Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಿನೂಂದಿಗಿರಲು ದಿನವು
ಕ್ಷಣವಾಗಿಬಿಡುವುದು !
ನಿನ್ನ ನೂಡುತಿರಲು ಸಮಯವು
ಸರ ಸರನೆ ಒಡುವುದು!
ಹೋಗುವುದು ಹೇಗೆ ನಿನ್ನನ್ನು ಬಿಟ್ಟು
ನನ್ನುಸಿರು ನಿನ್ನದಾಗಿಹುದು!!
- Sushma
09 Apr 2018, 10:14 pm
ಇರುಳುಗಳ ನಡುವಲ್ಲಿ ಕನಸುಗಳ ತೆರೆಯಲ್ಲಿ ನಿನ್ನ ಬಿಂಭಗಳು ಪ್ರಿಯೆ ಮತ್ತೆ ಮತ್ತೆ ನಡೆದಿವೆ.... ಕತ್ತರಿಸಿ ಹೋಗಿರುವ ಪ್ರೇಮ ಭಳ್ಳಿಯ ಚೆಲುವೆ ಮತ್ತೆ ನೆಡುವೆಯಾ ನಿನ್ನ ಪ್ರೇಮದಾರೆಯ ಹರಿಸಿ....?
- ಕರಣ್
09 Apr 2018, 09:18 pm
ಎತ್ತೆತ್ತಲೂ ನೋಡಿದರೂ
ಹನಿ ನೀರಿಗಾಗಿ ಪರದಾಟ
ಜೀವದ ಆಸೆಗಾಗಿ ಪ್ರತಿ ಜೀವಗಳು
ನಡೆಸುತ್ತಾವೆ ತಮ್ಮ ತಮ್ಮೊಳಗೆ ಹೋರಾಟ!
ಕೊನೆಯಿರದ ಮನುಜನ ಸ್ವಾರ್ಥಕೆ
ಬಲಿಯಾಗುತ್ತಿವೆ ಕಾಡುಗಳು
ಮರ ಗಿಡಗಳಿಲ್ಲದೆ ದಿಕ್ಕುಪಾಲಾಗಿ
ನಾಡಿನತ್ತ ಪ್ರಯಾಣಿಸಿವೆ ಪ್ರಾಣಿ ಪಕ್ಷಿಗಳು!
ವಲಸೆ ಬಂದಿಹ ಪಕ್ಷಿಗಳು
ಗುಟುಕು ನೀರಿಗಾಗಿ ಹವಣಿಸುತ್ತಿವೆ
ನೀರಿನ ಮಹತ್ವದ ಅರಿವಿಲ್ಲದ ಮನುಜನು
ನೀರನ್ನು ಪೋಲು ಮಾಡುತ್ತ ನಗುತ್ತಿದ್ದಾನೆ!
ಪಾತ್ರೆಯ ತುಂಬಾ ನೀರನ್ನಿಟ್ಟು
ತಣಿಸಿರಿ ಪ್ರಾಣಿ ಪಕ್ಷಿಗಳ ದಣಿವನ್ನು
ನಿಮ್ಮೊಳಗಿನ ತನ್ನತನವ ಬಿಟ್ಟು
ಪ್ರೀತಿಯಿಂದ ಪ್ರೀತಿಸಿರಿ ಎಲ್ಲವನ್ನು.!
- ಪ್ರಿಯಾಂಕ
09 Apr 2018, 07:57 pm
ಪ್ರೇಮ ಸಾಗರದಲಿ ( ) ಪ್ರೇಮ ಸಾಗರದಲಿ ಕೊಚ್ಚಿ ಹೋದವನು ನಾ ನಿನ್ನದೇ ಸಂತೆಯಲಿ ನನ್ನ ಮರೆತವನು ನಾ ಕೈ ಕೊಡುವ ಮುನ್ನ ಒಮ್ಮೆ ಹೇಳೆ ಚಿನ್ನ, ಕಣ್ಮುಚ್ಚಿದರೂ ಅಳಿಸದಂತೆ ಕಣ್ತುಂಬಿಸಿಕೊಳ್ಳುವೆ ನಿನ್ನ....
- ಕರಣ್
09 Apr 2018, 03:05 pm
ಓ ನನ್ನ ಮುದ್ದಿನ ಗೆಳತಿ
ಈ ನಿನ್ನ ಇಂಟಿತನದ ನೋವ
ನನ್ನಿಂದ ನೋಡಲಾಗುತ್ತಿಲ್ಲ.
ಮೋಸ ಮಾಡಿ ಹೋದವನ
ನೆನೆದು ನೀ ಏಕೆ ಚಿಂತಿಸುವೆ
ಈ ನಿನ್ನ ನೋವನ್ನ ಹೋಗಲಾಡಿಸಲು
ನಾನಿನರುವೆ.
