Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿರ್ಲಿಪ್ತತೆ..

ಎಲ್ಲ ಇದ್ದೂ ಏನೂ ಇಲ್ಲದ ಭಾವ..
ಮೆಲ್ಲ ಮೆಲ್ಲ ಒಳ ನುಸುಳಲು ಯತ್ನಿಸಿವೆ
ನಕಾರಾತ್ಮಕ ಚಿಂತನೆಗಳ ಹಾವ..
ತನು ಮನಗಳು ಬಯಸುತಿವೆ ಸನಿಹ ಬರಲೆಂದು ಸಾವ..

ಬೇಡವಾಗಿದೆ ಬದುಕು, ಕಾಡದಾಗಿವೆ ಕನಸು,
ಮರಗಟ್ಟಿದೆ ಮನಸ್ಸು, ವಿಕಾರವಾಗಿವೆ ವರ್ಚಸ್ಸು
ಏನ ಹೇಳಲಿ, ಯಾರ ಕೇಳಲಿ, ಎಲ್ಲಿ ಹುಡುಕಲಿ
ಪರದಾಡಿಹ ಮನಸ ಸರಿಪಡಿಸುವ ಉಪಾಯವ...

ಅತ್ತ ಇತ್ತ ಎತ್ತ ನೋಡಿದರೆನು,
ಕೂಗಿ ಕೂಗಿ ರೇಗಿ ಹೇಗಿ ಸತ್ತರೇನು
ಚಿತ್ತ ಸುತ್ತ ಸುಟ್ಟ ಸೂತಕದ ಛಾಯೆ..
ಮನವು ಮರುಗಿ, ಅಹಿಸಿ ಸಹಿಸಿ ಸಾಗಿದೆ..

ಅಂತ ಇಂತ ಎಂತ ಕಾಯ್ದರೇನು
ಯಾರು ಎಲ್ಲಿ ಬರುವರು
ಬಂದು ಇಂದು ಮನದ ಮುಸುಕ ತೆಗೆದರೆನು
ಬಾಳಿ ಬದುಕಿ ಹಸಿದು ಬಸಿದು ಮಾಡುವುದಾದರೆನು

ನೀನೆ ತಿರುಗಿ ಬಂದು ನನ್ನ ಬಾಳ್ಗೆ
ಒಲವ ಹೊಸೆದು
ಪ್ರೀತಿ ಬೆಸೆದು
ಮಾಡೆ ನನ್ನ ಬಾಳ ಏಳ್ಗೆ..

- Manju..

02 Jul 2018, 10:54 pm

ಯಾವುದೀ ಮೌನ

ಯಾವುದೀ ಎದೆಯ ಸೇರಿದ ಮೌನ
ಎಲ್ಲಿಹುದು ಇದರ ಅಡಗು ತಾಣ
ಎತ್ತ ಸಾಗಿಹುದು ಇದರ ಯಾನ
ಮಾತಿರದೆ ಬಸವಳಿದಿದೆ ಮೂಕ ಮನ

ಎನ್ನೀ ಮನವ ಏತಕೆ ಹೊಕ್ಕಿತೊ
ಎಲ್ಲಿಂದ ತೂರಿ ಬಂದು ಸೇರಿತೊ
ಯಾರ ಪರ ಅಹವಾಲು ತಂದಿತೊ
ಎಡಬಿಡದೆ ಕಾಡಲೆಂದೆ ಬಂದೀತೊ

ಏನದರ ನನ್ನೆ ಗೆದ್ದೆನೆಂಬ ಆಟ
ನೆನಪುಗಳ ಕಾರುಬಾರೇನೆ ರಸದೂಟ
ಕಿಂಚಿತ್ತು ಕರುಣೆಯಿರದ ಇರಿಯೊ ನೋಟ
ಎಲ್ಲಿ ತಿಳಿವುದದಕೆ ಎನ್ನೊಳಗಿನ ತೊಳಲಾಟ

