Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ವಂತ ವಸಂತ

ನಿನಗಾಗಿ ಮಿಡಿಯುತ್ತಿರುವ
ಈ ನನ್ನ ಹೃದಯಕ್ಕೆ ನೀನೇ ಸ್ವಂತ...
ನೀ ಸಿಕ್ಕ ಮೇಲೆ ಚಿಗುರಿದ
ಈ ನನ್ನ ಹರೆಯಕ್ಕೆ ನೀನೇ ವಸಂತ...

- ಪಿ.ಜಿ.ಜ್ಯೋತಿ

10 Aug 2018, 03:40 pm

ನಿನ್ನನ್ನೇ ಕಾಯುವೆ..

ಅದೆಷ್ಟು ದಿನ ನೀ ಹೀಗೆ
ನನ್ನಿಂದ ದೂರ ಉಳಿಯುವೆ...
ಒಂದಲ್ಲಾ ಒಂದು ದಿನ
ಈ ವಿರಹ ಸಾಕೆನಿಸಿ ನೀ
ನನ್ನೆಡೆಗೆ ಮರಳುವೆ....
ಅದೆಷ್ಟೇ ದಿನವಾದರೂ
ನಾ ನಿನ್ನ ದಾರಿ ಕಾಯುವೆ...
ನೀ ಹಿಂದಿರುಗಿ ಬಂದು
ನನ್ನ ಸೇರುವ ವರೆಗೂ...
ನಾ ಮಣ್ಣಲ್ಲಿ ಮಣ್ಣಾಗಿ
ಕೊನೆ ಆಗುವ ವರೆಗೂ...
ನಿನ್ನನ್ನೇ ಕಾಯುವೆ...

- ಪಿ.ಜಿ.ಜ್ಯೋತಿ

10 Aug 2018, 03:18 pm

ಆಪ್ತರು..

ಯಾವುದೇ ಯೋಜನೆ ಇಲ್ಲದೇ ಮನಹೊಕ್ಕುವ ಇವರು ನನ್ನ ಖದೀಮ ಆಪ್ತರು..
ಇದ್ದಷ್ಟೇ ಊಟದ ಡಬ್ಬಿಯ ಕಿತ್ತು ಹಂಚಿ ತಿಂದು ಖುಷಿಯಲಿ ಬೆಸೆವ ಇವರು ಸಂತೃಪ್ತರು..
ತರಗತಿಯಲ್ಲಿ ಹಾಜರಿ ಹೇಳಿ ನನ್ನ ಪ್ರತಿನಿಧಿಸಿದ ಇವರು ನನ್ನ ಆಯುಕ್ತರು..
ಎಲ್ಲಾ ತೊಂದರೆಗಳ ಹೊಡೆದೋಡಿಸಲು ತಂತ್ರ ಹೆಣೆವ ಇವರು ಕಲಾತ್ಮಕರು..
ಏನೂ ಬಯಸದೆ ಕಷ್ಟ ಸುಖಗಳಲಿ ಭಾಗಿಯಾಗುವ ಇವರು ನನ್ನ ಆಪ್ತ ಸ್ನೇಹತರು..

- Manju..

10 Aug 2018, 08:21 am

ಮಳೆ - ಕಣ್ಣೀರ ಹನಿ

ಮಳೆಹನಿ ಬಿದ್ದಾಗಲೆಲ್ಲ ತರುವುದು ಹೊಸ ಹಸಿರಿನ ಚಿಗುರು..
ಕಣ್ಣಹನಿ ಎಷ್ಟೇಬಿದ್ದರೂ ದುಃಖ ದುಮ್ಮಾನಗಳು ಬಿಡವು ತನ್ನ ಮನಸೆಂಬ ತವರು...

- Manju..

10 Aug 2018, 08:16 am

ಜೀವ ಮಿಡಿದದ್ದು...

ಜೀವ ಮಿಡಿದದ್ದು...

ನೀ ಮೊದಲ ನೋಟದಲ್ಲೇ ಮನಹೊಕ್ಕಿ ಮನಸೂರೆ ಮಾಡಿದಾಗ..
ನಂತರ ಸತಿಪತಿಯಾಗಿ ಮೋಹದ ಒಡಲಲಿ ತೇಲಿದಾಗ
ಬಸಿರ ದೆಸೆಯಿಂದ ಬಂದಾ ಕಂದನ ಮೊದಲು ಎತ್ತಿ ಆಡಿದಾಗ
ಮಿಡಿಯಿತು ಮನಸ್ಸು, ಜೆಂಕರಿಸಿತು ಹುಮ್ಮಸ್ಸು..
ಹೆಚ್ಚಿತು ಆಯಸ್ಸು... ಉನ್ಮಾದದಲ್ಲಿ ತೇಲಿತು ಮನಸ್ಸು..

