Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮ........!!!!!!

ನೀರಿಲ್ಲದೆ ಮೀನುಗಳಿಲ್ಲ,
ಸೂರ್ಯನಿಲ್ಲದೆ ಬೆಳಕಿಲ್ಲ,
ಮಳೆಯಿಲ್ಲದೆ ಬೆಳೆಯಿಲ್ಲ,
ತಾಯಿ ನೀನಿಲ್ಲದೆ ನಾವಿಲ್ಲ.

ನವಮಾಸ ನರಳಿ ಜನ್ಮಕೋಟ್ಟೆ ನಮಗೆ,
ವರ್ಣಿಸಲಿ ಹೇಗೆ ನಿನ್ನ ಮಹಿಮೆಯ ಬಗ್ಗೆ,
ಅದಕ್ಕಾಗಿ ಬರೆಯುತ್ತಿರುವೆ ನಿನಗೆ ಈ ಕವಿತೆ,
ನಮ್ಮಗೆಲ್ಲರಿಗೂ ನೀನೆ ದೇವತೆ.

ತಾಯಿ ನನ್ನ ಬೆಳೆಸಲು ಪಟ್ಟ ಕಷ್ಟ,
ನೋಡಿ ಅನುಭವಿಸಲಾರೆ ನಷ್ಟ,
ಖುಷಿಯಾಗಿ ನೀನು ಇರಲು,
ಆಗುವೆ ನೀನಗೆ ಊರುಗೋಲು.

ತಾಯಿ ನಿನ್ನ ಮುಗಳ ನಗೆ,
ಇರಿಸುತ್ತೆ ನಮ್ಮನ್ನು ತಣ್ಣಗೆ,
ನೀನೆ ಇರುವಾಗ ನಮ್ಮ ಜೊತೆಗೆ,
ಭಯವೇಕೆ.......ತಾಯಿ ಜಗವೇಕೆ??????

- manu

30 Dec 2017, 08:22 pm

ಮೂರನೇ ಮಹಾ ಯುದ್ದ ಬೇಕೆ

ಮೂರನೇ ಮಹಾಯುದ್ದ ಬೇಕೆ
ಮನುಷ್ಯ ಮನುಷ್ಯರ ನಡುವಿನ ಸ್ವಾಥ೯ಕ್ಕೆ
ಜಾತಿ ಧಮ೯ದ ಬಣ್ಣ ಲೇಪನ ಮಾಡಲೇಕೆ
ಮಾನವ ನಿನಗೆ ವಿಶ್ವಧಮ೯
ಯಾವುದೇಂದು ತಿಳಿದಿಲ್ಲವೇಕೆ

ಬಸವ, ಬುದ್ದ,ಏಸು,ಪೈಂಗಬರ್
ಸಾರಿ ಸಾರಿ ಹೇಳಿದ ಧಮ೯ದ
ಸಾರವೆಲ್ಲಾ ಒಂದೇ..
ಮೊದಲು ಮನುಜನಾಗಬೇಕಿದೆ ನೀನೀಗ ಇಂದೇ
ಇಡೀಭೂಲೋಕವನ್ನೆ ಸುಟ್ಟು ಬಿಡಬಲ್ಲೆನೆಂಬ ದುರುಳುತನ
ಸ್ವಾಥ೯ಕ್ಕಿದೆ
ಅದ ಮೆಟ್ಟಿನಿಲ್ಲುವ ಮನುಜ ಪಥದ ಶಕ್ತಿಯೂ ನಮ್ಮಲ್ಲಡಗಿದೆ
ವಿಶ್ವ ಶಾಂತಿಯ ಬಯಸುವ ಮನಸ್ಸುಗಳು ಒಂದಾಗಬೇಕಿದೆ
ವಿಶ್ವಪ್ರೇಮ ಎಲ್ಲರ ಮನದಾಳದಲ್ಲೂ ಹರಡಬೇಕಿದೆ
ಮನುಕುಲದ ಉದ್ದಾರಕ್ಕಾಗಿ
ವಿಶ್ವಧಮ೯ದ ನೀಜಸಾರ ತಿಳಿಯಬೇಕಿದೆ

ಪ್ರೀತಿಯಿಂದ ಅರಿತು ನಡೆದರೆ
ಮಹಾಯುದ್ದದ ಅಗತ್ಯವೇನಿದೆ
ದ್ವೇಶ ಅಸೂಹೆ ಅಹಂಕಾರಗಳಡಗಿ
ಮನಮನಸ್ಸುಗಳ ಬೇಸೆಯ ಬೇಕಿದೆ
ನವಯುಗದ ಆರಂಭಕ್ಕಾಗಿ ಹೋಸ ಚೇತನದ ಸೂಯ೯ ಎಲ್ಲರ ಮನದಾಳದಲ್ಲಿ
ಉದಯಿಸಬೇಕಿದೆ
ಶಾಂತಿ ಮಂತ್ರವ ಪಠಿಸಬೇಕಿದೆ..

