Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಿಕ್ಕಿ

ಚಿಕ್ಕಿ,ಚಿಕ್ಕಿ, ಚಿಕ್ಕಿ, ನನ್ನಯ ಪ್ರೀತಿಯ ಚಿಕ್ಕಿ,
ಎಲ್ಲರ ಬಾಯಲು ನೀರೂರಿಸುವ ರುಚಿ ರುಚಿಯಾದ ಚಿಕ್ಕಿ!
ಕಡಲೆ,ಕೊಬ್ಬರಿ,ಎಳ್ಳನು ಸೇರಿಸಿ ಬೆಲ್ಲದ ಪಾಕವ ಕಲೆಸಿ ಮಾಡಿದ
ರುಚಿ ರುಚಿಯಾದ ಚಿಕ್ಕಿ! 1!

ಕಬ್ಬಿಣ, ಪ್ರೋಟೀನ್, ಪೊಟ್ಯಾಶಿಯಂ, ಸೋಡಿಯಂ
ಎಲ್ಲವೂ ಉಳ್ಳ ರುಚಿಕರ ಚಿಕ್ಕಿ!
ಹಿರಿಯರ, ಕಿರಿಯರನೆಲ್ಲರ ಮೆಚ್ಚಿಸೊ
ರುಚಿ ರುಚಿಯಾದ ಚಿಕ್ಕಿ!2!

ಉಪದ್ರವಿಲ್ಲದೆ, ಕಹಿಯೂ ಅಲ್ಲದೆ
ಒಳಿತನೇ ಮಾಡುವ ಈ ಚಿಕ್ಕಿ!
ಖರ್ಚೂ  ಕಡಿಮೆ, ವಿಧ ವಿಧ ರೂಪದ
ರುಚಿ ರುಚಿಯಾದ ಚಿಕ್ಕಿ!3!

-ಡಾ! ಸಿ. ಮುರಳೀಧರ

- ಡಾ!ಸಿ.ಮುರಳೀಧರ

03 Feb 2018, 03:00 pm

ನಲ್ಲೆಯ ನೆನಪು

ಕನಸಲಿ ಬಂದು ಕಾಡುವ ಕನ್ಯೆಯ ನಿದ್ದೆಯ ತೊರೆದು ಮರೆಬಹುದು,

ನೆನಪಲೆ ನಿಂತು ನಿತ್ಯವು ನೋಯಿಪ ನಲ್ಲೆಯನೆಂತು ನಾ ಮರೆಯುವುದು!!

ಓಗರದಲ್ಲಿಪ ಬೆಣ್ಣೆಯನೊಮ್ಮೆ ಪಕ್ಕಕೆ ಸರಿಸಿ ಉಣಲಹುದು,ಹಾಲಲೆ ಬೆರೆತಿಹ ಬೆಣ್ಣೆಯ ಜಿಡ್ಡನನೆಂತು ತಾನೆ ಹೊರ ಸರಿಸುವುದು!!

ನದಿಯಲಿ ಮುಳುಗುತ ಚಡಪಡಿಸುವನ ಹುಟ್ಟು ಹಾಕಿ ಉಳಿಸಲಹುದು,

ಸುನಾಮಿಗೆ ಸಿಲುಕಿದ ಅಂಬಿಗ ತನ್ನಯ ನಾವೆಯನೆಂತು ಉಳಿಸುವುದು!!

ಮುಂಜಾವಿನ ಮಂಜು, ತಂಗಾಳಿಯ ತಂಪು, ಹಚ್ಚನೆಯ ಹಸಿರುಗಳಿಲ್ಲದೆಯೂ ಇರಲಹುದು,

ಶ್ರವಣದಿ ಶ್ರಾವ್ಯ, ನೋಟದೆ ದೃಷ್ಟಿ, ಪ್ರಾಣದ ವಾಯುವ ತೊರೆದು ಹೇಗೆ ನಾ ಜೀವಿಪುದು!!