ನೀನು ಒಪ್ಪುವುದಾದರೆ ನಾ ನಿನ್ನ
ಅಪ್ಪಿಕೊಳ್ಳುವೆ ಸಮ್ಮತಿಸುವೆಯ
ನೊಂದ ಹುಡುಗಿ.
ನಿನ್ನ ಜೀವನಕ್ಕೆ ನಾ ನೆರಳಾಗಿರುವೆ
ನೀ ಒಪ್ಪುವುದಾದರೆ.
ನಿಮ್ಮ ಪ್ರೀತಿಯ ಹುಡುಗ "ರಾಜ್"
- ರಾಜ್
08 Apr 2018, 11:49 am
ಹಿಂದಿನ ಜನ್ಮದಲ್ಲಿದ ನಿನ್ನ ಪರೀಮಳ
ಹಾಯಾಗಿ ಇಗ ಕೂಡ ನನಗೆ ಬರುತ್ತದೆ
ಸಾಕು! ಮತ್ತೆ ಏನು ಬೇಕು ಈ ಜೀವಕ್ಕೆ
ಅದರಲ್ಲಿ ಸುಖ ಸಮಾಧಾನ ಪಡೆಯುತ್ತದೆ
- Bandopant Kulkarni Solapur
08 Apr 2018, 09:03 am
ಬಲ್ಲ ಮೂಲಗಳು ಹೇಳುತಿವೆ
ಬಂದದ್ದು ನಿನಗೆ ಎದ್ದು ನಿಲ್ಲು,
ಒದ್ದು ಓಡು ಬಂದ ಬಾದೆಯ ತುಳಿದು
ಬದಲಾಗುವುದು ಬದುಕು.
ಬರೀ ಮಾತು ಸಾಕೆ ಬದಲಾವಣೆಯ ಬೆಳಕಿಗೆ
ಬಿಸಿಲಲ್ಲಿ ಚಳಿ ಹಿಡಿದು,ತಂಪಲ್ಲೂ ಬೆವರಿಳಿದು
ತಿಳಿಯದೆಯೇ ವಶವಾಗು ಶ್ರೇಷ್ಠತೆಯ ಸಾಧನೆಗೆ.
- ChetanJain
06 Apr 2018, 09:33 pm
ಎದೆಯೊಳಗಿನ ಅಂಚು
ನಿನ್ನ ಬಯಸುತ್ತಿದೆ
ಅದಕ್ಕೇನು ಗೊತ್ತು ?
ನಾನಿಂದು ಸನ್ಯಾಸಿ ಎಂದು !!
ಯೋಚನೆಗಳ ಸಂಚು
ನೀನ್ನ ಕಡೆ ಸಾಗುತ್ತಿವೆ
ಅದಕ್ಕೇನು ಗೊತ್ತು ?
ನಾನಿಂದು ತ್ಯಾಗಿ ಎಂದು !!
ಏಕಾಂತವು ಸಹ
ಚಿತ್ತ ಕೆಡಿಸುತ್ತಿದೆ
ಅದಕ್ಕೇನು ಗೊತ್ತು ?
ನಾನೊಬ್ಬ ಅಲೆಮಾರಿ ಎಂದು !!
ಸರ್ವಸ್ವಗಳೇ ಇಂದು
ಸಾಕ್ಷಿಯಾಗಿ ನಿಂತಿವೆ
ಅದಕ್ಕೇನು ಗೊತ್ತು ?
ಸತ್ತಿರುವ ಈ ಮನಸ್ಸು
ಏಳುವುದಿಲ್ಲವೆಂದು !!!
- ನಾಗರಾಜ ಬಾಕೆ೯ರ್
05 Apr 2018, 11:53 pm
ಕಣ್ಣಿಂದ ಹುಟ್ಟುವ ಪ್ರೀತಿ
ಕಣ್ಮರೆಯಾಗುವವರೆಗೆ
ಮನಸ್ಸಿನ್ನಿಂದ ಹುಟ್ಟುವ
ಪ್ರೀತಿ ಮಣ್ಣಾಗುವವರೆಗೆ❤
- Sushma
05 Apr 2018, 08:09 pm
ಅವಳು ಅಂದಿದ್ದಳು
ನಾನೆಂದು ನಿನ್ನವಳೇ ಅಂತ
ನಾನು ತುಂಬಾ ಖುಷಿಯಾಗಿದ್ದೆ.
ಆದರೆ ಕೆಲ ದಿನಗಳ ನಂತರ ಗೊತ್ತಾಯಿತು
ಅವಳಂದಿದ್ದು ನನಗಲ್ಲ ಅಂತ...!!!
>>ಸ್ನೇಹ ಸಿಂಚನ<<
ನಾಗರಾಜ....
- ನಾಗರಾಜ ಬಾಕೆ೯ರ್
04 Apr 2018, 10:59 pm