Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನೆದ ನೆನಪು

ನೆನೆ ನೆನೆದು ನಿನ್ನ
ಕಾದಿರುವೆ ಚಿನ್ನ
ನೀ ನನಗೆ ಹೊನ್ನ ಕಲಶ!!
ನಿನ್ನ ನಗುವ ಮೊಗವ
ನಾ ನೆನೆಯುತಿರಲು
ನನ್ನೊಳಗೆ ಏನೋ ಹರುಷ!!

ದಿನ ನಿನ್ನ ನೆನಪು
ನನ್ನೊಳಗೆ ಇಣುಕಿ
ಕಂಡಿರಲು ಏನೋ ಸೊಗಸು!!
ನನ್ನೊಲವ ಭಾವ
ನಿನ್ನೊಳಗೆ ಹರಿಸ
ಬಯಸಿಹುದು ನನ್ನ ಮನಸು!!

ನಾ ಇಲ್ಲಿ ನಿನ್ನ
ನೆನೆದಿರಲು ಜೇನ ಮಳೆ
ಸುರಿ ಸುರಿದು ಸವಿಯ ತರಲಿ!!
ನಿನ್ನ ನೆನಪು ನನ್ನ
ಜೊತೆ ಇರಲು ಚಿನ್ನ
ಈ ಬದುಕು ಮುಗಿಯದಿರಲಿ!!

- ಪಿ.ಜಿ.ಜ್ಯೋತಿ

01 Mar 2018, 10:32 pm

ಪ್ರತಿ ಸಾರಿ ನಿನ್ನ ನೋಡಿದಾಗ ನನ್ನಲ್ಲೇನೋ ಹೊಸ ಅನುಭವ,
ಗೆಳತಿಯೇ ಮರೆತರೆ ಮಡಿವೆ ನಾ, ಆ ನಿನ್ನ ಸಿಹಿ ನುಡಿಗಳ;
ನಿನ್ನೊಂದಿಗಿರುವ ಪ್ರತಿ ಕ್ಷಣವೂ ಸ್ವರ್ಗಾನುಭವ ನನ್ನೆದೆಗೆ,
ನನ್ನಿಂದ ದೂರಹೋಗಿ ನೂಕಬೇಡ ಬೇಗುದಿಗೆ ;
ನಿನ್ನೊಲವನೇ ಅರಸಿ ಬರುವೆ ನಿನ್ನ ಬಳಿ ನಾ,
ಒಪ್ಪಿ ಅಲಂಕರಿಸು ನನ್ನ ಅರಸಿಯೇ ಮನದಲಿ ಕಟ್ಟಿದ ನಿನ್ನ ದೇಗುಲವನ್ನಾ..

- Vijaykiran NC

01 Mar 2018, 10:15 pm

ಮೆಚ್ಚಿನ ನಾಳೆ

ಮೆಚ್ಚಿನ ನಾಳೆಯು
ಬಣ್ಣದ ಹಾಳೆಯು
ಕನಸಿನ ಗಾಳಿಯ ಪಟವಾಗಿ
ಜಿಗಿಯಿತು ಮುಗಿಲಿನ ನಗುವಾಗಿ!!

ಬದುಕಿನ ಸೂತ್ರವ
ಹಿಡಿದರೆ ಮಾತ್ರವೇ
ಸುಂದರ ಕನಸು ನನಸಾಗಿ
ನಾಳೆಯ ಬದುಕಿಗೆ ಬೆಳಕಾಗಿ!!

ಮುಗಿಲಲಿ ತೇಲುವ
ಕನಸದು ಸುಂದರ
ಚಂದ್ರನ ಸೇರುವ ಸಲುವಾಗಿ
ಹಾರುತ ಸಾಗಿದೆ ಸುಖವಾಗಿ!!

- ಪಿ.ಜಿ.ಜ್ಯೋತಿ

01 Mar 2018, 04:00 pm

ಬಣ್ಣದ ಹೋಳಿ..

