Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಿನ್ನ ವಡನವ ಕಂಡು ಉರಿವ ಸುರ್ಯ ತಂಪಾದ
ನಿನ್ನ ನೋಡಿದ ಚಂದಿರ ನಾಚಿ ಮೆಘದ ಹಿಂದೆ ತಾ
ಮರೆಯಾದ
ನಿನ್ನ ನಗುವ ನೋಡಿ ಹೊಳೆದವು ತಾರೆಗಲು
ನಿನ್ನ ನೋಡಲೆಂದೇ ಕಾದಿವೆ ನನ್ನ ಕಂಗಳು
ಕಲ್ಪನೆಯ ಕಾವ್ಯದ ನಾಯಕಿ ನೀನು
ಕವಿಯ ಕಾವ್ಯ ಕಲ್ಪನೆಗೆ ಸ್ಪೂರ್ತಿ ನೀನು
love you Gouri
ನಾಗು.G
- Nagaraja A
25 Apr 2017, 06:47 am
ಸಾವಿನ ಸೆಳೆತ ಈ ಯವ್ವನದ
ಹುನ್ನರ ಸಂಕೇತ.........
ಇದರಲ್ಲಿ ಬಿದ್ದರೆ ಜೀವನವೆಂಬ
ಸುರಿಳಿಯಲ್ಲಿ ಹಿಂದಿರುಗದೇ ಸತ್ತಂತೆ.......
ಬಯಸಿದ್ದೆಲ್ಲಾ ಬೇಕು ಈ ಹಠವಾದಿಗೆ
ಕೊನೆಯೇನೆಂಬುದೇ ಇಲ್ಲ ಈ ಹೆಮ್ಮಾರಿಗೆ......
ಜೀವವಿಂಡೀ ಜಗವಮರೆಸಿ
ತನ್ನೆದೆಯಾದ ಲೋಕದಲ್ಲಿ ಕೈ ಬಿಡದೆ ಕಾಡುತ್ತದೆ...
ಒಂದು ವೇಳೆ ತಪ್ಪಾದರೆ ಮತ್ತೆ ಮುಂದೆ ಹೋಗುವುದೋ ಅಲ್ಲೇ ನಿಂತು ಹೋಗುವುದೋ ತಿಳಿದಿಲ್ಲ ಈ ಜೀವನಾ..........
- ಚುಕ್ಕಿ
24 Apr 2017, 11:01 pm
ಗುಣದಲ್ಲಿ ಹೊನ್ನು ,ಮಮತೆಯ ಕಣ್ಣು
ಭಾವುಕಳಾಗಿ ನಾನು ಇನ್ನು ,ಹೊಗಳಬೇಕಿದ
ಇವಳನ್ನು , ಇವಳೇ ನನ್ನ ಜೀವದ ಕಣ್ಣು ,
ನನ್ನ ತಾಯಿ.........
- Tejaswini.p
24 Apr 2017, 09:02 pm
ಚಂದ್ರನ ನೋಡು
ಮೋಡದ ಮರೆಯಲಿ
ಅವಿತಿರುವ....!
ತಾರೆಯ ಜೊತೆಯಲಿ
ಹರಟುತ ಹರಟುತ
ಬೆಳಕನು ನೀಡಲು
ಮರೆತಿರುವ....!
ಅವನಿಗು ಜಂಬ
ಹುಣ್ಣಿಮೆ ಎಂದು
ನೋಡುವ ಕಣ್ಣಿಗೆ
ಸುಂದರನೆಂದು...!
- ಭರತ್
24 Apr 2017, 08:59 pm
ಹುಟ್ಟಿದಳು ಸೀತೆ ಮಿಥಿಲೆಯ
ರಾಜಕುಮಾರಿಯಾಗಿ..
ಕನಸು ಕಂಡಳು ಅಯೋಧ್ಯೆಯ
ಪಟ್ಟದ ರಾಣಿಯಾಗಿ..
ಸೇರಿದಳು ಶ್ರೀರಾಮಚಂದ್ರನ
ಮನದೊಡತಿಯಾಗಿ....
ನುಲಿದಳು ಕೈಕೇಯಿಯ
ಹೊಟ್ಟೆಕೆಚ್ಚಿನ ಕಿಡಿಗಾಗಿ..
ನಡೆದಳು ವನವಾಸಕ್ಕೆ
ಶ್ರೀರಾಮನ ಜೊತೆಯಾಗಿ....
