Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸ್ನೇಹ

ಸ್ನೇಹ ಒಂದು ಸುಂದರ ಕವನ
ಬರೆದರು ಮುಗಿಯದ ಮಂಥನ
ಮರೆತರು ಮರೆಯಲಾಗದ ಸ್ಪಂದನ
ಬಿಟ್ಟರು ಬಿಡಲಾಗದ ಬಂಧನ
ಅದುವೇ ಗೆಳೆತನ ?

- Gopi Krishna

05 Apr 2026, 01:58 am

?️ ಕರುನಾಡಿನ ಕಾಮಧೇನು ?️

?️ ಕರುನಾಡಿನ ಕಾಮಧೇನು ?️


ಕರುನಾಡಿನ ಜನಕೆಲ್ಲ ಕಾಮಧೇನು ನೀವೇ

ಕಲ್ಪತರು ನಾಡಿನಲ್ಲಿ ನೆಲೆಸಿರುವ ಶ್ರೀ ಗುರುವೇ

ಶಿವಕುಮಾರ ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೧||


ನಡೆದಾಡುವ ದೇವರೇನಿಸಿ ಧರೆಯಲ್ಲಿ ನಡೆದಾಡಿದ

ಧರೆಯ ಮೇಲೆ ಧರ್ಮಜ್ಯೋತಿ ಬೆಳಗಿಸಿದ ದೇವ

ಶರಣು ಶರಣು ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೨||


ದಾಸೋಹದ ಸಿರಿಯಾದೆ ದಾಸೋಹಂ ಎಂದು ಹೇಳಿ

ಹಸಿದ ಒಡಲಿಗೆ ಅನ್ನವಿಟ್ಟ ಮಹಾಶಿವಯೋಗಿ ನೀ

ಶಿವಕುಮಾರ ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೩||


ಕುಲಸೀಮೆ ಜಾತಿ ಎನಿಸದೆ ಸಮಾನತೆ ನೀ ತೋರಿದೆ

ಸಹಬಾಳ್ವೆ ತತ್ವಬೋಧಿಸಿ ಸಮಾನತೆಯ ಹರಿಕಾರನಾದೆ

ಶರಣು ಶರಣು ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೪||


ಬಸವಪಥದಿ ಸಾಗಿನಡೆದು ಬಸವತತ್ವ ಜಗಕೆ ಸಾರಿದೆ

ಅಭಿನವ ಬಸವಣ್ಣ ಬಿರುದಾಂಕಿತ ಶ್ರೀ ಗುರುವೇ

ಶಿವಕುಮಾರ ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೫||


ವಿದ್ಯೆಯನ್ನು ಹರಸಿಬರುವ ವಿದ್ಯಾರ್ಥಿಸಮೂಹಕ್ಕೆ

ಜ್ಞಾನದಾಹವನ್ನು ಇಂಗಿಸಿದ ಜ್ಞಾನಗಂಗೆ ನೀವು ಗುರುವೇ

ಶರಣು ಶರಣು ಶ್ರೀ ಗುರುವೇ ಶರಣು ನಿಮ್ಮ ಪದಾಕೆ ||೬||

?️ಎಸ್.ಕೆ.ಜಂಬಗಿ

- SRI SHYLA JAMBAGI

29 Mar 2026, 02:40 am

"ಅನುಭವದ ಅಕ್ಷರಗಳು"

"ಶಾಲೆಯಲ್ಲಿ ಹೇಳಿಕೊಟ್ಟ ಪಾಠಗಳು
ಜೀವನಕ್ಕೆ ಅರ್ಥವನ್ನು ಕೊಟ್ಟರೆ..
ಜೀವನ ಹೇಳಿಕೊಟ್ಟ ಪಾಠಗಳು
ಜೀವನದಲ್ಲಿ ಸಾಕಷ್ಟು ಅನುಭವಗಳನ್ನು
ಕೊಟ್ಟಿವೆ ..
ಅರ್ಥವು ಜೀವನದ ರೀತಿ ಬದಲಿಸಿದರೆ
ಅನುಭವವು ಇಡೀ ಜೀವನವನ್ನೇ
ಬದಲಿಸಿದೆ...
ಶಾಲೆಯಲ್ಲಿ ಏನನ್ನು ಕಲಿತ್ತಿಲ್ಲ
ಆದರೆ ಜೀವನ ಎಲ್ಲಾವನು ಕಲಿಸುತ್ತಿದೆ"...
- ಎ.ಆರ್.ರಾಹುಲ್..

- ?.?.?????.