ಈ ಹೋಳಿ ಹಬ್ಬದ ದಿನದಲಿ
ಬಣ್ಣಗಳ ನಡುವಿನ ಆಟದಲಿ
ಬದುಕಿನ ತುಂಬಾ ಬಣ್ಣಗಳು ತುಂಬಿರಲಿ....
ಬಣ್ಣಬಣ್ಣದ ಕನಸುಗಳು ನನಸಾಗಿ
ಹೂವಿನಂತಹ ಜೀವನ ನಿಮ್ಮದಾಗಲಿ...
ಪ್ರೀತಿ ವಿಶ್ವಾಸದಲಿ ಎಲ್ಲರೊಂದಿಗೆ ಬೆರೆಯುತ್ತ..
ಸಂಬಂಧಗಳು ಗಟ್ಟಿಯಾಗಿ
ಕಷ್ಟಗಳೆಲ್ಲವು ದೂರವಾಗಿ
ಉತ್ಸಾಹದ ದಿನಗಳು ದಿನವಿಡೀ ಇರಲಿ..
ಚೈತನ್ಯವನ್ನು ತುಂಬುವ ಹೋಳಿ ಹಬ್ಬ
ಮತ್ತೆ ಮತ್ತೆ ಮರುಕಳಿಸುತ್ತಿರಲಿ
ನಿಮ್ಮ ಜೀವನ ಸಿಹಿಯಾಗಿರಲಿ...

- ಪ್ರಿಯಾಂಕ

01 Mar 2018, 11:07 am

ನಗುನಗುತ ಇರಬೇಕು

ನಗುನಗುತ ಇರಬೇಕು
ನೂರು ಆರಾಗಲಿ
ಆರು ನೂರಾಗಲಿ..
ನಕ್ಕು ನಗಿಸುತ ಬಾಳ್ಬೇಕು
ಯಾರೇನೇ ಅನ್ನಲಿ
ಯಾರೇನೇ ಮಾಡಲಿ..
ಆಗಿದ್ದು ಒಳ್ಳೆದೇ ಅನ್ಕೊಳಿ
ಆಗೋದು ಒಳ್ಳೆದೇ ಅನ್ಕೊಳಿ.. " ಪ "

ಇವತ್ತು ಇರೋರು ನಾಳೆ ಇರೋಲ್ಲ
ನಿನ್ನೆ ಅನ್ನೋದು ಮತ್ತೆ ಬರಲ್ಲ..
ನಾಳೆ ಏನಾಗುತ್ತೋ ಯಾರಿಗೂ ಗೊತ್ತಿಲ್ಲ
ಇವತ್ತು ಖುಷಿಖುಷಿಯಾಗಿರೋಣ ನಾವೆಲ್ಲ..

ಈ ಬಾಳು ಒಂದು ಹೂವಿನಂತೆ ಬ್ಯೂಟಿ
ಏನೇ ಮಾಡಿದ್ರೂ ಬಾಡೋದು ಗ್ಯಾರಂಟಿ..
ನಗುತ ಬಾಳಿದರೆ ಸ್ವರ್ಗವು ಆಗದು ನಿನಗೆ ಸಾಟಿ
ಅಂದದ ನಗುವ ನೋಡಿ ಆ ಚಂದ್ರನು ಮಾಡಬೇಕು ನಿನ್ನ ಭೇಟಿ..

ಜೀವನ ಒಂದು ಹಾವು ಏಣಿಯ ಆಟ
ಬಿಟ್ಟಾಕು ಫಸ್ಟ್ ಲಾಸ್ಟ್ ಅನ್ನೋ ಪಟ್ಟ..
ಏರಲೇಬೇಕು ಎಲ್ಲರೂ ಒಂದು ದಿನ ಚಟ್ಟ
ಅನುಕ್ಷಣ ಹಾರಿಸೋಣ ನಗುವಿನ ಪಟ..