ಡಾ! ಸಿ. ಮುರಳೀಧರ

- ಡಾ!ಸಿ.ಮುರಳೀಧರ

03 Feb 2018, 02:57 pm

ಮೊಬೈಲ್ ಎಂಬ ಮಹಾ ಮಾಂತ್ರಿಕ

ಬಂದ ನೋಡು ಮೊಬೈಲ್ ಎಂಬ ಮಹಾ ಮಾಂತ್ರಿಕ
ಹಿಡಿದ ನೋಡು ತನ್ನ ಮುಷ್ಟಿಯಲ್ಲಿ ಇಡಿಲೋಕ
ಕುಂತರೂ ನಿಂತರೂ ಇವನದೇ ಧ್ಯಾನ
ಮಲಗಿದರೂ ಎದ್ದರೂ ಇವನದೇ ಗಾನ
ಇವನೇ ಕೃಷ್ಣ, ಇವನೇ ರಾವಣ "ಪ"

ಇವನ ತಲೆಯಲ್ಲಿವೆ ಕಂಪನಿಗಳೆಂಬ ತಂತ್ರ
ಇವನ ಬಾಯಲ್ಲಿವೆ ಸಿಮ್ ಆಫರ್ ಗಳೆಂಬ ಮಂತ್ರ
ಇವನ ಮೈಯಲ್ಲಿವೆ ಆಪ್ ಗಳೆಂಬ ಅಸ್ತ್ರ
ಛಾರ್ಜರ್ ಎಂಬಾತ ಇವನ ಪ್ರಾಣಮಿತ್ರ
ಎಸೆಯುವನು ವ್ಯಾಲಿಡಿಟಿ ಎಂಬ ಬ್ರಹ್ಮಾಸ್ತ್ರ
ಇವನ ಮಾಟಕೆ ಹಳೆ ಜಾದೂಗಾರರೆಲ್ಲ ಅತಂತ್ರ "

ಇವನದು ಏಳುಸುತ್ತಿನ ಕೋಟೆ
ಚಕ್ರವ್ಯೂಹದಂತೆ ನಿನಗೆ ಇವನ ಬೇಟೆ
ಹೊರಬರಲಾಗದು ಕಟ್ಟುವವರೆಗೆ ನಿನ್ನ ಗಂಟುಮೂಟೆ " "

ನೀ ತಿಳ್ಕೋ ಇವನ ಪ್ಲಾನು
ಕಾಲ್ ಗಳು ಸರ್ಚ್ ಗಳು ನಿನ್ನ ಗನ್ನು
ಮೆಸೇಜ್ ಗಳು ವಿಡಿಯೋ ಗಳು ನಿನ್ನ ಕಣ್ಣು
ಸರಿಯಾಗಿ ಯ್ಯೂಸ್ ಮಾಡಿದರೆ ಆಗುವೆ ವಿನ್ನು
ಅಡ್ಡದಾರಿ ಹಿಡಿದರೆ ನೀ ಸೇರುವೆ ಮಣ್ಣು " "

- ಸುರೇಶ್ ಟಿ ವಿ

03 Feb 2018, 09:03 am

ಲೋಕದ ಮ್ಯಾಗಲ ಪಾಪಿ ದೇವರ.....

ಲೋಕದ ಮ್ಯಾಗಲ ಪಾಪಿಯ ದೇವರು
ಜಾತಿಯಮ್ಯಾಲ ಹರಿಸ್ಯಾನು ರಕ್ತವ
ಪಾಪಿ ಮನುಜರು ಕಟುಕರ ಮನ ತಾಳಿ
ಜಾತಿಗಾಗಿ ಜೀವವ ಬಿಟ್ಟಾರು
ಸ್ವಚ್ಛಂದ ಜಗಕೆಲ್ಲ ಜಾತಿಯ ಕಳಂಕ ಹಚ್ಯಾರು ಬುದ್ದಿ ಹೆಚ್ಚಾದವರು......

