ಬಾಗಿಲಲ್ಲಿ ನಿಂತು ನೋಡುತ್ತಿರುವೆ ನನ್ನ ಬಾಳ ಸಂಗಾತಿಗೆಂದು ದಿನ ಪೂರ್ತಿ ಬಿಸಿಲಲ್ಲಿ ಭೂ ತಾಯಿಯ ಮಡಿಲಲ್ಲಿ ನಿಂತು ಕೆಲಸ ಮಾಡಿ ಬರುವನೆಂದು.............
ಊಟದಲ್ಲಿ ನೂರು ರೀತಿಯ ತಿನಿಸುಗಳನ್ನು ಮಾಡಿರುವೆ
ನನ್ನ ಪ್ರೀತಿಯ ಸವಿ ಸೇರಿರಿ ಪಾಯಸವನ್ನು ಸಿದ್ದಗೊಳಿಸಿರುವೆ ನಿನ್ನ ಮಾತಿನ ಸವಿಯ ನಾನುಂಡು ನಿನಗೆ ಉಣಬಡಿಸಲೆಂದು....................
ಕೈಯ್ಯಲ್ಲಿ ರುಮಾಲು ಕಣ್ಮುಂದೆ ತೊಟ್ಟಿಯಲ್ಲಿ ತುಂಬಿದ ನೀರು ನಿನ್ನ ಕಾಲ ತೊಳೆದು ನನ್ನ ಮನಸ ಮನೆಯೊಳಗೆ ನಿನ್ನ ಕರೆತರಲೆಂದು............
ಸಿಂಗಾರಿಸಿಕೊಂಡು ನಿನ್ನ ಒಳವ ಚಂದ್ರ ಚಕೋರಿಯಂತೆ
ಶಿಗೆಯಲ್ಲಿ ಗುಲಾಬಿ ಮುಡಿದು ತುಟಿಯಲ್ಲಿ ನಿನ್ನ ಕರೆಯುವ ಬಯಕೆ ತಡಿದು ಕಾದು ಕುಳಿತಿರುವೆ ಹೊಸಲಲ್ಲಿ ನಿನ್ನುಸಿರ ಹೆಸರಂತೆ..........
ನನ್ನೆದುರು ನಿನ್ನ ನೋಡಿ ನಿಂತು ಹೊದೆನು ನಾನು ಮಾತಿಲ್ಲದೆ ನಿನ್ನ ಮಡದಿಯಾದರು ದಿನನಿತ್ಯ ನಿನ್ನ ಜೊತೆಗೆ ಇರಲು ಬಯಸುವ ನಿನ್ನ ಪ್ರೀತಿಯ ಪ್ರೇಯಸಿ ನಾನು ಇಂದಿಗೂ ಎಂದಿಗೂ................
ಸಿಟಿ ಅಂದರೇನು ಕಲಿಸಿತು
ನನ್ನ ಮುಗ್ದತೆಯನ್ನು ದೂರ ಮಾಡಿತು
ಮೌನವನ್ನು ಮುರಿಯಿತು
ಅನ್ನವನ್ನು ನೀಡಿತು
ಹಣವನ್ನೂ ನೀಡಿತು
ಎಲ್ಲರಂತೆ ಬದುಕಲು ಕಲಿಸಿತು
ಜೀವನವನ್ನೇ ಬದಲಾಯಿಸಿತು
ಜೀವನಕ್ಕೆ ಹೊಸ ಅಡಿಪಾಯವನ್ನಿಟ್ಟಿತು
ಸದ್ಯ ಮಂಗಳೂರನ್ನೆ ಬಿಟ್ಟು ಹೋಗುವಂತೆ ಮಾಡಿತು
ಹೊಸ ಜೀವನ , ಹೊಸ ಅನುಭವ ಹೊಸತನವನ್ನು ನೀಡಿದ ಮಂಗಳೂರಿಗೆ ಚಿರಋಣಿ ನಾನು
ಮತ್ತೆ ಬರುವೆನೆಂಬ ಕನಸ ಹೊತ್ತು ತೆರಳುವೆನು ನಾನಿನ್ನು
ಶುಭ ವಿದಾಯ ಮಂಗಳೂರಿಗಿನ್ನು
ಹೂವಿನ ಒಡಲಲ್ಲಿನ ಮಕರಂದ ಹೀರುವ ದುಂಬಿಗೆ ಸವಿಜೇನು ಮಾಡಲು ಬೇಕಾದ
ಕಲೆಯನ್ನು ದೇವರು ತುಂಬಿ ಕಳುಹಿಸಿರುವೆನು ಭುವಿಗೆ ಸಿಹಿಯಂಚಲೆಂದು...............
ಕದ್ದರು ಆ ಜೇನಿನ ಮಾಧುರ್ಯವನ್ನು ಮನುಜರು ಅತ್ತು ಕೊಂಬೆಯಲ್ಲಿ ಕೂರುವ ಬದಲಾಗಿ ಸ್ವಾರ್ಥವಿಲ್ಲದ ದುಂಬಿಯು ಹುಡುಕತೊಡಗಿತು ಮತ್ತಷ್ಟು ಸುಗಂಧ ಬೀರುವ ಹೂಗಳನ್ನು ಸೂರ್ಯನು ಉದಾಯಿಸುವ ಮೊದಲೇ ಸ್ವಾಧವನ್ನು ಹಿರಲೆಂದು.........
ಹಚ್ಚಹಸುರಿನ ಕೊಂಬೆಯುಡುಕಿ ಬೆಚ್ಚಗಿನ
ತನ್ನುಸಿರ ಬೇರಸಿ ಮತ್ತೆ ಕುಡಿಟ್ಟಲಾರಂಭಿಸಿತು
ಪರಿಪರಿಯ ಪುಷ್ಪಗಳ ರಸವೀರಿ ತನ್ನ ಸಂಗಡಿಗರ ಜೊತೆಗೂಡಿ.....................