Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೊರಟೆ ಹೋದೆನು

ಸಾಧಿಸಲು ಹೊರಟೆ,
ಸವೆದು ಹೋದೆನು,,!
ಗೆಲ್ಲಲು ಹೊರಟೆ,
ಸೋತು ಹೋದೆನು,,!
ಪ್ರೀತಿಸಲು ಹೊರಟೆ,
ಮೋಸ ಹೋದೆನು,,!
ನೋವ ಮರೆಯಲು ಹೊರಟೆ,
ಮರೆಯಾಗಿ ಹೋದೆನು,,!
ತಿಳಿಸಲು ಹೊರಟೆ,
ತಿಳಿಗೇಡಿಯಾಗಿ ಹೋದೆನು,,!
ಅರ್ಥೈಸಲು ಹೊರಟೆ,
ಅರ್ಥವಿಲ್ಲದವನಾಗಿ ಹೋದೆನು,,!
ಪೂಜಿಸಲು ಹೊರಟೆ,
ಪುಣ್ಯವಿಲ್ಲದೇ ಹೋದೆನು,,!
ಭಕ್ತಿ ಬೆಳಗಲು ಹೊರಟೆ,
ಮುಕ್ತಿಯಿಲ್ಲದೇ ಹೋದೆನು,,!
ತ್ಯಾಗಿಯಾಗಲು ಹೊರಟೆ,
ಕಳೆದುಕೊಂಡ ಯೋಗಿಯಾಗಿ ಹೋದೆನು,,!
ಕಾಣದ ಕಡಲ ಕಾಣಲು ಹೊರಟೆ,
ಕವಿಯಾಗಿ ಹೋದೆನು,,!
✍ನೊಂದ ಪುಂಗವ

- SatyanarayanBadiger

22 Aug 2018, 12:40 pm

ಮರಳಿ ಬಾ ತಾಯಿ....

ನೊಂದು ಬೆಂದಿದೆ ಕೊಡಗು
ಪ್ರಕೃತಿಯ ಉಸಿರೇ ಹುದುಗಿ ಹೋಗಿದೆ
ಹಸಿರೆಂಬ ಕಾನನ ಬರಿದಾಗಿದೆ
ಸೋಗಸಾದ ಮನ ತಣಿಸುವ ಪ್ರಕೃತಿ ಮರೆಯಾಗಿದೆ
ಅರಿಯದೆ ಹೋಯಿತು ಕೊಡವರ ಕೊಡುಗೆ
ಮರೆತೇ ಬಿಟ್ಟಿತ್ತು ಪ್ರಕೃತಿ ಕ್ಷಣಗಳಿಗೆ

ಮತ್ತೇ ಸಿಂಗಾರಿಸಿಕೋ ಪ್ರಕೃತಿ ಮಾತೆ
ನಿನ್ನ ಹಚ್ಚಹಸಿರಿನ ವೈಯಾರವ
ಕೊಡಗಿಗಷ್ಟೇ ಅಲ್ಲ ಬೇಕಿದೆ ನಿನ್ನ
ಹಚ್ಚಹಸಿರಿನ ಸಿಂಗಾರ ಕಂಗಳು ಇಡೀ ನಾಡಿಗೆ

- ಎಸ್.ಬಿ

20 Aug 2018, 02:21 pm

ಹೋಗದಿರು ನನ್ನ ಬಿಟ್ಟು

ಹೋಗಬೇಡವೇ ಗೆಳತಿ ನಡು ನೀರಲಿ ಕೈಯ ಬಿಟ್ಟು,,
ನಡೆಯಬೇಡ ಪ್ರೀತಿಯ ಅರ್ಧದಲ್ಲೇ ವಿರಾಮ ಕೊಟ್ಟು,,
ದೂರ ಸರಿದು ಮಾಡದಿರು ನನ್ನೀ ಅಂತರಂಗಕೆ ಪೆಟ್ಟು,,
ನಗದಿರು ನನ್ನ ಪ್ರೇಮದರಮನೆಯ ಸುಟ್ಟು,,
ಅನ್ಯರ ಸುಳ್ಳಿನ ಮಾತುಗಳಿಗೆ ಹೋಗದಿರು ಕೆಟ್ಟು,,
ನನ್ನ ಪ್ರೀತಿಗೆ ತೋರಿಸದಿರು ಮಾಡಿ ನೀ ಬೆಟ್ಟು,,
ನನ್ನ ಎದೆಯಾಳದ ನಿನ್ನ ಮೇಲಣ ಪ್ರೇಮವು ನೂರು ಪಟ್ಟು,,
ಮರೆಯಾಗದಿರು ಮನದಲಿ ನೆನಪಿನ ಸಸಿಯ ನೆಟ್ಟು,,
ತೊರೆಯದಿರು ಮೋಸಗಾರನೆಂಬ ಕಟು ನಾಮವನಿಟ್ಟು,,
ಮರಳಿ ಬಂದು ನನ್ನ ಎದೆಯಾಳದಲಿ ಪ್ರೀತಿಯ ಗುಡಿಯ ಮತ್ತೊಮ್ಮೆ ಕಟ್ಟು,,
✍ನೊಂದ ಪುಂಗವ

