ಬಂದು ನೀ ಆದೆಯಲ್ಲ ಪ್ರೇಯಸಿ ಅದು ನನಗೆ ತಂದಿದೆ ಹಿರಿಮೆ...
ಕನಸಲ್ಲೂ ಕಂಡಿರಲಿಲ್ಲ ನೀ ನನ್ನ ಬಾಳಲ್ಲಿ ಸುಳಿದು ಆಗುವೆಯಂದು ಪ್ರಿಯತಮೆ...
ಚಿಮ್ಮುತಿದೆ ನನ್ನ ಬಾಳಲ್ಲಿ ಪ್ರತಿ ಕ್ಷಣದಲ್ಲೂ ಈಗ ಸಂತೋಷದ ಚಿಲುಮೆ... ✍️ಮಲ್ಲ...
ಕನಸಿನ ಕನ್ಯೆ ಕಲ್ಪನೆಗೂ ಮೀರಿದ್ದಳು...
ಕಣ್ಬಿಟ್ಟು ನೋಡಿದರೆ ಕತ್ತಲು ಕತ್ತಲು...
ಹುಡುಕಾಡಿದೆ ನಾ ಎಲ್ಲಾ ಸುತ್ತಲೂ...
ಕಾಣಲೇ ಇಲ್ಲ ನೋಡಿದರು ಎತ್ತಲೂ...
ಆಗ ಅನಿಸಿತು ಮನಸಿಗೆ ಇದು ಕನಸೇ... ✍️ಮಲ್ಲ...
ಸಂಸಾರವೆಂಬುದೊಂದು ಗೂಳಿ.
ಆಶೆ-ಮೋಹ ಎಂಬ ಎರಡು ಕೊಂಬು ಮೂಡಿ
ಸಿಕ್ಕ ಸಿಕ್ಕ ವರಿಗೆಲ್ಲ ಗುದ್ದಾಡಿಕೊಂಡಿ,
ಉಲಿವ ಇಂದ್ರೀಯಗಳಿಗೆಲ್ಲ ನಶೆ ಏರಿಸಿಕೊಂಡಿ
ಪಾಪದ ಬಲೆಯನ್ನು ಮೈಗೆ ಸುತ್ತಿಕೊಂಡಿ
ಮಾಯೆಯನ್ನು ತಲೆಯ ಮೇಲೆ ಹೊತ್ತು ಮೆರಸಿಕೊಂಡಿ
ನಾನು; ನನ್ನದೆಂಬ ಸುಳಿಯೊಳಗೆ ಸಿಲುಕಿಕೊಂಡಿ
ಹುದಲೊಳಗೆ ಸಿಲುಕಿ ವಿಲವಿಲ ಒದ್ದಾಡುವ ಕೋಣದಂತಾದಿ.
ಗುರು ಬಸವ ಪ್ರಿಯ ರೆವಣಸಿದ್ದೇಶ್ವರನನ್ನು ಕೂಗಿ ಕರೆ..
ಅವನೊಬ್ಬನೇ ನಿನ್ನ ಮೇಲೆತ್ತಬಲ್ಲ.
ರಚಣೆ: ಆರ್ ವೀ ಗೌಡರ
ಕೃಪೆ: ಎಲ್ಲ ಶರಣರು
Mobil: 7892256063