ನೂರು ಕೋಟಿ ಕೊಟ್ಟರೂ ಸಿಗದು ನಗು ಎಂಬ ಬಂಗಾರ
ನೋವು ಸಾವಿರ ಇದ್ದರೂ ನಗುತಿದ್ದರೆ ನಿನಗೆ ನೀನೇ ಕುಬೇರ..
ಚಿಂತೆ ಎಂದಿಗೂ ತನುಮನ ಸುಟ್ಟು ಹಾಕುವ ಚಿತಾಗಾರ
ಅನುದಿನ ಅನುಕ್ಷಣ ಹೃದಯದಲ್ಲಿ ಹರಿಸಬೇಕು ಆನಂದ ಸಾಗರ..

- ಸುರೇಶ್ ಟಿ ವಿ

01 Mar 2018, 11:00 am

ಸಾಗುವ ದಾರಿಯಲ್ಲಿ

ಸಾಗುವ ದಾರಿಯಲ್ಲಿ
ಸಾಗಿದೆ ನೂರು ನೆನಪು!!
ಪ್ರೀತಿಸುವ ಜೀವ ಇಲ್ಲಿ
ಅಲೆದಿದೆ ನಿನ್ನ ಹುಡುಕಿ!!

ಕೇಳುವ ಮಾತು ಮಧುರ
ಹಾಡುವ ಹಾಡು ಅಮರ!!
ಈ ಪ್ರೇಮದ ರಾಗದ ತುಂಬ
ಇರುವುದು ನಿನ್ನಯ ಬಿಂಬ!!

ಓ ನನ್ನಯ ಇನಿಯ ನೀನು
ನೆನಪಾಗಿ ಇರಬೇಡ ಇನ್ನು!!
ಈ ಬಾಳ ಪಯಣದಲಿ ನೀನು
ಜೊತೆ ಆಗಬೇಕು ಎಂದೆಂದೂ!!

ಬಯಸದೇ ದೊರೆತಿರುವ ಭಾಗ್ಯ
ನಿನಗಾಗಿ ಕಾದಿಹುದು ಹೃದಯ!!
ಕಾಡಿಸದೇ ಬಾ ಸೇರು ಇನಿಯ
ಕರಗುವುದು ಈ ನನ್ನ ಹರೆಯ!!

- ಪಿ.ಜಿ.ಜ್ಯೋತಿ

28 Feb 2018, 10:16 pm

ನೀಲಿಮಣಿ ಹಾರದ ಬೆಡಗಿ..

ನೀಲಿಮಣಿ ಹಾರದ ಸುಂದರ ಹುಡುಗಿ
ನಿನ್ನಯ ಕಣ್ಣೋಟಕೆ ನಾ ಬೆರಗಾದೆ
ನಾಚಿಕೆ ತುಂಬಿದ ಅಂದದ ಬೆಡಗಿ
ನಿನ್ನಯ ಕುಡಿನೋಟಕೆ ನಾ ಬೆರಗಾದೆ!

ನೀಲಿ ಸೀರೆಯನು ಉಟ್ಟು ನಿಂತೆಯಲ್ಲೆ
ತುಸುಸನಿಹ ಬಂದಿಹೆನು ನಿನ್ನಂದವ ಹೊಗಳಲು
ನಾಚಿಕೆಯ ನಿನ್ನಾಭರಣದಲಿ ನೀ ನಿಂತಿರಲು
ಸೋತು ನಿನ್ನಂದಕೆ ನಾ ಬೆರಗಾದೆ!

ಮುಡಿಯ ತುಂಬೆಲ್ಲ ಕನಕಾಂಬರವ ಮುಡಿದು
ಮುಗ್ದ ಮೊಗದ ಮಗುವಿನಂತೆ
ನೀಲಾಕಾಶದಲಿ ನಕ್ಷತ್ರವ ಎಣಿಸುವ
ನಿನ್ನಾ ಸಂಭ್ರಮಕೆ ನಾ ಬೆರಗಾದೆ!

ಬೆಳದಿಂಗಳಲಿ ಕಣ್ಣಾಮುಚ್ಚಾಲೆ ಆಟವನಾಡುತ
ಚಂದ್ರನನೆ ಸೋಲಿಸಲು ನೀ ಅಡಗಿ ಕುಳಿತಿರಲು
ಮರೆಯಾದ ಚಂದ್ರನನು ನೋಡಿ ನೀ ನಗಲು
ಆ ನಿನ್ನ ಹುಡುಗಾಟಕೆ ನಾ ಬೆರಗಾದೆ!

