Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೇ ಮನಸೇ ನೀ ಯಾಕೆ ಹೀಗೆ..!!

ಖಾಲಿ ಬಂಡೆ ಕಲ್ಲಿನ ಮೇಲೆ ನಿನ್ನ ಹೆಸರು ಗೀಚಿದ್ದೆ..
ನೀನು ಮರಳಿನ ಮೇಲೆ ನನ್ನ ಹೆಸರು ಬರೆದೆ..
ಜೋರಾಗಿ ಅಪ್ಪಳಿಸಿದ ಸಾಗರದಲೆ ನನ್ನ ಹೆಸರನ್ನ ಮಾಯ ಮಾಡಿತ್ತು..
ನಾ ಗೀಚಿದ ಅಕ್ಷರಗಳು ನನ್ನ ನೋಡಿ ನಗುತ್ತಿತ್ತು..

ಅವತ್ತು ಸಾಗರದ ಅಲೆ ನಮ್ಮ ಭವಿಷ್ಯದ ಮುನ್ಸೂಚನೆ ನೀಡಿತ್ತು..
ಅಂದು ಅಳಿಸಿ ಹೋಗಿದ್ದು ಬರೀ ಹೆಸರುಗಳು ಮಾತ್ರ..
ಇಂದು ನೀ ನನ್ನ ಮರೆತಿರಬಹುದು ಆದರೆ ಹೃದಯಲ್ಲಿ ಗೀಚಿರುವ ನಿನ್ನ ನೆನಪುಗಳ ನಾ ಹೇಗೆ ಅಳಿಸಿ ಹಾಕಲಿ..

- ನಮಿತ ಗಟ್ಟಿ

24 Apr 2017, 01:51 pm

ಅವಳು......

ಅವಳದೊ‌ ಸರಳ ಸುಂದರ ಬದುಕಿನ ಸ್ತುತಿ
ಬದುಕುತಿತ್ತು ಮುಗ್ಧ ಗಿಳಿಯ ರೀತಿ
ಹಾರುತಿತ್ತು ಎಲ್ಲೆ ಇಲ್ಲದೆ ಎಲ್ಲವ ಸುತ್ತಿ
ಮೂಕ ಹಕ್ಕಿಯ ಕನಸಿಗಿರಲಿಲ್ಲ ಪರಿಮಿತಿ

ಬಂದನು ಚೆಲುವ ಬಂಗಾರದ ಪಂಜರ‌ ಹೊತ್ತಿ
ಮೋಹಕೆ ಸೋತು ಸಿಲುಕಿತು, ಪಂಜರವ ಹತ್ತಿ
ಎಲ್ಲಿ ನೋಡಿದರು‌ ಪಂಜರದ ಮಿತಿ
ಇನ್ನು ಸರಳುಗಳ‌ ಒಳಗಿನದೇ ಭೀತಿ

ಹೊತ್ತು‌ ತಂದ ಬಂಧನದಲಿ ಕಾಣಲಾಗದ ಪ್ರೀತಿ
ತೂಗಿತ್ತು ಅವಳ ಮನದ ಮೇಲೆ ನೋವಿನ ಕತ್ತಿ
ಕಂಡವರಿಗಾಗಿ‌ ಆಡುತಿತ್ತು ಮಾತು, ಕನಸ ಝರಿಯೇ ಬತ್ತಿ
ಅದರೊಳಗೂ ಬದುಕುವುದು‌ ಅದರ ಅನಿವಾರ್ಯ ಸ್ಥಿತಿ



- ಶ್ರೀಕಾವ್ಯ

24 Apr 2017, 01:17 pm

ದಿನಕರ.......

ದಿನಕರನು ದಿನವೆಲ್ಲಾ ಜೊತೆಗಿರಲು
ಸಿದ್ದವಾಗಿ ಬಂದಿಹನು ಈ ಮುಂಜಾನೆ
ಮಂಜನ್ನು ಕರೆದು ಕೊಂಡು.

ಕೋಳಿ ಕೂಗಿಗೂ ಹೆಚ್ಚರವಾಗದ
ಮನಸು ನಿನ್ನ ಕರೆಗೆ ನನ್ನ ಬಡಿದೆಬ್ಬಿಸಿತೇ
ಗೆಳೆಯ .............

