ಕಪ್ಪು ಕಾಡಿಗೆಯು ಕೈಬಿಸಿ ಕರೆದಿತ್ತು ನಿನ್ನಯ ಮೊಗ ಕಾಣಲು ......
ನಿನ್ನದೆ ಅಮಲು ಹೇರಿದೆ ನನ್ನನೆ ಮರೆಸಿದೆ ....
ಇಂಪಾದ ಗಾನಕ್ಕೆ ಕರ್ಣವು ಸೊತಿತ್ತು ತನ್ನನ್ನೆ ತಾಮರೆತಿತ್ತು....
ನಿನ್ನಯ ಸ್ವರವ ಕೇಳುತ ಸ್ವರದಲೆ ಬೆರೆಯುತಾ
ಆ ಚಂದ್ರ ಮೋಡದಿ ಮರೆಯಾದ ನಿನ್ನ ಕಣ್ಣಲ್ಲಿ ಬಂದು ಸೆರೆಯಾದ ....
ಆ ಹುಣ್ಣಿಮೆ ಬೆಳಕು ಚೆಲ್ಲುವ ನಗೆಯು ನಿಂದೆನಾ
ಹೇಳಲು ಆಗದ ಬಹು ನಾಚಿಕೆ ನಾಚಿಕೆ ಮೂಡಿದೆ ನನ್ನಲಿ.....
ತವರಿನ ನೆರಳು ನನ್ನ ತಟ್ಟಿ ಎಬ್ಬಿಸಿತೆ
ಅಪ್ಪನ ಕೂಗಿನಂತೆ ಆತ್ಮೀಯತೆಯ ತುಂಬಿ,
ಭುಜಕೆ ಒರಗಿ ಕುಂತ ಕ್ಷಣದಿ ಮರೆತೆ ಒಡಲ ನೋವ
ಕಣ್ಣ ಅಂಚು ಪ್ರೀತಿಯ ಸವಿಯಲು ಆರಂಭಿಸಿದ ಜಾವ.
ನೆತ್ತಿ ಸವರಿ ಧೈರ್ಯ ತುಂಬಿದ ಕೈ
ಮಮತೆಯ ಋಣವು ಜನುಮದಲ್ಲಿ ತೀರಿಸಲು ಆಗುವುದೇ ಈ ನೊಂದ ಮನವು!
ಮರುಕಳಿಸಿ ಬರಬಾರದೆ ನಿನ್ನೊಡನೆ ನಾನಿದ್ದ ಕ್ಷಣವೂ!
ಸಿಹಿ ಇಲ್ಲದ ಸವಿಯೂಟ ಸವಿಯುತ್ತ
ನಿನ್ನ ಅಕ್ಕರೆಯ ನೋಟ
ನಾನೆಂತು ಹೇಳಲಾಗುವುದು
ಮೀರಿ ಈ ನೋವು ನಲಿವಿನ ಆಟ,
ಕಿರು ಬೆರಳ ತುದಿ ಹಿಡಿದು ನಡೆದೆನಲ್ಲಾ
ಪುಟ್ಟ ಮಗುವಾಗಿ ನಿನ್ನೊಡನೆ ಅಪ್ಪ
ಕೇಳಿಯು ಬಾರದ ನನ್ನ ಮನದ ಕೂಗು
ನಿನ್ನ ಹೃದಯದ ಬದಿಗೆ.
ತವರ ಹೆಸರು ಅಸಂಪೂರ್ಣ
ನಿನ್ನ ಮಮತೆ ಇಲ್ಲದೇನೆ,
ಕಂಡ ಕನಸ ಮನಸ ಮನನ ನಿರತ
ನಿನ್ನ ನೆನೆವ ಈ ಮನಕೆ
ನನಸಲ್ಲವೆಂದು ಹೇಗೆ ತಿಳಿಸಲಿ ನಾ.......
