Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮರೆತು ಬಿಡು
ನೀ ಮಾಡಿದ ತಪ್ಪನ್ನೆಲ್ಲಾ
ತೊರೆದು ಬಿಡು
ನೀನಂದು ಕೊಂಡದ್ದನ್ನೆಲ್ಲಾ..
ಹೆಣೆಯದ ಜಡೆ
ಅಷ್ಟೊಂದು ಸುಂದರವಲ್ಲ
ಮಣಿಯದ ನಡೆ
ಅದೇನು ಶುಭ್ರವಲ್ಲ..
ಅರಿತು ನಡೆ
ಇಲ್ಲಾವುದು ಹೂವಲ್ಲ
ಬೆರೆತು ನಡೆ
ಇಲ್ಲಾರೂ ನಿನ್ನವರಲ್ಲ..
ಮರೆತ ಹಾಡ
ಹಾಡುವುದಾದರು ಹೆಗಮ್ಮ
ತೊರೆದ ನಾಡ (ಪ್ರೀತಿ)
ಮತ್ತದರ ಹಂಗೇಕಮ್ಮ..
ಹರಿದು ನೋಡು
ನೀ ಕಟ್ಟಿದ ಪಂಜರವನ್ನೆಲ್ಲ
ಹೊತ್ತು ನೋಡಿ
ನಡೆಯುವರಮ್ಮ ಈ ಜನರೆಲ್ಲ..
- vasu
07 Aug 2018, 11:53 am
ಕವಿ ಹೃದಯವ ತಟ್ಟಿದೆ
ನಿನ್ನುಸಿರಿನ ಗೊರ್ಗೆರೆತ
ನಿನ್ನುಸಿರಿನ ಹೊಡೆತಕ್ಕೆ
ಪದಗಳೇ ಹೊಳೆಯುತಿಲ್ಲ
ಈ ಪಾಪಿ ಹೃದಯಕ್ಕೆ
- ಪ್ರದೀಪರಾಜ್
07 Aug 2018, 10:46 am
ಗಲ್ಲಕೆ ಹಚ್ಚಿದ ಸಿರಿಗಂಧ ಬರಿದಾಗಿದೆ ಪರಿಪೂರ್ಣ ಕಲೆ ಇಲ್ಲದೆ, ಕೆಂದುಟಿಯು ಮಂಕಾಗಿದೆ ಮಾತನಾಡುವವರು ಜೊತೆಗಿಲ್ಲದೆ, ಮೂಗುತಿಯು ಮೌನವಾಗಿದೆ ಕಣ್ರೆಪ್ಪೆಯ ಗಲಭೆ ಇಲ್ಲದೆ ಹಣೆಯತ್ತ ನೋಡಿ, ಹುಬ್ಬೇರಡು ಚಡಪಡಿಸಿದೆ ಕುಂಕುಮದ ಸೊಬಗಿಲ್ಲದೆ.
ಉಂಗುರದ ಬೆರಳ ತುದಿಯಲ್ಲಿ ಹುಬ್ಬೇರಡಿನ ನಡುವಲ್ಲಿ ಹಚ್ಚಲೇನೆ ಸಿಂಧೂರವ ಸಿಂಗಾರಿ ತುಂಬಲಿಂದು ನಿನ್ನಲ್ಲಿ ಸೌಭಾಗ್ಯದ ಸೊಬಗನ್ನು.
ಹಚ್ಚ ಹಸಿರ ಬಳೆಗಳ ತೊಡಿಸಿ ಜಾಜಿಮಲ್ಲಿಗೆ ಜಡೆಯಲಿ ಮುಡಿಸಿ ಝರಿಹಂಚು ಸೀರೆಯುಡಿಸಿ ಬೆಳ್ಳಿ ಕಾಲ್ಗೆಜ್ಜೆ ತೋಡಿಸಲೇನೆ ನಿನ್ನ ಪಾದವ ಅಂಗೈಯಲ್ಲಿರಿಸಿ.
ನಯವಾದ ಅಂಗೈಯಲ್ಲಿ ಮದರಂಗಿಯ ಹರಡಲೇ ,ನುಣುಪಾದ ಉಗುರುಗಳಿಗೆ ನೂರು ಬಣ್ಣ ಸೇರಿಸಿ ನಿನ್ನ ನಗೆಯ ಹಚ್ಚಲೇ,
ನಿನ್ನ ಕೆನ್ನೆ ಮೇಲೆ ಜಾರಿದ ಹನಿಯ ಬೊಗಸೆಯಲ್ಲಿ ಹಿಡಿಯಲೇನೆ ಮನದ ಬೇಗುದಿಯ ಅದರ ತಂಪಲ್ಲಿ ಮರೆಮಾಚಲು.
ಇಂದೊಂದು ದಿನ ನಿನ್ನ ಕದ್ದು ನನ್ನಲ್ಲಿ ಬಚ್ಚಿಟ್ಟು ಮುದ್ದಾಡಲು.
