ಖಾಲಿ ದಿನಗಳು
ಅವರು ಮನಸ್ಸಿನಲ್ಲಿ ನೋವಿನಿಂದ ಬರೆಯುತ್ತಾರೆ
ಇದು ಕವನ ಅಲ್ಲ.
ಶಾಂತಿಯಿದ್ದರೂ ಸಹ
ಈ ದೇಹಕ್ಕೆ
ಯಾವುದೇ ಪರಿಹಾರವಿಲ್ಲ
ಸಮುದ್ರವು ಉಸಿರಾಗಿದೆ
ಮಳೆಕಾಡು ಸ್ಫೋಟಿಸಿದೆ,
ಆದರೆ ಹೃದಯವು ಸುಸ್ತಾಗಿರಲಿಲ್ಲ.
ಕಣ್ಣೀರಲ್ಲಿ ಆಡುತಿರೋ ಮಿಂಚುಳ್ಳಿಯ ಮೀನೇ
ನಿನ್ನ ಒಳ ಗುಂಡಿಗೆಯಲಿ ಇರೋ ಬಣ್ಣವಾದರು ಏನೇ ?
ಹಿಡಿಯಲು ಹೋದರೆ ಜಾರಿ ಹೋಗೋ ಜಾಣೆ
ಬಳಿಯಲ್ಲಿ ಬಂದರೆ ಈ ನಾಚಿಕೆ ಏಕೋ ಕಾಣೆ.
ಎಲ್ಲೋ ಹುಟ್ಟಿ ಏನೋ ಮುಟ್ಟಿ ಹೇಗೋ ಬೆಳೆದೆ ನೀನು
ಕನಸು ಕಟ್ಟಿ ಗುಂಡಿಗೆ ತಟ್ಟಿ ಕೂಡಿಕೊಂಡೆ ನಾನು
ಇದು ಈರ್ವರೂ ಸೇರಿ ಹೊಸೆದ ಕಾದಲ ಹಾರವೇನೋ
ಅದು ನೂರು ಏಡುಗಳ ದಾಟಿ ತಾಳಿಕೊಳ್ವದೇನೋ..
ಹೆಜ್ಜೆಗಳು ಒಂದೊಂದೂ ತುಂಬಾ ವಜ್ಜೆಯಂತೆ
ಮಜಲುಗಳು ನೂರಾರು ಸುಡುವ ಮೆಟ್ಟಿಲಂತೆ
ನಡೆವ ಹಗ್ಗ ತೂರಾಡಿ ತಲೆ ಸುತ್ತುತಿಹುದು
ನೆಲ ಮಾತ್ರ ಎಟುಕದಂತೆ ದೂರ ಸಾಗುತಿಹುದು..
ಮೂಕ ಪ್ರಾಣಿಗಳ ಅಂತಿಮ ಯಾತ್ರೆ
ನರರಿಗೆ ಉತ್ಸವದ ಜಾತ್ರೆ
ಕಾಲನು ಬಂದು ಸೆಳೆದಾಗ ನರನ
ಗೋಳಿಡುವರು ಈ ಜನ
ಕಾಲನು ಹಿಡಿದು ಕತ್ತರಿಸುವಾಗ
ಅರಸುವುದು ಒಡತಿಯ ತಾನಾಗ
ಮೂಕವೇದನೆಯ ಮುಗಿಸುವುದು
ಮೌನದಲಿ ಪರರತೃಪ್ತಿಗಾಗಿ
ಕಣ್ಣೀರ ಕಡೆಯ ಹನಿಯೂ ಅವಳ ಹೆಸರೇಳಿ ಹೊರಬಂದಿತ್ತು
ಕಾಣದ ಕಡಲೆಡೆಗೆ ಜೀವನ ಪ್ರಯಾಣ ಮೊದಲಾಗಿತ್ತು
ನೆನಪುಗಳ ಬೀದಿಯಲ್ಲಿ ನೆನಪುಗಳ ಮಾರಣಹೋಮ ನಡೆದಿತ್ತು
ಎದೆಯ ಚಂದ್ರಿಕೆಯಲ್ಲಿ ಅಚ್ಚೊತ್ತಿದ್ದ ಅವಳ ಹೆಜ್ಜೆ ಗುರುತು ನನ್ನನ್ನೆ ಅಣಕಿಸುತ್ತಿತ್ತು