- SatyanarayanBadiger

19 Aug 2018, 05:47 pm

ಜಳಪ್ರಳಯ

ಜಾತಿ ಧರ್ಮ ಮತವೆಂಬ ಭೇದದಲಿ
ಮುಳುಗಿದ್ದ ಸಮಾಜವು
ಇಂದು ಬೇಡುತ್ತಿದೆ ಸಿಕ್ಕರೆ ಸಾಕು ಅನ್ನ ನೀರು
ಬದುಕಬೇಕೆಂಬ ಆಸೆಯಲಿ

ಹೊಡೆದಾಡಿದರು ಅಂದು
ಇದೇ ಜಾತಿ ಧರ್ಮದ ಕಲಹಕ್ಕೆ
ಕ್ಷಣ ಮಾತ್ರದಿ ಕೊಳಚೆಯಾಗಿತ್ತು ಬದುಕು,
ಮನುಷ್ಯ ಜಗತ್ತಿನಲ್ಲಿ ಶೂನ್ಯ ಎಂದು ಸಾರಿತು

ಭೇದಭಾವ ಮಾಡಿ ಬದುಕಿದವರೂ ಉಳಿಯಲಿಲ್ಲ ಐಷರಾಮಿ ಬದುಕನ್ನು ಬಂಗಾರವಾಗಿಸಲಿಲ್ಲ
ಬರಡಾಯಿತು ಬದುಕು
ಒಂದೇ ಕ್ಷಣಮಾತ್ರದಿ ಪ್ರಕೃತಿ ಮುನಿಸಿಗೆ

- ಎಸ್.ಬಿ

19 Aug 2018, 02:00 pm

ವಿಷಕಂಟ

ಜಗವನು ಹೊರತು ಪಡಿಸಿ
ಯುಗದಾಚೆಗೆ ನನ್ನ ಪಯಣ....

ಮೃತ್ಯು ಎಂಬ ಅಸ್ತ್ರದಿಂದ
ಸಂಬಂಧಗಳಿಂದ ದೂರವಾಗ

ಮರೆತು ಜೀವಿಸಬಹುದು..

ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು..

ದೇವಾನು ದೇವತೆಗಳು ಸಾಗರದ ಅಮೃತಾವನ್ನು ಪಡೆಯಬೇಕು
ಅನ್ನುವಷ್ಟರಲ್ಲಿ ವಿಷ ಬೀಳುತ್ತೆ ..

ಮಹದೇವ ವಿಷ ಕುಡಿದು ವಿಷಕಂಟನಾದ ಅದರ ನೋವನ್ನು ಒಬ್ಬನೇ ಸಹಿಸಿಕೊಂಡ ಹಾಗೇ

ಜೀವನದಲ್ಲಿ ಹುಕ್ಕಿ ಬರುವ ಸಾಗರದ ವಿಷವನ್ನು ಕುಡಿದು ಪ್ರತಿಯೊಬ್ಬರು ವಿಷಕಂಟರು ಆಗಬೇಕು

ಕಾಯುವಲ್ಲಿ ಫಲವಿಲ್ಲ ಗೆಳತಿ
ಏಕಾಂಗಿಯಾ ದಾರಿಯಲ್ಲಿ

- Prakash Angadi

17 Aug 2018, 06:46 am

ಲಂಚ

ಬನ್ನಿ ಬನ್ನಿ ಬನ್ನಿರೊ ಬನ್ನಿ
ಲಂಚ ಎಂಬ ಭೂತವ ಓಡಿಸೋಣ
ಇದರಿಂದ ಮುಕ್ತಿ ಹೊಂದೋಣ...