- ಚುಕ್ಕಿ
06 Aug 2018, 09:03 pm
ಕೇಸರಂಟಿದ ಕೈಗಳಲ್ಲಿ ಹಸ್ತರೇಖೆ ಕಾಣುತ್ತಿಲ್ಲ ಉಸಿರ ಬಿಸಿ ಒಣಗಿಸುವುದೇ ಈ ಮಡಿಕೆಯ ಒಡಲನ್ನು! ಎತ್ತಲಿಂದ ತಂದ ಮಣ್ಣೊ ಕಾಲಡಿಯಲಿ ಕರಗೋಗಿ ಚೂಪಾದ ಕಲ್ಲುಗಳ ತೆಗೆದೆಸೆದು ಮೃದುವಾಗಿ ತಿಳಿನೀರಲಿ ಮಿಂದೆದ್ದು ಗಾಲಿಮೇಲೆ ತಿರುಗುತಿಹುದು ಗಿರಗಿರನೆ ಜೋರಾಗಿ.
ಮಂಕಾದ ಕಣ್ಣೆರಡು ಆಯತಪ್ಪದೆ ಹಿಡಿದಿಟ್ಟು ಮೆಲ್ಲನೆ ಸಮಾಧಾನ ಪಡಿಸುತಿವೆ ನಾನಿರುವೆನು ನಿನಗಾಗಿ ನಿನ್ನ ಒಡಲ ಹೊಡೆಯಲು ಬಿಡನೆಂದು ನಾನೆಂದೂ.
ಜೇಡಿಮಣ್ಣ ಹೃದಯದಲ್ಲಿ ಮೂಡಿತೊಂದು ಮುದ್ದಾದ ಮಡಿಕೆ ಬೆಂಕಿಯಲಿ ಸುಟ್ಟು ಗಟ್ಟಿಗೊಂಡು ರಂಗು ಧರಿಸಿ ಕೆಂಪಗಾಗಿ.
ತಂಪಿನ ತವರೂರಿದು ಉದರದಲ್ಲಿನ ಬೇಗೆಯೆಲ್ಲವ ತಣ್ಣೀರ ತಂಪಲ್ಲೆ ಕಿತ್ತೆಸೆಯುವುದು.
- ಚುಕ್ಕಿ
05 Aug 2018, 06:38 pm
ಮನಸಿನ ಆಳದಲ್ಲಿ ಅಡಗಿರುವ
ಚಲುವೆ ನೀನು...
ನನ್ನಯ ಬಾಳಿನಲ್ಲಿ ಬಂದಿರುವ
ಬೆಳಕು ನೀನು...
ಕಣ್ಣಲ್ಲಿ ಕಂಬನಿಯಾಗಿ ತುಂಬಿರುವ
ರೂಪ ನಿನ್ನದೇ...
ಮಾತಲ್ಲಿ ಮಮತೆಯ ಹಗೆ ಬರುತಿರುವ
ಹೆಸರು ನಿನ್ನದೇ ..
ಕಾಣದ ಕಾಡಿನಲ್ಲಿ ಹಾರುವ
ಹಕ್ಕಿ ನೀನು...
ಸಂಜೆಯ ವೇಳೆಯಲ್ಲಿ ಬೀಸುವ
ಗಾಳಿ ನೀನು...
ನನ್ನೆದೆ ಗುಡಿಯಲ್ಲಿ ನೆಲೆಸಿರೂ
ದೀಪ ನೀನು...
ನಿನ್ನನು ಕಾಯುವಾ ಒಂಟಿಯಾ
ಸೇನೆ ನಾನು....
- Lucky
04 Aug 2018, 05:14 pm
ಇಂದು ಕುಳಿತಿರುವೆ ನಾ ಕೋರ್ಟ್ ಆವರಣದಿ
ನನ್ನ ಹೆಸರಿನ ಬುಲಾವಿಗೆ ಕಿವಿ ಕೊಡುತ್ತಿರುವೆ ಕೆಲ ಸಮಯದಿ
ಸುತ್ತಲೂ ನೋಡುವರು ಜನ ನನ್ನ ಅನುಮಾನದಿ
ನಾ ಬಂದಿಲ್ಲ ಇಲ್ಲಿ ಯಾವ ಕೊಲೆ ದರೋಡೆ ಪ್ರಕರಣದಿ
ಬಂದಿರುವೆ ನಾನು
ಬಡವರ ಲೂಟಿಗೈಯುತ್ತಿದ್ದ ಬ್ಲೇಡ್ ಕಂಪೆನಿಗಳೊಂದಿಗೆ ಪ್ರತಿಭಟಿಸಿ
ಇಂತಹ ಕೇಸು ಎದುರಿಸಲು ನಾನು ಸರಿಯಲ್ಲ ಹಿಂದೆ ಯಾವ ಅಭ್ಯಂತರದಿ
ಒಟ್ಟಾರೆಗಾಗಿ ಬಡವರಿರಬೇಕು ಸದಾ ಸಂತೋಷದಿ.
