Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ತಿಳಿ ನೀಲದಲ್ಲಿ
ಲೀನವಾಗುವ ಓ ಬದುಕೇ
ಬಯಸಿದೆಲ್ಲವೂ
ಪಡೆದುಕೊಳ್ಳುವ ತನಕ!!
ಅತಿ ಆಸೆಯಿಂದ ನೀ
ಬೆಳೆಸಿಕೊಂಡಿರುವ ಬದುಕು
ಈ ಭೂಮಿಯಲ್ಲಿ ನಿನ್ನ
ಉಸಿರು ಇರುವ ತನಕ!!
ಕ್ಷಣ ಮಾತ್ರದಲ್ಲಿಯೇ
ತನ್ನ ಪಾತ್ರ ಅಳಿಸುವ ಬದುಕು
ತಾ ಸೂತ್ರ ಹಿಡಿದು
ಹೊರಡುವುದು ಎಲ್ಲ ತೊರೆದು!!
ಬಿರುಗಾಳಿಯಲ್ಲಿ
ಜೋರಾಗಿ ಉರಿಯುವ ದೀಪ
ದಹಸಿದರೂ ಎಲ್ಲ
ಕೊನೆಗೆ ಆರಲೇ ಬೇಕಾದ ಶಾಪ!!
ಪಡೆದದ್ದು ಏನು
ಉಳಿಯಿತು ಎಂದು
ಯೋಚಿಸಲು ಸಮಯದಲ್ಲಿ
ನಿನ್ನ ಬದುಕಿನ ಕೊನೆಯು ಅಲ್ಲಿ!!
ಮಾಡಿರುವ ತ್ಯಾಗ
ನಡೆದಿರುವ ನಿಷ್ಠೆ
ಬರುವವು ನಿನ್ನ ಜೊತೆಗೆ
ಅದುವೇ ಉಳಿವುದು ಕೊನೆಗೆ!!
- ಪಿ.ಜಿ.ಜ್ಯೋತಿ
08 Jul 2017, 06:38 pm
ಮದುವೆ ಎಂದ ಮೇಲೆ
ವರನೇ ವರವು ಬಾಲೆ!!
ಬರುವ ಎಲ್ಲ ನಾಳೆ
ಅವನೇ ನಿನ್ನ ಬಾಳೆ!!
ಬದುಕು ಎಂದ ಮೇಲೆ
ಇರುವುದು ಏಳು ಬೀಳು!!
ಬರುವ ಕಷ್ಟ ಸುಖದಿ
ಇಬ್ಬರಿಗೂ ಸಮ ಪಾಲು!!
ಗಂಡು ಹೆಣ್ಣು ಎಂಬ
ಪದವು ಬೇರೆ ಬೇರೆ!!
ಬೆಸೆಯಲು ಈ ಬಂಧ
ಬಿಡಿಸದ ಅನುಬಂಧ!!
ಬಾಳಲಿ ಜೊತೆ ಇರಲು
ಸಂತಸ ಹಗಲು ಇರುಳು!!.
ಬದುಕಲಿ ಸಾರ್ಥಕತೆ
ತರುವುದು ಈ ಮದುವೆ!!
- ಪಿ.ಜಿ.ಜ್ಯೋತಿ
08 Jul 2017, 06:38 pm
ಕಾಣದ ಕಣ್ಣಿಗೆ ಸೋಕಿದೆ ಪ್ರೀತಿಯ
ಕರಿ ನೆರಳು.......
ಬೀಸುವ ಗಾಳಿಗೆ ನ ಅಂಟಿ ಕೂತಿರುವ
ಚಿಟ್ಟೆ ನಾನು....
ರಭಸದ ಗಾಳಿ ನನ್ನ ನಂಬಿಕೆ ಅಲ್ಲ
ನನ್ನ ರೆಕ್ಕೆಗಳು ನನಗೆ ನಂಬಿಕೆ.....
ಮಾಡಿದ ಸ್ನೇಹಕ್ಕೆ ಬದ್ಧಳಾಗಿ ನಂಬಿ ಮೋಸ
ಹೋದ ಗೆಳತಿ ನಾನು....
