ಬ್ಯಾಸಗಿ ದಿವಸಕ ಬೇವಿನ ಮರ ತಂಪ ಅಂತಿದ್ರಿ.
ಅರಳಿ-ಕಟ್ಟೆಯ ಮೇಲೆ ಊರಾ ನ್ಯಾಯ ಹೇಳ್ತಿದ್ರಿ..
ಊರ ಮುಂದಿನ ಬಸವಣ್ಣಗ ಬಿಲ್ಪತ್ರಿಯ ಎರಸ್ತಿದ್ರಿ.
ಇಗ್ಯಾಕೆ ಇಷ್ಟು ಬದಲಾಗಿರೀ, ತಿಳಿವಲ್ತು ನಿಮ್ಮ ಆಟ!!
ಬನ್ನಿ ತಗೊಂಡು ಬಂಗಾರದಂಗ ಇರೋಣ ಅನ್ನೋಕೆ ಅಸ್ಟೆನಾ ನಾವು?
ಚಪ್ಪರಿಸಿ ನಾ ಬಿಟ್ಟ ಹಣ್ಣು ತಿನ್ನೋಕೆ ಅಷ್ಟೇನಾ ನಾವು
ರಣ-ಬಿಸಿನಲಿ ನಿಮಗೆ ನೆರಳು ಕೊಟ್ಟಿಲ್ಲೇನು ನಾವು?
ತಿಂದ ಮನೆಗೆ ಜಂತಿ ಎಣಿಸೋರು ನೀವಲ್ಲದೆ ಮತ್ತೆಲ್ಲಿದಿರಾ?
ನಿಮ್ಮ ಆಡು-ಕುರಿ ತಿನ್ನಸಲಿಕ್ಕೆ ನಾವೇನು ಅಂದವರಲ್ಲ!
ನಿಮ್ಮ ಕೂರಿಗೆ-ಕುಂಟೆಗೆ ನಾವೇನು ತಂಟೆ ತಗದವರಲ್ಲ.!!
ಅಷ್ಟೇ ಯಾಕೆ ನಮ್ಮನ್ನ ಕತ್ತರಸಿ ಜಂತಿ ಮಾಡಿಕೊಂಡಗಲೂ ಪಿಟಕ್ ಅಂದವರಲ್ಲ!!!
ಇಷ್ಟಿದ್ದರು ಅದು ಎಷ್ಟರ ಐತಿ ನಿಮ್ಮ ದಬ್ಬಾಳಿಕೆಯ ದೌಲತ್ತು??
ಲಕ್ಷ್ಯ ಕೊಟ್ಟ ಕೇಳ್ರಿ ಇನ್ನ ನಮ್ಮಿಂದ ಆಗಲ್ಲ..
ಅನಾಮತ ಎಂಥ ಪಾಪ ಅಂದ್ರ ಐತಿ ಇಲ್ಲ ಅದಕ?
ನಮಗ ತಲೆ ಕೇಟ್ರಾ ಸುಟ್ಟು ಬುದಿನಾ ಆಗ್ತಿರೀ!!
ಈಗಲಾದರೂ ಕೈ ಮುಗಿತಿವಿ ನಮ್ಮನ್ನ ಉಳಿಸಿ-ಬೆಳೆಸಿ.
ಸುಗ್ಗಿ..
ರಾತ್ರಿ ವೇಳೆಯಲ್ಲಿ ಕಾಣುವ
ಆ ಚಂದ್ರ ಮುಖದವಳು
ಕನಸಲ್ಲಿ ಕಾಡುವ ಹಸನ್ಮುಖಿ
ಕಣ್ಣುದ್ದುರು ಎದ್ದು ಬರುವ ದೇವತೆಯೇ...
ಸೂರ್ಯ ಮುಳುಗು ಹೊತ್ತಿನಲ್ಲಿ
ಇಬ್ಬರು ಜೊತೆಯಾಗಿ ಕೂತು
ಆಡೋಣ ನೂರೆಂಟು ಮಾತುಗಳು
ನಾ ಕನಸ್ಸಿನಲ್ಲಿ ನೀ ನನಾಗಿತ್ತ ಮುತ್ತು
ನಿನ್ನ ದಾರಿಯನ್ನೇ ಕಾದಿರುವೆ ನಾನು
ಇನ್ನಂದ್ದರೂ ನೀ ಬರಬಾರದೇನು...
ತುರು ತುರು ಮಳೆ ಬಾರುವ ಸಮಯ
ನಾ ಬಂದು ನಿಂತಿರುವೆ ನಿನ್ನ ಸನಿಹ
ತಿಳುಸುವೆಯ ನಿನ್ನ ಮನದ ಬಯಕೆಯು
ಅಂದು ಕನಸಲ್ಲಿ ಕೊಟ್ಟ ಬಾಷೆಯ
ನಂಬಿ ನಾ ಕಾದಿರುವೆ ನಿನ್ನ ದಾರಿಯನ್ನು
ಇನ್ನಂದ್ದರೂ ನೀ ಬರಬಾರದೆಯೇ..... ನಿನಗಾಗಿ ಕಾಯುವೆ ಸದಾ......
ಒಂಬತ್ತು ತಂಗಳು
ಗರ್ಭದಿ ನಿನ್ನಿರಿಸಿ
ಹಡೆದಳಾ ತಾಯಿ ದೇವಕಿ!!
ಅಂಗೈಯ ಬೊಗಸೆಯಲಿ
ಕಂದನ ಮೊಗ ನೆನೆದು
ಮುದ್ದಿಸಿದಳಾ ತಾಯಿ ದೇವಕಿ!!
ಬರಿಗೈಯ ತಾ ಹಿಡಿದು
ಮುತ್ತಿಕ್ಕಿ ಎತ್ತಾಡಿ
ಲಾಲಿಸಿದಳಾ ತಾಯಿ ದೇವಕಿ!!
ತುಂಬಿದ ಎದೆಯಿಂದ
ಅಮೃತವನು ಚಿಮ್ಮಿ
ಪಾಲಿಸಿದಳಾ ತಾಯಿ ದೇವಕಿ!!
ನೀನಿರುವ ಗುಂಗಲ್ಲಿ
ಬರಿ ಮಡಿಲ ಸವರುತ್ತ
ಪೋಶಿಸಿದಳಾ ತಾಯಿ ದೇವಕಿ!!
ನಿನ್ನ ಒಂದು ಅಪ್ಪುಗೆಗೆ
ಹಗಲಿರುಳು ಸೆರೆಯಲ್ಲಿ
ಕಾದಿರುವಳಾ ತಾಯಿ ದೇವಕಿ!!