ಮೌನವಿದು ಮಿತಿಯೊಳಗೆ ಸಿಗದಷ್ಟು ವಿಸ್ತಾರ
ನಿತ್ಯ ನೂರಾರು ಸಂಚಿಕೆಗಳ ಪ್ರಸಾರ
ಮಾತಾಗದ ಭಾವವೆಲ್ಲ ಎನ್ನೊಳಗೆ ಅಪಾರ
ಒಮ್ಮೆ ಬಿಡುವುಕೊಟ್ಟರೂ ಇಳಿಸಿಬಿಡುವೆ ಎದೆಯ ಭಾರ

- ಶ್ರೀಕಾವ್ಯ

30 Jun 2018, 05:45 pm

ನೋಟದೂಟ

ನೋಟದೂಟ ರುಚಿಯ ಕಂಡು
ಮಿಡಿದ ಒಲವ ನಾಡಿ ತುಡಿತ ನಿಧಾನಿಸಿ ನಿಲ್ಲಿಸುವೆ ಹೃದಯ ಬಡಿತ, ನಿನ್ನ ನೆನಪು ಹೊಕ್ಕಿ ಬಂದ ವೇಳೆಯಲ್ಲಿ ತನಿಬನಿ ಹನಿಗಳ ಸಾಂಗತ್ಯದಲ್ಲಿ.

ಪೊಳ್ಳು-ಸುಳ್ಳು ನಂಬಿಕೆಗಳು ನಗುತಳಿವೆ ನನ್ನ ನೋಡಿ ಈರ್ಷೆಯ ಹೊಂಬಿಸುಲು ನಿನ್ನ ಹೃದಯದಾಸಿಗೆ ತಲುಪಲಾರವೆಂದು.

ಕಣ್ಣ ಕೊಳದ ನಡುವೆ ನಿಂತ ಕುಂಕುಮ ಧೂಳಿ ಬಾಗಿ ನೋಡುತ್ತಿದೆ ನನ್ನೆದೆಯಲಿ ನಿನ್ನ
ರೂಪುರೇಷೆ ಎರಚಲೆಂದು ತನ್ನ ಮೊಗದಲ್ಲಿ.

ಎತ್ತ ನೋಡಿದರತ್ತ ನಿನ್ನ ನಗುವಿನ ಛಾಯೆ ಊಹೆಯಂಚಲಿ ನಿಂತು ಬಿಕ್ಕಿ ಅಳುತಳಿದೆ ಇಂದು
ನನ್ನ ನಗುವ ನೋಡಲೆಂದು.

- ಚುಕ್ಕಿ

30 Jun 2018, 05:36 pm

ನನ್ನ ಮುದ್ದು ಕಂದ

ನಿನ್ನ ನಗುವ ಕಾಣುತಿರೆ
ಮರೆವೆ ಎಲ್ಲ ನೋವು
ನೀನು ನಗುತಲಿದ್ದರೆ
ನಲಿವುದೆನ್ನ ಮನವು

ನಿನ್ನ ಮುದ್ದು ಮಾತು ಚಂದ
ಕೇಳುತಿರೆ ನಮಗೆ ಆನಂದ
ನೀನು ಆಡೊ ಆಟ ಚಂದ
ನೀನೆ ನನ್ನ ಮುದ್ದು ಕಂದ

ನೀನೆ ಬಾಳ ಬೆಳಕು ಮಗು
ನೀನೆ ನನ್ನ ಉಸಿರು
ನಿನ್ನ ಹೊಳೆವ ಕಣ್ಗಳೆ
ನಮ್ಮ ಮನಕೆ ಹಸಿರು

- Nalanda

29 Jun 2018, 06:54 pm

ಚಿಂತೆ

ಖಾಲಿ ದಿನಗಳು
ಅವರು ಮನಸ್ಸಿನಲ್ಲಿ ನೋವಿನಿಂದ ಬರೆಯುತ್ತಾರೆ
ಇದು ಕವನ ಅಲ್ಲ.
ಶಾಂತಿಯಿದ್ದರೂ ಸಹ
ಈ ದೇಹಕ್ಕೆ
ಯಾವುದೇ ಪರಿಹಾರವಿಲ್ಲ
ಸಮುದ್ರವು ಉಸಿರಾಗಿದೆ
ಮಳೆಕಾಡು ಸ್ಫೋಟಿಸಿದೆ,
ಆದರೆ ಹೃದಯವು ಸುಸ್ತಾಗಿರಲಿಲ್ಲ.