ಒಮ್ಮೆ ನೋಡು ಖಾಲಿ ಹೃದಯದಲ್ಲಿ
ನಿನ್ನ ಜಗವ ತುಂಬುವರರು....
ಇಂತಿ ನಿನ್ನ ಮುಗ ಮನಸು..... A
- ಅಂಜಲಿ
08 Jul 2017, 04:37 pm
ಎಲ್ಲೋದೆ ನೀನು ನಾನು ನೀನಿಗಾಗಿ ಕಾದಿರುವೆನೆಂಬ ನೆನಪು ನಿನಗಿಲ್ಲವೇನು..........
ನಿನ್ನ ನೋಡದೆ ನನ್ನ ಮನಸು ತಳಮಲಕ್ಕೆ
ಒಳಗಾಗಿದೆ ನಿನ್ನ ಕರೆ ಕೇಳಬೇಕೆಂದು..........
ಮಾತದರೂ ಹೇಳದೆ ನನ್ನ ಮನಸ್ಸನ್ನು ಬಿಟ್ಟು ಹೊದೆಯೇನು ನಿನ್ನೊಡನೆ ಆಡಿದ ನೂರು ಮಾತು ನೀನಿಲ್ಲದಾಗ ನನ್ನ ಜೊತೆಗೆ ಬರುವುದೇನು..........
ಮೌನಕ್ಕೂ ನನ್ನೆಸರು ಮರೆತೊಗಿದೆ ನೀನಿಲ್ಲದೆ
ನನ್ನೊಡನೆ ಪ್ರೀತಿಯಿಂದ ಮಾತನಾಡಲು...........
ನಿನ್ನ ಉಸಿರಿನ ಪರೆದಾಟ ತಿಳಿಯೋ ಗೆಳೆಯ ಎಲ್ಲಿದ್ದರೂ ನನ್ನಲ್ಲಿಗೆ ಕ್ಷಣಾರ್ಧದಲ್ಲಿ ಸೇರೋ ಗೆಳೆಯ................
- ಚುಕ್ಕಿ
08 Jul 2017, 04:32 pm
ನೆನಪುಗಳೇ ಜೀವನ
ಮನಸ್ಸಿಗೆ ಕೈಗನ್ನಡಿ
ಮನದಿಂದ ಮಾಸದ ಹಾಗೆ
ಜೀವಿಸು ಜೀವವೇ
ಅದುವೇ ಸ್ಪೂರ್ತಿ
ಮುಂದಿನ ನಮ್ಮೀನಲಿವಿಗೆ
ಭಾವಭಾವನೆಗಳ ಓಕುಳಿ
ಪ್ರವಹಿಸಲಿ ಬಾಳಲಿ
ನಮ್ಮ ಜೀವನದ ಹಾದಿ
ಹಾಗೂ ಹೀಗೂ ಸಾಗಿಸುವ
ನಾವಿರುವವರೆಗೂ...
- sathyabapuji
08 Jul 2017, 03:34 pm
ನಮ್ಮ ದೇಹದ ಮನದ
ಅಂತರ್ಜಾಲ.. ಮನಸ್ಸು
ಪ್ರಮುಖ ಪ್ರಬಲ ಸಂಹವನ
ನಿಸ್ತಂತು ಪ್ರವಹಿಸಲು
ಪ್ರೀತಿ ಪ್ರೇಮದ ಮಾರ್ಗದ
ಮಧ್ಯದ ಅನನ್ಯ ಬಂಧ
ಬಿಗಿಯಾಗಿದ್ದರೆ ಮಾತ್ರ ಸಾಧ್ಯ
ಉತ್ತಮ ಸಂಬಂಧ
- sathyabapuji
08 Jul 2017, 03:31 pm
ಮೌನವಾಗಿ ಬಲೆ ಬೀಸದೆ ನುಡಿಸು ನಿನ್ನ ಮನದ ಪ್ರೀತಿಯ ರಾಗ ನವಿರಾಗಿ ಕಣ್ಣು ತೆರೆದೆ ಮೌನ ಮುರಿಯದ ಮರದ ಹಾಗೆ ಒಳಗಿನ ಮಾತು ನಿಲ್ಲಿಸಿ ಹೃದಯ ಕಾತರಿಸಿದೆ ನಿನ್ನ ಬರುವಿಕೆಗಾಗಿ .......................................................... ಬೀಸುವ ತಂಗಾಳಿಯಲ್ಲೂ ನಿನ್ನದೇ ಹೆಜ್ಜೆ ಸದ್ದು
- Jayanthi
08 Jul 2017, 02:13 pm
ನಾ ಕಲಿಸಿದ ಕಲಿಕೆ ಮರಳಿ ನನಗೆ
ಲೋಕದಲ್ಲಿರುವ ವಿಷಯಗಳನ್ನೆಲ್ಲ
ತುಂಬಿಸಿದೆ ಇದರ ತಲೆಗೆ..........