ನೀನೇ ಬಳಿಬಂದು ನನ್ನವಳಾದಂತೆ
ತನ್ಮಯತೆಯಲಿ ಸೇರಿ ನಲಿದಂತೆ
ಪ್ರೀತಿಯ ಹೊಂಗನಸು ಕಾಣುತ್ತಿರುವ
ನನ್ನ ಈ ಹುಚ್ಚು ಕನಸಿನ ಲೋಕಕೆ ನಾ ಬೆರಗಾದೆ!

- ಪ್ರಿಯಾಂಕ

28 Feb 2018, 04:05 pm

ಹೆಮ್ಮೆ

ಹೆಮ್ಮೆಯು ನಮಗೆ
ಇದು ಹೆಮ್ಮಯು ನಮಗೆ!

ಅಚ್ಚರಿಯ ಮೂಡಿಸಿದರು
ಹರಿಣಗಳ ಸಂಹರಿಸಿದರು
ಕೋಹ್ಲಿಯ ಸೈನಿಕರು
ವಿಜಯವ ಸಾಧಿಸಿದರು

ಮೂರು ದಶಕಗಳ ಪರದಾಟ
ಗೆಲುವಿನೊಂದಿಗೆ ತೃಪ್ತಿಯ ರಸದೂಟ
ಹಲವು ದಾಖಲೆಗಳ ನಿರ್ಮಿಸಿದರು
ಭಾರತಾಂಬೆಯ ಹೆಮ್ಮೆಯ ಮಕ್ಕಳಿವರು



ಶಾರಧ

- ಶಕುಂತಲಾ

28 Feb 2018, 02:25 pm

ಒಲವ ಹೂರಣ

ಒಲವನ್ನ ಹಾಸ್ಯಾಳ ಚೆಲುವನ್ನ ಕರದಾಳ
ಸರಸದಾ ಹೊದಿಕಿ ಹೊದ್ದಾರ/ಇಬ್ಬರೂ
ಸಲ್ಲಾಪ ರಾತ್ರಿ ಮೆದ್ದಾರ

- Akku

28 Feb 2018, 09:03 am

ವೀರ ಕನ್ನಡಿಗ

ಬಾರೋ ಬಾರೋ ವೀರ ಕನ್ನಡಿಗ ಬಾರೋ
ಕನ್ನಡ ನೆಲಜಲ ರಕ್ಷಿಸಲು ಮುನ್ನುಗ್ಗಿ ಬಾರೋ..
ಬಾರೋ ಬಾರೋ ಧೀರ ಕನ್ನಡಿಗ ಬಾರೋ
ಕನ್ನಡ ನಾಡುನುಡಿ ಬೆಳೆಸಲು ಧುಮುಕಿ ಬಾರೋ..
ಸಿರಿಗನ್ನಡ ಗೆಲ್ಲಬೇಕು
ಸಿರಿಗನ್ನಡ ಬಾಳಬೇಕು.." ಪ "

ನೀ ಉಸಿರಾಡೋ ಗಾಳಿ ಕನ್ನಡ
ನೀ ತಿನ್ನೋ ಅನ್ನ ಕನ್ನಡ..
ನೀ ಕುಡಿಯೋ ನೀರು ಕನ್ನಡ
ನೀ ಬದುಕೋ ಊರು ಕನ್ನಡ..
ಮಾತೃಭೂಮಿಗಾಗಿ ಪ್ರಾಣ ನೀಡಲು ಸಿದ್ಧನಾಗೋ
ಪುಣ್ಯಭೂಮಿಯ ಋಣ ತೀರಿಸಲು ಬದ್ಧನಾಗೋ