- Prakash Angadi

29 Jun 2018, 09:49 am

ಕಣ್ಣೀರ ಮೀನೇ..

ಕಣ್ಣೀರಲ್ಲಿ ಆಡುತಿರೋ ಮಿಂಚುಳ್ಳಿಯ ಮೀನೇ
ನಿನ್ನ ಒಳ ಗುಂಡಿಗೆಯಲಿ ಇರೋ ಬಣ್ಣವಾದರು ಏನೇ ?
ಹಿಡಿಯಲು ಹೋದರೆ ಜಾರಿ ಹೋಗೋ ಜಾಣೆ
ಬಳಿಯಲ್ಲಿ ಬಂದರೆ ಈ ನಾಚಿಕೆ ಏಕೋ ಕಾಣೆ.

ಎಲ್ಲೋ ಹುಟ್ಟಿ ಏನೋ ಮುಟ್ಟಿ ಹೇಗೋ ಬೆಳೆದೆ ನೀನು
ಕನಸು ಕಟ್ಟಿ ಗುಂಡಿಗೆ ತಟ್ಟಿ ಕೂಡಿಕೊಂಡೆ ನಾನು
ಇದು ಈರ್ವರೂ ಸೇರಿ ಹೊಸೆದ ಕಾದಲ ಹಾರವೇನೋ
ಅದು ನೂರು ಏಡುಗಳ ದಾಟಿ ತಾಳಿಕೊಳ್ವದೇನೋ..

ಹೆಜ್ಜೆಗಳು ಒಂದೊಂದೂ ತುಂಬಾ ವಜ್ಜೆಯಂತೆ
ಮಜಲುಗಳು ನೂರಾರು ಸುಡುವ ಮೆಟ್ಟಿಲಂತೆ
ನಡೆವ ಹಗ್ಗ ತೂರಾಡಿ ತಲೆ ಸುತ್ತುತಿಹುದು
ನೆಲ ಮಾತ್ರ ಎಟುಕದಂತೆ ದೂರ ಸಾಗುತಿಹುದು..

- ಶ್ರೀಗೋ.

28 Jun 2018, 08:11 pm

ಸಡಗರ ಸಂಭ್ರಮ

ಸಡಗರ -ಸಂಭ್ರಮ
ತುಂಬಿದೆ ಮನೆಯ ಅಂಗಳ
ಮಕ್ಕಳಿಗೆ ಕುಣಿದು ಕುಪ್ಪಳಿಸುವಾಸೆ
ವಯಸ್ಕರಿಗೆ ಕಬಳಿಸುವಾಸೆ
ಒಡೆಯರಿಗೆ ನಿಭಾಯಿಸುವ ತವಕ
ಮಹಿಳೆಯರಿಗೋ ಶುಚುಗೊಳಿಸಿ
ಅತಿಥೇಯರ ಉಪಚರಿಸುವ ತವಕ

ಅರಿಷಿಣ- ಕುಂಕುಮ ,ಹಸಿರು
ತೋರಣದಿಂದ ಸಿಂಗಾರಗೊಂಡಿದೆ
ಮನೆಯ ಮಹಾದ್ವಾರ
ಹಣತೆಯ ಹೊಂಬೆಳಕಲಿ ,ಘಮಿಸುವ
ಹೂ ಮಾಲೆಯಿಂದ ಬೆಳಗುತಿದೆ
ದೇವರ ಮನೆಯ ಅಂಗಳ

