Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೂತನ ಪಯಣ...

ಮರಳುತ್ತಿದೆ ಮತ್ತದೇ ಜಾಗಕ್ಕೆ ಮನಸು
ಕಳೆದು ಕೂತೆನಲ್ಲ ನನ್ನಯ ಹೃದಯ
ವಿಸ್ಮಯ ಸುಂದರಿಯ ಮೌನದ ಮಾತಿಗೆ
ಅವಳ ಧ್ಯಾನದಲ್ಲೇ ಕಳೆಯಿತು ಇಪ್ಪತ್ತರ ವಯಸ್ಸು..!

ಮರೆಯಲು ಸಾಧ್ಯವೇ ನನ್ನ ಕನಸಿನ ಕಥೆ
ಮುಸುಕಿ ಹಾಕಲು ಹೋಗಲೆ ಪ್ರೇಮದ ವ್ಯಥೆ
ನೆನಪುಗಳ ಮಳೆಯಲ್ಲಿ ಸಿಹಿಕಹಿಗಳ ಹನಿಯಲ್ಲಿ
ಕೊರೆದು ಹಾಕಲು ನಿಲ್ಲಲೇ ಈ ಹೃದಯದ ಜೊತೆ..!

ಕವಿಯನ್ನಾಗಿ ಮಾಡಿದ ಆ ಬೆಡಗಿಗೆ
ಸವಿಯಾದ ಕ್ಷಣಕೊಟ್ಟ ಆ ಹುಡುಗಿಗೆ
ಕಾದು ಕುಳಿತಿರುವ ಈ ಹುಚ್ಚು ಮನಸಿಗೆ
ಏನ ಹೇಳಲಿಂದು, ಎಲ್ಲಿರುವುದು ಆ ಪ್ರೇಮ ಬಿಂದು..!

ಭೂತ ಭವಿಷ್ಯಗಳ ಸಂತೆಯಲಿ
ಕೊಳ್ಳುವೆ ನಾ ಒಂದು ಹೊಸ ಕವನ
ಮಾಡುವೆನು ಅದರ ಜೊತೆಗೆ ಪಯಣ ನೂತನ
ಹಿಂದಿರುಗಿ ನೋಡದಿರೆ ಬರೆಯಲಾಗದು ಕವನ..!

- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

29 Dec 2017, 09:21 pm

ಪ್ರೀತಿಯ ರಹಸ್ಯ

ಪ್ರೀತಿ ಮಾಡಿದ ಮೇಲೆ ರಹಸ್ಯವ ಬೇದಿಸಬೇಕು..
ಮುಕ್ತ ಮನಸಿನ ಮುಗ್ದ ಮನಸನು ಹೊದಿಸಬೇಕು..
ಅಂತರಾಳದ ಆಸೆಗಳಿಗೆ ಮಿತಿಯಿಲ್ಲದ ಹಠವ ಬಿಡಬೇಕು..
ಜಗಳವೇ ಪ್ರೀತಿಗೆ ನೀರುಣಿಸೋದೇನ್ನುವುದು ತಿಳಿಯಬೇಕು...

- ಆರ್ ಎಸ್ ಸುಗ್ಗಿ.

29 Dec 2017, 09:02 pm

.......

ಕಾಣದೆ ಬಂದವನು ಕಾಣದೆ ಮರೆಯಾದ
ತಿಳಿಯದೆ ಮಾಡಿದ ತಪ್ಪು
ಗೊತ್ತಿಲ್ಲದೆ ಆದ ಪ್ರೀತಿ
ಹೇಳಿದಷ್ಟು ಸುಲಭನ ಪ್ರೀತಿನ ಮರೆಯೋದು
"ಒಂದು ಕನಸು ಏಂದು ತಿಳಿದು ಮರೆತು ಬಿಡು "

