ಆ ದಿನಗಳು ಎಲ್ಲಿ ಹೋದವು
ಸೂತ್ರ ಕಟ್ಟಿ ಆಕಾಶಕ್ಕೆ ಪಟ ಹಾರಿಸಿದ್ದು
ಚಿನಿಪನಿ ಹಿಡೆದು ಹೊಡೆದು ಆಡಿದ್ದು
ಗುಂಡ, ಗಜಗ, ಕಣಗಲಿ ತೋರಬೆರಳಲಿಟ್ಟು ಹೊಡದದ್ದು
ಅಜ್ಜ ಅಜ್ಜಿಯ ತೊಡೆಯ ಮೇಲೆ ಕಥೆ ಕೇಳುತ್ತಾ ನಿದ್ದೆಗೆ ಜಾರಿದ ಆ ದಿನಗಳು
ಬೊಗಸೆ ಶೆಂಗಾಕ್ಕೆ ಉರಿಬಿಸಲಲಿ ಶೆಂಗಾ ಶೊಸಿಸಿದ್ದು
ಬೊಗಸೆ ಹುಣಸೆ ಕಪ್ಪ ಕೆ ಹುಣಸೆ ಹಣ್ಣು ಜಜ್ಜದ್ದು
೨ಪೈ ಸೆಗೆ ಒಂದು ಉಣ್ಣುವ ಎಲೆ ಕಟ್ಟದ್ದು
೨೫ ಪೈಸೆಗೆ ಒಂದು ತಾಸ ಬಾಡಿಗೆ ಸೈಕಲ್ ಹೊಡದದ್ದು
೭೫ ಪೈಸೆಗೆ ನೆಲಕೆ ಟಿಕೆಟ್ ತೆಗೆದು ಸಿನೇಮಾ ನೋಡಿದ್ದು
ಸಂಕ್ರಮಣ ಕ್ಕೆ ೧೦ ಕಿ.ಮಿ ನಡೆದು ರೊಟ್ಟಿ ಖಾರ ತಿಂದದ್ದು
ಊರ ಮದುವೆ ಸಮಾರಂಭಗಳಿಗೆ ಕರೆಯದೇ ಕಳಸಗಿತ್ತಿಯಂತೆ ಹೋಗಿದ್ದು
ಎಸ್ ಎಸ್ ಎಲ್ ಸಿ ಪರೀಕ್ಷೆಲಿ ನಮಗೂ ಯಾರ ಕಾಫಿ ಕೊಡಲು ಬರದದ್ದಕ್ಕೆ ಕಣ್ಣೀರು ಹರಸಿದ್ದು
'ಬಬ್ರುವಾಹನ' ಅಣ್ಣವರ ಸಿನೇಮಾ ನೂರು ಬಾರಿ ನೋಡಿದ್ದು
ಇದ್ದದ್ದೊಂದು ಹಳೆಕಾಲದ ಕೈ ಗಡಿಯಾರ ಕ್ಲಾಸಲಿ ಎಲ್ಲರಗೂ ಕಾಣುವಂಗ ಕೈ ಗೆ ಕಟಗೊಂಡಡ್ಡಾಡಿದ್ದು
ತಲೆ ಗುಂಡ ಹೊಡಸಿಕೊಂಡ ಹಣೆಗೆ ವಿಭೂತಿ ಪಟ್ಟ ಬಳಕೊಂಡ ಕ್ಲಾಸಮೇಟಗಳ ರ್ಯಾಗಿಂಗಿಗೆ ಒಳಗಾಗಿದ್ದು
ಎಲ್ಲ ಜಾತಿ ಮತ ಧರ್ಮ ಗೆಳೆಯರ ಜೊತೆ ಒಂದೇ ತಾಟಲಿ ಉಂಡಾಡಿದ್ದು
ಪತ್ರ ಬರೆದು ಉತ್ತರಕ್ಕೆ ಹದಿನೈದು ದಿನಗಳವರೆಗೆ ಪತ್ರದ ದಾರಿ ಕಾಯ್ದದ್ದು
ವರ್ಡಕಪ್ ಆಟ ನೋಡಲು, ಸಾಹುಕಾರ ಮನೆಯ ಕಿಡಕಿಗಳಲಿ ಇಣಿಕಿ ಟಿ.ವ್ಹಿ.ನೋಡಿದ್ದು
ಸೈಜ್ ಬರದಿದ್ದರೂ ಗೆಳೆಯರ್ ಡ್ರೆಸ್ ಹಾಕ್ಕೊಂಡು ಕಾಲೇಜ್ ದಲಿ ಬಿಲ್ಡಪ್ ಕೊಟ್ಟದ್ದು
ಮನುಷ್ಯ ಜಾತಿ ಒಂದೇ ಎಂಬ ತತ್ವ ಬದಕಲ್ಲಿ ಅಳವಡಿಸಿಕೊಂಡದ್ದು.
