Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅದ್ಬುತ ಛಲಗಾರ್ತಿ ಈ ಭೇಟೆಗಾರ್ತಿ..

ಅದ್ಬುತ ಭೇಟೆಗಾರ್ತಿ
ಕಣೇ ನೀನು.....!
ಬಿಲ್ಲಿಗೆ ಹಣೆಗೊಡದೆ...?
ಭಾಣಕೆ ಗುರಿಯಿಡದೆ...?
ಎದೆಗೆ ಭಿಲ್ಲೆರಿಸದೆ...?
ನಿನ್ನ
ಭತ್ತಳಿಕೆಯಲ್ಲಿರುವ
ಯಾವುದೇ ಭಾಣಗಳನ್ನು
ಪ್ರಯೋಗಿಸದೇ...?
ಬರೀ ಪ್ರೇಮದ
ಬಲೆ ಬಿಸಿ ಹಿಡಿದೆ ಗೆಳತಿ
ಈ ಮಧಿಸಿದ ಆನೆಯನ್ನ...!
ಭೇಟೆಯಾಡದೇ ಭಂದಿಸಿದ
ಛಲಗಾರ್ತಿ ನೀನು....!

ಪ್ರೀತಿಯಿಂದ..
ವಿಜಯಾನಂದ..
9741940305

- ವಿಜಯಾನಂದ

15 Jul 2017, 08:03 pm

ಹೆಜ್ಜೆಯ ಗುರುತು

ಮನದ ದಾರಿಯಲ್ಲಿ
ನೀ ಬಂದು ಹೋದ ಮೇಲೆ
ನೆನಪಾಗಿ ಉಳಿದಿರುವುದೇ
ನೀ ನಡೆದ ಹೆಜ್ಜೆಯ ಗುರುತು!!

ಅದು ಅಳಿಸದೇ
ಹಾಗೆಯೇ ಉಳಿದು ಹೋಗಿದೆ
ನೀ ಹಿಂದಿರುಗಿ
ಬಾರದಿರುವುದನ್ನು ಅರಿತು!!

ಇಂದು ಈ ಮನದ ದಾರಿಯಲ್ಲಿ
ಶುರುವಾದ ಬಿರುಗಾಳಿ
ಶಾಂತವಾಗುವ ಮುನ್ನ
ಅಳಿಸಲಿ ನಿನ್ನ ನೆನಪಿನ ಗುರುತ!!

- ಪಿ.ಜಿ.ಜ್ಯೋತಿ

15 Jul 2017, 08:02 pm

ಹುಡುಗಿಯರ ಮನಸ್ಸು

ಹುಡುಗಿಯರ ಮನಸ್ಸು ಗುಲಾಬಿ ಹೊ ಹಾಗೆ ಮೂಟಿದರು ಬಾಡೋತೇ ಅದನ್ನು ಬಿಟ್ಟರು ಬಡುತೇ,...

- kmanju koujalagi

15 Jul 2017, 06:15 pm

ಉಳಿತಾಯ

ಬದುಕ ಬೇಕು ಒಂಟಿಯಾಗಿ
ಖರ್ಚು ಸ್ವಲ್ಪ ಕಡಿಮೆ ಮಾಡಿ
ಪಾರ್ಟಿ ಗೀರ್ಟಿಯಿಂದ ದೂರ ಸರಿದು
ಸಾಲ-ಶೂಲಗಳಿಗೆ ಅಂಕುಶವ ಬಿಗಿದು
ಬದುಕ ಬೇಕು ಹಣವಂತಿಕ್ಕೆಯಿಂದ
ಶ್ರೀಮಂತನಾಗಿ......
ಸಿಗುತ್ತೆ ಅಲ್ಲೆ ಮಾನ,ಮರ್ಯಾದೆ ನಿನಗೆ

- ಎಸ್.ಬಿ

15 Jul 2017, 03:21 pm

ನನ್ನ ಮನಸ್ಸಿನ ಬಾಗಿಲು

ನನ್ನ ಮನಸ್ಸಿನ ಬಾಗಿಲು
ತಟ್ಟುತ್ತಿರುವ ನೀನು
ಮರೆತೆಯಾ ಅದರ ಬೀಗ
ನಿನ್ನ ನಗುವೆಂದು..............

ರಾಜಮಾರ್ಗದಲ್ಲಿ ರಾಜನಂತೆ
ಬರುವ ಬದಲಾಗಿ ಏತಕ್ಕೆ ನಿನಗ
ಅವಸರ ಕಳ್ಳನಾಗಿ ನುಗ್ಗಿರುವೆ
ನನ್ನೊಳಗೆ ಅನುಮತಿ ಕೇಳದೆ.........

- ಚುಕ್ಕಿ

15 Jul 2017, 01:25 pm

ಸ್ವಪ್ನ

ನೀ ಬಿಟ್ಟು ಹೋದ
ಸಾವಿರಾರು ಸವಿ ನೆನಪುಗಳು
ಜೊತೆಯಲ್ಲಿ ಇದ್ದರೂ
ನಾ ಇನ್ನೂ ಏಕಾಂಗಿಯಾಗಿರುವೆ...!
ಕನಸುಗಳ ಮಜಲಿನಲಿ
ಬಂದಿಯಾಗಿರುವೆ

ಬಿಡಿಸುವ ಬಗೆ ನಿ ಅರಿತಿರುವರೆ
ಆದರೆ ಬಂದಿಯಾಗಿರುವೆ ಸುಖ ನಾ ತಿಳಿದಿರುವೆ
ಎಲ್ಲವನ್ನು ಬಿಡಿಸಿ ಹೇಳಬೇಕೆಂದಿಲ್ಲ
ಬಿಡಿಸಿ ಹೇಳಲು ಈ ಕವನಗಳು ಸಾಲೊಲ್ಲ