- Bhagya Girish

30 Dec 2017, 07:29 pm

ನನ್ನ ಪಾಲಿನ ದೇವತೆ.....

ಕಣ್ಣೇರಿನಲಿ ನೀ ಇದ್ದೆ
ನಿದ್ದೆ ಇಂದ ನಾ ಎದ್ದೆ .
ನನ್ನನ್ನು ನೋಡಿದ ಆ ಕ್ಷಣವೇ
ನಿನಗೆ ಖುಷಿಯಾಯಿತಲ್ಲವೇ?
ದಾನ ಮಾಡಿದೆ ನನಗೆ ನಿನ್ನ ರೂಪವ
ನನ್ನ ಜೀವಕೆ ಕೊಟ್ಟೆ ನೀ ಒಂದು ದೇಹವ.
ನನ್ನ ಪುಟ್ಟ ಕೆನ್ನೆಗಳಿಗೆ ನೀ ಕೊಟ್ಟ ಮೊದಲ ಮುತ್ತು
ಹೊಸ ಜಾಗಕ್ಕೆ ಕಾಲಿಡಲು ಧೈರ್ಯ ತುಂಬಿತು.
ನಾ ಬಿದ್ದರೆ ನಿನಗೆ ನೋವು
ನಾ ತಿನ್ನದಿದ್ದರೆ ನಿನಗೆ ಹಸಿವು.
ಸದಾ ತಾಳ್ಮೆಯಿಂದ ನೀ ಇದ್ದೆ
ನನ್ನನ್ನು ತಿದ್ದುವುದಕ್ಕಾಗಿ ಒಂದೆರಡು ಒಡೆದೆ.
ನನ್ನ ನೋವನ್ನೆಲ್ಲ ನೀ ಸ್ವೀಕರಿಸಿದೆ
ನಿನ್ನ ಖುಷಿಯನ್ನೆಲ್ಲ ನನಗೆ ಕೊಡುಗೆ ನೀಡಿದೆ.
ನನಗಾಗಿ ನಿನ್ನ ಜೀವನವನ್ನೇ ತ್ಯಾಗ ಮಾಡಿರುವೆ
ನಿನ್ನ ಋಣವ ಏಳೀಳು ಜನುಮದಲ್ಲೂ ತೀರಿಸಲಾರೆ.
ನೀನೇ 'ನನ್ನ ಪಾಲಿನ ದೇವತೆ'ಯಾಗಿರುವೆ
"ಅಮ್ಮ....." ನೀ ಎಂದೆಂದಿಗೂ ನನ್ನವಳೇ....

- Priyanka H.S

30 Dec 2017, 07:29 pm

ಭರವಸೆ..

ಬಿಡು ಗೆಳತಿ, ಕಾಣೆಯಾದ ಕನಸುಗಳನ್ನು
ಕಟ್ಟಿಕೊಳ್ಳೋಣ ನಾವೇ ಹೊಸ ಭರವಸೆಗಳ
ಪುಟ್ಟ ಗುಡಿಸಲನ್ನು,
ಗುಡಿಸಿ ಒರೆಸಿ ಹಚ್ಚೋಣ
ದಿಟ್ಟ ಮನದ ದೀವಟಿಕೆಯನ್ನು,
ಕಿತ್ತು ತರುವೆನು ನಿನಗಾಗಿ
ಸಿಹಿ ಸುಖದ ಸವಿಜೇನನ್ನು,
ಉಣಿಸುವನು ಕಯ್ಯಾರೆ ಸವಿಜೇನ ಅಕ್ಕರೆಯ
ನಿನ್ನ ನಗುವಲ್ಲಿ ಕಲೆತ ಸಿಹಿ ಸಕ್ಕರೆಯ,
ನಿನ್ನ ಮಮತೆಯ ಮೃದಂಗ
ತೊಂ ತನನ ನುಡಿದಿಹುದು
ನನ್ನ ಅಂತರಂಗದೊಳಗ,
ಕರೆಯೊಂದ ನೀ ಏಕೆ ಚೆಲ್ಲುವೆ ಚೆಲುವೆ
ಕರೆಯದಿದ್ದರೂ ನಾ ಬಂದು ನಿಲ್ಲುವೆ
ನಿನ್ನ ಮನದ ಅಂತಪುರದೊಳಗೆ.

