ಬದುಕಲಿಲ್ಲ ನಾನು ನಿಮ್ಮ ಹಾಗೆ.
ಮೈಯ ಮಾರಿಕೊಂಡರೂನು
ಮನಸ ಮಾರಿಕೊಂಡವಳಲ್ಲ,
ನಿಮ್ಮ ದೃಷ್ಟಿಯಲ್ಲಿ ಕೆಟ್ಟವಳು
ಅನಿಸಿಕೊಂಡರೂನು
ಕನಸುಗಳಿಗೆ ಕೊಳೆ ಅಂಟಿಲ್ಲ!!
ಮೊಗಕೆ ಬಣ್ಣ ಬಳಿದರೂನು
ಬಣ್ಣ ಬದಲಿಸಿ ಬದುಕಲಿಲ್ಲ,
ಕೈ ಚಾಚಿ ದುಡ್ಡು ಪಡೆದರೂನು
ಇನ್ನೊಬ್ಬರ ಬೆವರ ಹನಿಯ ದೋಚಲಿಲ್ಲ!!
ಬದುಕಲಿಲ್ಲ ನಾನು ನಿಮ್ಮ ಹಾಗೆ.
ಹೊಟ್ಟೆಗಾಗಿ ಬಟ್ಟೆ ಕಳಚಿದರೂನು
ಮತ್ತೊಬ್ಬರ ಕಣ್ಣ ಹನಿ ಕುಡಿದು ನನ್ನ
ದಾಹ ನೀಗಿಸಿಕೊಂಡವಳಲ್ಲ!!
ಸೂಳೆ ಎಂದ ಮಾತು ಕೇಳಿ
ನೋಂದರೂನು ಅಸೂಹೆಯಿಂದ
ನಿಮ್ಮ ಮನೆಗಳ ಒಡೆಯಲಿಲ್ಲ,
ಸೇರಗಾಸಿ ನನ್ನ ಮಕ್ಕಳ ಹೊಟ್ಟೆ
ತುಂಬಿಸುವುದು ನನಗೆ ಒಮ್ಮೆಯೂ
ತಪ್ಪು ಎನಿಸಲಿಲ್ಲ!!
ಅಳುವ ಕಣ್ಣಿಗೂ ಆಸೆಯುಂಟು
ನಗುವ ತುಟಿಗೂ ನೋವುಂಟು,
ಉಳಿಸಿಬಿಡಿ ನನ್ನನ್ನು ಇತಿಹಾಸದಲ್ಲಿ
ಹೆಸರಿಲ್ಲದೆ ಉಸಿರಾಡುವ ಪುಸ್ತಕದ
ಕಥೆಯಂತೆ, ಹೇಳಿದರೂ ನಿಮಗೆ
ತಿಳಿಯದ ನನ್ನ ಮನಸಿನ ವ್ಯಥೆಯಂತೆ!!
ಕಣಗಿಲದ ಕುಸುಮದಲಿ
ನಿನ್ನ ಮೊಗವ ಕಂಡೆ
ಮುದ್ದಾದ ತುಟಿಯಂಚಲಿ
ತುಂಟ ನಗೆಯ ಕಂಡೆ
ಹಾಲುಗೆನ್ನೆಯ ದಿಮ್ಮೆಗಳಲ್ಲಿ
ಚಂದಿರನ ಹೊಳಪನು ಕಂಡೆ
ಮುದ್ದಾದ ಮೂಗಿನ ಮೇಲೆ
ದುಂಬಿಯು ಕೂರುವುದು ಕಂಡೆ
ಆದರೆ ನಿನ್ನ ಕಣ್ಣಂಚಲಿ
ನನ್ನ ಬಿಂಬವೇ ಕಾಣಲಿಲ್ಲ.....
##ಮೌನಿ##
ಚಂದದ ಚಂದಿರ
ನಗುವ ಹೊತ್ತು
ಸುತ್ತ ಮಿನುಗುತಾ
ನವಿರುವ ಮುತ್ತು
ಚಂದದ ಚಂದಿರ
ಚಲಿಸುತಿರಲಿ
ಅಂದದ ಅಂಬರ
ತೂಗುತಿರಲಿ
ಚಂದದ ಚಂದಿರ
ಬಾನಿಗೆ ಬಾಸುರ
ಅಲ್ಲಿಯೇ ಅಡಗಿಹ
ನನ್ನಯ ಕಸವರ
ಚಂದದ ಚಂದಿರ
ನೋಡಲು ಸುಂದರ
ಮಾಸಿಕವಾಗಿಯೇ
ಪೂರ್ಣ ಚಂದಿರ
ಚಂದದ ಚಂದಿರ
ಕತ್ತಲ ಬೆಳಕು
ಮಿನುಗುವ ಪ್ರಕಾರ
ಬಾಳಿಗೂ ಬೆಳಕು
ಮರಣವನ್ನು ಯಾರು ನೋಡಿಲ್ಲ ಬಹುಶ...ಅದು ಅಂದವಾಗಿ ಇರಬಹುದು !