- pavan

15 Jul 2017, 11:39 am

ಅಗಲಿಕೆ

ನಿಮ್ಮ ಅಗಲಿಕೆಯ ನೋವು ಕಾಡುತಿದೆ,,
ಕಷ್ಟಗಳೇನೆಂದು ಅರಿಯದ ನನ್ನ ನೋವಿನ ಸಾಗರದಲಿ ಮುಳುಗಿಸಿದೆ,,,

ನನ್ನ ಜೊತೆ ನೆಡೆದಂತೆ ಆಜು-ಬಾಜು
ಬಿಟ್ಟರು ಬಿಡದಂತಹ ಈ ಗೋಜು

ಬೆಂಕಿ ಮಳೆಯಲಿ ತೊಯ್ದನಂತಹ ಅನುಭವ
ಈ ಮಳೆಗೆ ಒಬ್ಬಂಟಿಯಾಗಿದೆ ನೀವೇ ನೀಡಿದ ಈ ಜೀವ
ವರುಷಗಳು ಉರುಳಿದವು
ನೀವೆಲ್ಲದೆ ಅದೆಷ್ಟೋ ಹರುಷಗಳ ಕಳೆದೆವು

ಆದರೂ ನೀವು ನೀಡಿದ ನಂಬಿಕೆಯ ಸಸ್ಯ
ಬೆಳೆಯುತ್ತಿದೆ
ಆಗೊಮ್ಮೆ ಈಗೊಮ್ಮೆ ಸುರಿಯುವ
ನಿಮ್ಮ ನೆನಪಿನ ಮಳೆಯಲ್ಲಿ ಹಸನಾಗಿದೆ
ಹೆಮ್ಮರವಾಗುವತ್ತ ಯೋಚಿಸುತಿದೆ

- pavan

15 Jul 2017, 09:17 am

ನೆನಪು

ಹಳೆಯ ನೆನಪುಗಳು ಸುಳಿದಾಗ
ಮನಸ್ಸು ಕನವರಿಸಿದಾಗ
ಜೀವನ ಆಯಿತು ಪಳೆಯುಳಿಕೆ

- ಎ ಜಿ ಶರಣ್

14 Jul 2017, 10:37 pm

ಕಷ್ಟಗಳ ಅರಿವು

ನೊಂದ ಜನರ ನೋವಿಗಿಂತ ಅದನ್ನು ಅನುಭವಿಸದೆ ನೋವೆಂದು ಮಾತಲ್ಲಿ ಹೇಳಿಕೊಳ್ಳುವವರೆ ಜಾಸ್ತಿ ಎಲ್ಲರಿಗೂ ನಿಜವಾದ ಕಷ್ಟಗಳ ಅರಿವು ಆಗಿರುವುದಿಲ್ಲ...............

ಸತ್ತ ಶವಗಳ ಪಕ್ಕದಲ್ಲಿ ಕುಳಿತು ತಾವೇ ಸತ್ತಂತೆ ನೋವು ನಟಿಸಿ ಎಲ್ಲರ ಕರುಣೆಗೆ ಮೆಚ್ಚುಗೆಗೆ ಪಾತ್ರವಾಗುತ್ತಾರೆ....................

ಸತ್ತವರ ನೋವು ಒಂದಿಷ್ಟು ತಿಳಿದಿಲ್ಲ ಎಲ್ಲರ ಬದುಕನ್ನು ಅಸ್ತವ್ಯಸ್ತ ಮಾಡಿ ತಮ್ಮದೇನು ತಪ್ಪಿಲ್ಲವೆಂದು ನೋಡುವವರ ದೃಷ್ಟಿಕೋಣ ಸರಿಯಿಲ್ಲವೆಂದು ನಟಿಸುವರು ಈ ನಟವಿಭೂಷಣರು....................

- ಚುಕ್ಕಿ

14 Jul 2017, 10:25 pm

ಆಲೋಚನೆ

ರೂಪಿಸಿ ನನ್ನ ಕನಸಲಿ ನಿನಗಿದೆ ಶಾಮಿಲು,,
ನಿನ್ನ ನೆನಪೇ ಸಾಕು ಬೇಕಿಲ್ಲ ಬೇರೆ ಅಮಲು,,

ಕನಸಿನ ಅಂಗಳದಲ್ಲಿ ನಾ ಹಾಕಿರುವೆ ಚಿತ್ತಾರದ ರಂಗವಲ್ಲಿ,,,
ಮಧುರ ಅಧರ ನಿನ್ನ ತುಟಿಗಳಿಂದ ನೀ ಹಾಕು ನನಗೆ ಬೇಲಿ,,,

ನನ್ನ ತುಂಟ ಯೋಜನೆಗಳಿಗೆ ನೀ ಹಾಕು ರುಜುವಾತು,,
ಬಲು ಹಿತವು ಗೆಳತಿ ನಿನ್ನ ಮಾತು,,
ನಿನ್ನ ಪ್ರೀತಿ ದೊರೆತ ನಾನೊಬ್ಬ ದೊರೆ
ತೋಳ ತೆಕ್ಕೆಯಲಿ ನಿನಾಗು ಸೆರೆ,,
ನೀನೇ ನನ್ನ ಅದೃಷ್ಟ ದೇವತೆ
ಸುಪ್ರಭಾತ ಎಂದು ತಿಳಿದು
ಇಗೋ ನಾ ಬರೆದೆ ಕವಿತೆ

- pavan

14 Jul 2017, 08:53 pm