- Manju..

10 Aug 2018, 08:14 am

ಜೀವಾ ಜೀವಾ

ನಿನ್ನ ಕಣ್ ಸನ್ನೆಯಲ್ಲಿ
ಪ್ರೀತಿ ತಂದಿತ್ತು
ಈ ನನ್ನ ಮನಸ್ಸು

ನಿನ್ನ ಕಾಲ ಗೆಜ್ಜೆಯ
ನಾದಕ್ಕೆ ನಾಟ್ಯ ವಾಡಿತು
ಈ ನನ್ನ ಹೃದಯ

ನಿನ್ನ ಲಜ್ಜೆ ಮಾತಿನ
ಮುದ್ದು ಮಾತಿಗೆ
ಹೆಜ್ಜೆ ಹಾಕಿದೆ ನಾ

ನಿನ್ನ ನಗುವು
ಒಂದೇ ಸಾಕು
ನನ್ನ ಮನದ ಮೌನವ
ಮರೆಯಲು

ನನ್ನ ಬಾಳ ಬದುಕಿನ
ಬಂಗಾರ ಜೋತಿ ನೀನು
ನಿನ್ನ ಒಲವೇ
ನನ್ನ ಹೃದಯದ
ಮುತ್ತು,,,,,,

ರಾಜು ಹಾಸನ ಅಶು

- ರಾಜು ಹಾಸನ

09 Aug 2018, 01:58 pm

ಧರ್ಮ ರಾಜಕಾರಣ

ಹುಟ್ಟುವಾಗ ಹಾಕಿಲ್ಲ ಅರ್ಜಿ
ಯಾವ ಧರ್ಮದೊಳಗೆ ಪ್ರವೇಶ ಮಾಡಲಿ ನಾ

ಕಿವಿಯಲ್ಲಿ ಕೇಳುತ್ತಾ ಬಂದೆ
ಮಂದಿರ ಮಸೀದಿಗಳ ಸಂದೇಶ ದಿನಾ

ಅನ್ಯ ಧರ್ಮವ ಗೌರವಿಸಲು
ತಾಯಿ ಕೊಟ್ಟಲು ಮಾರ್ಗದರ್ಶನ ಸದಾ

ಧರ್ಮ ರಕ್ಷಣೆಯ ಹೆಸರಲ್ಲಿ
ಗುತ್ತಿಗೆ ಪಡೆದು ಮಾಡಿದರವರು ಧರ್ಮರಾಜಕಾರಣ

ಧರ್ಮ ಧರ್ಮಗಳ ನಡುವೆ
ಬೆಂಕಿ ಉಗುಳಿದರು ಕ್ಷಣ ಕ್ಷಣ

ತಲವಾರು ಕಾಳಗಕ್ಕೆ ಛೂ ಬಿಟ್ಟರು
ಯುವಕರ ಪ್ರತಿ ದಿನ ದಿ‌ನ

ರಕ್ತದೋಕುಳಿ ಹರಿದು
ನಗರದಲ್ಲಾಯಿತು ನರಕದರ್ಶನ

ಪ್ರಾಣ ಕಳಕೊಂಡ ಯುವಕರ ತಾಯಿಯ
ಮುಖದಲ್ಲರಿಯಿತು ಕಣ್ಣೀರಿನ ಹನಿಕಂಪನ

ಧರ್ಮರಾಜಕಾರಣದ ನಾಯಕರಿಗೆ
ದೊರಕಿತು ಸ್ವರ್ಗದ ಹಾದಿಯ ಪ್ರದರ್ಶನ

ಹಿಂದುಳಿದ ಯುವಕರಿಗೆ
ಕೊನೆಗೆ ಜೈಲೇ ದರ್ಶನ

ಸಂತೋಷ್ ಬಜಾಲ್
ಮಂಗಳೂರು

- santhoshbajal

09 Aug 2018, 12:12 pm

ನನ್ನ ಪ್ರೀತಿ

ಮಗುವಿನಂತ ಮುಗ್ದೆ ಕಣೆ ನೀನು
ನಿನ್ನ ಪ್ರೀತಿಯಲ್ಲಿ ಮಗುವಾಗಿರುವೆನು ನಾನು.
ನನ್ನ ಹೃದಯ ಕದ್ದ ಚೋರಿ ನೀನು
ಆ ನಿನ್ನ ನಿಷ್ಕಲ್ಮಶ ಪ್ರೀತಿಗೆ ದಾಸನಾಗಿರುವೆ ನಾನು
ನನ್ನಿಂದ ಎಂದೂ ದೂರಾಗಬೇಡವೇ ನೀನು
ನಿನ್ನ ಮುದ್ದಾದ ಪ್ರೀತಿಗೆ ಬಂದಿಯಾಗಿರುವೆ ನಾನು.