ಮುಂಜಾನೆಯಿಂದ ಮುಸ್ಸoಜೆ
ತನಕ ಜೊತೆಗಿದ್ದು ನಗುವಾಗು
ತದನಂತರ ಕನಸಲ್ಲಿ ಸಿಹಿಯಾದ
ನೆನಪಾಗು...........

- ಚುಕ್ಕಿ

24 Apr 2017, 07:13 am

ಇಂತಿ ನಿನ್ನ ನೆನಪ್ಪು

ನಿನ್ನ ಆಗನಮನ ನಿರ್ಗಮನ
ವಿಧಿ ಲಿಖಿತ ಆದರೆ ನನ್ನಲಿರುವ
ನೀನು ಮತ್ತು
ನಿನ್ನ ನೆನಪ್ಪು ಶಾಶ್ವತ

ನಾಗು.G

- Nagaraja A

24 Apr 2017, 06:31 am

ಬದಕು ಮಾಯದ ಮರೀಚಿಕೆ

-by ಲಚಿ

ಓ ಬದುಕೇ,
ನಿಜಕ್ಕು ನೀ ಘೋರವಾಗಿರುವೆ.
ಓ ಮುಗ್ದ ಮನವೇ,
ನಿಜಕ್ಕು ನೀ ಏಕೆ ಹೀಗಿರುವೆ.
ಮರುಭೂಮಿಯ ಯಾನಕೆ
ನೀ ಏಕೆ ದಾರಿ ಸವೆಸುತಲಿರುವೆ?
ಮಾಯದ ಮರೀಚಿಕೆಯನು ಹಿಂಬಾಲಿಸಿ.
ಗುರಿ ಇರದ ಪಯಣಕೆ
ನೀ ಏಕೆ ಸಜ್ಜಾಗುತಲಿರುವೆ?
ಬಿಸಿಲ ಕುದುರೆಯ ಬೆನ್ನ ಹತ್ತಿ.
ನಿನ ಮುಗ್ದತೆಗೆ, ಅದರ ನಗುವಿಗೆ
ನೀ ಹೆಜ್ಜೆ ಇಡು....

- ಲಚಿ

23 Apr 2017, 11:49 pm

ಧನ್ಯವಾದವು ನಿಮಗೆ,

ಧನ್ಯವಾದವು ನಿಮಗೆ,
ಖುಷಿಯ ಪ್ರಣಾಮ,ನಮಸ್ಕಾರವು.

ನಿಜವಾಗಿಯೂ ಇದೊಂದು ಅದ್ಬುತ,
ಆಶ್ರಯ ನೀಡುವ ವೇದಿಕೆ..
ನಿಮ್ಮೊಡನೆ ನಮ್ಮನೂ ಸೇರಿಸಿ ಮತ್ತೆ,
ಕಲಿವ , ಬೆಳೆವ ಅವಕಾಶ ಕಲ್ಪಿಸಿದ್ದಕ್ಕೆ!

ಓದಿದೆ ನಿಮ್ಮ ಮುನ್ನುಡಿ,
ನಿಜವಾಗಿಯೂ ಅದು ನಿಮ್ಮ ಕನಸಿನ ಕೈಗನ್ನಡಿ.
ಕನ್ನಡದ ಮೇಲಿನ ನಿಮ್ಮ ಕಳಕಳಿಗೆ,
ಹಾರೈಸಲು ಸಾಲದು ನಮಗೆ ಈ ಒಂದು ಘಳಿಗೆ.

ಇದೊಳ್ಳೆ ಅವಕಾಶ,
ಮುಚ್ಚಿಟ್ಟ ಪ್ರೀತಿಯ, ಬಚ್ಚಿಟ್ಟ ಕನಸುಗಳ,
ಬತ್ತಿದ ಬಯಕೆಗಳ,ಕಾಡುವ ಆಸೆಗಳ
ಒಂದೊಂದಾಗಿ ಮನದಿಂದ ಮುದ್ರಿಸಲು..