ಹಿಂದು ಮುಸ್ಲಿಂ ಸಿಖ್ ಸಾಯಿ ಕ್ರೈಸ್ತನೆಂಬ ದೇಹದೋಳಗ
ಜಾತಿಯ ಮಠ ಕಟ್ಟಿ ಉಳಿದವರ ಬಾಳಿಗೆ ಬೆಂಕಿ ಹಚ್ಚಿ
ಕೆಂಪಾನ ರಕ್ತ ಭಾನೆತರಕ ಚೆಲ್ಲಿ
ಕೇಕೆ ಹಾಕುತ್ತಾ ಮನುಜ ನಗತಾನ
ಮನದೊಳಗೇ ಶಾಂತಿಲ್ಲ ಮಸಣದಲಿ ಜಾಗವಿಲ್ಲ
ಹಾದಿಯ ಹೆಣವಾಗಿ ಜಾತಿಯ ಕಿಚ್ಚಯೆರಚಿ..

ಹುಟ್ಟುವಾಗ ನೀ ಅಳುತಲೆ ಹುಟ್ಟೆದೆ
ಸತ್ತಾಗ ಬೆರೆಯವರನ್ನ ಅಳಿಸಿದೆ
ಜಾತಿ ಮತವೆಂಬ ಬಿಜವ ನೀ ಬಿತ್ತಿ ಸತ್ತು ನಿ ಉಳಿದೇ
ಆ ದೇವರ ಬಳಿ ನೀ ಹೋದಾಗ ಜಾತಿ ಎಂದರೆನ ನೀ ಕೆಳ
ಪಾಪಿ ದೇವರ ಲೋಕದ ಮ್ಯಾಲ ನಾ ಹರಿಸೆನೊ ರಕ್ತ ಎಂದ ಹೇಳ ............
........✍ಈಶ್ವರಯ್ಯ ಬಿದನೂರಮಠ

- ishwar

03 Feb 2018, 08:15 am

ನನ್ನದೆನ್ನುವದು ಏನಿದೆ ಎನಗೆ

ನನ್ನದೆನ್ನುವದು ಏನಿದೆ?

ಅಳುತಲಿ ಹುಟ್ಟಿ ನಾಮ ಪಟ್ಟವ ಕಟ್ಟಿ
ಹೆಸರಿಟ್ಟರು ಬೇರೊಬ್ಬರು ಎನಗೆ
ಹೆಣ್ಣು ಎಂಬ ಭೇದದಿಂದ ಬಾಲ್ಯ ಕಸಿದೆರೆನ್ನ
ಆಟ ಬಿಟ್ಟೆ ಪಾಠ ಬಿಟ್ಟೆ ದುಡ್ಡಿಗಾಗಿ ದುಡಿಮೆಗೆ ಹೊರಟೆ
ನನಗಾಗಿ ಅಲ್ಲಾ ನಮ್ಮವರಿಗಾಗಿ
ಅಳುತಲಿ ಹೇಳಿದೆ ನನ್ನದೆನ್ನುವದು ನನಗೆ ಏನಿದೆ.

ಬಾಲ್ಯ ಕಳಿದ ಹೊಸದರಲ್ಲಿ ಮನೆಗೆ ಭಾರವಾದೆ
ಇಲ್ಲ ಸಲ್ಲದ ಅಪಾದನೆಗೆ ನಾನು ಗುರಿಯಾದೆ
ಕಡಲಿನಾ ಒಡಲ ತೊರೆದ ಬಂದಿಯಾದೆ ಗಂಡನಿಗೆ
ವರುಷ ತುಂಬುವದ್ರೊಳಗೆ ಸಂತಾನವಾದವು ನಮ್ಮಿಬ್ಬರಗೆ
ಮತ್ತೆ ಕೆಲವು ದಿನಗಳು ಕಳೆದರೆ ಗಂಡನ ಪ್ರೀತಿ ಇಲ್ಲವಾಯಿತು
ಮತ್ತೆ ಅದೇ ಹಳೇ ದಿನಗಳು ಮರುಕಳಿಸಿದವಲ್ಲ
ಈ ಜಗದೊಳಗೆ ನನ್ನದೆನ್ನುವದು ನನಗೆ ಏನು ಇದೇ.

