Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸೋತು ಬಂದಿಹೆನು ...
ಕಿಡಿ ಆರಿಸಿ ಆಸೆ ತೋರಿಹೆನು..
ಬೀದಿ ನಾಟಕದ ಬಯಲಿಗೆ...
ಬಣ್ಣ ಬಳಿದಿರುವೆನು.....
ಬಾಡಿಗೆ ಮನೆಯಲಿ ..
ಬಾಗಿಲ ಮುಚ್ಚಿ...
ಬಯಕೆಯ ಬಯಸಿ...
ಬಂಧಿಸಿದೆ ಮನಸ್ಸನ್ನು...
ತುಸು ತುಪ್ಪ ತುಟಿಗೆ...
ಕೂಸು ಕೈಗೆ...
ಕಾಸು ಕಡಲಿಗೆ...
ಮೀಸೆ ಮಣ್ಣಿಗೆ...
ದೇಹ ಮಸಣಕೆ....
ರವಿ ...
- Ravi prasad
25 Jul 2018, 10:56 pm
ಬಾನಾಗ ಚುಕ್ಕಿ ಮೂಡ್ಯಾವ
ಆಡಾಕ ಚಂದ್ರಮನ ಕರೆದಾವ
ನೋಡು ಬಾರಯ್ಯ ಅವರಾಟವ
ತಿನ್ನಲೀಕ ತಂದೀನಿ ಊಟವ
ಸೂರ್ಯ ಹೊಂಟು ಬಾಳೊತ್ತಾಯ್ತು
ಹಕ್ಕಿ ಚಿಲಿಪಿಲಿ ನಿಂತು ಎಷ್ಟೊತ್ತಾಯ್ತು
ಲತೆಯಲ್ಲರಳಿದ ಹೂವೂ ಬಾಡೋಯ್ತು
ಆಡಾಕ ನಿಂತ ನಿಂಗ ಲೋಕಾನೆ ಮರೆತೋಯ್ತು
ಹಿಂಡಿಂಡು ಗೆಳೆಯಾರು ಸೇರಿ
ಹಳ್ಳಕೊಳ್ಳದೊಳಗ ಹಾರಿ
ಊರೂರು ತಿರುಗಿ ಮರಗಳೇರಿ
ಆಡಿದ್ದು ಸಾಕೋ ಹಿಡಿ ಹಟ್ಟಿ ದಾರಿ
- ಶ್ರೀಕಾವ್ಯ
25 Jul 2018, 09:35 pm
ನಾವು ಹುಡುಗರೇ ಹೀಗೆ ಗೆಳೆಯ,
ಎಲೆ ಮರೆಯ ಕಾಯಿಗಳ ಹಾಗೆ.
ಕಣ್ಣೀರ ತಡೆಯಲು ಪನ್ನೀರ ಕುಡಿವೆವು,
ಧಗೆಯನ್ನು ಹಿಡಿದಿಟ್ಟು ಹೊಗೆಯನ್ನು ಬಿಡುವೆವು,
ಉಷೆಯನ್ನು ಕೆಣಕದೆ ನಶೆಯಲ್ಲಿ ತೇಲುವೆವು,
ಪುಂಡ ಪೋಕರಿಗಳೆಂಬ ಬಿರುದೊಡನೆ ಬೀಗುವೆವು...
ಬಯಸಿದ ಬೆಡಗಿಗಾಗಿ ಬದುಕನ್ನೆ ನೀಡುವೆವು,
ಕಡೆಯಲ್ಲಿ ಅವಳಿಂದ ಚೊಂಬನ್ನು ಪಡೆವೆವು,
ಮನೆಯವರ ನೆಮ್ಮದಿಗೆ ಮೂರ್ಗಂಟು ಹಾಕುವೆವು,
ಹುಟ್ಟಿದ ಮಗುವಿಗೆ ಆ ನಲ್ಲೆಯ ಹೆಸರನ್ನೇ ಇಡುವೆವು.