ಬುದ್ದಿಯಿಲ್ಲದ ಬುದ್ಧಿವಂತೆ ಇದು
ನಾವು ಕಲಿಸಿದ್ದು ಎಂದಿಗೂ ಮರಿಯಲ್ಲ
ಅದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ..........
ಶೂನ್ಯದಲ್ಲೇ ಕೋಟಿಕಲಿತಿದೆ ಒಂದರಲ್ಲೇ
ಮುಕ್ಕೋಟಿ ಕಲಿಸುತ್ತಿದೆ, ಕುಂತಲ್ಲೇ ಪ್ರಪಂಚವನ್ನು ಕ್ಷಣದಲ್ಲಿ ತೋರುತ್ತದೆ,ವಿದ್ಯುತ್ ಉಪಹಾರ ಪಡೆದು ಸಕಲವನ್ನು ಹೇಳಿಕೊಡಲು ಸಿದ್ಧವಾಗುತ್ತದೆ..................
ಅವನಿಯಲ್ಲೇ ಅಗ್ರ ಸ್ಥಾನ ಪಡೆದಿದೆ ತಂತ್ರಜ್ಞಾನವನ್ನು ತನ್ನಿಂದ ತಿಳಿಸಿ ಕಣ್ಮುಂದೆ ತೋರುತ್ತಿದೆ..............
ಜ್ಞಾನದ ಗಣಗಳನ್ನು ಒಳಗೊಂಡ ಗಣಕಯಂತ್ರವಿದು ಜಾಣ್ಮೆಯಿಂದ ಕೆಲಸಮಾಡುವ ಜಾದೂಗಾರನಿದು.........
- ಚುಕ್ಕಿ
08 Jul 2017, 01:45 pm
ಇರುವುದೆಲ್ಲವ ಬಿಟ್ಟು ಇಲ್ಲದುದರೆಡೆಗೆ
ಮನ ತುಡಿವುದೆಯಂತೆ ಜೀವನ
ಇರುವುದೆಲ್ಲವ ನೆನೆದು ಬಾರದನೆಂಬಿದನು ಬಿಡು
ಹರುಷಕ್ಕಿದೆ ದಾರಿ ಎಂದಿತು ಡಿ.ವಿ.ಜಿ ಅವರ ಕವನ
ಅತ್ತ ಕಡೆ ಇಲ್ಲ,ಇತ್ತ ಕಡೆಯೂ ಬರುತ್ತಿಲ್ಲ ಕೇಳಿದ ಮನ
ಯಾರು ಹೇಳುವವರಿಲ್ಲ ಎತ್ತ ಕಡೆಗೆ ಕೊಡಬೇಕು ಗಮನ
ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ಹುಡುಕಾಟ
ಸಿಗದಿದ್ದಾಗ ನೋವಿನೊಳಗೆ ಮನಸಿನ ತೊಳಲಾಟ
ಏನು ಇಲ್ಲದಿದ್ದರೂ ಕೆಲವೊಮ್ಮೆ ಹರುಷದ ರಸದೂಟ
ಒಮ್ಮೆ ಬೇಕಾದ್ದೆಲ್ಲ ಸಿಕ್ಕರೂ ಏತಕೆ ಸಿಕ್ಕಿತ್ತೆಂಬಂತೆ ತಾಕಲಾಟ