ಲಂಚ ಪಡೆದವನಿಗೆ
ಜೈಲಿಗೆ ಕಳಿಸೋಣ
ಕಠಿಣ ಶಿಕ್ಷೆಯನ್ನು ವಿಧಿಸೋಣ...

ಲಂಚ ಇಲ್ಲದ ಕೆಲಸ ಮಾಡುವನಿಗೆ
"ಪ್ರಮಾಣಿಕ"ಎಂಬ ಬಿರುದು ನೀಡೋಣ...
ಲಂಚ ತಿನ್ನುವ ನಾಯಿಗೆ
ಬುದ್ದಿ ಕಲಿಸೋಣ ನಾವು
ಬುದ್ದಿ ಕಲಿಸೋಣ...

ಜನರಿಗೆ ಸರಿದಾರಿ ತೋರಿಸೋಣ...
ಲಂಚ ಪಡೆಯುವುದು ಮತ್ತು
ಕೊಡುವುದು ಅಪರಾಧ ಎಂದು
ಸಾರಿ ಸಾರಿ ಹೇಳೋಣ...
ಅರಿವು ಮಾಡಿಸೋಣ ಜನರಲ್ಲಿ...
ಅರಿವು ಮಾಡಿಸೋಣ

ಕನಸಿನ ರಾಜ
ಬಡಮಾರನಹಳ್ಳಿ ಮಂಜುನಾಥ

- Manjunatha BT

15 Aug 2018, 07:19 pm

ಕಗ್ಗತ್ತಲ ಹಾದಿ..

ಮೂಡಲದಿ ಎದ್ದು
ಇಳೆಗೆ ಬೆಳಕು ಹರಿಸುವಾಗ
ನನ್ನ ಗುಡಿಸಲಿನಲ್ಲಿ
ಕವಿದ ಕಗ್ಗತ್ತಲೆಯ
ಕಳೆಯಲಾರನೆ ರವಿ....

ಇರುಳು ತಣ್ಣಗಿರಿಸಿ
ತಾರೆಗಳ ನಡುವೆ ಶಶಿ
ನನ್ನವರ ಮಲಗಿಸುವ
ಮಿಂಚುಳ್ಳಿ ತಾ..
ನನ್ನ ಗುಡಿಸಲಿನಿಂದ ಮರೆಯಗಲಾರ

ನನ್ನ ಉಸಿರಿಗೆ
ಕುತ್ತಗಿ ರಭಸದಿ
ಓಡೊಡಿ ಬರುತಿದೆ
ಗುಡಿಸಲಿಗೆ ಅದೇ ಕತ್ತಲೆ
ಕಗ್ಗತ್ತಲೆ.......

✍️ಪ್ರಣವ್ ಕೆ.ವಿ

- pv creations

15 Aug 2018, 02:41 pm

ಹನಿ

ಕಣ್ಣಂಚಿನ ಹನಿಗೆನು ಗೊತ್ತು
ಮನದಾಳದ ನನ್ನಂತರಾಳದ ನೋವು...
ಆ ಹನಿ ಸಂತೋಷಕ್ಕೂ ಸೈ ದುಃಖಕ್ಕೂ ಸೈ...
ಕಣ್ಣಂಚಿನಲಿ ಸದಾ ಇರುತ್ತದೆ.,,,
ಸಂತೋಷಕ್ಕಾದರೂ ಸರಿ
ದುಃಖಕಾದರೂ ಸರಿ
ಕಣ್ಣೊಳಗಿಂದ ಧರೆಗುರುಳುತ್ತದೆ.,,,
ನೀ ಬಿಟ್ಟೋದರು,,,
ನೀ ಕೊಟ್ಟ ಪ್ರೀತಿ ನನ್ನಂತರಾಳದಲಿ
ಕಣ್ಣು ಮುಚ್ಚುವರೆಗೂ ಸದಾ ಇರುತ್ತದೆ....

