ಸಿಟಿ ಶೂಟ್ ಧರಿಸಿ ಬಂದ
ಮದುವೆ ಗಂಡು ಮರ್ಡನ್ ಸೊಳ್ಳೆಯ ಮದುವೆಯಾಗಲೆಂದು!!
ಇರಬೇಕಂತೆ ವಧುವಲ್ಲಿ ಡೆಂಗೂ ರಾಣಿಯ ಚತುರತೆ, ಮಲೇರಿಯಾ ಬ್ಯುಟಿಯ ಮಾತು ಕತೆ!!
ಗಂಡನಿಗೆ ಕುಂತಲ್ಲೇ ಸಿರಿವಂತರ ಬಗೆ ಬಗೆಯ ನೆತ್ತರಿನ ರುಚಿ ತೋರಿಸುವ ಪ್ರೀತಿ ಮಮತೆ,
ಕೊಂಚ ಸಣ್ಣವುದ್ದರು ಮಧುರ ಧ್ವನಿ ಮಸ್ಟ್ ಅಂಡ್ ಶುಡ್ ಅವನಿಗೆ ನಿದ್ದೆ ಬಾರದಿದ್ದರು ಚಿಂತೆ ಇಲ್ಲ ಯಾರಬ್ಬರು ನಿದ್ರಿಸಲು ಬಿಡುವಂತಿಲ್ಲ.
ಕೊಳಚೆ ನೀರಲ್ಲಿ ಹುಟ್ಟಿದರು ಅಡ್ಡಿ ಇಲ್ಲ ,ಕಾಮನ್ ಅಂದ ಚಂದ ಇರಲೇ ಬೇಕು ದುರ್ಗಂಧದ ಬೆಲೆ ಗೊತ್ತಿರಲೇ ಬೇಕು!!
ಅತ್ತೆ ಮಾವನ ಕಾಲು ಹಿಡಿಯದಿದ್ದರು ಸಂಜೆ ಸಮಯಕ್ಕೆ ಎದ್ದು ಕಾರ್ಯದಲ್ಲಿ ನಿರತಳಾಗ ಬೇಕು ಎಲ್ಲರಿಗಿಂತ ಹೆಚ್ಚು ರಕ್ತ ಕುಡಿದು ಬರಬೇಕು.
ಹುಟ್ಟುವ ಮಕ್ಕಳಿಗೆ ಜೀವನ ಶೈಲಿಯ ಕಲಿಸುವಷ್ಟು ಬ್ರೈಟ್ ಇರಬೇಕು, ಕೇಸರಚ್ಚಿ ಮೋರಿ ಬದಿಯಲ್ಲಿ ನರ್ತಿಸುವ ಕಲೆ ಬಂದಿರಬೇಕು!!
ಸುಗುಣವತಿ ಸೊಳ್ಳೆಗಾಗಿ ಹುಡುಕಾಟ ಮುಂದಿರುವರಿದೆ, ಬಲಿಷ್ಠ ಜೀವಿಗಳಲ್ಲಿ ಅಮಲು ಹೆಚ್ಚಿಸಿ ಹೊಸ ಬಗೆಯ ರುಧಿರದ ರುಚಿ ಕಂಡುಕೊಳ್ಳುವವಳು ಸಿಗುವ ತನಕ.
ಗಾತ್ರ ಕಿರು ಬೆರಳ ಹತ್ತಿರ
ಗಾಯನ ಮಹಾ ಗಾಯಕರಿಗಿಂತಲು ಎತ್ತರ.
ಕರ್ಕಶ ಧ್ವನಿಯಲ್ಲಿ ನಿರ್ಗರ್ವಿ ಸೊಳ್ಳೆ ಲಾಲಿ ಹಾಡನ್ನು ಹಾಡುತ್ತಿದೆ, ಬೇಡವೆಂದರೂ ಬಿಡನೆಂದು ಕಿವಿಯ ಬಳಿ ವಿಧೇಯತೆ ಇಂದ.
ದಪ್ಪವೆಂದು ಒಪ್ಪೋತ್ತು ಊಟ ಮಾಡಿ ಕೊರಗುತ್ತಿರುವ ಮಹಾಕಾಯದವರಿಗೆ ಭಾಷೆಯೋತ್ತು ಮುತ್ತಿಡುತ್ತಿವೆ ಒಂದೇ ಸಾರಿ ಸಣ್ಣ ಮಾಡುತ್ತೇವೆಂದು.
ಕಸರತ್ತು ಮಷಿನ್ ಮಾರುವ ಕಂಪನಿಗಳಿಗೆ ಸವಾಲಾಗಿ ನಿಂತಿವೆ ,ಬೆಂಬಿಡದೆ ಭುಜವೇರಿ ನೆತ್ತರು ರುಚಿ ಹೆಚ್ಚಿದ್ದವರಿಗೆ 50% ಕಡಿತವೆಂದು ನೋವು ಕಡಿದು ಹಾರಿ ಹೋಗುವುದರಲ್ಲಿ.