ಮಗುವಿನ ಮುಖ ನೋಡಿದೆ
ಬದುಕಿನಲಿ ಹರುಷ ಮತ್ತೆ ತುಂಬಿದೆ ಏನ ಮನದೊಳಗೆ
ಕಷ್ಟವೂ ನಷ್ಟವೂ ಸಮಾಜದಲ್ಲಿ ಮಗನಿಗೆ ಸ್ಥಾನವ ದೊರಕಿಸುವಲ್ಲಿ ಸಮಯಕಳೆದೆ
ಮಗನಿಗೆ ಮದುವೆ ಮಾಡಿ ಉಣ್ಣ ಬಾರದ್ದನ್ನು ನಾ ಉಂಡೆ
ಸೂಸೆಯಿಂದ ಭೈಸಿಕೋಂಡೆ ಮಗನಿಗೆ ನಡೆದ ವರದಿ ಒಪ್ಪಿಸಿದೆ
ಮತ್ತೆ ಮತ್ತೆ ಅನಿಸುವದು ನನ್ನದೆನ್ನುವದು ನನಗೇನು ಇದೇ.

ಉದಯ ಪೂರ್ವದೊಳು ಎಚ್ಚರಿಸಿದಾ ಮಗನು
ಅಚ್ಚರಿಯೇ ಕಾದಿತ್ತು ನನಗೆ ಆ ದಿನದಂದು
ಮಗುವಿನಂತೆ ಕೈ ಹಿಡಿದು ಕರೆದುಕೊಂಡು ಹೊರಟನು
ಅಂತ್ಯಕಾಲಕ್ಕೆ ಚಿಂತೆ ಇಲ್ಲದೆ ಸಂತೆಯಲ್ಲಿ ನಿದ್ದೆ ಬಂದಂತಾಯಿತು
ಹಾಗೆಯೆ ಎಚ್ಚರಿಕೆಯ ಗಂಟೆಯು ಹೊಡೆಯಿತು ವೃದ್ಧರ ಆಶ್ರಮ ಬಳಗಕ್ಕೆ ನಾ ಸೇರಿಕೊಳ್ಳಲು
ಆಶ್ರಮದ ಆಸನ ಬಿಟ್ಟರೆ ನನ್ನದೆನ್ನುವದು ನನಗೇನು ಇದೇ ಈ ಜಗದೊಳಗೆ........
✍ಈಶ್ವರ್ ಬಿ

- ishwar

03 Feb 2018, 08:12 am

ನಾನು ಕವಿಯಾದೆ

ನೀನು ದೂರವಾದೆ ಎಂದು
ನಾನು ವ್ಯಥೆಪಡುತ್ತಿಲ್ಲ ಗೆಳತಿ.
ಗರ್ವ ಪಡುತ್ತೇನೆ.
ಏಕೆಂದರೆ ?
ನೀನು ದೂರವಾದಾಗಿನಿಂದ
ನಾನೊಬ್ಬ ಕವಿಯಾಗಿರುವೆ.

ಪಿ.ಡಿ. ಮಂಜು

- Manjunath

02 Feb 2018, 07:22 pm

ಗರತಿ

ಮುದ್ದಾದ ಮಕ್ಕಳು ಮಡಿಲಲ್ಲಿ
ನಲಿದಿರಲು,ಅನ್ಯರ ಸಂಘ ನಿನಗೇಕೆ!ಗರತಿ
ಮುದ್ದಾಡಿ ನೋಡೆ ಮನೆದೇವರ

ಮುಗ್ದ ಇನಿಯನ ಕಣ್ಣೀಗೆ ಮಣ್ಣೆರಚಿ
ಮುಸುಕಿನ ಗುದ್ದಾಟ ನಿನಗೇಕೆ!ಮನೆಯೊಡತಿ
ಮಾಂಗಲ್ಯಭಾಗ್ಯ ಉಳಿಸಿಕೋ ಕೊನೆಗೆ

ರಜ ಒಡೆದು ಶುಚಿ ಮಾಡೋ
ಗರತಿ ನೀನು !ನೀನೆ ಕಸವಾಗೆ
ಕೊಳೆತು ನಾರುವುದೆ ಮನೆಯಂಗಳ

ಕರುಳಕುಡಿಗೆ ಸರಿ ದಾರಿ ತೋರಿ
ಬೆಳೆಸೋದು ನಿನ್ನ ಹೊಣೆ! ನೀನೆ ಹಾದಿತಪ್ಪೆ
ಸರಿದಾರಿ ತೋರೋರ ನಾ ಕಾಣೆ.