ಏಕೆಂದರೆ ಅದನ್ನು ಒಂದು ಸಲ ಭೇಟಿಯಾದವರು.ಮತ್ತೆ ಜೀವಿಸಲು ಮರೆತುಬಿಡುತ್ತಿದ್ದಾರೆ !
ಪ್ರಕೃತಿಯ ನಿಯಮಗಳು ಕೂಡಾ ತುಂಬ ವಿಚಿತ್ರವಾಗಿದೆ -
ಪ್ರಾಣವಿರುವ ಮನುಷ್ಯ ನೀರಿನಲ್ಲಿ ಮುಳುಗಿ ಹೋಗುತ್ತಾನೆ !
ಸತ್ತವನು ನೀರಿನಲ್ಲಿ ತೇಲುತ್ತಾನೆ !
ಜೀವನವೆಲ್ಲ ಹಣದ ಹಿಂದೆ ಓಡುವವನಿಗೆ ಗೊತ್ತಾ ?
ನಾಳೆ ಸತ್ತ ಮೇಲೆ ಅವನು ಬರೀ ಕೈಯಲ್ಲಿ ಹೋಗುತ್ತಾನೆಂದು !
ಸುಂದರವಾದ ಶರೀರವನ್ನು ನೋಡಿ ಆನಂದಿಸುತ್ತೇವೆ ಆದರೆ...ನೀವಾದರು ನಾನಾದರು ಆಗುವುದು ಬೂದಿನೆ...
ಒಬ್ಬರು ಅತ್ತು ಮನಸು ಹಗುರ ಮಾಡಿಕೊಳ್ಳುತ್ತಾರೆ !
ಇನ್ನೊಬ್ಬರು ನಕ್ಕು ದುಃಖವನ್ನು ಮರೆಮಾಡಿಕೊಳ್ಳುತ್ತಾರೆ
ಈ ಮನುಷ್ಯರ ಐಕ್ಯತೆಯನ್ನು ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ !
ಬದುಕಿರುವವರೆಗು ಒಬ್ಬರನ್ನು ತುಳಿದು ಮೇಲೆ ಬರಬೇಕೆನ್ನುಕೊಳ್ಳುತ್ತಾನೆ...
ಇರುವಷ್ಟು ದಿನ ಕಿತ್ತಾಡಿಕೊಳ್ಳುತ್ತಾರೆ...
ಸತ್ತ ಮೇಲೆ ತನ್ನ ಹೆಗಲ ಮೇಲೆ ಹೊತ್ತುಕೊಂಡು...
ಮಸಣದ ವರೆಗೆ ಹೋಗುತ್ತಾನೆ...
ಇರುವವರೆಗು ಎಲ್ಲರನ್ನು ಪ್ರೀತಿಸೊಣ...
ಒಳ್ಳೆಯ ಮಾತನ್ನೆ ಆಡೊಣ..
ಒಬ್ಬರಿಗೊಬ್ಬರು ಸಹಾಯ ಮಾಡೊಣ....
ಭ್ರೂಣ ಹೊತ್ತಳು, ಜೀವಕೆ ಜನ್ಮವಿತ್ತಳು
ಬದುಕು ಕಟ್ಟುವ ಕಲೆಯ ತಿಳಿಸಿ ಕೊಟ್ಟಳು..!
ತುತ್ತು ಕೊಟ್ಟಳು, ಸವಿಯ ಮುತ್ತು ಕೊಟ್ಟಳು
ನಮ್ಮಯ ಗಾಯಕ್ಕೆ ತಾ ಅತ್ತುಬಿಟ್ಟಳು..!
ಪ್ರೀತಿ ಕೊಟ್ಟಳು, ನೀತಿ ಹೇಳಿ ಕೊಟ್ಟಳು
ನಮ್ಮ ಮನದ ಭೀತಿಯನ್ನೇ ದೂರವಿಟ್ಟಳು..!
ಧೈರ್ಯ ಕೊಟ್ಟಳು, ಸಕಲ ಸ್ಥೈರ್ಯ ಇಟ್ಟಳು
ಮನದಿ ಕ್ರೌರ್ಯವನ್ನು ತಾನು ಸುಟ್ಟು ಬಿಟ್ಟಳು..!
ಮಮತೆ ಇತ್ತಳು, ಶ್ರಮತೆ ಕಲಿಸಿ ಕೊಟ್ಟಳು
ಕರುಣೆಯೆಂಬ ಕವಿತೆಯನೇ ಬರೆದು ಕೊಟ್ಟಳು..!
ಹೇಸರನಿಟ್ಟಳು, ಬಸಿರಲಿ ಉಸಿರನಿಟ್ಟಳು
ನಮ್ಮ ಏಳಿಗೆಗಾಗಿ ತನ್ನ ಕನಸ ಕಟ್ಟಿಟ್ಟಳು..!
ಅನುಕ್ಷಣವೂ ನಮಗಾಗಿ ಅಮ್ಮ ಅತ್ತಳು ಸತ್ತಳು...!