ಸಣ್ಣ ಆಸೆಪಟ್ಟಳು ಚಿನ್ನದ
ಜಿಂಕೆಗಾಗಿ..
ಸೇರಬೇಕಾಯ್ತು ಲಂಕೇಶ್ವರನ
ಸೆರೆವಾಸಿಯಾಗಿ..
ಹರಿಯಿತು ಕಣ್ಣೀರು 12 ವರ್ಷ
ಕೋಡಿಯಾಗಿ....
ಸಂತಸ ಪಟ್ಟರೂ ಬಂಧನದಿಂದ
ಮುಕ್ತಳಾಗಿ..
ಬಸವಳಿದಳು ಅಗ್ನಿ ಪರೀಕ್ಷೆಯಿಂದ
ಈ ಸಮಾಜಕ್ಕಾಗಿ..
ಹಿಂದಿರುಗಿದಳು ಅಯೋಧ್ಯೆಗೆ
ಅಳುಕಿನಿಂದ ಪಟ್ಟದ ರಾಣಿಯಾಗಿ....
ಅಧೃಷ್ಠ ಕೈಹಿಡಿಯಲಿಲ್ಲ
ಈಗಲೂ ವಿಧಿಯಿಂದಾಗಿ..
ಗರ್ಭಿಣಿಯಾದರೂ
ಸೇರಬೇಕಾಯ್ತು ಕಾಡು
ಕೇವಲ ಒಬ್ಬ ಅಗಸನ
ಮಾತಿನ ಸಲುವಾಗಿ....
ಹುಟ್ಟಿದರು ಲವ ಕುಶ
ಮುದ್ದು ಮಕ್ಕಳಾಗಿ..
ಪರಿತಪಿಸಿತು ಅವಳ ಮನ
ಮಕ್ಕಳ ದುರಾದೃಷ್ಟಕ್ಕಾಗಿ....
ಬಂದ ಶ್ರೀರಾಮ ಕರೆದೊಯ್ಯುವುದಾಗಿ
ಎಲ್ಲರನೂ ತನ್ನ ಜೊತೆಯಲಿ..
ಲವಕುಶರನ್ನ ಜೊತೆ ಕಳಿಸಿ
ಅಲ್ಲೇ ನಿಂತಳು ಮಾತೆ
ತನ್ನ ವಿಧಿಬರಹ್ಕೆದರಿ....
ಈ ಜನ್ಮ ಸಾಕೆಂದು
ಯೋಚಿಸಿ ನಿರ್ಧರಿಸಿ..
ಸೇರಿದಳು ಭೂತಾಯಿಯ ಒಡಲನು
ದಾರುಣ ಸೀತಾಮಾತೆಯೆನಿಸಿ....
ಕಥೆಯಾದಳು ಸೀತಾಮಾತೆ
ಈಡೇರದ ಆಸೆಗಾಗಿ..
ತನ್ನ ವಿಧಿಬರಹಕ್ಕಾಗಿ ತೊಯ್ದು
ಕರ್ತವ್ಯಕ್ಕೆ ಓಗೂಟ್ಟು ತೋರಿದಳು
ಮನುಜರಿಗೆ ಓರ್ವ ಆಧರ್ಶಿಣಿಯಾಗಿ....
- KR Sreekamala
24 Apr 2017, 06:06 pm
ನಿನ್ನೆ 23/4/2017 ರಂದು ಹುಣಸೂರಿನಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ನಾನು ವಾಚಿಸಿದ ಕವನ..
********
ಕತ್ತಲೆಯ ಬೆತ್ತಲೆ ಆಟಕ್ಕೆ ಮೋಜಿನ
ಪೈಂಟ್ ಹಾಕುವವರ ಮಧ್ಯೆ
ಹೃದಯದ ಗೂರ್ಖನ ಹಸಿಮಾಂಸವನ್ನು
ಬೆಳಗಾಗುವುದರಲ್ಲಿ ಮಾರಲಾಗುತ್ತದೆ..!!
~
ಸುಲಿದ ಚರ್ಮದ ವಾಸನೆಗೆ ಬೆವೆತ
ಮೂಗಲಿ ರಂಧ್ರ ಕೊರೆದಿದೆ
ಸುರಿದ ಉಪ್ಪಿನ ಪಾನಕ ಕುಡಿಯುವ
ಗಂಟಲನ್ನೆಲ್ಲಾ ಗುಂಡಿಕ್ಕಿ ಕೊಂದು
ಮಾರಲಾಗುತ್ತದೆ..!!