ಈ ಜಗದಲಿ ಭಾರತ ನಾರಿ
ತೋರುವಳು ಹಿರಿಮೆಗೆ ದಾರಿ
ನೀನಾಗದಿರು ಅದಕೆಂದು ಮಾರಿ
ತಿದ್ದಿಕೋ ನೀ ನಿನ್ನ ದಾರಿ.



ಶಾರಧ

- ಶಕುಂತಲಾ

02 Feb 2018, 03:57 pm

ಗ್ರಹಣ

ಕವಿದಿರುವ ಕಪ್ಪು ಅಂಗಳಲಿ
ತಾರೆಗಳ ಶ್ವೇತ ರಂಗೋಲಿ
ಕೆಂಪಾದ ಬೋಗುಣಿಯಾಗಿ
ಓಲಾಡಿದ ನಿರಾಧಾರವಾಗಿ
ಶಶಿಯು,ರವಿ-ಧರೆಯ ಜೊತೆಯಾಗಿ

ಅಪರೂಪದಲ್ಲಿ ಅಪರೂಪವಾಗಿ
ಮೂಡಿದೆ ನೀ ಬಾನಂಗಳಲ್ಲಿ ಚಿತ್ತಾರವಾಗಿ
ಆ ಅಂದವ ಕಾಣದೆ ಅವಿತು ಕುಳಿತೆವು
ಅಂಧರಾಗಿ ,ಮೌಢ್ಯಕೆ ವಶವಾಗಿ

ಸ್ತಬ್ದವಾಯಿತು ನಗರದ ಬೀದಿಗಳು
ನಿನಗಿಡಿದ ಗ್ರಹಣ ಬಿಡುವವರೆಗು
ಎಲ್ಲೆಲ್ಲು ಒಳಿತು- ಕೆಡುಕುಗಳ ಹಾವಳಿ
ನಮ್ಮ ಹಾರವರಿಗೆ ನಿನಾದೆ ಬಳುವಳಿ



ಶಾರಧ

- ಶಕುಂತಲಾ

02 Feb 2018, 03:36 pm

ನೆನಪುಗಳು

ನಾವಿಬ್ಬರೂ ಕುಳಿತಿದ್ದ ಜಾಗದಲ್ಲಿ
ನಾನಿಂದು ಏಕಾಂಗಿಯಾಗಿ ಕುಳಿತಿರುವೆ.
ಆದರೂ ಏಕಾಂಗಿ ಅನಿಸುತ್ತಿಲ್ಲ
ನಿನ್ನ ನೆನಪುಗಳು ನನ್ನ ಜೊತೆಗಿವೆ.

- Manjunath

02 Feb 2018, 08:25 am

ಮಂಜಿನ ಮಗಳು

ತಿಳಿ ಮಂಜಿನ
ಮಳೆ ಮಾತಿಗೆ
ಹಸಿರಾಗಿರೋ ಭೂಮಿಯೇ ಸಾಕ್ಷಿಯೂ...
ಚಂದ್ರ ಬಣ್ಣದ
ಚಂದಗಾತಿಗೆ
ತನುಹಾಡಿದೆ ಸುಂದರ ಗೀತೆಯೂ.....
ಅನುಗಾಲದ ಅನುರಾಗವೂ
ಅನುವಾದದಿ ಹಾಡಾಗಿದೆ.
ಅನುಬಿಂಬದ ಅನುಕರಣೆಯ
ಅನುಬಂದದಿ ಜೇನಾಗಿದೆ...
ಎಲ್ಲುಂಟು ಸಾಟಿ
ನನ್ನೆದೆಯ ಮೀಟಿ
ಕೊರೆಯುತ್ತಿರೋ ನಿನ್ನ ಬ್ಯೂಟಿಗೆ...
ಮೇಘವನು ದಾಟಿ
ಹೃದಯಕ್ಕೆ ನಾಟಿ
ಸೆಳೆಯುತ್ತಿರೋ ಕಣ್ಣಾ ಏಟಿಗೆ.....
ಕೆ.ಜೆ.ಎಸ್.ಗೌಡ್ರು.ಹುಣಸೂರು..

- shasi kumar

02 Feb 2018, 08:14 am