ಹುದುಗಿಸಿಟ್ಟ ಭಾವನೆಗಳ ಹರಿಬಿಡಲು ಇದು ಸಕಾಲ,
ಅಪತ್ಯವಲ್ಲವಿದು 'ಅನಾಮಿಕ'ನ ಮನದಾಳ.

- ನಾರಾಯಣ

23 Apr 2017, 11:30 pm

ನಿನ್ನ ಆಗಮನ...

ದೂರವಾಗಿದೆ ನೆನಪು ದೂರವಾಗಿದೆ
ಭಾರವಾಗಿದೆ ಮನಸು ಭಾರವಾಗಿದೆ
ನೀನಿಲ್ಲದ ಈ ಮನಸು ಸೊರಗಿ ಹೋಗಿದೆ..!!.ಪ..!!

ದಾರಿ ಕಾಣದೆ ನನಗೆ ದಾರಿ ಕಾಣದೆ
ಮೌನವಾಗಿದೆ ಹೃದಯ ಮೌನವಾಗಿದೆ
ನೀನಿಲ್ಲದ ಹೃದಯ ಬಡಿತ ಮರೆತು ಹೋಗಿದೆ

ಬಿಸಿಲು ತುಂಬಿದೆ ಸುಡುವ ಬಿಸಿಲು ತುಂಬಿದೆ
ನೆರಳು ಇಲ್ಲದೆ ನಿನ್ನ ನೆರಳು ಇಲ್ಲದೆ
ನನ್ನ ರೂಪ ನನಗೆ ಇಂದು ಮಾಯವಾಗಿದೆ

ಸೋತು ನಿಂತಿದೆ ದೇಹ ಸೋತು ನಿಂತಿದೆ
ಸ್ಪರ್ಶವಿಲ್ಲದೆ ನಿನ್ನ ಸ್ಪರ್ಶವಿಲ್ಲದೆ
ನಿನ್ನ ಆಲಿಂಗನದ ಅರಿವು ಇಲ್ಲದೆ

ಮಂಜು ತುಂಬಿದೆ ನಯನ ಮಂಜು ತುಂಬಿದೆ
ಮಾತು ಬಾರದೆ ನನಗೆ ಮಾತು ಬಾರದೆ
ನಿನ್ನ ಆಗಮನದ ಸುಳಿವು ಕಾಣಲಾರದೆ...

- Irayya Mathad

23 Apr 2017, 11:25 pm

ಎಲ್ಲಕ್ಕು ಮೂಲ ನೀನೆ ಅಲ್ವಾ

ಹಗಲಿರುಳು ದುಡಿವರು
ನಿನಗಾಗಿ
ನೀನಿಲ್ಲದೆ ಉಳಿಯರು
ಯಾರು ಇಲ್ಲಿ

ಚಂಚಲೆಯು ನೀನು
ಅಲೆಯುವೆವು ನಾವು
ನಿನ್ನ ಕಂಡು,ಮೋಹ ಗೊಂಡು
ಅಳಿವೆವು,ಎಲ್ಲ ಕಳಕೊಂಡು

ನೀ ಒಲಿದವರನ್ನು
ಮುತ್ತುವರು ಇರುವೆಗಳಂತೆ
ನಿನ್ನ ಬೇಡುವರನ್ನು
ಅಟ್ಟುವರು ಶ್ವಾನದಂತೆ

ಒಂದೊತ್ತಿನ ಕೂಳಿಗು
ಅಲೆಯುವರು ಒಂದೆಡೆ
ಕೋಟಿ- ಕೋಟಿ ಕಂತೆಗಳ
ಹಾಸಿ ಒದೆಯುವರು ಇನ್ನೊಂದೆಡೆ

ನವ- ಮಾಸಗಳು ಬಸಿರಲಿ
ಹೊತ್ತು- ಹಡೆವಳು ತಾಯಿ
ಎಲ್ಲ ನೋವ ನುಂಗಿ ಹರಸಿದವಳ
ಕರುಳ ಬಗೆವರು ನಿನಗಾಗಿ


ಅಷ್ಟ- ಲಕ್ಷ್ಮಿಯೆಂದು ನಿನ್ನ
ಬರಮಾಡುವರು ಬಾಗೀನ ನೀಡಿ
ಪೂರೈಸಿಕೊಳ್ಳಲೆಂದು ತಮ್ಮ
ಅನಿಯಮಿತ ಬಯಕೆಗಳನ್ನ

