Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬರೆದ ಕವಿತೆ ಓದುವವರಿದ್ದರೆ..
ಬರೆದವರಿಗೆ ಸಿಗುವುದು ಮಾನ್ಯತೆ..
ಅದೇ ಉತ್ತೇಜನ ಕೊಡುವುದು
ಬರೆದವರ ಮನಸಿಗೆ..
ಇಲ್ಲದಿದ್ದರೆ ಬರೆದದ್ದು ಸೇರುವುದು
ಮೂಲೆಗುಂಪಿಗೆ..
ಇವರಿಬ್ಬರೂ ಬೇಕು ಈ ಸಮಾಜಕೆ..
ಆಗಲೇ ಕವಿತೆಗೆ ಸಿಗುವುದು
ಸಾರ್ಥಕತೆ....
- KR Sreekamala
16 Apr 2017, 03:14 pm
ನನ್ನೆದೆಯ ವನದಲ್ಲಿ ಮಾಸದಿರಲಿ ನಿನ್ನೊವಿನ ಹೆಸರು.....
ಈ ವಿರಹದ ಬೇಗೆಯಲಿ ಬೆಂದು ಬಳಲುತ್ತಿದೆ
ನನ್ನಯ ಉಸಿರು......
- raki
16 Apr 2017, 02:08 pm
ಕಲ್ಲಂತ ಮನಸು ಕರಗಿಸೋ ಕರುಣಾಮಯಿ ಕಣ್ಣು ನಿಮ್ದು
ಕಟುಕನಿಗೂ ಕವನದ ಸುವಾಸನೆ ಬಡಿಸಿಡಿದ ಕಾಮಾಕ್ಷಿ ಕನ್ಯೆ ನೀನು
ಮನಸಿಂದು ಹಸಿ ಬಿಸಿ
ಕನಸೇಕೋ ಕಸಿ ಕಸಿ
ಕಲ್ಲು ಮನವಿಗೆ ಕರುಣೆ ಬಾರದು
ಒಲವ ಕೈಯಲಿಹಿಡಿದು ನೆಲದೊಳಹಾಸಿ ಒಲವನು ಮಣ್ಣು ಮಸಿ ಮಾಡಿದಾತನು ನಾ
ನನ್ನುಸಿರಿಂದು ಬಿಸಿ ಬಿಸಿ
ಭಾವನೆಇಂದೇಕೋ ಹುಸಿ ಹುಸಿ
ಬಣ್ಣಬಳೆದಳು ನನ್ನ ಬದುಕಿಗೆ
ನಾ ಬಳೆದೆ ನಿನ್ನ ಬದುಕಿಗೆ ನೀರ ಮೇಲೆ ಸುಟ್ಟಸುಣ್ಣ ಅರ್ಥಹಿನ ಬಣ್ಣವ ಮನದಬಿಳಿಗೋಡೆಯದಿ
ಅನುರಾಗ ಝರಿ ಝರಿ
ಅನುವಾದ ಕಾಲಿ ಕೈ
✍✍ಪ್ರದೀಪ✍✍
- ಪ್ರದೀಪ.ಮ.ಪಾಡಮುಖೆ
16 Apr 2017, 01:42 pm
ಒಂದು ಮರದಲ್ಲಿ
ಹಲವು ಹಕ್ಕಿ ಸೇರಿ
ಒಂದೇ ಕಲರವ ಬೀರುವ ಹಾಗೆ
ಕಟು಼ತರುವೆವು ನಮ್ಮ
ಪ್ರೇಮಿಗಳ ಲೋಕ....
- chinnadana ni kosam
16 Apr 2017, 01:34 pm
ಮನಸುಗಳ ಕಲಹಕೆ ಅನುಮಾನವೆ
ಸುಳಿವು......
ಮನಸುಗಳ ಮಿಲನಕೆ ಬೇಕು ಒಲವೆಂಬ
ಗೆಲುವು.......
- raki
16 Apr 2017, 11:44 am
ಅಕ್ಕ ಎಂಬ ಮಾತಲ್ಲಿ ಎಂತ ಅಕ್ಕರೆ
ಅಕ್ಕರೆ ಸಕ್ಕರೆಗಿಂತ ಸಿಹಿ ನೀ ನಕ್ಕರೆ
ನಗು ಅರಿಯದ ನನ್ನ ಬಾಳಲ್ಲಿ ನೀ ತುಂಬಿದೆ
ನಗು ಎಂಬ ಸಕ್ಕರೆ.
- PARASHURAM B
16 Apr 2017, 10:59 am
ಪುಟ್ಟ ಹೆಜ್ಜೆ ಇಟ್ಟು ಬರುವ
ನನ್ನ ತಂಗಿಗೆ
ಈ ಮನದ ಭಾವನೆಯ
ನಾ ಹೇಗೆ ತಿಳಿಸಲಿ!!
ದಿನ ಹೀಗೆ ಮೌನದಲಿ
ನೀನು ಕುಳಿತರೆ
ನನ್ನ ದನಿಯೇ ಮೂಕವಾಗಿ
ನನ್ನ ಶಪಿಸಿದೆ!!
ಅಂದು ನಾನು ನೊಂದು
ನುಡಿದ ಮಾತು ಸೋದರಿ
ನೀ ನೊಂದು ಕೊಲ್ಲದಿರು
ಈ ನಮ್ಮ ಬಂಧವ!!
