ಬದುಕ ಬೇಕು ಒಂಟಿಯಾಗಿ
ಖರ್ಚು ಸ್ವಲ್ಪ ಕಡಿಮೆ ಮಾಡಿ
ಪಾರ್ಟಿ ಗೀರ್ಟಿಯಿಂದ ದೂರ ಸರಿದು
ಸಾಲ-ಶೂಲಗಳಿಗೆ ಅಂಕುಶವ ಬಿಗಿದು
ಬದುಕ ಬೇಕು ಹಣವಂತಿಕ್ಕೆಯಿಂದ
ಶ್ರೀಮಂತನಾಗಿ......
ಸಿಗುತ್ತೆ ಅಲ್ಲೆ ಮಾನ,ಮರ್ಯಾದೆ ನಿನಗೆ
ನೊಂದ ಜನರ ನೋವಿಗಿಂತ ಅದನ್ನು ಅನುಭವಿಸದೆ ನೋವೆಂದು ಮಾತಲ್ಲಿ ಹೇಳಿಕೊಳ್ಳುವವರೆ ಜಾಸ್ತಿ ಎಲ್ಲರಿಗೂ ನಿಜವಾದ ಕಷ್ಟಗಳ ಅರಿವು ಆಗಿರುವುದಿಲ್ಲ...............
ಸತ್ತ ಶವಗಳ ಪಕ್ಕದಲ್ಲಿ ಕುಳಿತು ತಾವೇ ಸತ್ತಂತೆ ನೋವು ನಟಿಸಿ ಎಲ್ಲರ ಕರುಣೆಗೆ ಮೆಚ್ಚುಗೆಗೆ ಪಾತ್ರವಾಗುತ್ತಾರೆ....................
ಸತ್ತವರ ನೋವು ಒಂದಿಷ್ಟು ತಿಳಿದಿಲ್ಲ ಎಲ್ಲರ ಬದುಕನ್ನು ಅಸ್ತವ್ಯಸ್ತ ಮಾಡಿ ತಮ್ಮದೇನು ತಪ್ಪಿಲ್ಲವೆಂದು ನೋಡುವವರ ದೃಷ್ಟಿಕೋಣ ಸರಿಯಿಲ್ಲವೆಂದು ನಟಿಸುವರು ಈ ನಟವಿಭೂಷಣರು....................
ರೂಪಿಸಿ ನನ್ನ ಕನಸಲಿ ನಿನಗಿದೆ ಶಾಮಿಲು,,
ನಿನ್ನ ನೆನಪೇ ಸಾಕು ಬೇಕಿಲ್ಲ ಬೇರೆ ಅಮಲು,,
ಕನಸಿನ ಅಂಗಳದಲ್ಲಿ ನಾ ಹಾಕಿರುವೆ ಚಿತ್ತಾರದ ರಂಗವಲ್ಲಿ,,,
ಮಧುರ ಅಧರ ನಿನ್ನ ತುಟಿಗಳಿಂದ ನೀ ಹಾಕು ನನಗೆ ಬೇಲಿ,,,
ನನ್ನ ತುಂಟ ಯೋಜನೆಗಳಿಗೆ ನೀ ಹಾಕು ರುಜುವಾತು,,
ಬಲು ಹಿತವು ಗೆಳತಿ ನಿನ್ನ ಮಾತು,,
ನಿನ್ನ ಪ್ರೀತಿ ದೊರೆತ ನಾನೊಬ್ಬ ದೊರೆ
ತೋಳ ತೆಕ್ಕೆಯಲಿ ನಿನಾಗು ಸೆರೆ,,
ನೀನೇ ನನ್ನ ಅದೃಷ್ಟ ದೇವತೆ
ಸುಪ್ರಭಾತ ಎಂದು ತಿಳಿದು
ಇಗೋ ನಾ ಬರೆದೆ ಕವಿತೆ