ಆ ದಿನಗಳು ಎಲ್ಲಿ ಹೋದವು...
ಸಿಂಹದ ಮರಿಯ ತಂದು ಸಾಕಿ ಬೆಳಸಿದರೆ, ಅದಕೆ
ಆಕಳ ಗುಣ ಬಂದಿತೆ? ಅಮೃತದಂತ ಹಾಲು ಕೊಟ್ಟಿತೆ?
ನರಿಯ ಮರಿಯ ತಂದು ಸಾಕಿ ಬೆಳಸಿದರೆ ಅದಕೆ
ನಾಯಿಯಂತ ನಿಯತ್ತಿನ ಗುಣ ಬಂದಿತೆ?
ಕಳ್ಳಬೆಕ್ಕಿಗೆ ಮನೆಯಲ್ಲಿ ಜಾಗ ನೀಡಿ
ನಿಯತ್ತಿನ ನಾಯಿಗೆ ಅಂಗಳದಲ್ಲಿ ಜಾಗ ನೀಡಿದ
ಮನುಜನ ನೋಡಿ
ಇದು ಕಲಿಗಾಲವಯವ್ಯ
ಎಂದ ಗುರು ಬಸವ ಪ್ರಿಯ ರೇವಣಸಿದ್ದೇಶ್ವರ.
ಎಲ್ಲೆಡೆ ಮತಾಂಧತೆ ಜಾತೀಯತೆಯ ಸಾಮ್ರಾಜ್ಯ
ನಿಜವಾಗಿಯೂ ಲಭಿಸಿದೆಯೇ ನಮಗೆ ಸ್ವರಾಜ್ಯ?
ಕಣ್ಬಿಟ್ಟ ಕಡೆಯಲ್ಲೆಲ್ಲ ಕೋಲೆಬಸವಗಳ ಗುಟುರು, ಕಾಕು
ಹಿಂದೆಯೆ ನಡೆದಿದೆ ಗದ್ದುಗೆಯ ಅಹಂಕಾರದ ಪರಾಕು
ಹಿಂಬಾಲಕರಿಗೆಲ್ಲ ಅಧಿಕಾರದ ರಕ್ಷಾ ಕವಚದ ಬಾಳು
ರಕ್ಷಕರೆಲ್ಲಾ ಭಕ್ಷಕರಾಗಿ ಎಂಜಲಿಗೆ ದೇಹಿಯೆನ್ನುವ ಗೋಳು
ನೋಟ ಬೀರಿದಲ್ಲೆಲ್ಲಾ ನಾನು ನನ್ನದೆ!
ನನ್ನ ಬಿಟ್ಟು ಜಗದಲಿ ಏನಿದೆ?
ಕ್ಷಣಕ್ಷಣಕೂ ಬಲಿಯುತಿದೆ ಅದ್ವಿತೀಯನಾಗುವ ಸ್ವಾರ್ಥ
ಸಾವಿರ ಪ್ರಾಣಗಳುಸಿರುಗಟ್ಟಿದರು ಸರಿಯೇ,
ದೇಶವನ್ನೆ ದೋಚಿ ಮಾರುವುದಾದರೂ ಸರಿಯೇ
ಎಡಬಿಡದೆ ನಡೆದಿದೆ ಅತಿಕ್ರಮ ಅತ್ಯಾಚಾರ
ಸಿಕ್ಕಿದ್ದನ್ನೆಲ್ಲ ಅಗೆದು ತೆಗೆದು ಬಗೆದು ಸಿಗಿದು ತಿನ್ನುವಷ್ಟು
ಇವರ ಕಣ್ಣಿಗೆ ಬಿದ್ದು ಸತ್ತವರೆಷ್ಟೋ? ಸೊರಗಿದವರೆಷ್ಟೋ?
ತನ್ನನ್ನೇ ಅಡವಿಟ್ಟು ಗಂಟು ಕಟ್ಟಿಕೊಂಡವರೆಷ್ಟೋ?