- ಶ್ರೀಗೋ.

30 Dec 2017, 01:07 pm

ನೀನೆಂದೂ ನನ್ನ ಬಿಟ್ಟು ಹೋಗದಿರು

ಒಂಟಿ ಹೃದಯ ನನಾಗಿರುವಾಗ ,ನನೊಂದಿಗಿರುವೆ ಸದಾ ಎಂಬ ಭರವಸೆ ನೀನೇಕೆ ಕೊಟ್ಟೆ .

ಇಂದು ನೀ ನನಗೆ ಕೊಟ್ಟ ಮಾತುಗಳೇ ಮರೆತಿರುವೆಯಾಲೋ ,
ಈ ನೀನೀ ತಿರಸ್ಕಾರ ಸಹಿಸಲಾಗದಷ್ಟು ನೋವನುಂಟು ಮಾಡುತ್ತಿದೆ .

ನೀನೇ ತಂದ ಪ್ರೀತಿ ಈ ಹೃದಯಕ್ಕೆ ,ಇಂದು ನೀನೇ ಇಲ್ಲವಾದರೆ ..? ನನ್ನ ಹೃದಯದ ಗತಿ ಏನೋ ?

ಸಣ್ಣ ಪುಟ್ಟ ಜಗಳಗಳೇ ನಮ್ಮ ಪ್ರೀತಿಗೆ ಮುಳುವಾಗಲಿದೆ ಎಂದೆನಿಸುತಿದೆ..

ನೀನೇ ಬೇಕು ಬೇರೇನೂ ಬೇಡವೋ ನನಗೆ ಈ ನನ್ನ ಪ್ರೀತಿ ಎಂದು ಸುಳ್ಳಲ್ಲ ..
ಈ ನಂಬು ,ಹೋಗುಗಳ ನಂಬಿಕೆಯಲ್ಲಿ ನೀ ನನ್ನ ನಂಬದೇ ಹೊದೆಯಲ್ಲೋ .....

ನೀ ತಿರಸ್ಕರಿಸ ಬೇಡ ,ತಿರಸ್ಕರಿಸಿ ದೂರಾಗುವ ಮಾತನೀಡಬೇಡ ...

ಈ ಹೃದಯ ಸಹಿಸದು ಕಣೋ

- Acchu love

30 Dec 2017, 09:35 am

ಹೃದಯ

ಹೃದಯದೂರ ಹೆಬ್ಬಾಗಿಲಲಿ
ನಿಂತ ನೋವುಗಳಿಗೆಲ್ಲ
ಬೀಳ್ಕೊಡುಗೆ ಸಮಾರಾಂಭ ಏರ್ಪಡಿಸಿದಾಗಲೆಲ್ಲ
ಅವು ಕಣ್ಣ ತುಂಬಾ ನೀರು ತುಂಬಿಕೊಂಡು
ಹೋಗುವ ಮುನ್ನ ತಿರುಗಿ ಒಮ್ಮೆ ನೋಡಿದರೆ ಸಾಕು
ಮತ್ತೆ ಶುರು ಎದೆಯೊಳಗೆ ಅವುಗಳ ಮೇಲೆ ಪ್ರೇಮದಾರಂಭ


************************************************


ಈ ಮನಸಿನ ಮನೆಯ ತುಂಬಾ
ನಿನ್ನ ಹೆಜ್ಜೆ ಗೆಜ್ಜೆ ಬಳೆ ನಗು ಇವುಗಳದೇ ಸದ್ದು
ಒಮ್ಮೆ ಅವು ಕೇಳದಂತಾದರೆ ಸಾಕು
ಈ ಹೃದಯವು ಹೊದ್ದು ಮಲಗಿ ಬಿಡುತ್ತದೆ
ನೋವಿನಲಿ ಮೂಕವಾಗಿ ಕನಸುಗಳಿರದೆ ನಿರಾಹಾರಿಯಾಗಿ

- ಶ್ರೀಕಾವ್ಯ

30 Dec 2017, 08:31 am

ಎಡದೊರೆ ನಾಡಿನ್ ಭಂಡ (ಗುಂಡನ್ ಪದಗಳು)

ಎಲ್ರೂ ನನ್ ಕರೀತಾರ ಹಿಂಗ
ಪ್ರೀತಿಲ್.. ಲೋ ಸಿದ್ದು ಗುಂಡ..!
ಕನ್ನಡ್ ನನ್ ಪಿರಾಣ ಅನ್ನೋ
ನಾ ಎಡದೊರೆ ನಾಡಿನ್ ಭಂಡ..!