ಹುಟ್ಟು- ಉಚಿತ, ಸಾವು- ಖಚಿತ
ಕಲಿಯುಗದಲಿ ಇದಾಗಿದೆ ಗತ
ಹುಟ್ಟು-ಸಾವು ದುಬಾರಿ
‌ನಡುವಿನ ಬಾಳಿಗೆ ನೀನೆ ರಾಯಬಾರಿ

ಶ್ರಿಮನ್ನಾರಯಣನ ಸತಿ
ನೀನೆ ನಮಗೆಲ್ಲ ಗತಿ
ಜಗದಿ, ಯಾತಕೀ ಪಜೀತಿ
ನೀನೆ ಎಂದೆಂದಿಗು ಅತಿ- ಗತಿ!


ಶಾರಧ

- ಶಕುಂತಲಾ

23 Apr 2017, 10:53 pm

ಸಾಧನೆ....

ವಿಚಿತ್ರ ಜಗತ್ತಿನಲ್ಲಿ ಬದುಕ್ತಿರೊದೆ ಗ್ರೇಟು.., ಅಂತದ್ರಲ್ಲಿ ನಾಲ್ಕು ಜನ ನಮ್ಮನ್ನು ನೋಡಿ ಏನಂತಾರೆ ಅಂತ ಯೋಚನೆ ಮಾಡ್ಕೋಂಡು ಕುಂತಿದ್ರೆ....
ಅದೇ ನಾಲ್ಕು ಜನ ಕೊನೆಗೆ ಹೇಳ್ತಾರೆ ಬೇಗ ಎತ್ತಿ ಟೈಮ್ ಆಗುತ್ತೆ ಅಂತ.*

'ಸಾವು' ಬೆನ್ನಿಂದೆ ಇರೋದು ವಾಡಿಕೆ
'ಸಾಧನೆ' ಕಣ್ಮುಂದೆ ಬರ್ಬೆಕು ಅನ್ನೋದೇ ಬೇಡಿಕೆ...

ಸಾಧನೆ ಇಲ್ಲದೆ ಗೆಲುವೆ ಇಲ್ಲ *ಸಾಧಿಸಿದವನಿಗೆ ಸಾವೇ ಇಲ್ಲ ....

- shabudin

23 Apr 2017, 09:43 pm

ನಾನಾಗಿರುವೆ.......

ನೊಂದ ನೊಂದು ಸೊರಗಿ
ಹೋದ ಈ ಜೀವನ ಶೈಲಿಯು
ಸಾಕಾಗಿದೆ ನನಗೆ ಸಾಕಾಗಿದೆ.....

ಎಲ್ಲೆಲ್ಲೂ ಸ್ವಾರ್ಥ ಎಲ್ಲೆಡೆಯೂ
ದುರ್ಮಗ ಮಾತುಗಳೆಲ್ಲಾ
ಬರಿದಾಗಿವೆ ಮೌನವಿಂದು
ಸುಂದರವಾಗಿದೆ.........

ಒಂಟಿತನ ಅಂದವಾಗಿದೇ
ಏಕೆಂದರೆ ಹಾಗ ಯಾರು
ನನ್ನ ನೋಯಿಸಲು ಅವಕಾಶ
ಇರುವುದಿಲ್ಲಾ ಯಾರಿಗೂ ಸಿಗುವುದಿಲ್ಲ....

ಕತ್ತಲೆ ಕೊನೆಯಲ್ಲಿ ಕುಳಿತ ನನಗಿಂದು
ನನ್ನದೇ ಅದಾ ಒಂದು ಪ್ರಪಂಚ
ಸೃಷ್ಟಿಯಾಗಿದೆ ಇಂದು ಸೃಷ್ಟಿಯಾಗಿದೆ.

ಅದರಲ್ಲಿ ಇರುವ ನಾನು ಈ ನಿಮಿಷ
ನನಗಾಗಿರುವೆ ನನ್ನಜೊತೆ ನಾನಾಗಿರುವೆ......

- ಚುಕ್ಕಿ

23 Apr 2017, 08:31 pm