ಪ್ರೀತಿನ ಮರೆಯುವುದಕ್ಕಾಗಿ ಪ್ರೀತಿಸಬೇಡಿ
ಪ್ರೀತಿನ ಪ್ರೀತಿಯಿಂದ ಪ್ರೀತಿಸಿ
ಪ್ರೇಮಿಯ ಮನಸ್ಸನು ನೋಯಿಸಬೇಡಿ
ಆ ಮನಸ್ಸಿನ ಮಾತನ್ನು ಕೇಳಿ
ಸಣ್ಣ ಸಣ್ಣ ಕಾರಣಕ್ಕೆ ದೂರ ಆಗೋಣ ಅಂತ ಹೇಳಬೇಡಿ
ಯಾಕೆಂದರೆ ಆ ಮಾತನ್ನು ಕೇಳುವ ಶಕ್ತಿ ಆ ಮನಸ್ಸಿಗೆ ಇರುವುದಿಲ್ಲ

ಪ್ರೀತಿನ ಗೌರವಿಸಿ
ನಿಮ್ಮನ ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುವ ಆ ಹೃದಯನ ಕಳೆದುಕೋಳ್ಳ ಬೇಡಿ
ಮತ್ತೆ ಆ ಜೀವ ನಿಮಗೆ ಸಿಗುವುದಿಲ್ಲ

- Shilpa

29 Dec 2017, 08:23 pm

ಭಾಷೆ....

ಗುಡಿಯ ಹೊನ್ನ ಕಲಶವದು
ಬೆಳಕು ಇಲ್ಲದೆ ಹೊಳೆವುದೆ..?!
ಯಾವುದಾದರೇನು ಭಾಷೆಯದು
ನಿತ್ಯ ಬಳಕೆ ಇಲ್ಲದೆ ಉಳಿವುದೆ..?!

- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

29 Dec 2017, 06:32 pm

ನಿನ್ನೆಗಳು..

ನಿನ್ನೆಗಳು..!
ನಿತ್ಯ ಸಂಭ್ರಮದ
ನಂತರ ಕಿತ್ತಿದ
ಕಂಬದ ಕುಳಿಗಳು..!!

- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

29 Dec 2017, 06:09 pm

ಮರೆಯಾಗಿ......

ಕಾಣದ ದೈವವೋಂದು
ತಾನಾಗಿಯೇ ಬಳಿ
ಬಂದು ಸ್ವರ್ಗವೆ
ನಚುವಂತ ಪ್ರೀತಿಯ
ಉಣಬಡಿಸಿ ಕಣ್ಣ ರೆಪ್ಪೆ
ಬಡಿಯುವಷ್ಟರಲ್ಲಿ ಮಿಂಚಿನಂತೆ
ದೂರವಾಯಿತೆ ಆ ಕೈಗಳು.......

ಉಣಿಸಿಕೊಂಡ ಮನಸೊಂದೆ
ಇಗ ಒಂಟಿ ಉಣಬಡಿಸಿದ ಕೈಗಳಿಗೆ
ನೆನಪಿಲ್ಲ ಉಣಿಸಿಕೊಂಡವರಿಗೆ
ಹಸಿವಿಲ್ಲ ಮರೆತು ಮುಂದೆ ಸಾಗದೇ
ಬೇರೆ ದಾರಿಯೆ ಇಲ್ಲ.........

- ರಾಗಸಿರಿ....

29 Dec 2017, 01:00 pm

ಬೇತಾಳ....

ನೀ ಎಕೆ ಹೀಗೆ ಕಾಡುವೆ
ಪದೆಪದೆ ಕಣ್ಣೋಳಗೆ
ಕೂತಿರುವೆ ನಿನೋಂದು
ಕಪ್ಪು ಗುಡ್ಡೆ ಯಂತೆ....
ನೀ ಇಲ್ಲದೆ ನೋಟವೆ
ಇಲ್ಲವಂತೆ......


ಹೆಜ್ಜೆ ಹೆಜ್ಜೆಗು ಬಂದು
ಅಡ್ಡಲಾಗುವೆ ಶತ್ರುವಿನಂತೆ
ನೀ ಇಲದೆ ದಾರಿಯೆ
ಇಲ್ಲದಂತೆ...........