ಮಾತನು ಆಡುವಂತಹ
ಗಿಣಿಯೇ ಮೌನ ಏತಕೆ
ನಿನ್ನ ಕೂಡಿ ನಲಿಯುವ
ಬಯಕೆ ನನಗಿದೆ!!
- ಪಿ.ಜಿ.ಜ್ಯೋತಿ
16 Apr 2017, 10:42 am
ಮರೆತಂತೆ ಮರೆಯಾಗಿ ದೂರ ಸರಿದವಳೆ,
ಆಗೊಮ್ಮೆ ಈಗೊಮ್ಮೆ ನೆನಪಾಗೆ ಕಾಡುವಳೆ..
ಕಾಣದೇ ಹೋಗಿರುವೆ ಕಣ್ಮುಂದೆ ನೀನು,
ಕಾಣದೇ ಮರೆಯಾದರೂ ನಿನ್ನ ಮರೆಯುವೆನೆ ನಾನು..
ಮರೆಯಲಾಗದ ಪ್ರೀತಿ ನೀ ನೀಡಿರುವೆ ನನಗೆ,
ನಿನ್ನ ಮರೆತರೆ ಅದುವೆ ನನ್ನ ಜೀವನದ ಕೊನೆ ಗಳಿಗೆ..
ನಿನ್ನನೊಮ್ಮೆ ಕಾಣಲು ಹವಣಿಸಿದೆ ಈ ಹೃದಯ,
ದಯಮಾಡಿ ದರ್ಶನವ ನೀಡು ಬಾ ಓ ಹೃದಯ...
ಜೆ.ಪಿ..
- jp R
16 Apr 2017, 12:31 am
ಯೋಚಿಸುತೇನೆ ನಿನ್ನ
ನೆನಪೆಂಬ ಮರವನ್ನು
ಕಡಿಯಬೇಕೆಂದು
ಅದರೆ
ನನ್ನ ಮನಸಿನಾಳದಲಿ
ಬೇರುಗಳಿವೆಲ಼
ಅವುಗಳೆನು ಮಾಡಲಿ?
ಗೆಳತಿ
- chinnadana ni kosam
15 Apr 2017, 10:44 pm
ಕಂಡೆನಾ ನೀಲಮೇಘ ಶಾಮನ
ದೇವಕಿಯ ಒಡಲ ತುಂಬಿದ
ಮಥುರೆಯ ಪುಣ್ಯಪುರುಷನ
ಯಶೋದೆಯ ಮಡಿಲ ಸೇರಿ
ಗೋಕುಲಕೆ ಪ್ರೀತಿ ತುಂಬಿದವನ
ಆಡುತಲೇ ಮಹಿಮೆಗಳ ತೋರಿ
ನಿಜ ಶಕುತಿ ಭಕುತಿಯ ಮೆರೆದವನ
ಕಿರುಬೆರಳಲೆ ಗೋವರ್ಧನ ಗಿರಿಯ
ಎತ್ತಿ ಪಾವನಗೊಳಿಸಿದವನ
ಗೋವುಗಳ ಕಾಯುತಲೇ ಗೋಕುಲವ
ಜತನದಿ ಕಾಪಾಡಿದ ಗೋಪಾಲಕನ
ಯಮುನೆಯ ಒಡಲಲೇ ಕಾಳಿಂಗನ ಶಿರವೇರಿ
ನರ್ತಿಸುತ ಅವನ ವಿಮೋಚಿಸಿದವನ
ಪಿಳ್ಳಂಗೋವಿಯ ನುಡಿಸುತಲೇ
ಕೇಳಿದವರ ಮನವ ಸಮ್ಮೋಹಿಸಿದವನ
ನಾರಿಯರ ಉಡುಗೆ ಕದ್ದು ಗೋಳಾಡಿಸುತಲೇ ನಾಚಿದ ನೀರೆಯರ ಹೃದಯ ಕದ್ದವನ
ಕಣ್ಣಂಚಿನ ನೋಟದಲೆ ಕನಸ ಬಿತ್ತಿ
ಮನವ ಹಣಕಿಸಿ ಕೆಣಕಿದವನ
ರಾಧೆಯ ಉಸಿರಲೇ ಬೆರೆತು
ಆತ್ಮ ಸಂಗಾತಿಯಾದವನ
ದೂರ ನಿಂತರು ರುಕ್ಮಿಣಿಯ ಮನವನೋದಿ
ಅಪಹರಿಸೇ ಪರಿಣಯಿಸಿದವನ
ಮಧ್ಯಮ ಪಾಂಡವನ ಪೂಜ್ಯರೂಪಿಯು
ವಿಶ್ವರೂಪ ದರುಶನ ತೋರಿ ಧರ್ಮ ಯುದ್ಧವ ಸಾರಿದವನ
ಕಣ್ಣಿಗೆ ಪಟ್ಟಿಯ ಕಟ್ಟಿ ತ್ಯಾಗ ಧರ್ಮದ ಮಾತಿಗೆ
ಬಾಗಿ ಹುಲ್ಲಿನ ಕಡ್ಡಿಗೆ ತನ್ನ ಜೀವವ ತೆತ್ತವನ
ಕಂಡೆನ ನೀಲ ಮೇಘ ಶ್ಯಾಮನ....
- ಶ್ರೀಕಾವ್ಯ
15 Apr 2017, 09:09 pm