ಹೇಳುವರು ಇಲ್ಲದ್ದ ಪಡೆಯಲು ಇರಬೇಕು ಛಲ
ಹುಡುಕದೆ ಕುಳಿತರೆ ನೀನು ಬದುಕಲಿ ವಿಫಲ
ಪಡೆದೆ ತೀರಬೇಕೆಂದು ಹೊರಟರೆ ಹರಸಿ ಸಫಲ ಛೇಡಿಸುವರು ಬಯಸಿ ಹೊರಟಿರುವರು ಅತಿಆಸೆಯ ಫಲ
ತಿಳಿಯುವುದೇಗೆ ಯಾವುದು ಒಪ್ಪು ,ಯಾವುದು ತಪ್ಪು
ಸರಿ ತಪ್ಪುಗಳ ಜಂಜಾಟದಲಿ ಆಗಿಬಿಡುವೆವು ಬೆಪ್ಪು
ಬದುಕಲಾಗುವುದೆ ಜಗದಗಲದ ಅಭಿಪ್ರಾಯವ ಒಪ್ಪಿ
ಬದುಕುವುದು ಹೇಗೆ ಇರುವುದ ಅಥವ ಇಲ್ಲದಿರುವುದ ಅಪ್ಪಿ
- ಶ್ರೀಕಾವ್ಯ
08 Jul 2017, 12:35 pm
ಕಟ್ಟಿರುವರು ನಿನಗೊಂದು
ಆಲಯ.....
ಪ್ರತಿನಿತ್ಯ ಪಡೆಯಲೆಂದು
ಆದಾಯ....
ಹೊತ್ತು ಬರುವರು
ನೂರಾರು ಆಶಯ
ಕುತ್ತು ತರದಿರು
ನಮಗಿರಲಿ ನಿನ್ನ ಅಭಯ!
ಸೃಷ್ಟಿ ಕರ್ತನು ನೀನೆಂದು
ನಂಬಿರುವೆವು ನಾವು
ನಿನ್ನನ್ನು ಸೃಷ್ಟಿಸುವರು ನಾವಿಂದು
ಮುಗ್ದ ಮಂದಿ ನಾವು!
ಜೀವನ ನಡೆಸಲೆಂದಿಹರು
ಊರಿಗೊಬ್ಬ ಜ್ಯೋತಿಷಿ
ಜನರ ಮೂರ್ಖರಾಗಿಸುತಿಹರು
ಪೂರ್ವಾಪರಗಳ ದೂಷಿಸಿ!
ಆರವರೆ ದೇವರೆಂದು
ಪೂಜಿಸುತಿಹರು ಭಾವಿಸಿ
ನಮ್ಮಲೂಟಿ ಮಾಡುತಿಹರು
ಮಂತ್ರಮುಗ್ದರಾಗಿಸಿ!
ಪ್ರತಿ ನೋವಿಗೊಂದು
ವ್ರತವ ಸೂಚಿಸಿ
ಗಾಳಿಯಲ್ಲಿ ಗೋಪುರವೊಂದು
ನಿರ್ಮಿಸುವರು ಅರ್ಥವಾಗದ
ಮಂತ್ರಗಳ ಮಳೆಯ ಸುರಿಸಿ!
ಕಾಣಿಕೆ ಇತ್ತವರಿಗೆ
ಹರಸುವರು
ಕಾಣಿಕೆ ನೀಡದವರಿಗೆ
ಆರತಿಯನ್ನು ನೀಡರು!
ಕಾಣಬೇಕು ನಿನ್ನ
ಮಾಡುವ ಕಾಯಕದಿ
ಜಪ- ತಪದಿ ನಿನ್ನ
ಕಾಣಲಾಗದು ಈ ಜನುಮದಿ!
ಶಾರಧ
- ಶಕುಂತಲಾ
08 Jul 2017, 11:35 am