24 Mar 2026, 10:43 pm

"ಭಾವನೆಗಳ ಬಂಧನ"


"ಭಾವನೆಗಳು ನಮ್ಮನು ಬೆಳೆಯಲು
ಅಡ್ಡಿ ಪಡಿಸಿದರೆ..
ಬುದ್ಧಿಶಕ್ತಿಯು ನಮ್ಮನು ಬೆಳೆಯಲು
ಭರವಸೆ ನೀಡುತ್ತವೆ..
ಅದಕ್ಕಾಗಿ ನಾವು ಎಂತಹ ಕಷ್ಟದ ಸಮಯದಲ್ಲಿ
ಬುದ್ಧಿಶಕ್ತಿಯಾನೇ ಉಪಯೋಗಿಸಬೇಕ್ಕೆ ಹೊರತ್ತು ಭಾವನೆಗಳನಲ್ಲ"..

- ಎ.ಆರ್.ರಾಹುಲ್.

- ?.?.?????.

24 Mar 2026, 09:09 pm

?ಶ್ರೀ ಕಾಳಿಕಾ ದೇವಿಯ ಕೃಪೆ ?

ದಿನಾಂಕ: 23.03.2026

. ಕೋಠಾ ಗ್ರಾಮದಲ್ಲಿ ನೆಲಸಿದಂತ ಶ್ರೀ ಜಗನ್ಮಾತೆ ಕಾಳಿಕಾದೇವಿಯ ಪೂಜೆ ಕಾರ್ಯಕ್ರಮ ನೆರವೇರಿದ್ದು ಹಾಗೆಯೇ ನಿನ್ನೆ ದಿನದಂದು ವಿಜೃಂಬಣೆಯಿಂದ ಭಜನಾ ಕಾರ್ಯಕ್ರಮವು ಯಶಸ್ಸು ಆಗಿದೆ ಹಾಗೆಯೇ ಸರಿಯಾಗಿ ಬೆಳ್ಳಿಗ್ಗೆ (11)ಹನ್ನೊಂದು ಗಂಟೆಗೆ ಮಹಾಪ್ರಸಾದ ಕಾರ್ಯಕ್ರಮ ಪ್ರಾರಂಭ ಆಗಲಿದೆ ಆದ ಕಾರಣ ಕೋಠಾ ಗ್ರಾಮದ ಸಕಲ ಸದ್ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತೇವೆ

. ?ಧನ್ಯವಾದಗಳು?

- Kalappa Kali

23 Mar 2026, 10:53 am

"ನೆಮ್ಮದಿಯ ಹುಡುಕಾಟ"


"ಜೀವನದ ಅದೆಷ್ಟೋ ಜಂಜಾಟದಲ್ಲಿ
ಒಂದಿಷ್ಟು ನೆಮ್ಮದಿಯ ಪಯಣ
ಪಯಣದ ದೂರ ಹೆಚ್ಚಾದಂತೆ ಅನುಭವದ
ಕ್ಷಣಗಳು ಹೆಚ್ಚಾದವು.
ಅನುಭವದ ದಿನಗಳು...
ಅರ್ಥವಿಲ್ಲದ ನಿರ್ದಿಷ್ಟ ಜೀವನ...
ಈ ಪಯಣದಲ್ಲಿ ಅಲಲ್ಲಿ ಒಂದಿಷ್ಟು
ಪ್ರೀತಿ, ಪ್ರೇಮ, ಇವುಗಳ ಹೋರಾಟದಲ್ಲಿ
ನೆಮ್ಮದಿಯ ಹುಡುಕಾಟ..
ನಂಬಿದವಳು ಕೈ ಬಿಟ್ಟಾಗ ಅರಿವಾಯಿತು..
ಇದೆಲ್ಲ ಯೌವನದ ಒಂದಿಷ್ಟು ಹುಡುಗಾಟ"...

- ಎ.ಆರ್.ರಾಹುಲ್...

- ?.?.?????.