ಲೈಟ್ ಆನ್ ಇದ್ದಲ್ಲಿ ಏನು ತಿಳಿಯದ ಬೆಕ್ಕಿನಂತೆ ಇಣುಕಿಣುಕಿ ನೋಡುತ್ತವೆ ಗೋಡೆಗಂಟಿ ಗಪ್ ಚುಪ್ ಎಂದು, ಒಮ್ಮೆ ಕತ್ತಲು ಎತ್ತಲೂ ಹೋಗದೆಂದು ನಿಚ್ಚಯಿಸಿ ಕೊಂಡಲ್ಲಿ ಸಿಂಹ ಘರ್ಜಿನೆ ಶುರುವಾಗುತ್ತೆ ಇನ್ನು ತಾಳ್ಮೆಯಿಲ್ಲವೆಂದು ಮನೆಯಲ್ಲಿ.
ಗಲ್ಲಿ ಗಲ್ಲಿಯೂ ಸುತ್ತಿ ಹುಡುಕಿವೆ ಕೆಂಬಣ್ಣದ ಬಿಳಿ ಹುಡುಗಿಯ ರಕ್ತವನ್ನು, ಸೇಬು ಸವಿ ಜೇನು ಮಾರ್ಕೆಟ್ಟಿನ ಸತ್ತ ಮೀನು ತಿಂದು ಹೊನಪು ವಯ್ಯಾರದಲ್ಲಿ ಮಿಂದಿಹಳು ಮಂದಹಾಸದಿ ವಸುಂಧರ!!
ಕೊಂದು ಬಿಡುವಳೋ ಏನೋ ಮೆಚ್ಚಿ ಕೆನ್ನೆಯ ಮೇಲೆ ಕುಂತ ಸೊಳ್ಳೆಯ ತುಂಬಾ ಸಂಸಾರ!!
ಓ ನನ್ನ ಭವ್ಯ ಭಾರತ ಎತ್ತ ನಿನ್ನ ಪಯಣ,
ಬೀಯರ್ ಬ್ರಾಂಡಿಗಳಿಗೆ ವೋಟು ಮಾರುವ ನಿನ್ನೀ ಜನ,
ಹಾಳು ಮಾಡಿಹರು ಸಹಸ್ರ ವರ್ಷಗಳ ನಿನ್ನ ಭವ್ಯ ಇತಿಹಾಸವನ್ನ,
ನಿನ್ನ ವಿನಾಷಕ್ಕೆ ದಿನೇ ದಿನೇ ಶ್ರಮಿಸುತ್ತಿದೆ ಭಾರತದ ರಾಜಕಾರಣ;
ಆ ದಿನ ಬ್ರಿಟಿಷ್, ಮೊಹಮ್ಮದರು ಕೊಳ್ಳೆ ಹೊಡೆದರು ನಿನ್ನ ಅಪಾರವಾದ ಸಂಪತ್ತನ್ನ,
ಇಂದಿನ ರಾಜಕಾರಣಿಗಳು ಭಗೆಯುತ್ತಿರುವರು ದೇಶವಾಸಿಗಳ ಒಡಲನ್ನ,
ಜಾತಿ ಜಾತಿಗಳ ನಡುವೆ ಧಂಗೆ ಎಬ್ಬಿಸಿ ವೋಟ್
ಬ್ಯಾಂಕ್ ಮಾಡಿ ಗೆಲ್ಲುವ ಜನಪ್ರತಿನಿಧಿಗಳೇ ಮರೆಯುತ್ತಿರುವರು ತಾವು ಗೆದ್ದ ಕಾರಣವನ್ನ;
ಎಲೆಕ್ಷನ್ ಬಂದಾಗ ಮಾತ್ರ ರೈತನೇ ದೇಶದ ಬೆನ್ನೆಲುಬೆಂದು ,ಆ ಬೆನ್ನೆಲುಬನ್ನು ಸವರಿ ಮತ ಪಡೆಯುವ ರಾಜಕಾರಣಿಗಳೇ
ಎಂದಾದರೂ ಅವನ ಕಷ್ಟಕ್ಕೆ ಪರಿಹಾರ ನೀಡಿದ್ದೀರಾ,
ಹೊರತು ಅವನ ಮೇಲೆ ಸಾಲದ ಹೊರೆ ಹೊರಿಸಿ ಸಾವಿನ ಮನೆಗೆ ನೂಕಿದ್ದೀರಿ.
ಹೀಗೆ ಮುಂದುವರೆದರೆ ಅನ್ನಕ್ಕೆ ಬರ ಬಂದು ಮನುಷ್ಯ ಮನುಷ್ಯನನ್ನು ತಿಂದು ಬದುಕಬೇಕಾದೀತು,
ಎಚ್ಚರ, ದೇಶದ ಯುವಕರೇ ಬದಲಾವಣೆಗೆ ಮುಂದಾಗಿ
ಭಾರತವನ್ನು ರಕ್ಷಿಸೋಣ...