ಕನಸುಗಳ ಲೋಕದಲ್ಲಿ "ರಾಜ್"

- ರಾಜ್

08 Aug 2018, 12:29 pm

ನಿನ್ನ ಮಾತುಗಳು...

ನಿನ್ನ ಮಾತುಗಳು ಬೇಸಿಗೆಯಲ್ಲಿ
ಅಚಾನಕ್ ಬೀಳುವ ತುಂತುರು ಮಳೆಯಂತೆ,
ಬಿಸಿಲಿದ್ದರೂ ಹನಿ ಉದುರಿ
ಬಾನು ಬುವಿಗೆ ಕಾಮನಬಿಲ್ಲು ಮುಡಿದಂತೆ..
ಹರವಿನ ಕೆರೆಯ ನಡುವಲ್ಲಿ ಕಂಪಿಡುವ
ಕೇದಗೆಯ ಹೂವು ಬಿರಿದಂತೆ..

ಕೇಂದೋಕುಳಿ ಚೆಲ್ಲಿದ ಸಂಜೆಯಲಿ
ಚಂದ್ರ ಅಪರೂಪಕ್ಕೆ ಬಂದು ನಕ್ಕಂತೆ!
ಪಂಚವರ್ಣ ಗಿಳಿಯೊಂದು ರೆಕ್ಕೆ ಬಿಚ್ಚಿ ನಲಿದು
ಕನ್ನವಿಲನು ಅಚ್ಚರಿಗೊಳಿಸಿದಂತೆ..

ವಸಂತ ಕಾಲದಲ್ಲಿ ಮಾತ್ರ ಕೂಗುವ
ಕೋಕಿಲದ ಇಂಚರದ ಸಂಗೀತದಂತೆ..
ಬೆಂಗಾಡಿನಲ್ಲಿ ತಂಪೆರೆಯುವ
ತಿಳಿ ನಿರ ತೊರೆಯಂತೆ..

ಯಾವಾಗಲೋ ಒಮ್ಮೆ ಅರಳಿ
ಕಣ್ಮನವ ಸೆಳೆವ ಕುರಿಂಜಿ ಹೂವುಗಳು
ಅಪರೂಪಕ್ಕೊಮ್ಮೆ ಹೊರಳಿ
ಕಿವಿಗಡರಿ ನಲಿಸುವ ನಿನ್ನ ಮಾತುಗಳು...

- ಶ್ರೀಗೋ.

07 Aug 2018, 09:06 pm

ಇದೊಂದು ಬೇಡಿಕೆ...

ಅರಿತು ಸುಮ್ಮನಿರು
ನೂವಿನ ಮೇಲೆ ನೂವನ್ನೀಡದಿರು
ಮರೆತು ದೂರವಿರು
ನನಗೆ ನನ್ನದೇ ಕರ್ತವ್ಯಗಳಿವೆ..
ನಾನು ಬರೆಯೋ ಬರಹ
ನನ್ನ ಸಮಾಧಾನಕ್ಕಷ್ಟೇ ಹೊರತು
ಮತ್ತೊಬ್ಬರನ್ನು ನೂಯಿಸಲು ಅಲ್ಲ
ಅದು ನನ್ನ ಗುರಿಯೂ ಅಲ್ಲ.. ಕೆಲವು ದಿನಗಳಿಂದ
ನನ್ನ ಮನಸ್ಸೇಕೊ ಭಾರವೆಲ್ಲ
ಅದಕ್ಕೆ ಕಾರಣ ನೀನಲ್ಲ
ನನ್ನ ನಸೀಬವೆ ಸರಿಯಿಲ್ಲ..
ಆದಷ್ಟು ಸ್ವಲ್ಪ ಸುಮ್ಮನಿರು
ಅರ್ಥವಾಗಿದೆ ಅಂದುಕೊಳ್ಳುವೆ
ಮತ್ತದೇ ವಿಷಯವನ್ನಿಟ್ಟು
ಕೆದುಕದಿರು ನನ್ನ ಭಾವನೆಗಳನ್ನ..
ನೀನೇನೆಂದು ಸ್ವಲ್ಪ ತಿಳಿದಿರುವೆ
ಮನಸ್ಸನ್ನು ಅರ್ಥೈಸಿಕೊಂಡು
ಗಾಯದ ಮೇಲೆ ಬರೆಯೆಳೆಯದೇ
ಸುಮ್ಮನಾಗುವೆ ಎಂದು ಅಂದುಕೊಳ್ಳುವೆ....

- vasu

07 Aug 2018, 02:39 pm