22 Mar 2026, 06:28 pm

ಚಿಕ್ಕಪ್ಪ

ಪ್ರೀತಿಯ ಚಿಕ್ಕಪ್ಪ
ಏನು ಬರೆಯಲಿ ಎಂದು ತೋಚುತ್ತಿಲ್ಲ
ಪ್ರತಿ ಬಾರಿ ನೀವು ದಾರಿಯಲ್ಲಿ ಸಿಕ್ಕಾಗ ನಗು‌ ಮೊಗದಿಂದ ಮಾತನಾಡುವ ನೀವು ಬಾರಿ ಯಾಕೆ ನಗುವುದನ್ನ ಮರೆತು ಬಿಟ್ಟಿರಿ!!
ನೀವು ಪ್ರತಿ ಬಾರಿ ನನ್ನನ್ನು ನಿಮ್ಮ ಮಗಳೆಂದು ಕರೆಯುವಾಗ ಸಂತೋಷವಾಗುತ್ತಿತ್ತು..
ನಮ್ಮ ಕಷ್ಟಗಳಿಗೆ ಹೆಗಲು ನೀಡಿದ್ದೀರಿ, ಸಂತೋಷದ ಕ್ಷಣಗಳಲ್ಲಿ ಜೊತೆಯಾಗಿದ್ದೀರಿ..
ಇಂದು ನೀವು ನಮ್ಮೊಂದಿಗೆ ಜೀವಂತವಾಗಿ ಇಲ್ಲದೇ ಇರಬಹುದು ಆದರೆ ನಿಮ್ಮ ನೆನಪುಗಳು ಸದಾ ನಮ್ಮೆಲ್ಲರ ಜೊತೆ ಶಾಶ್ವತವಾಗಿರುತ್ತದೆ...
ಆ ಪರಮಾತ್ಮನು ನಿಮ್ಮ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ.. !!

Miss you ಚಿಕ್ಕಪ್ಪ

- ನಮಿತ ಗಟ್ಟಿ

21 Mar 2026, 07:05 pm

ಹೇಗೆ ವರ್ಣಿಸಲಿ ನಿನ್ನ

ಸ್ವರಗಳಲ್ಲಿ ವರ್ಣಿಸಲಾಗದ ಸೌಂದರ್ಯ ನಿನ್ನದು..
ವ್ಯಂಜನಗಳಲ್ಲಿ ಅಳೆಯಲಾಗದ
ವ್ಯಕ್ತಿತ್ವ ನಿನ್ನದು..
ಪದಗಳಲ್ಲಿ ಪೋಣಿಸಲಾಗದ
ಪ್ರೀತಿ ನಿನ್ನದು..
ನಿನ್ನ ಆ ವರ್ತನೆಯ ಕಂಡು
ವರ್ಣಿಸಿದೆ ನಿನ್ನನು ಹೀಗೆ
ನಿ ಬಯಸಿದು ನನ್ನಿಂದ, ಅಂ..ಆಃ..
ಎಂಬ ಎರಡು ಯೋಗವಾಹಗಲೆಂದು..

- ?.?.?????.

20 Mar 2026, 03:43 pm

ಪಯಣ

ಸಾಗುತಿದೆ ದಾರಿ ನಡೆದಷ್ಟು ಉದ್ದಕ್ಕೂ
ಗಮ್ಯ ಎಲ್ಲಿಗೋ.

ಅರಿವಿಲ್ಲ ಪಯಣ ಹೂವಿನ ಹಾಸಿಗೆಯೋ
ಮುಳ್ಳಿನ ದಾರಿಯೂ.

ಗುರಿ ತಲುಪುವ ಧಾವಂತದಲ್ಲಿ ಎದರಾಗೋ ಪರೀಕ್ಷೆಗಳೆಷ್ಟೋ.

ಗೆಲ್ಲುವ ಸಂಭವ ಎಷ್ಟೋ.
ಸಿಗುವ ಅನುಭವ ಎಷ್ಟೋ.

ಕಲಿಯುವ ಪಾಠ ಎಷ್ಟೋ.
ಜೀವನ ಎಂಬ ಪುಸ್ತಕಕ್ಕೆ

ಶಾಲೆಯ ಅಗತ್ಯವಿಲ್ಲ ಗುರುವಿನ ಅಗತ್ಯವಿಲ್ಲ
ಅನುಭವವೇ ಪಾಠ ಸಮಯವೇ ಗುರುಗಳಾಗಿ
ಮಾರ್ಗದರ್ಶಿಸುತ್ತವೆ.

- shreya M S

10 Mar 2026, 07:24 pm

ಬದುಕು

ಜೀವನವೆಂಬುದು ಕಷ್ಟಗಳ ಸರಮಾಲೆ
ಕಷ್ಟಗಳು ಯಾವುದೂ ಶಾಶ್ವತವಲ್ಲ!
ಆದರೆ ಈ ಜೀವನವು 'ಶಾಶ್ವತ' ಎಂಬ ಸತ್ಯ ಅರಿತು ಬಾಳಿದರೆ ಬಹುಶಃ ಯಾವ ವ್ಯಕ್ತಿಯೂ ಸಹ ತನ್ನ ಕಷ್ಟದ ‌ಕಾಲದಲ್ಲಿ ಸಾವನ್ನು ಯೋಚಿಸಲಾರ!!

- ನಮಿತ ಗಟ್ಟಿ

- ನಮಿತ ಗಟ್ಟಿ

09 Mar 2026, 07:44 pm