ಊರ ಮಾರಿಯರಿಗೆ
ದೀಪೋತ್ಸವದ ಸಂಭ್ರಮ
ಕುರಿ,ಕೋಳಿ,ಮೇಕೆಗೆ
ಕಾಯುತಿದೆ ಮಸಾಲೆಯ ಘಮ

ಮೂಕ ಪ್ರಾಣಿಗಳ ಅಂತಿಮ ಯಾತ್ರೆ
ನರರಿಗೆ ಉತ್ಸವದ ಜಾತ್ರೆ
ಕಾಲನು ಬಂದು ಸೆಳೆದಾಗ ನರನ
ಗೋಳಿಡುವರು ಈ ಜನ
ಕಾಲನು ಹಿಡಿದು ಕತ್ತರಿಸುವಾಗ
ಅರಸುವುದು ಒಡತಿಯ ತಾನಾಗ
ಮೂಕವೇದನೆಯ ಮುಗಿಸುವುದು
ಮೌನದಲಿ ಪರರತೃಪ್ತಿಗಾಗಿ

- ಶಕುಂತಲಾ

28 Jun 2018, 09:13 am

ಚೆಲುವೆ ವರ್ಣನೆ

ಭೂಮಿಯ ಮೇಲಿನ
ಮನಮೋಹಕ ನರ್ತಕಿ ನೀನು,

ಕೋರೆ ಚಂದಿರನ ಹೋಲುವ
ಮುಂಗುರುಳ ಚೆಲುವೆ ನೀನು,

ಚಿರ ನಿದ್ರೆಗೆ ಜಾರುವಾಗಲು ಬರುವ
ಕನಸು ನೀನು,

ಇನ್ನೇನಿದೆ ಹೊಗಳಲು ಚಲುವ
ಪದ ಪುಂಜ ನೀನು,

ಮುಂದೆ ವರ್ಣಿಸಲು ಪದಗಳಿಲ್ಲ
ಇನ್ನೇನು ಮಾಡಲಿ ನಾನು,

ಚಂದಿರನಲ್ಲಿ ನಿನ್ನ ನೋಡುತ್ತಾ ಮಲಗಲೇ
ನಿನ್ನ ಸುಂದರ ಸಂದೇಶಕ್ಕಾಗಿ ಕಾಯಲೇ,

- Varungowda

27 Jun 2018, 06:23 pm

ಒಣ

ಒಣ ಮರದ ಬದುಕು ನನದು
ಚಿಗುರು ಕಾಣುವ ಬಯಕೆ ಬೆಳೆದು,

ಬದುಕ ಬಯಕೆಯ ಅರಿತು
ಹಸಿರ ಬಣ್ಣದಿ ಬೆರೆತು,

ಸ್ವಚ್ಚಂದ ಮರವಾಗಿ
ಬದುಕೆಂಬ ಕಡಲ ತೀರದಿ ಬಾಗಿ,

ಸ್ಪರ್ಶಿಸಬೇಕು ಭುವಿಯ.........!

ಬರವಣಿಗೆಗಾರ
ವರುಣ್ ಗೌಡ

- Varungowda

27 Jun 2018, 06:12 pm

ಹನಿ-ಅಣಕ

ಕಣ್ಣೀರ ಕಡೆಯ ಹನಿಯೂ ಅವಳ ಹೆಸರೇಳಿ ಹೊರಬಂದಿತ್ತು
ಕಾಣದ ಕಡಲೆಡೆಗೆ ಜೀವನ ಪ್ರಯಾಣ ಮೊದಲಾಗಿತ್ತು
ನೆನಪುಗಳ ಬೀದಿಯಲ್ಲಿ‌ ನೆನಪುಗಳ ಮಾರಣಹೋಮ ನಡೆದಿತ್ತು
ಎದೆಯ ಚಂದ್ರಿಕೆಯಲ್ಲಿ‌ ಅಚ್ಚೊತ್ತಿದ್ದ ಅವಳ ಹೆಜ್ಜೆ ಗುರುತು ನನ್ನನ್ನೆ ಅಣಕಿಸುತ್ತಿತ್ತು

- Abhisara Varnika

27 Jun 2018, 09:27 am