ಹೋಗಬೇಡವೇ ಗೆಳತಿ ನಡು ನೀರಲಿ ಕೈಯ ಬಿಟ್ಟು,,
ನಡೆಯಬೇಡ ಪ್ರೀತಿಯ ಅರ್ಧದಲ್ಲೇ ವಿರಾಮ ಕೊಟ್ಟು,,
ದೂರ ಸರಿದು ಮಾಡದಿರು ನನ್ನೀ ಅಂತರಂಗಕೆ ಪೆಟ್ಟು,,
ನಗದಿರು ನನ್ನ ಪ್ರೇಮದರಮನೆಯ ಸುಟ್ಟು,,
ಅನ್ಯರ ಸುಳ್ಳಿನ ಮಾತುಗಳಿಗೆ ಹೋಗದಿರು ಕೆಟ್ಟು,,
ನನ್ನ ಪ್ರೀತಿಗೆ ತೋರಿಸದಿರು ಮಾಡಿ ನೀ ಬೆಟ್ಟು,,
ನನ್ನ ಎದೆಯಾಳದ ನಿನ್ನ ಮೇಲಣ ಪ್ರೇಮವು ನೂರು ಪಟ್ಟು,,
ಮರೆಯಾಗದಿರು ಮನದಲಿ ನೆನಪಿನ ಸಸಿಯ ನೆಟ್ಟು,,
ತೊರೆಯದಿರು ಮೋಸಗಾರನೆಂಬ ಕಟು ನಾಮವನಿಟ್ಟು,,
ಮರಳಿ ಬಂದು ನನ್ನ ಎದೆಯಾಳದಲಿ ಪ್ರೀತಿಯ ಗುಡಿಯ ಮತ್ತೊಮ್ಮೆ ಕಟ್ಟು,,
✍ನೊಂದ ಪುಂಗವ
ಕಣ್ಣಂಚಿನ ಹನಿಗೆನು ಗೊತ್ತು
ಮನದಾಳದ ನನ್ನಂತರಾಳದ ನೋವು...
ಆ ಹನಿ ಸಂತೋಷಕ್ಕೂ ಸೈ ದುಃಖಕ್ಕೂ ಸೈ...
ಕಣ್ಣಂಚಿನಲಿ ಸದಾ ಇರುತ್ತದೆ.,,,
ಸಂತೋಷಕ್ಕಾದರೂ ಸರಿ
ದುಃಖಕಾದರೂ ಸರಿ
ಕಣ್ಣೊಳಗಿಂದ ಧರೆಗುರುಳುತ್ತದೆ.,,,
ನೀ ಬಿಟ್ಟೋದರು,,,
ನೀ ಕೊಟ್ಟ ಪ್ರೀತಿ ನನ್ನಂತರಾಳದಲಿ
ಕಣ್ಣು ಮುಚ್ಚುವರೆಗೂ ಸದಾ ಇರುತ್ತದೆ....
ಕೈಯಲ್ಲೊಂದು ಬಂದೂಕಿದೆ.. ಎದೆಯಲ್ಲೊಂದು ನೋವು ಇದೆ..
ಬೆನ್ನ ಹಿಂದೆ ಸಾವು ಇದೆ.. ಕಣ್ಣ ಮುಂದೆ ಗುರಿಯಿದೆ..
ಕೊರೆಯೋ ಚಳಿಯೇ ಇರಲಿ.. ಸುಡುವ ಬಿಸಿಲೇ ಬರಲಿ..
ಕ್ಷಣ ಕ್ಷಣವೂ ಹೋರಾಡುತಿರುವೆ.. ಅದೇನೆ ಆಗಲಿ..
ಹೆತ್ತವರ ಅಲ್ಲೇ ತೊರೆದು.. ಮರೆತೇ ಬಿಟ್ಟು ನಿನ್ನ ಒಲವ..
ಕಾಯುತಿರುವೆ ನೀನು ಇಂದು.. ಕೋಟಿ ಜನರ ಪ್ರಾಣವ..
ಆಸೆಯಿರದ ನಿನ್ನ ಬದುಕ್ಕೊಂದು ಸಾವಿಲ್ಲದ ತ್ಯಾಗಚರಿತೆ..
ದೇಶದ ಶಾಂತಿಯು ನೀ ರಚಿಸಿದ ನೆತ್ತರ ಕ್ರಾಂತಿಕವಿತೆ..
ಕಣ್ಣಲ್ಲೆರಡು ಹನಿ ಸುರಿಸಲಾರೆವು ನಾವು..
ದೇಶಕ್ಕೋಸ್ಕರ ರಕ್ತ ಸುರಿಸಿ ಮಡಿವಿರಿ ನೀವು..
ಸಾವಿನ ಸುದ್ದಿ ಮನೆಯವರಿಗೆ ತಲುಪಿದರೇ..
ಆಗುವ ದುಃಖಕೆ ಹೊಣೆ ಖಂಡಿತ ಆ ದೇವರೇ..
ಭಯವನು ಮರೆತು ಜಯ ಸಾಧಿಸೋ ಸೈನಿಕ..
ಇವರಿಗೆ ಗೌರವ ಸಲ್ಲಿಸೋದು ನಮ್ಮ ಕಾಯಕ..
ಜಾತಿ ಭೇದ ತೊರೆದು ತೋರಬೇಕು ನಮ್ಮ ಬಂಧ..
ಆಗಬೇಕು ಪ್ರತಿಯೊಬ್ಬ ಪ್ರಜೆಯೂ ದೇಶಕಾಯೋ ಯೋಧ..
ಅಂದು ನಿನಗಾಗಿ ಬರೆದೆನು ಹನಿಗವನಗಳ,,
ಇಂದು ನಿನ್ನಿಂದಾಗಿ ಬರೆಯುತೆಹೆನು ಕಿರುಗವನಗಳ,,
ಅಂದು ನಿನಗಾಗಿ ಬರೆದೆನು ಪ್ರೇಮಗವನಗಳ,,
ಇಂದು ಬರೆಯುತೆಹೆನು ಜೀವನದ ಅನುಭವಗಳ,,
ಅಂದು ನಿನ್ನ ಬಣ್ಣಿಸಲು ಬರೆದೆ ಸುಂದರ ಸಾಲುಗಳ,,
ಇಂದು ಬರೆಯುತಿರುವೆ ಸ್ವಸಾಂತ್ವನದ ಬರಹಗಳ,,
ನಿನಗೆಂದೆ ಬರೆದೆನಂದು ಪ್ರೀತಿಯ ಕವಿತೆಗಳ,,
ಗೀಚುತಿಹೆನಿಂದು ರೋಧನೆಯ ನುಡಿಗಳ,,
ನಿನ್ನ ಪಡೆದ ಖುಷಿಯಲಂದು ಹಾಡಿದೆ ಸ್ವಪ್ನದ ಕಾವ್ಯಗಳ,,
ನಿನ್ನ ಕಳೆದುಕೊಂಡ ನೋವಲಿಂದು ಸಾರುತಿಹೆನು ದುಃಖದ ಸಾರಗಳ,,
✍ನೊಂದ ಪುಂಗವ