ಸಾಲಿ ಗೀಲಿ ಕಲ್ತೀನ್ ಸ್ವಲ್ಪ
ಆದ್ರ ಇಂಗ್ಲೀಷ್ನಾಗ ಬಾಳ್ ಹಿಂದ..!
ಕವಿತೆ ಗಿವಿತೆ ಬರ್ತೀನ್ ಸ್ವಲ್ಪ
ಕಾರ್ಣ ನಮ್ ಕನ್ನಡ್ ಬಾಸೆ ಬಲ್ ಚಂದ.!

ಮನಸಿಗ್ ಅನಿಸಿದ್ ಬರಿತೀನ್
ನಾ ಅದೀನ್ ಪಕ್ಕ ಹಳ್ಳಿ ಹೈದಾ..!
ಅಕ್ಷರ್ ಗಿಕ್ಷರ್ ತಪ್ಪಾಗಿದ್ರ
ಬುದ್ಧಿ ಹೇಳ್ರಿ ನೀವ್ ನಂಗ್ ಬೈದಾ..!

ನಾನ್ ಬರೆಯೋ ಪದಗಳ್
ಹಿಂಗೆನೇಯ ಅದ್ಯಾಕೋ ಸ್ವಲ್ಪ ತೊದ್ಲು..!
ನಾನ್ ಇನ್ ಪುಟ್ಟ ಬರ್ತಿನಿ ಇಟ್ಟ
ಹಿಂಗ್ ನಮ್ ರತ್ನಜ್ಜ ಬರದವ್ರೆ ಮೊದ್ಲು..!

ಕನ್ನಡ್ ನುಡಿವೆ ಕನ್ನಡ್ ಬರಿವೆ
ಕನ್ನಡ್ ನಾಡು ಬಾಸೆಗ್ ದುಡಿವೆ..!
ಗುಂಡನ್ ತೊದ್ಲು ಪದಗಳ್ನಾಡ್ತಾ
ಕನ್ನಡಮ್ಮನ್ ಮಡಿಲಲ್ ಮಡಿವೆ..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

30 Dec 2017, 07:52 am

ಕನಸುಗಾರ

"ಕೂಗಿ ಹೇಳುವ ಆಸೆ,
ಅಪ್ಪಿ ಹೇಳುವ ಆಸೆ,
ನಾ ನಿನ್ನ ಪ್ರೀತಿಸುವೆ ಎಂದು.

"ತಿಳಿಯದೆ ಒಳಗಾದೆ ತಳಮಳಕೆ
ನಿನ್ನ ಕಂಡಕ್ಷಣ,ಹೇಗೆ ಹೇಳಲಿ
ನಾ ನಿನ್ನ ಪ್ರೀತಿಸುವೆ ಎಂದು.

"ಹೇಗೆ ತಿಳಿಸಲಿ ಮುಚ್ಚಿಡಲಾರದ
ಈ ಮನಸ್ಸಿನ ಮೌನ ಮಾತನಾ,
ನಾ ನಿನ್ನ ಪ್ರೀತಿಸುವೆ ಎಂದು.

"ಅಂತೂ ಇಂತೂ
ಕೂಗಿ ಹೇಳಿದೆ ಕಣ್ಮುಚ್ಚಿ,
ನಾ ನಿನ್ನ ಪ್ರೀತಿಸುವೆ ಎಂದು

"ಡವಾ,,,,ಡವಾ,,,, ಬಡಿಯುವ
ಹೃದಯ ಹಿಡಿದು,ಒಮ್ಮೆಲೇ ಹೇಳಿದೆ,
ನಾ ನಿನ್ನ ಪ್ರೀತಿಸುವೆ ಎಂದು.

"ಮುಗುಳ್ನಗೆ ಇಟ್ಟು,ನಾಚಿ
ತಿರು....ತಿರುಗಿ ನೋಡಿ, ಹೇಳದೆ ಹೋದೆಯಲ್ಲೇ,
ನಾ ನಿನ್ನ ಪ್ರೀತಿಸುವೆ ಎಂದು.