ಹೌದು ನಾವು ಹುಡುಗರೇ ಹೀಗೆ,
ನಮಗೆ ಬೆಲೆ ಕೇವಲ ಕೈಯಲ್ಲಿ ಕಾಸಿರುವ ವರೆಗೆ,
ಇತರರಿಗೇ ದುಡಿವೆವು ಕಡೆಯುಸಿರ ವರೆಗೆ,
ನಮ್ಮದೇ ಕಥೆಯ ದುರಂತ ನಾಯಕರಾಗುವೆವು ಕಡೆಗೆ.
ಹೌದು ನಾವು ಹುಡುಗರೇ ಹೀಗೆ,
ಎಲ್ಲವನ್ನೂ ಎದುರಿಸಿ ಕೀರ್ತಿಯನ್ನೇ ಬಯಸದ ಹಾಗೆ,
ನಾವು ಹುಡುಗರೇ ಹೀಗೆ..........
- ನಾಗೇಶ್ ಎಸ್ ವೈ.
- ನಾಗು
25 Jul 2018, 08:23 pm
ಚಾಚು ಕೈಗಳ ನೀಲಾಕಾಶದ ತುದಿಗೆ
ಕಾಲಿರಲಿ ನೆಲಕೆ ತಾಗಿ
ನೆಲದ ನುಡಿಗೆ ಕಿವಿಯಾಗಿ ನೀ
ಸಾಗುತಿರು ಪಥಿಕ.
: : : : : : : :
ಬಾಳು ಬರಿ ಸಿಹಿಯಲ್ಲ ,ಸಿಹಿಯಾದುದು ಬಾಳಲ್ಲ
ಕಲ್ಪನೆಯ ಕಥೆಯಿದು ,ಸರಿ ತಪ್ಪನಳೆಯಬೇಡ
ಇದು ಕೊಡುವ ಉಡುಗರೆಗಳ ಹೊತ್ತು ನೀ
ಸಾಗುತಿರು ಪಥಿಕ.
:: :: :: :: :: ::
ಈ ಬಾಳ ಪಥದಲ್ಲಿ ನೀನಿರು ಏಕಾಂಗಿ
ನಿನ್ನವರಲ್ಲ ನಡುವೆ ಬರುವ ಅವರಿವರು
ನೀನೆಂದರೊಮ್ಮೆಮ್ಮೆ ನೆರಳಿಗು ಬೇಸರ
ಒಬ್ಬಂಟಿ ಮೋಡದಂತೆ ನೀ ಸಾಗುತಿರು ಪಥಿಕ.
- gourish
25 Jul 2018, 12:25 pm
ಹಂಗಿನ ಕೊಳದಲ್ಲಿ
ಮಿಂದರೂ ಕೊಳೆ ಅಲ್ಲಿ!!
ಮೈಯದು ಶುದ್ಧ ಎಂದರೂ
ಮನಸಿಗೆ ಬಹಳ ತೊಂದರೆ!!
ಯಾರದೋ ಹಂಗಲ್ಲಿ
ಬದುಕಿಗೆ ನೆಲೆ ಎಲ್ಲಿ!!
ಎಲ್ಲೆ ಮೀರಿ ನಡೆವಾಗ
ಬರುವುದೆಲ್ಲಿ ಶುಭ ಯೋಗ!!
ಎಲ್ಲಿಯೋ ನಾನಿದ್ದೆ
ನನ್ನನು ನೀನು ಕರೆತಂದೆ!!
ಹಂಗಿನ ಸುಳಿಯಲ್ಲಿ
ಸುತ್ತಿ ನನ್ನ ತೇಲಿಸಿದೆ!!
ಯಾರದೋ ಈ ಶಾಪ
ನೋಡು ನನ್ನ ಪರದಾಟ!!