~
ಕೆದರಿದ ಕೂದಲ ನರಗಳ ಕಡಿದು
ಹಸಿದ ಹಲ್ಲುಗಳ ಹೊಟ್ಟೆಯ ಬಗೆದು
ಸೋರುವ ಕಿವಿಯಲ್ಲಿ ಸೋಲುವಷ್ಟು
ಒಣತುಪ್ಪಗಳ ಮಾರಲಾಗುತ್ತದೆ..!
~
ಸರ್ಕಲ್ಲಿನ ಸೂಳೆ ಮೂಲೆಯಲಿ
ತಿರುವಿನ ಗಂಧೀ ರೋಡಿನಲ್ಲಿ
ತೊಟ್ಟಿಯಲ್ಲಿನ ಪ್ಲಾಸ್ಟಿಕ್ ಚೀಲಗಳಲ್ಲಿ
ಶೀಲವಿರದ ಹೊಟ್ಟೆಗಾಗಿ ಒಂದಿಷ್ಟು
ನೆನಪ ಮಾರಲಾಗುತ್ತದೆ...!!
~
ಸುರಿದ ಸೂಪಿನ ಘಮಕ್ಕೆ ಅರಳೋ
ಮಲ್ಲಿಗೆ ರಕ್ತಕ್ಕೆ ಕೀವಿನ ಸಾರು ಬಡಿಸಿ
ಸಾವಿನ ಹೊಟ್ಟೆಗೆ ಮೊಳೆಯ
ಅಭಿಷೇಕ ಮಾಡಿ ಸಮಯದ ಬಣ್ಣವ
ಕತ್ತಲಲ್ಲಿ ಮಾರಲಾಗುತ್ತದೆ.!
~
ಬೆಂದದ ಪದಗಳ ಚಟ್ಟದ
ಮೇಲೆ ಸಮಯದ ಅನರ್ಥ
ವ್ಯಾಖ್ಯಾನದ ಮಡಿಗೆ ಉಸಿರಿಡಿಯುವ
ಹೆಸರುಗಳ ಬೂದಿಯಲ್ಲಿ ಬರೆಯುವ
ಕೈಗಳ ಶಕ್ತಿಯ ಮಾರಲಾಗುತ್ತದೆ..!!
-ಅವಿಜ್ಞಾನಿ
**********
- ಅವಿಜ್ಞಾನಿ
24 Apr 2017, 05:56 pm
ಗಂಗೆಯೇ ನಿನ್ನಲ್ಲಿ ಕೂಡಾ ತಾರತಮ್ಯವೇ
ಆ ಪರಶಿವನ ಶಿರದಿಂದ ನೀ ಜಾರಿ ಬೀಳುವ
ಸಮಯದಲ್ಲಿ ಗಾಳಿ ನಿನಗೆ ದಾರಿ ನಿಡಲ್ಲವೆಂದು
ಅಡ್ಡಿ ಹಾಕಿತೇ...................
ನೀ ಬರುವ ರಭಸಕ್ಕೆ ಆಕಾಶ ತಾ ಚೂರಾಗುವ ಸಾಧ್ಯತೆ ಇದೆಯೆಂದು ತನ್ನೊಳಗೆ ನೀ ನಿಲ್ಲಲು
ಜಾಗ ಕೊಟ್ಟಿಲ್ಲವೇ.............
ಈಗ ನಿನ್ನಲ್ಲಿ ಏತಕೆ ಈ ಭೇದ-ಭಾವ
ಈ ಸೃಷ್ಟಿಯಲ್ಲಿರುವ ಜೀವಿಗಳೆಲ್ಲಾ
ನಿನಿಂದಲೇ ಬದುಕಿರುವರೆಂಬ ಸತ್ಯ ನಿನಗೆ ತಿಳಿದಿಲ್ಲವೇ......................
ಜಲಧಾರೆ ನೀನಿರುವ ಭುವಿಯಲ್ಲಾ
ಹಚ್ಚ ಹಸಿರು ತುಂಬಿ ತುಳುಕುವ
ಸಿರಿವನದ ಸೊಗಸಲ್ಲವೇ.....
