Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೆನಪುಗಳ ಕಲ್ಪನೆಯಲ್ಲಿ

ನೆನಪುಗಳ ಕಲ್ಪನೆಯಲ್ಲಿ

ಮೊದಲು ನೋಡಿದ ನೋಟದಲ್ಲಿ
ತಡಿಯದಾಗದ ಸಂತೋಷದಲ್ಲಿ
ಅರಿಯದ ಮನದಲ್ಲಿ
ನಿನ್ನದೆ ಪ್ರತಿ ಮೌನದಲ್ಲಿ

ಕನಸಿನ ನಾಯಕತ್ವದಲ್ಲಿ
ಹೃದಯದಾಳದಲ್ಲಿ
ಪ್ರತಿ ಉಸಿರಿನ ಕಣದಲ್ಲಿ
ನೀ ಚಿಗುರಿದಿಯಲ್ಲಿ

ಪ್ರೀತಿಯ ದಡದಲ್ಲಿ
ತೆಲಿಸಿದೆ ಸಾಗರದಲ್ಲಿ
ಸಾಗಿದ ದಿನದಲ್ಲಿ
ನೀನೇ ಮಿಡಿದೆಯಲ್ಲಿ

ಮರೆಯದಾದಿ ಮನದಾಳದಲ್ಲಿ
ನುಡಿಸದಾದಿ ಎದೆಯಾಳದಲ್ಲಿ
ನರನಾಡಿಯಾದಿ ನನ್ನ ದೇಹದಲ್ಲಿ / ಓ ಗೆಳತಿ
ನೀ ಹಿರೇಉಳ್ಳಿಗೇರಿ ಕರೆಮ್ಮಳ ಆಶೀರ್ವಾದಿಂದ ನೆನಪಲ್ಲೆ ಉಳಿದೆ ಬದುಕಲ್ಲಿ

- MB

13 Sep 2017, 08:30 pm

ತಲ್ಲಣ

ಧರೆಯ ಮನದ ತಲ್ಲಣಕೆ
ಸೋನೆ ಮಳೆಯ ಸಿಂಚನ
ಪ್ರೀತಿಯ ತುಂಬಿದ ಮನಕೆ
ಭಾವನೆಗಳೆ ಒಲವ ಹೂರಣ
ಸವಿ ಸಿಹಿ ಮಾತುಗಳೆ
ಮಧುರ ಮನದ ತೋರಣ...

#ಮಾನಸಾ #ಎಪಿ

- ಮಾನಸಾ ಎಪಿ

13 Sep 2017, 07:35 pm

ಜೋರಾದ ಮಳೆ.......

ಜೋರಾದ ಮಳೆಯೇ...ನೀನ್ಯಾಕೆ ಹೀಗೆ ಬರುವೆ......
ಧರಗಿಳಿದು ಬಂದೆ ....ಒಂದೇ ಕ್ಷಣದಲ್ಲೆ ಬರುವೆ.....
ಕರೆಯದೆ ಬರುವೆ.... ನಿಲದೇ ಹೋಗುವೆ....
ಗುಡುಗ ಜೊತೆ ಇರುವೆ.... ಒಂದೇ ಜಾಗದಲ್ಲಿ ನಿಲ್ಲದೆ ಬರುವೆ.....
ಹನಿ ಹನಿಯಾಗಿ ಬರುವೆ....ಸಾಗರದ ಹಾಗೆ ನಿಲುವೇ....
ತಂಪಾದ ವಾತಾವರಣ ಕಲ್ಪಿಸಿದೆ....
ಜೋರಾದ ಗಾಳಿ ಬಿಸಿದೆ

- Ajay

13 Sep 2017, 06:53 pm

ಚಿರ ಋಣಿ

ಕಣ್ಣಿಂದ ಜಾರಿಬಿದ್ದ
ಹನಿಗೆ ನಗುವು
ತುಂಬಿ
ಗಾಳಿಯ ಗಂಧದಲ್ಲಿ
ಸೇರಿಸಿದ ಮನಸ್ಸಿಗೆಂದಿಗೂ
ಚಿರಋಣಿ...!!!

- ಚುಕ್ಕಿ

13 Sep 2017, 05:15 pm

ಕಲ್ಪನೆಯ ಕೂಸು...

ಕಲ್ಪನೆಯೂ ಕಲ್ಲದಾಗ ಕನಸುಗಳು
ಚುರು ಚುರು ಆಗುತ್ತದೆ....