ಮೋಸವಾದ ಮನದ ದೋಶ
ಹುಡುಕಿದರೆ ವನವಾಸ!!
- ಪಿ.ಜಿ.ಜ್ಯೋತಿ
24 Jul 2018, 04:43 pm
ನೆನಪಿನ ಪುಟಗಳಲಿ ಸಹಿಹಾಕಿ ಹೋಗುತಿರುವೆ..
ಮನಸನು ಮುರಿದು ಪಯಣ ಮುಂದುವರೆಸಿರುವೆ..
ಬಾನಂಚಿನ ನಿಷ್ಕಲ್ಮಶ ಪ್ರೀತಿಯ ನೀನಿಂದು ತಿರಸ್ಕರಿಸಿರುವೆ..
ಭಾವನೆಗಳ ಮರೆತು ಸಾಧನೆಯ ಕಡೆಗೆ ನಾ ಚಲಿಸಿರುವೆ..
ಕಾಡುತಿರುವ ನೆನಪುಗಳಲೇ ಮಾಡುತಿರುವೆ ಉಸಿರಾಟ..
ಕಗ್ಗತ್ತಲಲಿ ಸಾಗುತಿದೆ ಪ್ರೀತಿಯ ಹುಡುಕಾಟ..
ನಿನ್ನನು ತೊರೆದು ಇಂದು ನಾ ಮಲಗಿರುವೆ ತಾಯಿಯ ಮಡಿಲಲಿ..
ನಿರ್ಧರಿಸಿರುವೆನಿಂದು ಗೆದ್ದೇ ಗೆಲ್ಲುವೆ, ಜೀವನವೆಂಬ ಕಡಲಲಿ..
ಸ್ಫೂರ್ತಿಯ ಚಿಲುಮೆ ಉಕ್ಕಿದೆ.. ಗುರಿ ಕೈಬೀಸಿ ಕರೆಯುತಿದೆ..
ಯಶಸ್ಸಿನ ದಾರಿ ಸಿಕ್ಕಿದೆ.. ಕನಸು ನನಸಾಗುತಿದೆ..
ಹೃದಯದಲಿ ಬೆಸೆದಿರುವ ನಿನ್ನ ನೆನಪು ಕಾಡುತಿದೆ..
ನೀನಿರದೇ.. ಈ ಗೆಲುವೆಲ್ಲಾ ವ್ಯರ್ಥವೆನಿಸಿದೆ..
ವಿಭಿನ್ನ ಆರಂಭ.. ಕಗ್ಗಟ್ಟಿನ ಸಂದರ್ಭ.. ಆದರೂ ಈಡೇರುತಿದೆ ಉದ್ದೇಶ..
ಅದೇ ಮೌನ.. ಅದೇ ಕವನ.. ಸಾರುತಿರುವೆ ನೂತನ ಸಂದೇಶ..
ಜೀವನವೆಂಬ ಈಜು ಕಲಿತ ಮೇಲೆ.. ಪುನಃ ನೀ ಎದುರಾಗಿರುವೆ..
ಹತೋಟಿಯಿಲ್ಲದ ಮನಸಲಿ ಮತ್ತೇ ಪ್ರೀತಿಯ ಚಿಗುರಿಸಿರುವೆ..
ಎದೆಬಡಿತ ಹೆಚ್ಚುತಿದೆ.. ಕಂಗಳ ಸಂಭಾಷಣೆ ನಡೆಯುತಿದೆ..
ಗೆಲುವಿನ ಕಳೆ ಮೊಗದಲಿ ಮೂಡುತಿದೆ.. ಒಲವಿನ ಮಳೆ ಸದ್ಯ ಶುರುವಾಗಿದೆ..
- sandesh
22 Jul 2018, 08:34 pm
ಮರೆತಿರುವಳೆಂದು ಸುಮ್ಮನಿದ್ದೆ
ಮತ್ತೆ ಬಂದು ಯಾಕೆ ನಿಂತೆ ?
