ಕಳೆದದ್ದು ದುಃಖ ತರಿಸದೆ ಹೋಗದು
ಸಿಕ್ಕಿದ್ದು ಸಂತೋಷ ತರಿಸದೆ ಇರದು
ಸಿಕ್ಕಿದ್ದು ಕಳೆದಿದ್ದು ಯಾವಾಗಲೂ ನೆನಪಾಗಿರುವವು
ಒಮ್ಮಿಲ್ಲ ಒಮ್ಮೆ ಅವಲೋಕನಕ್ಕೆಹಚ್ಚದೆ ಇರಲಾರವು!
ಕಳೆದು ಕೊಂಡಿರುವ ಮೌಲ್ಯ ಕಣ್ಣೀರಾಗುವದು
ಸಿಕ್ಕಿದ್ದು ಪಾಲಿಗೆ ಬಂದ ಪಂಚಾಮೃತವಾಗುವದು
ಕಳೆದದ್ದು ಪಡೆಯಲು ಕಾಲಮೀರಿರುವದು
ಸಿಕ್ಕಿದ್ದು ಉಳಿಸಿಕೊಳ್ಳಲು ಮಾರ್ಗ ಕಂಡುಕೊಳ್ಳುವುದು
ಕಳೆದದ್ದು ಪಡೆಯಲು ಪ್ರಯತ್ನಿಸಿದರೆ ಜೀವನ ನರಕವಾಗುವದು
ಸಿಕ್ಕಿದ್ದು ಉಳಿಸಿಕೊಳ್ಳದೆ ಹೋದರೆ ಬದುಕ್ಕಿದ್ದು ವ್ಯರ್ಥವಾಗುವುದು
ಕಳೆದದ್ದು ಪರರಿಗೆ ಒಳ್ಳೆಯದನ್ನು ಮಾಡಿದರೆ ಅದಕ್ಕಿಂತ ಉತ್ತಮ ಯಾವುದು?
ಸಿಕ್ಕಿದ್ದು ಪರರಿಗೆ ಕೆಟ್ಟದ್ದುಮಾಡಿದರೆ ಅದಕ್ಕಿಂತ ಕೀಳಾದದ್ದು ಯಾವುದು?
ಕಳೆದದ್ದು ಮರೆಯಲು ದೂರ ಇರಬೇಕಾಗುವುದು
ಸಿಕ್ಕಿದ್ದು ಶಾಶ್ವತವಾಗಿರಿಸಲು ಪ್ರೀತಿಸಬೇಕಾಗುವುದು
ಕಳೆದದ್ದು ಸಿಕ್ಕಿದ್ದು ಒಂದೇ ಎಂಬಂತೆ ಇದ್ದರೆ ಅದ್ಯಾವ ಕೊಂಕು ಕಾಣದು ಹಿರೇಉಳ್ಳಿಗೇರಿ ಕರೆಮ್ಮದೇವಿ
ನಮ್ಮವರು ನಮ್ಮವರು
ಕಷ್ಟ ಬಂದಾಗ ನಗುವರಿವರು
ಸುಖ ಬಂದಾಗ ಕುಣಿವರಿವರು
ಎದುರಿಗೆ ಕಂಡು
ಕದ ಹಾಕಿದವರು
ಸಿಹಿ ತಿಂಡಿ ಬಡಿಸಿ
ಕಹಿಯನ್ನು ಅರೆದವರಿವರು.
ನೋಡಲು ಏನು ಅರಿಯದವರು
ಬಹಳ ಬೇಗ ಬಡ್ಡಿ ಕೊಡೆಂದರು.
ಯಾರಿವರು ನಮ್ಮ ವರು
ಹುಷಾರ್ ಹಾಸ್ಯವೇ
ನಮ್ಮವರು , ನಮಗೆ ಅರಿಯದವರು
ದೇಹವೆಂಬ ಭೂಮಿಯಲ್ಲಿ
ಮನಸ್ಸು ಎಂಬ ಉಳುಮೆ ಮಾಡಿ
ಕನಸು ಎಂಬ ಬೀಜವನ್ನು ಬಿತ್ತಿ.
ಹ್ರುದಯವೆಂಬ ಮೊಳಕೆ ಯೊಡೆಯಲು
ಉಸಿರು ಎಂಬ ಮಳೆಹನಿಯನ್ನು
ಸುರಿಸು ನೀನು.
ಗಿಡವಾಗಿ ಬೇಳೆದ ಪ್ರೀತಿ.