ಕಲ್ಪಿಸುವ ಕಣ್ಣುಗಳು ನೀರಿನಲ್ಲಿ ತೇಲಿ
ಹೋಗುತ್ತದೆ....

ಕ್ಷಣಗಳನ್ನ ಕಳೆಯುವ ಮುನ್ನ ಜೀವನ
ಮುಗಿದು ಬಿಡುತ್ತೆ....

ಕನಸಾಗಿ ಬಂದು ನನಸಗದೆ ಹೋಗಬೇಡ ಗೆಳೆಯ.....

ಇಂತಿ ನಿನ್ನ.....

- ಅಂಜಲಿ

13 Sep 2017, 10:44 am

ನುಡಿದ ಮಲ್ಲಿಗೆ

ಜಾರಿಹೋದ ಜಾಜಿಮಲ್ಲಿಗೆ
ಮತ್ತೆ ಕದ ತಟ್ಟಿದಿ ಮೆಲ್ಲಗೆ
ಎನು ಹೇಳದಾದೆ ನಾ ತಣ್ಣಗೆ

ತೀರಸ್ಕಾರವೇನೋ ಪ್ರೀತಿಯೇನೋ ನಿನಗೆ
ಒಂದು ಮಾತದು ತಳ್ಳಿತ್ತು ನನ್ನ ಕತ್ತಲ ಕೋಣೆಗೆ
ನಿನಂದಿದಿ ಅದನ್ನ ಮ್ಯಾಗಿನ ಮಾತಿಗೆ

ನಗುತನ ಮೂಡಿತು ಮನಸ್ಸಿಗೆ
ಮಾತನಾಡಿಸಿದೆಂಬ ಬಿಗುಮಾನಿಗೆ
ಇದಿರುವದು ಕೋನೆತನಕ ನೆನಪಿಗೆ

ಸಹಿಸಲಿಲ್ಲವಲ್ಲ ನನ್ನ ತಪ್ಪಿಗೆ
ನಾ ಮೆಚ್ಚಿದೆ ನಿನ್ನ ಒಪ್ಪಿಗೆ
ಕಡೆಗಾದೆ ನಾನು ತೆಪ್ಪಗೆ

ಬಾಡಿ ಹೋಗುತಿರುವ ಬಳ್ಳಿಗೆ
ನೀರಾಕಿದಿ ತೆಳ್ಳಗೆ
ಅದರಲಿ ಹೂವರಳಿದರೆ ಕೊಡೋಣ ಹಿರೇಉಳ್ಳಿಗೇರಿ ಕರೆಮ್ಮಳ ಅಡಿಗೆ

- MB

12 Sep 2017, 08:59 pm

ನೀರಿನ ... ಮಹತ್ವ!

ಯಾದ್ದದಿಂದ ದಣಿದು ತನ್ನೂರಿನೆಡೆಗೆ
ಮರಳುವಾಗ.... ಮರಳುಗಾಡಿನ ನಡುವೆ
ನೀರಿಲ್ಲದ ಕ್ಷಣದಲ್ಲಿ ಹನಿ ನೀರಿಗೂ
ಹಾತೊರೆದಿದ್ದ..... ವಿಶ್ವಗೆದ್ದ ಅಲೆಗ್ಸಾಂಡರ್

ದಣಿವು ಬಯರಿಕೆಗಳಿಂದ ಬಳಲಿ
ಸಾಯುವ ಸ್ಥಿತಿಗೆ ಬಂದು ತಲುಪಿದಾಗ
ಗಂಗಳದಿಂದ ತುತ್ತು ಬಾಯಿಗೆ ಬಂದಹಾಗೆ
ದಾರಿಹೋಕನ ಬಳಿ ನೀರು ಕಾಣಿಸಿತ್ತು

ವಿಶ್ವಗೆದ್ದ ಅಲೆಗ್ಸಾಂಡರ್ ನೀರಿಗಾಗಿ ಬೇಡಿದ್ದ
ಒಂದು ಸಾವಿರ ವರಹನೀಡುವೆ...
ನೀರಿವೆಂದು.. ದರಿಹೋಕನಿಂದ ಬಂದ ಒಂದೇ ಒಂದು ಪ್ರಶ್ನೆ. ಇಷ್ಟೇನಾ. ನೀರಿನ ಬೆಲೆ?

