ಹುಟ್ಟಿದಾಗ ಬರುವವರು ಬಂದು-ಬಳಗದವರು
ಅತ್ತಾಗ ಕಣ್ಣೊರೆಸುವವರು ಹೆತ್ತವರು
ತಪ್ಪಾದಾಗ ತಿದ್ದುವರು ಗುರು-ಹಿರಿಯರು
ನೋವಲ್ಲೂ ಸ್ಪಂದಿಸುವವರು ಸ್ನೇಹಿತರು.
ಜೊತೆಯಾಗಿ ಹೆಜ್ಜೆಹಾಕುವರು ಪ್ರೀತಿ-ಪಾತ್ರರು.
ಸತ್ತಾಗ ಮತ್ತೆ ಬರುವವರು ನೆಂಟರಿಷ್ಟರು.
ಈ ಹುಟ್ಟು ಸಾವಿನ ನಡುವಿನಲ್ಲಿ
ಏನಾದರೂ ಸಾಧಿಸುವವರು
ನಿಜವಾದ ಮನುಜರು.....
ನನ್ನ ದೇಶ ನನ್ನ ರಾಜ್ಯ ನನ್ನ ಭೂಮಿ ನನ್ನ ತಾಯಿ ಭಾರತಿ ಜನಜನಿತ ಸಂಸ್ಕೃತಿ ಸಾಧ ನಿನ್ನ ಪಾದಗಳಿಗೆ ಹೃದಯ ಪುಷ್ಪ ಅರ್ಪಣೆ ಮನದಲ್ಲಿನ ಗೌರವದ ಅರ್ಚನೆ...........
ಕಾಶ್ಮೀರದ ಹಿಮವು ನೀನು, ಕನ್ಯಾಕುಮಾರಿಯ ಜಲರಾಶಿ ನೀನು, ಮರುಭೂಮಿ ನೀನು, ಪರ್ವತಗಳು ನೀನು ಭಾರತಿ ನನ್ನ ಜನನಿ ಬಹುರೂಪಿನಿ ಸೃಷ್ಟಿಯ ಸಾಮ್ರಾಗ್ನಿ................
ನಿನ್ನಲ್ಲಿ ನೆಲೆಯಿದ್ದ ಪರಕೀಯರಿಗೂ ನೆಲೆ ಕೊಟ್ಟ ಕರುಣಾಮಯಿ ಕಾವೇರಿ ಪ್ರವಿತ್ರತೆಯ ತುಂಗಾ ಪಾಪ ಕಳೆಯುವ ಗಂಗಾ.............
ನೊಂದ ನಿನ್ನ ಮಕ್ಕಳ ನೋವನುಂಡ ಮನವ ನೋಡಿ ಕಣ್ಣೀರಿಡುವೆ
ಧರಣಿ ನಮ್ಮೆಲ್ಲರ ಸಲಹುವ ದಾಕ್ಷಾಯಿಣಿ..............
ಮಳೆ ನಿನ್ನಲ್ಲಿ ಬೆಳೆ ನಿನ್ನಲ್ಲಿ ಕಾಡು ನಿನ್ನಲ್ಲಿ ಕನಸು ನಿನ್ನಲ್ಲಿ ನನಸು ನಿನ್ನಲ್ಲಿ ಜನನ ನಿನ್ನಲ್ಲಿ ಮರಣ ನಿನ್ನಲ್ಲಿ ನಾನೆಂದು ನಿನ್ನಲ್ಲೇ ಭಾರತಿ ಬದುಕಿನರ್ಥ ತಿಳಿಸಿಕೊಟ್ಟ ಭಗವತಿ............
ಒಂದೇ ಮಾತರಂ ಎಂದು ನನ್ನ ಮುಂದೆ ಸಾಗೋಣ ಕಷ್ಟಗಳಲ್ಲಿ ಕೈಜೋಡಿಸಿ ನಗುವಿನೆಡೆಗೆ ನಾವು ನಾಡಿಯೋಣ ಹಿಂದೆ ನಡಿದ ವಿರ ಯೋಧರ ಹೋರಾಟ ನಾವು ನೆನೆಯೋಣ ಮುಂದಿರುವ ಭವಿಷ್ಯವನ್ನು ನಮ್ಮಿಂದ ಉಜ್ವಲಗೊಳಿಸೋಣ..............
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು..................
ಕಣ್ಣ ಹನಿಗಳು ಮರೆತರೂ ನಿನ್ನ
ಈ ಹೃದಯವು ಮರೆಯಲಾಗದು
ಕಣ್ಣ ಹನಿಗೇನು ಗೊತ್ತು
ಹೃದಯಕ್ಕೆ ಆದ ನೋವು*
ನಾನತ್ತರೂ, ನಕ್ಕರೂ
ಕಣ್ಣೀರಿನ ಬಣ್ಣ ಬದಲಾಗದು
ನೀ ಜೊತೆಯಲ್ಲಿದ್ದರೂ, ಇಲ್ಲದಿದ್ದರೂ
ನಿನ್ನ ನೆನಪನ್ನೆಂದು ಅಳಿಸಲಾಗದು!!