ಓ ಕನ್ನಡಿಗ ..ಹೇ ಕನ್ನಡಿಗ..
ಕೃಷ್ಣ ಕಾವೇರಿ ನದಿ ಜಲಪಾತಗಳು
ಕನ್ನಡ ಡಿಂಡಿಮ ಬಾರಿಸುತ ಸಾಗುವ ಕನ್ನಡಾಂಬೆಯ ತೇರುಗಳು..
ಮಲೆನಾಡಿನ ಮನೋಹರ ಗಿರಿಶಿಖರಗಳು
ಕನ್ನಡ ಕಂಪನು ಚೆಲ್ಲುವ ಕೀರ್ತಿ ಪತಾಕೆಗಳು..
ಬೇಲೂರು ಹಂಪೆಯ ಗುಡಿ ಗೋಪುರಗಳು
ಕನ್ನಡಾಂಬೆಯ ವೈಭವ ಸಾರುವ ಕೀರ್ತಿ ಕಳಶಗಳು
ನಗುತ ನಿಂತ ನೂರಾರು ಶಿಲಾಶಾಸನಗಳು
ಸಾಹಸಗಾಥೆ ಸಾರುವ ಸಿರಿಗನ್ನಡದ ಸತ್ಯ ಪೀಠಗಳು

ಕನ್ನಡ ಮಣ್ಣಿನ ಕಣಕಣಗಳು
ಕರುಣೆ ಬಿತ್ತುವ ಕನ್ನಡಿಗರ ಹೊನ್ನಿನ ಮನಗಳು..
ಕನ್ನಡ ಕವಿಪುಂಗವರು,ಕನ್ನಡ ಗಾನಕೋಗಿಲೆಗಳು
ಕನ್ನಡಾಭಿಮಾನ ಹರಿಸುವ ಕನ್ನಡಾಂಬೆಯ ಜ್ಯೋತಿಗಳು..
ಕದನಕೆ ಅಳುಕದೆ ನಾಡನು ಕಟ್ಟಲು
ಹೋರಾಡಿದರು ಕನ್ನಡದ ರಾಜಮಹಾರಾಜರುಗಳು..
ಮರಣಕೆ ಅಂಜದೆ ನಾಡನು ರಕ್ಷಿಸಲು
ವೀರಮರಣವಾದರು ಕನ್ನಡದ ವೀರಾಧಿವೀರರುಗಳು.." "

ಓ ಕನ್ನಡಿಗ ಕನ್ನಡಕ್ಕಾಗಿ ನೀ ಎಚ್ಚರಗೊಳ್ಳು
ಓ ಕನ್ನಡಿಗ ಕನ್ನಡಕ್ಕಾಗಿ ನೀ ಸ್ಫೂರ್ತಿಗೊಳ್ಳು..
ನುಗ್ಗಿ ಬರಲಿ ನಾಡಿನೊಳಗೆ ಸಾವಿರ ಭಾಷೆಗಳು
ನರನಾಡಿಯಲ್ಲಿ ಭೋರ್ಗರೆಯಲಿ ಕನ್ನಡಾಭಿಮಾನದ ಸಾಗರಗಳು..
ಕನ್ನಡವೇ ನಿನ್ನ ಮಂತ್ರವಾಗಬೇಕು
ಕನ್ನಡವೇ ನಿನ್ನ ಅಸ್ತ್ರವಾಗಬೇಕು..
ಕನ್ನಡಾಭಿಮಾನಿಗಳಿಗೆ ನೀ ಮಾಡು ಕೋಟಿ ವಂದನೆ
ಕನ್ನಡ ದುರಾಭಿಮಾನಿಗಳಿಗೆ ನೀ ಕೊಡು ಚಾಟಿ ದಂಡನೆ..
ಕನ್ನಡ ಝೇಂಕಾರ ಮೊಳಗಲಿ ಯುಗಯುಗಗಳು
ಕನ್ನಡಿಗರ ಬಾಳು ಬಂಗಾರವಾಗಲಿ ಪ್ರತಿಕ್ಷಣಗಳು..

- ಸುರೇಶ್ ಟಿ ವಿ

27 Feb 2018, 08:53 am