ನಾ ಗೆದ್ದ ಹತ್ತು ಪ್ರಾಂತ್ಯ ನಿನಗೆ ನೀಡುವೆ
ನೀರಿವೆಂದ.. ಅವನಿಂದ ಮತ್ತೆ ಅದೇ
ಪ್ರಶ್ನೆ ಇಷ್ಟೇನಾ ನೀರಿನ ಬೆಲೆ?
ನಾ ಗೆದ್ದ ಅರ್ಧ ಭಾಗವನ್ನು ನೀನಾಗಾಗಿ
ನೀಡುವೆ ನೀರಿವೆಂದ..ಅಲೆಗ್ಸಾಂಡರ್

ದಾರಿಹೋಕನೇಳಿದ ನಿನ್ನ ಗೆದ್ದ ಎಲ್ಲಾ
ಸಾಮ್ರಾಜ್ಯವನ್ನ ನನಗೆ ನೀಡು
ನೀರಿವೆನೆಂದ......! ಅಲೆಗ್ಸಾಂಡರ್
ಒಪ್ಪಿಕೊಳ್ಳಬೇಕಾಯಿತು......ವಿಧಿ ಇಲ್ಲದೆ


ಅಯ್ಯ......... ರಾಜ ನೀ ಗೆದ್ದ ಇಡೀ
ವಿಶ್ವ ............ ಒಂದು ಗುಟುಕು ನೀರಿಗೆ ಸಮ
ವಾದರೆ ನಿ ಗೆದ್ದದೆಲ್ಲ ಏನಕ್ಕೆ ಬಂತು
ಅಗತ್ಯವಾದನ್ನ ಬಿಟ್ಟು ಅಗತ್ಯವಿಲ್ಲದಕ್ಕೇಕೆ
ಇಷ್ಟು ಪರಿಶ್ರಮ..............
ಇದ ತಿಳಿಸಲೆಂದೇ ನಾ ಹಾಗೆ ಮಾಡಿದೆನೆಂದ......

"ನೀರನ್ನ ಉಳಿಸಿ ಮುಂದಿನ ಪೀಳಿಗೆಗೆ ಸಹಕರಿಸಿ"




....... ಮಂಜು

- ಮಂಜು

12 Sep 2017, 07:21 pm

ಬಿಸಿ..... ತಂಗಾಳಿ!

ಬಿಸುತ್ತಿದೆ ತಂಗಾಳಿ ಜ್ಞಾಪಿಸಲೆಂದೆ ಅವಳ......
ತಂಪು ತಂಗಾಳಿಯು......ಇಂದು ನನಗೆ
ನೀಡುತ್ತಿದೆ ಬಿಸಿಯ....... ಅನುಭವ
ಅವಳಿಲ್ಲವೆಂದೇನೋ............

ನೀ.... ಹೊತ್ತು ತರಬಾರದೇಕೆ ಅಂದಿನ
ಸವಿ ನೆನಪುಗಳ.........
ಅವಳಿಲ್ಲದ ಈ ಘಳಿಗೆಯಲ್ಲಿ...........
ಅವಳಮರೆವಿನಂಚಿನ ಕ್ಷಣದಲ್ಲಿ.........

ಹೋದಳೊಂದುದಿನ ನನ್ನಿಂದ ದೂರ
ಹಿಂತಿರುಗಿ ನೋಡದಂತೆ ಒಂದು ಬಾರಿಯೂ
ಮರುಕ ಪಡದಂತೆ.........
ಅಂದವಳು ಕೊನೆಯ ಸಾರಿ.........

ಗುಬ್ಬಿಯಂತಿದ್ದ ಅವಳು ಗಿಡುಗನಂತದಳು
ನನ್ನ ಜೀವನದಲ್ಲಿ ನಾ ....ಏನತಪ್ಪು ಮಾಡಿದೆನೆಂದೋ............
ನನ್ನ ಹೃದಯವ.......... ಗಾಯಗೊಳಿಸಿ

ಒಂದು ಪ್ರೀತಿಯ ತೊರೆದು ಇನ್ನೊಂದು
ಪ್ರೀತಿಗಾಗಿ...... ಹಂಬಲಿಸುತ್ತ
ಮಾತುಪಿತ್ರರ...... ಮಾತು ಪಾಲಿಸಲಿಕ್ಕಾಗಿ
ಅವರ ಗೌರವಕ್ಕೆ ......ದಕ್ಕೆಪಡಿಸದ
ಕಾರಣಕ್ಕಾಗಿ...............