- sanjays

14 Aug 2018, 10:57 pm

ಯೋಧ

ಕೈಯಲ್ಲೊಂದು ಬಂದೂಕಿದೆ.. ಎದೆಯಲ್ಲೊಂದು ನೋವು ಇದೆ..
ಬೆನ್ನ ಹಿಂದೆ ಸಾವು ಇದೆ.. ಕಣ್ಣ ಮುಂದೆ ಗುರಿಯಿದೆ..
ಕೊರೆಯೋ ಚಳಿಯೇ ಇರಲಿ.. ಸುಡುವ ಬಿಸಿಲೇ ಬರಲಿ..
ಕ್ಷಣ ಕ್ಷಣವೂ ಹೋರಾಡುತಿರುವೆ.. ಅದೇನೆ ಆಗಲಿ..

ಹೆತ್ತವರ ಅಲ್ಲೇ ತೊರೆದು.. ಮರೆತೇ ಬಿಟ್ಟು ನಿನ್ನ ಒಲವ..
ಕಾಯುತಿರುವೆ ನೀನು ಇಂದು.. ಕೋಟಿ ಜನರ ಪ್ರಾಣವ..
ಆಸೆಯಿರದ ನಿನ್ನ ಬದುಕ್ಕೊಂದು ಸಾವಿಲ್ಲದ ತ್ಯಾಗಚರಿತೆ..
ದೇಶದ ಶಾಂತಿಯು ನೀ ರಚಿಸಿದ ನೆತ್ತರ ಕ್ರಾಂತಿಕವಿತೆ..

ಕಣ್ಣಲ್ಲೆರಡು ಹನಿ ಸುರಿಸಲಾರೆವು ನಾವು..
ದೇಶಕ್ಕೋಸ್ಕರ ರಕ್ತ ಸುರಿಸಿ ಮಡಿವಿರಿ ನೀವು..
ಸಾವಿನ ಸುದ್ದಿ ಮನೆಯವರಿಗೆ ತಲುಪಿದರೇ..
ಆಗುವ ದುಃಖಕೆ ಹೊಣೆ ಖಂಡಿತ ಆ ದೇವರೇ..

ಭಯವನು ಮರೆತು ಜಯ ಸಾಧಿಸೋ ಸೈನಿಕ..
ಇವರಿಗೆ ಗೌರವ ಸಲ್ಲಿಸೋದು ನಮ್ಮ ಕಾಯಕ..
ಜಾತಿ ಭೇದ ತೊರೆದು ತೋರಬೇಕು ನಮ್ಮ ಬಂಧ..
ಆಗಬೇಕು ಪ್ರತಿಯೊಬ್ಬ ಪ್ರಜೆಯೂ ದೇಶಕಾಯೋ ಯೋಧ..

- sandesh

14 Aug 2018, 10:37 pm

ಕವಿಯಾದ ಕಥೆ

ಅಂದು ನಿನಗಾಗಿ ಬರೆದೆನು ಹನಿಗವನಗಳ,,
ಇಂದು ನಿನ್ನಿಂದಾಗಿ ಬರೆಯುತೆಹೆನು ಕಿರುಗವನಗಳ,,
ಅಂದು ನಿನಗಾಗಿ ಬರೆದೆನು ಪ್ರೇಮಗವನಗಳ,,
ಇಂದು ಬರೆಯುತೆಹೆನು ಜೀವನದ ಅನುಭವಗಳ,,
ಅಂದು ನಿನ್ನ ಬಣ್ಣಿಸಲು ಬರೆದೆ ಸುಂದರ ಸಾಲುಗಳ,,
ಇಂದು ಬರೆಯುತಿರುವೆ ಸ್ವಸಾಂತ್ವನದ ಬರಹಗಳ,,
ನಿನಗೆಂದೆ ಬರೆದೆನಂದು ಪ್ರೀತಿಯ ಕವಿತೆಗಳ,,
ಗೀಚುತಿಹೆನಿಂದು ರೋಧನೆಯ ನುಡಿಗಳ,,
ನಿನ್ನ ಪಡೆದ ಖುಷಿಯಲಂದು ಹಾಡಿದೆ ಸ್ವಪ್ನದ ಕಾವ್ಯಗಳ,,
ನಿನ್ನ ಕಳೆದುಕೊಂಡ ನೋವಲಿಂದು ಸಾರುತಿಹೆನು ದುಃಖದ ಸಾರಗಳ,,
✍ನೊಂದ ಪುಂಗವ

- SatyanarayanBadiger

14 Aug 2018, 11:54 am