ಒಂದು ಹನಿಯ ನೀರಿಲ್ಲದೆ ನಿನಗಾಗಿ
ಆ ಗಗನದ ಕಡೆಗೆ ಕೈಚಾಚಿ ನೋಡುತ್ತಿರುವ
ನಿಸ್ಸಹಾಯಕರಿಗಿಂದು ಜೀವವಾಗಿ ನೀ ಬಾರೆ
ಅವನಿಯ ಮಡಿಲಲ್ಲಿ ನೀ ಸೇರೇ.......
ಒಂದು ಹನಿಯ ನೀರು ಉಳಿಸಿ
ಆ ಹನಿಗಾಗಿ ಪರದಾಡೋ ಜೀವಕೆ
ಪ್ರಾಣ ದಾನ ಮಾಡಿ
- ಚುಕ್ಕಿ
24 Apr 2017, 05:39 pm
ಆಕ್ಸಿಡೆಂಟ್ ಆಗಲಿರುವ ಬಸ್ ಹತ್ತಿರುವೆ
ಕಿಟಕಿ ಪಕ್ಕದ ಸೀಟೊಂದನು ಹಿಡಿದಿರುವೆ
ಕನಸುಗಳ ಕತೆಯೊಂದನು ಕಣ್ಣಲ್ಲಿ ಇಟ್ಟಿರುವೆ
ಹಿಂದೆ ಸರಿಯುತಿರುವ ನೆನಪ ನೆನೆಯುತಿರುವೆ
ಕಣ್ಣ ಮುಂದೆ ಬರುತಿರುವುದೆಲ್ಲವ ಸವಿಯುತಿರುವೆ
ಮುಂಬರುವ ದೃಶ್ಯಗಳ ಕಾಯುತಿರುವೆ
- ಶ್ರೀಕಾವ್ಯ
24 Apr 2017, 04:43 pm
ಸುಂದರ ಅನ್ನೋ ಶಿಲೆಗೆ,
ಚಂದಿರ ಅನ್ನೋ ನಗು ಕೊಟ್ಟು
ವಾತ್ಸಲ್ಯ ಅನ್ನೋ ಮಡಿಲ ನೆಟ್ಟು
ಕರುಣೆಯೆಂಬ ಸೀರೆಯನುಟ್ಟು
ಮಮತೆಯ ಕೈಗಳಿಂದ ಕೈಬೀಸಿ
ಕರೆಯುತ್ತಿರುವ ಚಂದನದ ಗೋಂಬೆಯೇ
ಹೆಣ್ಣು , ನನ್ನ ಜೀವದ ಕಣ್ಣು ಎನ್ನ
ಹಡೆದವ್ವ..........,
-- ತೇಜಸ್ವಿನಿ.
- Tejaswini.p
24 Apr 2017, 04:36 pm
ಯಾರು ನೆಟ್ಟರೋ ಈ ಮುಳ್ಳು ಗಿಡವನು
ನನ್ನೆದೆಯ ಬದಲಿ
ಜೀವನವೇ ಮರುಭೂಮಿಯಂತಾಗಿದೆ
ಹಸಿರು ಚಿಗುರುವುದೇ ಬಾಳಲಿ
ತೇಲಿಹೋಗುತಿಃ ಮದನ ಮೇಘಗಗಳ
ನಾನೆಂತು ಕೂಗಿ ಕರೆಯಲಿ
ವರ್ಷಧಾರೆಯು ಸುರೀಯೆ ಹರ್ಷಮೂಡುವುದೆ ಈ ಬಂಜೆ ಮನದಲಿ
ಮೇಘರಾಜನ ಕೈಬೀಸಿ ಕರೆವಾಸೆ
ಹಸಿರ ತೋಳುಗಳಿಲ್ಲ ನನ್ನಲಿ
ಬಂಜರು ಭೂಮಿ ನಾನು, ಪಾಪಸುಕಳ್ಳಿಯೇ
ತುಂಬಿದೆ ನಾ ನಡೆವ ದಾರಿಯಲ್ಲಿ
ಮಳೆ ಬಿದ್ದರೇತಾನೆ ತೆನೆ ಕೊನರುವುದು
ಮರವಿದ್ದರೇತಾನೆ ಮುಗಿಲ್ ಮಳೆಗರೆವುದು
ಇದೊಳ್ಳೆ ತಾಕಲಾಟ, ಇದೊಳ್ಳೆ ಪೀಕಲಾಟ
ಬದುಕೇ ಉತ್ತರ ಸಿಗದ ದೊಂಬರಾಟ
ಹಂಸಿನಿ
- ವಿಸ್ಮಯ
24 Apr 2017, 02:11 pm