ಮಂಜು.

- ಮಂಜು

12 Sep 2017, 06:43 pm

ನಿನ್ನ ಚಂದಕೆ ಸಾಲಗಾರ

ಮೀನೋಗೋನಿ ಮಿನೊಗೋ ಬಾಲೆ
ಮಿನೊಗೋನಿ ಮಿಂಚಿನ ತಾರೇ
ಅಂದದಾ ಅರಮನೆಯಲ್ಲಿ
ನಿನ್ನ ಈ ಚೆಂದ್ದಕೆ ಸಾಲಗಾರನಾಗಲೇ

ವಸಿಬಿಡಿಸಿ ಹೇಳಲೇ ಈಗ್ಲೆ
ನನ್ನ ಮನದಾ ಮಾತಿನಮಳಿಗೆ
ನಾ ಕಾಣೋ ಕನಸಿನ ಕನ್ಯೆ
ನೀನೇಕೆ ಕಾಡುವೆ....

ಮೀನೋಗೋನಿ ಮಿನೊಗೋ ಬಾಲೆ
ಮಿನೊಗೋನಿ ಮಿಂಚಿನ ತಾರೇ

ನಾ ಕಾಣದಾ ಕನಸೊಂದನ್ನ
ಇವಳಿಂದ ನಾನು ಕಂಡೆ
ನಾ ಬರೆಯಲೇ ನಿನ ಹೆಸರನೆ
ನನ್ನ ಮನದ ಬಾಗಿಲಿಗೆ
ಬಂದತಿದೆ ಬರವಣಿಗೆ
ಬರೆಯುವುದು ಕಲಿಸೆ ಏನಗೆ
ನಿ ಬಂದುಹೋದಾ ಗಳಿಗೆ
ಹೀಗೇಕೆ ಕಾಡಿದೆ ಮನಸೇ
ಮತ್ತೇನು ಮಾಡದ ಮರತೆ
ಯಾಕಿಂಗೆ ಆಗಿದೆ ನನಗೆ
ನಿನ್ನ ಬಂದಮೇಲೆ....?

ಮೀನೋಗೋನಿ ಮಿನೊಗೋ ಬಾಲೆ
ಮಿನೊಗೋನಿ ಮಿಂಚಿನ ತಾರೇ
ಅಂದದಾ ಅರಮನೆಯಲ್ಲಿ
ಚೆಂದ್ದಕೆ ಸಾಲಗಾರನಾಗಲೇ...

ಮಳೆಹನಿಯ ಮೆರವಣಿಗೆಯಾ
ಪಲ್ಲಕ್ಕಿಯ ಕುರಿಸಲು ಏನಗಾಸೆ
ಇವಳಾಡುವ ಮಾತಲ್ಲಿ ನಾ
ಮುನ್ನುಡಿಯಲು ನಾ ಇರಲು
ಸತ್ತೋದ ಸಂದಾನಕು
ನಿನಾದೆ ಸೇತುವೆಯ ಬಂದನವು
ಮನದಲಿ ಮೂಡಿದ ಮೊಗಕೆ
ಬೊಗಸೆಯಲ್ಲಿ ಹಿಡಿದು ಚುಂಬಿಸಲೇ...
ಎದ್ದು ಬಿಡಲೇ ನಾ ಈಗಾ
ನಿನ ಕಲ್ಪನೆಯ ಆಚೆ.


ಮೀನೋಗೋನಿ ಮಿನೊಗೋ ಬಾಲೆ
ಮಿನೊಗೋನಿ ಮಿಂಚಿನ ತಾರೇ
ಅಂದದಾ ಅರಮನೆಯಲ್ಲಿ
ಚೆಂದ್ದಕೆ ಚಂದಾದಾರನಾಗಲೇ

ಕಲ್ಪನೆಯ ಪಯಣಿಗ
✍✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

12 Sep 2017, 02:52 pm

ನೀನೇ ಹೇಳುವ ಆಸೆ

ಆಸೆಗಳ ಹೊತ್ತು ನಿಂತ ಮನಸು
ಕೂಗಿ ಕರೆಯುತ್ತಿದೆ ನನ್ನ ಬೆಂಬಿಡದ ಪ್ರೀತಿ....

ನೀನೇ ಹೇಳಬೇಕಿಂದು ಈ ಹೃದಯಕ್ಕೆ ಸಾಂತ್ವನ.....

- Acchu love

12 Sep 2017, 01:00 pm