ಮನಸ್ಸು ತುಂಬಾ ಭಾರವಾಗಿದೆ
ಮೌನವು ನನ್ನ ದೂರ ತಳ್ಳಿದೆ.
ಮನ್ನಿಸು ದಯಮಾಡಿ ನನ್ನನು
ಮಾಸದಂತ ಪ್ರೀತಿ ನಿನ್ನದು,
ಮೋಸದ ಪ್ರೀತಿ ಕಾಣದ ಹಾಗೆ
ಮೆರೆಸಿದ ನನ್ನೊಲುಮೆ ನೀನು.
ಮೂಕ ಮನದ ಮಾತ ಕೇಳು
ಮೊದಲ ಪ್ರೀತಿ ಕಥೆಯ ಹೇಳು,
ಮತ್ತು ಬರೆಸುವ ನಿನ್ನ ಚಿತ್ರಣ
ಮರೆಸುವುದೆಲ್ಲ ನನ್ನ ನೂವನ್ನ.
ಮೂಲವೆಲ್ಲಿಹುದು ನನ್ನ ಪ್ರೀತಿಗೆ
ಮರೆಯದಂತಿದೆ ನಿನ್ನ ಕಿರುನಗೆ,
ಮಾತು ಮರೆಸಿ ಕರೆಯುವುದು ನನ್ನ
ಮಂಜಿನ ಹನಿಯ ಈ ಬರವಣಿಗೆ...
- vasu
22 Jul 2018, 01:34 pm
ಚಂದ್ರನ್ ತಿರುವ ನಿನ್ನ ಮುದ್ದಾದ ಗುಂಡು ಮುಖದಲ್ಲಿ ಪಟಪಟನೆ ಎಂದು ಬಡಿಯುತ್ತಿರುವ ನಿನ್ನ ಕಣ್ರೆಪ್ಪೆಗಳ ಸನ್ನೆಯಲ್ಲಿ ನಕ್ಷತ್ರದಂತೆ ಮಿನುಗುತ್ತಿರುವ ನಿನ್ನ ಕಣ್ಣಿನಿಂದ ನೋಡಿ ಕ್ಷಣದಲ್ಲಿ ನನ್ನ ಹೃದಯ ನಿಂತುಹೋಯಿತು ಬಾ ನನ್ನ ಒಡತಿ
ಬರಡಾದ ನನ್ನ ಹೃದಯದಲ್ಲಿ ಸೇರಿ ಹೊಸ ಪ್ರೇಮ ಚಿಲುಮೆ ತುಂಬಿ ಮತ್ತೊಂದು ಪ್ರೇಮ ಲೋಕ ಕಟ್ಟೋಣ ಬಾ ನನ್ನ ಗೆಳತಿ
ಶಂಭು
- Sp Spms
21 Jul 2018, 07:00 pm
ಜೀವ್ನ್ದಲ್ಲಿ ಏನೈತೆ ಬರಿ ಮಣ್ಣು
ಇವ್ನ್ ಕಂಡ್ರೆ ಅವ್ನೀಗಾಗಲ್ಲ
ಅವ್ನ್ ಕಂಡ್ರೆ ಇವ್ನೀಗಾಗಲ್ಲ
ಮುಂದೆ ಬಂದ್ರೆ ಹೊಟ್ಟೆ ಉರಿ ಪಡ್ತಾನೆ ಅವ್ನು
ಎಡವಿ ಬಿದ್ರೆ ಗೊಳ್ ಅಂತ ನಗ್ತಾನೆ ಇವ್ನು..