ಸಂತೋಷ್ ಬಜಾಲ್
ಮಂಗಳೂರು
- santhoshbajal
04 Aug 2018, 11:54 am
ಸುಡುವ ಸೂರ್ಯ ಮರೆಯಾಗಿದ್ದಾನೆ
ತಂಪಾದ ಮೋಡ ಚಲಿಸಲಾರಂಬಿಸಿದೆ
ಸುತ್ತ ತಂಗಾಳಿ ಬೀಸಲಾರಂಬಿಸಿದೆ
ಹನಿ ಹನಿ ಬೀಳುವ ಮಳೆರಾಯನಲ್ಲಿ ಜೋರಾಗಿ ಕೂಗಿ ಕೇಳಬೇಕೆಂದೆನಿಸಿದೆ
ಬಯಲು ಸೀಮೆ ಭಾಗಕ್ಕೂ ಮಳೆ ಸಿಂಪಡಿಸುತ್ತಿರುವೆಯಲ್ಲವೇ ? .......
ಸಂತೋಷ್ ಬಜಾಲ್
ಮಂಗಳೂರು
- santhoshbajal
03 Aug 2018, 09:31 am
ಸಿಹಿಗನಸು ನಾ ಕಾಣುತಿರಲು
ಹಸಿರು ಜರತಾರೆ ಸೀರೆಯುಟ್ಟು
ನೀಲಾಗಸಕೆ ಬೆಟ್ಟವು ಮುತ್ತಿಡುತಿರಲು
ಹಕ್ಕಿಗಳ ಚಿಲಿಪಿಯ ಆ ನಾದದಲಿ
ಜಲಪಾತಗಳ ಭೋರ್ಗರೆತದ ಆ ಸದ್ದಿನಲಿ
ಹೂವಿನ ಪರಿಮಳ ಹರಡುತಿರಲು
ನಮ್ಮದೊಂದು ಪುಟ್ಟ ಅರಮನೆ ಅಲ್ಲಿರಲು
ಗೆಳತಿ ನೀ ಆಗ ನನ್ನ ಜೊತೆಗಿರಲು
ಇದೇ ನಿಜವಾದ ಸ್ವರ್ಗ ಕಾಣಾ....
##ರಜನೀಷ##
- RajaneeshNandikolmath
02 Aug 2018, 06:28 pm
ಕಥೆ ಕವನ ಬರೆಯವ ಕವಿ ನಾನಲ್ಲ
ಆ ಯೋಗ್ಯತೆಯು ಯನಗಿಲ್ಲ ಮನಸಲಿ
ಬರುವ ಭಾವನೆಗಳು ಗೀಚುವ ನಾವಿಕನು..
ಪ್ರೀತಿ, ಪ್ರೇಮದ ಮೇಲೆ ಮನಸಿಲ್ಲ
ದ್ವೇಷ, ಅಸುಯೆ, ನನಗೆ ಪರಿಚಯವಿಲ್ಲ
ಸ್ನೇಹದ ಅರ್ಥ ನನಗೆ ತಿಳಿದಿಲ್ಲ
ಪ್ರೀತಿಸಲು ಹುಡುಗಿರಮೇಲೆ ನಂಬಿಕೆಯಿಲ್ಲ
ದ್ವೇಷ, ಅಸೂಯೆಗೆ ಶತ್ರುಗಳಿಲ್ಲ
ಈ ಜೀವಕ್ಕೆ ಎರಡು ಜೀವದ ಗೆಳೆಯರು ಸಾಕು
ವೀರಭದ್ರನಿಗೆ ಪ್ರಿಯ ಭಕ್ತನಾಗಿ
ಅಪ್ಪ ಅಮ್ಮನಿಗೆ ಪ್ರೀತಿಯ ಮಗನಾಗಿ
ಅಜ್ಜಿ ತಾತನ ಕಣ್ಣಲ್ಲಿ ನಾನೊಬ್ಬ ಅರ್ಹನಾಗಿ
ರೋಗಿಗಳಿಗೆ ಒಬ್ಬ ಒಳ್ಳೆಯ ವೈದ್ಯನಾದರೆ
ನಾ ಬದುಕಿದ್ದು ಸಾರ್ಥಕ ದೇವಾ
##ರಜನೀಷ##
- RajaneeshNandikolmath
02 Aug 2018, 06:26 pm
ಮನದಲ್ಲಿ ಹೂವರಳಿ ,ನಿಂತೈತಿ ನೋಡಾ ನನ್ನೀ ಪ್ರೀತಿ ಹೂವಾ ..
ಕಾದೈತೆ ನೋಡಾ ನನ್ನೀ ಪ್ರೇಮದ ಪರಿಯ ...
ಬಾರಯ್ಯ ನನ್ನೊಲವಿನ ಊರಿಗಾ ,ಮನಸಾ ಆಸೈತೆ ನಿನ್ನಾಸರೆಯಾ ಬಯಸಿ.......
ಒಮ್ಮೆ ನೋಡಾ ಬಾರ ನನ್ನೀ ಪ್ರೇಮದ ಊರಾ ...
ನನ್ನೀ ಹೃದಯದ ಒಡೆಯನೇ ನೀನೆಂದು ಏಳೇಳು ಜನ್ಮದಾಗು......
- Acchu love
02 Aug 2018, 04:44 pm