ಬದಲಾಗದು ಈ ಸಮಾಜದ ದೊರಣಿ
ಹೆಣ್ಣಿಗೆ ಎಂದಿಗೂ ಸಿಗದು ಸಮಾನತೆ
ಪ್ರತಿ ಕ್ಷಣವೂ ಪಂಜರದಲ್ಲಿ ಇಟ್ಟು ಸಾಯಿಸುವ ಬದಲಾಗಿ ಜನಸಿದ ಶಿಶುವನು ಸಾಯಿಸಿ
ಸಂತಸ ಪಡಬಹುದಲ್ಲವೇ ಈ ಜನರು!!
ಜಾನುವಾರುಗಳಿಗಿಂತ ಕಡೆ ಇವರು
ಅವರವರ ಇಷ್ಟದ ತಾಳಕ್ಕೆ ತಕ್ಕಂತೆ ಹೆಣ್ಣನ್ನು ಕುಣಿಸುವರು,ನೂರಾರು ಷರತ್ತುಗಳನ್ನು ಕಾಣಿಕರವಿಲ್ಲದೆ ವಿದಿಸುವರು!!
ಉಸಿರಾಡುವ ಬಗೆಯಲ್ಲೂ ಹೆಚ್ಚು ಕಡಿಮೆ ಹುಡುಕುವರು,ಗಂಡು ಹೆಂಡ ಕುಡಿದು ಬಂದರೂ ರುಂಡ ಮುಂಡ ಅಲುಗಾಡಿಸದೆ ಸುಮ್ಮನಿರುವ ಮಾತಿಲ್ಲದ ಮೂಕರಿವರು!!
ಹೆಣ್ಣು ಕುಂತ ಜಾಗದಿಂದ ಎದ್ದು ನಿಂತರು ಸಭ್ಯತೆ ಕಲಿತಿಲ್ಲ ಎಂದು ಅಸಭ್ಯ ಮಾತಾನಾಡುವರು,
ಪ್ರಪಂಚ ಇರುವುದು ಉಸಿರಾಡುವ ಪ್ರತಿಯೊಂದು ಜೀವಿಗೆಂದು ಮರೆತಿರುವರು, ಹೆಣ್ಣಿಗೆ ನಾಲ್ಕು ಗೋಡೆಯ ಮಧ್ಯೆ ಒಂದು ನೆರಳಿನ ಕಾವಲಿಟ್ಟು ಹೆಗಲ ಮೇಲೆ ಏರಿ ಕುಂತ ಧೂಳ ಹೊರೆಸಿ ನಡೆವರು!!
ಬದಲಾವಣೆ ಬಯಸಿ ನಾ ಬರೆದ ಈ ಒಂದು
ಕವನ ತಟ್ಟಿ ಎಬ್ಬಿಸ ಬಾರದೆ ಮಾನವೀಯತೆಯನು?
ಈ ಜನರಲ್ಲಿನ ಲಿಂಗ ತಾರತಮ್ಯ ಕಿಂಚಿತ್ತಾದರು ಸುಟ್ಟು ನನ್ನ ಕಣ್ಣೀರ ಬಿಸಿಗೆ
ಬೂದಿ ಆಗಬಾರದೆನು?
ನೆನಪಿನ ಹೊಳೆಯಲಿ..
ನಿನ್ನ ನೆನಪು ಮಸುಕು..
ಆದರೂ ಮನ ನಸುನಕ್ಕು..
ಹೇಳುತಿದೆ ಗೆಳತಿ..
ಬಾಳಿನ ಬವಣೆಯಲಿ..
ಕಳೆದುಹೋಗಿ..
ಸ್ನೇಹವೆಂಬ ಕಡಲಿನಲಿ..
ಮತ್ತೆ ಸಿಕ್ಕ ಸುಂದರ ಮುತ್ತು..
ನೀ ನನ್ನ ಬಾಳಿಗೆ ಯಾವತ್ತು....