ರಾಜು

- ರಾಜು ಹಾಸನ

30 Dec 2017, 12:31 am

ಹುಚ್ಚು ಮನಸ್ಸಿನ ಹತ್ತು ಮುಖಗಳು

ಹುಚ್ಚು ಮನಸ್ಸಿನ ಹತ್ತು ಮುಖಗಳು


ಹೇಳದೆ ಖುಷಿ ಪಡುವುದು
ಕೇಳದೆ ದುಖಃ ಪಡುವುದು
ಕ್ಷಣಕಾಲ ಅನುಮಾನಿಸುವುದ
ಕ್ಷಣಕಾಲ ಅವಮಾನಿಸುವುದು

ಒಮ್ಮೆ ದ್ವೇಸಿಸುವುದು
ಮತ್ತೊಮ್ಮೆ ಪ್ರೀತಿಸುವುದು
ಅನುದಿನ ನೋಡುವುದು
ಅನುಕ್ಷಣ ಅನುಭವಿಸುವುದು

ಆಗಾಗ ಕೆಂಡ ಕಾರುವುದು
ಆಗಿಗ ಕೆಟ್ಟ ಆಲೋಚನೆ ಮಾಡುವುದು
ಏನನ್ನೋ ಯೋಚಿಸುವುದು
ಎನೆನೋ ಮರೆಸುವುದು

ಕಂಡಾಗ ನಗುವುದು
ಆ ನಗುವಲ್ಲಿ ನಗುವಿರದು
ಎದುರಿದ್ದಾಗ ಒಳ್ಳೆಯವನೆನ್ನುವುದು
ಮರೆಯಾದಾಗ ಹಿಯಾಳಿಸುವುದು

ಅತಿಯಾಗಿ ಪ್ರೀತಿಸುವುದು
ಪ್ರೀತಿ ಮರೆಯದಾಗ ದ್ವೇಷಿಸುವುದು
ಮನದಲ್ಲೊಂದು ಯೋಚನೆ
ಆಚರಣೆಯಲ್ಲೊಂದು ದುರಾಲೋಚನೆ

ಏನಿದೆಲ್ಲ ಮಾಯೆ,
ನಮಗರಿವಿದ್ದರೂ ಅರಿವಿಲ್ಲದವರಂತೆ
ನಟಿಸುತ್ತಿರುವ ಓ ಮೂಢ ಮನವೆ
ಕಳಚು ನಿನ್ನ ಮುಖವಾಡ ಧರಿಸು ನಿಜ ರೂಪ.


ಹುಚ್ಚು ಮನಸ್ಸಿನ ಹತ್ತು ಮುಖಗಳು
ಅಂಕೆಯಿಲ್ಲದ ಮಂಕು ಮನಸ್ಸಿನ ಹತ್ತು ಮುಖಗಳು.

- ರಾಜು ಹಗ್ಗದ

29 Dec 2017, 11:17 pm

ಕವಿ ಕೋಗಿಲೆ

ಕವಿ ಕೋಗಿಲೆ ಕೂಗಿತು
ಕರುನಾಡ ಮೂಳೆಯಲ್ಲಿ ಕುಂತು,
ಸ್ವರದ ಮಾಧುರ್ಯಕೆ ಎಲ್ಲೆಡೆ ಹಬ್ಬಿತು
ಅದರ ಖ್ಯಾತಿ ನೆರದಿಟ್ಟ ಮಾತಿಗಳಿಂದಾಗಿ.

ಗಮನಸೆಳೆಯುವ ಪ್ರಕೃತಿಯ
ಮಡಿಲ ಮಗುವಾತನು,
ಮೂಢನಂಬಿಕೆಗಳಿಗೆ ಕಡಿವಾಣ
ಹಾಕುವ ಲೇಖನಿಯ ಶಾಯಿ ತಾನು.

ಜಾತಿ- ಮತ ಮೇಲು- ಕೀಳು,
ಭೇದ- ಭಾವ ತಾರತಮ್ಯಗಳಿಲ್ಲದೆ ವಿಶ್ವ ಮಾನವತಾವಾದವನ್ನು ಬೋಧಿಸಿರುವ
ಏಕೈಕ ವ್ಯಕ್ತಿ ಈತನು ನಮ್ಮ ರಾಷ್ಟ್ರಕವಿ
ಕುವೆಂಪು ಈತನು.

- ಚುಕ್ಕಿ

29 Dec 2017, 09:43 pm