ಕುಂತರು ನಿಂತರು ಎದ್ದರು
ಬಿದ್ದರು ಹಿಂದೆಯೆ ಇರುವೆ
ಬೆನ್ನು ಬಿಡದ ಬೇತಾಳದಂತೆ
ನೀ ಇಲ್ಲದೆ ಗುರಿಯೆ
ಇಲ್ಲದಂತೆ.......


ಕತ್ತಲಲ್ಲಿ ಕಣ್ಣ ಕಟ್ಟಿ
ಬಂದು ಕಾಡುವೆಯಲ್ಲ
ಮೊಹಿನಿಯಂತೆ ನೀ ಇಲ್ಲದೆ
ನಿದ್ದೆ ಬಾರದಂತೆ......


ಎಂದು ನನ್ನೋಳಗೆ
ಸೆರಿಕೊಂಡಿರುವೆಯಲ್ಲ ಎಂದೆದು
ನನ್ನಗಲಿ ಹೋಗದ ದೆವ್ವದ ಹಾಗೆ...........
ಪ್ರೀತಿ........ಹೀಗೆ........ಇದೆ ರೀತಿ......

- ರಾಗಸಿರಿ....

29 Dec 2017, 12:10 pm

ದಲ್ಲಾಳಿಗಳ ಬಗ್ಗೆ

ತೋರದಿರಿ ತೋರದಿರಿ ದಲ್ಲಾಳಿಗಳೆ ದರ್ಪ
ನ್ಯಾಯಕ್ಕೂ ಅನ್ಯಯಕ್ಕೂ ನೀವೇ ಕಾರಣವಪ್ಪ.
ರೈತರಿಂದ ಹಣತಿಂದು ಬಂದಿದೆ ಹೊಟ್ಟೆ ದಪ್ಪ
ನಿಮ್ಮ ಹೊಟ್ಟೆ ತುಂಬುವುದು ಅವರಿದಂತಾ ತೀಳಿತೆನಪ್ಪ....


ರೈತರ ಕಣ್ಣಿರಿನಲ್ಲಿ ಸ್ನಾನ ಮಾಡುವ ಆಸೆ ನೀಮಗೇಕಪ್ಪ
ಸ್ಯಾಪಲ್ ಹೇಸರಿನಲ್ಲಿ ತುಂಬುವುದು ನಿಮ್ಮ ಚೀಲ ದಪ್ಪ
ತೂಕಗಳಲ್ಲಿ ಮೋಸ ನಿಮಗೆ ಕಾಮನ್ ಅಪ್ಪ
ಅದನ್ನ ಬಿಟ್ಟು ಸ್ವಲ್ಪ ಮಾನವೀಯತೆ ಕಡೆ ನಿವ್ ನೊಡ್ರಪ್ಪ..

ದುಡ್ಡು ಗಳಿಸೋದೆ ಜೀವನವಲ್ಲ..
ಪಾಪ ಪುಣ್ಯಗಳಿವೇ ಮರಿಬಾರ್ದು ನಾವೇಲ್ಲ.
ಮೋಸ ವಂಚನೆ ತುಂಬಿವೇ ಜಗವೆಲ್ಲ.
ಅದರಲ್ಲಿ ಇದು ಒಂದ್ ಭಾಗ ಅನ್ಕೊಂಡ್ ಸುಮ್ನಿರಕಾಗಲ್ಲ....

ಕೇಳು ದೇಶಕ್ಕೆ ಅನ್ನ ನೀಡುವ ರೈತ
ನಿನ್ನ ಕಣ್ಣಿರಿಗೆ ಬೆಲೆ ಇಲ್ಲ ತೀಳಿತಾ..
ಭೂ ಮಾತೆ ನಿನ್ನ ಕೈ ಬೀಡುವುದಿಲ್ಲ.
ಯಾರನ್ನು ನಂಬಿಕೊಂಡು ನೀ ಕೆಲಸ ಮಾಡಲ್ಲ..
ವರುಷದಲ್ಲಿ ವರುಣನ ದರುಶನವಾದರೆ ಸಾಕು......