ಮರವಾಗಿ.
ಜೀವ ಜೆಂತುಗಳಿಗೆ ಉಸಿರನ್ನು ಧಾರೆಯಾಗಿ .
ಪ್ರೀತಿಯ ನೆಲೆಯನ್ನು ಶಾಶ್ವತವಾಗಿ. ಹರಡುವೆ ನೀ ಇನ್ನು .
ನಿನಗಾಗಿ ನಾನು ಧರೆಯಲ್ಲಿ ಇನ್ನು
ಪ್ರಕ್ರುತಿಯಾಗಿ ಜನಿಸಿ .
ನಿನ್ನ ಉಸಿರಲ್ಲಿ ಲೀನವಾಗಿರುವ ಪ್ರೀತಿಯೆಂಬ ಜಗತ್ತನ್ನು ನನ್ನೊಳಗೆ
ಲೀನ ವಾಗಿಸಿ ಮನದೊಳಗೆ ಅದಕ್ಕೆ ಅರಮನೆಯನ್ನು ನಿರ್ಮಿಸಿ
ಪ್ರೀತಿಯೆಂಬ ಲೊಕದಲ್ಲಿ ಓಟ್ಟಾಗಿ ಜೀವಿಸುವೆವು ನಾವು
ಸದಾ ...ಸದಾ....ಹಸಿರು ಇದೆ ನಮ್ಮೆಲ್ಲರ ಉಸಿರು......
ಅಂದು ನಾ ಬಡತನದ ಸುಳಿಯಲ್ಲಿ......
ಸಿಲುಕಿ ನಲುಗುವಾಗ ಆ ಸುಳಿಯಿಂದ......
ಬಿಡಿಸಿ ಅದರಿಂದ ಹೊರಗೆ ತಂದಾಗ
ನಾ... ಮೆಚ್ಚಿದ್ದೆ ಅವನ ಮನಸ್ಸಿನ
ಹೃದಯವಂತಿಕೆಯ.............
ಸಂಸಾರದ ದೋಣಿ ಸಾಗಿಸಲು.........
ನಾ .... ಹೆಣಗುತ್ತಿರುವಾಗ ಅಂದು ಅವನು
ಕೈಗೆ ಭಲ ನೀಡಿ ಸಹಕರಿಸಿದಾಗ.....
ನಾ..... ಒಪ್ಪಿಕೊಂಡಿದ್ದೆ ಅವನ ಮನಸ್ಸಿನ
ಗುಣವಂತಿಕೆಯ.................
ನನಗೆ ಗೊತ್ತಿಲ್ಲದೆ ಮನಸ್ಸು ಸಾಗುತ್ತಿತ್ತು
ಅವನ....... ಮನಸ್ಸಿನೆಡೆಗೆ.........
ಅದರ ವೇಗ ......ತಡೆಯಲಾರದೆ. ನೀಡಿದ್ದೆ
ನನ್ನ............... ಮನಸ್ಸ ಅವನಿಗೆ
ಜೋಡಿ ಹಕ್ಕಿಯ..ಹಾಗೆ ಅಲ್ಲಿಂದ ಇಲ್ಲಿಗೆ
ಇಲ್ಲಿಂದ ಅಲ್ಲಿಗೆ ಹಾರುತ್ತಿತ್ತು..... ಮನಸ್ಸು
ಆ ದ್ಯಾವ......ದುರುಳ ಮುನ್ಸೂಚನೆಗೊ
........ ತಿಳಿಯದು
ಅವನ ಮನಸ್ಸಿನ ನಂಬಿಕೆಗೆ .........
ಕುರುಡಗಿತ್ತೇನೋ ಅಂದು ನನ್ನ ಮನಸ್ಸು
ಅವನಿಗೆ ಬೇಕಾದ್ದನ್ನ ಪಡೆದುಕೊಂಡು.......
ಕೈ ಬಿಟ್ಟಿದ್ದ ನನ್ನ ಮನಸ್ಸನ್ನ..ನಡು ಬೀದಿಯಲ್ಲಿ
ಅಂದೆ ಅರಿವಾದದ್ದು...........ನನಗೆ
ನಾ ಕಂಡದ್ದು ಅವನ ಹೊರಮನಸ್ಸ..........ನ್ನ
ಹೊರತು ಅವನ ಹೊಳ ಮನಸ್ಸನ್ನಲ್ಲ......ವೆಂದು