ಜೀವ್ನ್ದಲ್ಲಿ ಏನೈತೆ ಬರಿ ಮಣ್ಣು
ಜಗದಲ್ಲಿ ನಡಿತೈತೆ ದ್ವೇಷ ಮೋಸದ ಕಾರುಬಾರಿ
ಇವನಿಗೆ ಬೇಕು ಇನ್ನೊಬ್ಬರ ಮನಸು ಕೆಡಿಸುವ ಉಸಾಬರಿ
ಅವನಿಗೆ ಸಾಕು ಸಿಕ್ಕಸಿಕ್ಕವರ ಕಾಸು ಕೀಳುವ ಉಸ್ತುವಾರಿ..
ಜೀವ್ನ್ದಲ್ಲಿ ಏನೈತೆ ಬರಿ ಮಣ್ಣು
ಹೆಸರಿಗೆ ಮಾತ್ರ ಬಿದ್ದಿವೆ ನೂರಾರು ಕಾನೂನು
ಹುಡುಕಲು ಹೋದವರು ಸೇರುವರು ಮಣ್ಣು
ಇದು ಅದಲು ಬದಲು ಮಾಡುವವರ ಜಮಾನು..
ಜೀವ್ನ್ದಲ್ಲಿ ಏನೈತೆ ಬರಿ ಮಣ್ಣು
ಈ ನರನಿಗೆ ಅಂಟೈತೆ ಹೆಣ್ಣು ಹೊನ್ನು ಮಣ್ಣಿನ ಮಹಾಮಾರಿ
ಓಡಿಸಲು ಹೋದವರು ಆಗುವರು ಗೋರಿ
ಅಂಟಿಸಿ ಕೊಂಡವರಿಗೆ ಸಿಗುವುದು ಹೆಮ್ಮೆಯ ಗರಿ..
- ಸುರೇಶ್ ಟಿ ವಿ
21 Jul 2018, 04:41 pm
ಜೀವನವೇ ಒಂದು ಯಾನ
ಸಾಗು ಮುಂದೆ ಆಲಿಸುತ್ತ ಮಧುರ ಮಂಗಳಗಾನ
ಸ್ನೇಹಿತ ಬಂದುಗಳೆ ಒಡನಿರುವರು ನೀಡದೆಯೆ ಆಹ್ವಾನ..
ಪಾಪಿ ಪಾತಕಿಗಳೂ ಸನಿಹವಿದ್ದಾರು ಜೋಪಾನ..
ನೀನು ನಿನ್ನವರ ಕಷ್ಟ ಸುಖಗಳಿಗೆ ಕೊಡು ನೀ ಗಮನ
ಬೇಡ ನಿನಗೆ ಯಾನದ ಹೊರತು ಮಧ್ಯಪಾನ
ಅದು ಅರ್ಧದಲ್ಲೇ ಕುಂಠಿತಗೊಳಿಸೀತು ನೀನು ನಿನ್ನವರ ಪ್ರಯಾಣ..
ತೊರಬೆಡ ಅಸಹನೆಯ ಬಿನ್ನಾಣ,
ಶಾಂತಿಯಿಂದ ಕಾಯುವುದೊಳಿತು ಬರುವವರೆಗೂ ನಿನ್ನಯ ನಿಲ್ದಾಣ..
ಅರ್ಧದಲಿ ಇಳಿದವರು ಮಣ್ಣಲಿ ಬಿದ್ದು ಗಾಳಿಯಲಿ ಹಾರುವರು ಸಿಗದೆಯೇ ತಾಣ
ಪೂರ್ಣ ಶಾಂತಿಯಲಿ ಕಾಯ್ದವರು ಗದ್ದುಗೆಗೆ ಏರಿ ಸ್ವರ್ಗದ ಊರಲ್ಲಿ ಮಾಡುವರು ಅಮೃತದ ಸ್ನಾನ..
ತಾಣ ಸಿಗದೆ ಮತ್ತೆ ಹಿಂದೆ ಹುಡುಕಿ ಬಂದವರಿಗೆ ಜಾಡಿಸಿ ಒಡೆಯುವುದು ಯಮನ ಕೋಣ..
- Manju..
21 Jul 2018, 02:07 pm