ಇದು ನಮ್ಮುರಿನ ರೈತರನ್ನು ಮತ್ತು ದಲ್ಲಾಳಿಗಳನ್ನ ನೋಡಿ ಬರ್ದಿದ್ದು..

ಅಮರ್ತ್ಯ ಮಾರುತಿ...

- ಅಮರ್ತ್ಯ ಮಾರುತಿ

29 Dec 2017, 11:55 am

ಮೀನು

ಹೆಸರಿಲ್ಲದ ಮೀನು
ಉಂಡವರ
ಪಾಲಿಗದು ಜೇನು,
ಹುಟ್ಟಿದ್ದೆಲ್ಲೋ ಹಳ್ಳಿಗಾಡಿನ
ತೊರೆಯಲ್ಲಿ ತಾನು,
ಗೊತ್ತಿಲ್ಲ ಅದಕ್ಕೆ ಸಮುದ್ರದ
ಯಾವ ಕಾನೂನು.

ನದಿ ನೀರನ ಸಿಹಿಯ
ಕೇಳ್ಪಟ್ಟಿತು
ಈ ಬಣ್ಣ ಬಣ್ಣದ
ಪುಟ್ಟ ಮೀನು,
ಕೇಳಿದ್ದೆ ತಡ ಕಾಲ್ಕಿತ್ತು ಓಡಿತು
ತೊರೆಯಿಂದ ತಾನು.

ಕಂಗೊಳಿಸುವ ಚಿತ್ತಾರಗಳ
ಮದಿರೆ
ಸವಿದ ಮೀನು, ನೂತನ
ಸಂಗಡಿಗರೊಡನೆ ಆಡಿದ ಆಟವ
ಏನೆಂದು ಹೇಳಲಿ ನಾನು.

ನದಿಯದಡದಿ ಮರಡಿಯ ಜರಡಿ
ಹಿಡಿಯಲು ಬಂದ ಗರ್ಭಿಣಿಯ
ನೋಡುತ ನಿಂತ ಮೀನು,
ನೆನೆಯಿತು ತಾಯಿ
ಮಡಿಲ ಮಮತೆಯ ನೆಲವನು.

ನೀರ ರಭಸಕೆ ಕೊಚ್ಚಿ ಸಾಗಿತು
ಭವಭಯದಿ ಮನನೊಂದು ಮೀನು,
ನೂರು ನದಿಗಳ ಸಂಗಮ ನೋಡಿ ಅದರ ಕಂಗಳರಳಿದ ಬಗೆ ಅದೇನು.

ಕಡಲ ಭಾಷೆ ಅರಿಯದೆನೆ ಬೆಳೆದು
ನಿಂತಿತು ಮೀನು,
ಬಾಲ್ಯವ ನೆನೆದು ಚಿಮುಕಿಸಿತು ಕಣ್ಣೀರ ಹೊಳೆಯನು.

- ಚುಕ್ಕಿ

29 Dec 2017, 10:57 am

ಕುವೆಂಪು

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕುವೆಂಪು
ಕನ್ನಡ ನಾಡಿನ ರತ್ನಕಿರೀಟ ಕುವೆಂಪು
ತುಂಬಿರುವರು ತಾವು ಬರೆದಿರುವ
ಪ್ರತಿಯೊಂದು ಕನ್ನಡ ಪದಗಳಲ್ಲೂ,
ತಮ್ಮ ಕನ್ನಡಪ್ರೇಮದ ಕಂಪು ಕಂಪು
ಕನ್ನಡ "ಕವಿಚಕ್ರವತಿ೯" ಕುವೆಂಪು.
....... ಸಣ್ಣ ಕವಿ
ರಘುವಿಜಯ ಕಸ್ತೂರಿ

- ರಘುವಿಜಯ ಕಸ್ತೂರಿ

29 Dec 2017, 10:44 am