Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಸಹಬಾಳ್ವೆ

ಒಟ್ಟಾಗಿ ಬಾಳುವ ಜೀವನ ನಡೆಸಿ
ಕೂಡಿ ಉಣ್ಣುವ ಜನರಿಂದಿಲ್ಲ
ಕೂಡಿ ದುಡಿಯುತ ಪೂರ್ವಜರು ಹೇಳಿದ

ದಿವ್ಯಮಂತ್ರ ಈಗಿಲ್ಲ
ಹತ್ತಿರವಿದ್ದರೂ,ಸನಿಹವಿದ್ದರೂ
ಸಂಬಂಧದ ಬೆಲೆ ತಿಳಿದಿಲ್ಲ
ಹೊಂದಿಕೆ ಎಂಬುವುದು ಉಳಿದಿಲ್ಲ
ಒತ್ತಡದ ಬದುಕಲಿ ಎಲ್ಲರೂ ಒಟ್ಟಿಗೆ
ಕೂಡಿ ಉಣ್ಣುವ ದಿನವಿಲ್ಲ
ಒಂದೇ ಸೂರಿನಡಿ
ಬದುಕುವ ದಿನಗಳು ನಮಗಿಲ್ಲ
ಉಣ್ಣುವ ಅಂಬಲಿ,,ಅನ್ನ ಸಾರಿನಲಿ
ಪ್ರೀತಿ ಪ್ರೇಮದ ರುಚಿಯಿಲ್ಲ
ನೋಡುವ ಕಣ್ಣಲ್ಲಿ ನೀಡುವ ಕೈಯಲ್ಲಿ
ನಂಬಿಕೆಯ ಹೊಂದಿಕೆಯಿಲ್ಲ
ಜೇನು,, ಗೆದ್ದಿಲು,,ಇರುವೆಗಳಂತೆ
ಬಾಳುವೆಯೆಂಬುವುದು ಕಲಿಲಿಲ್ಲ
ಶಾಂತಿ ಸಹನೆ ಮಂತ್ರದ ಮರೆತು
ಬದುಕಿನ ಬೆಲೆಯು ತಿಳಿದಿಲ್ಲ...
ಮಲ್ಲೇಶ ದಂಡಿನ,,ಹಾವೇರಿ

- Prakash Angadi

15 Jun 2018, 08:10 pm

ಅವಳಿಲ್ಲದ ದಿನಗಳು..

ನನ್ನಾಕೆ ನನ್ನೊಡ ಮಾತನಾಡುತಿರೆ..
ಉರುಳುವವು ದಿನ ಕೆಲವೇ ನಿಮಿಷಗಳಂತೆ..

ಅವಳೆಂದಾದರು ಮೌನಿಯಾದರೆ..
ದಿನ ಕದಲದೆ ನಿಲುಕದೆ ನಿಲ್ಲುವವು ವರುಷಗಳಂತೆ..

ಅವಳು ನನ್ನೊಡನೆ ಇರಲು..
ಗಳಿಗೆ ಗಳಿಗೆಗಳೂ ಆಗುವವು ಸಂಪಿಗೆಯಂತೆ ಸುಮಧುರ..

ಅವಳು ಬಳಿ ಇರದಿರಲು..
ಕ್ಷಣ ಕ್ಷಣಗಳು ವಿಷಾನಿಲದ ಮಂಪರ..

ನನ್ನವಳ ಒಡನೆ ಸಂಭಾಷಿಸಲು
ಕೆಲವೊಮ್ಮೆ ಮಾತೆ ಬಾರದೆ ಪರಿತಪಿಸುವೆ


ಇಂದು ಅವಳು ನನ್ನೊಡನೆ ಇರದಿರಲು
ಏತಕು ಮನಸೇ ಇರದೆ ಪರದಾಡುತಿರುವೆ

- Manju..

15 Jun 2018, 03:53 pm

ಸಂಗಾತಿ..

ಸೊತೆನಾ ಹಸಿಕಂಗಳ ಮುಗುಳ್ನಗೆಯ ಈ ಚೆಲುವೆಗೆ
ಮೃದು ಮಾತಿನ ಈ ನೀರಿಗೆ
ಬಿದ್ದೆ ನಾ ಕಂಗಳ ಕಾಂತಿಗೆ
ಪ್ರೀತಿ ಮೊಳೆಯಿತು ಆ ಕುಡಿ ನೋಟಕೆ
ಓ ಗೆಳತಿ ಆಗಬಯಸುವೆ
ಜನುಮ ಜನುಮ ನಿನ ಸಂಗಾತಿ
ಹೇಳು ಗೆಳತಿ ನಾ ಹೇಗೆ ಸ್ಪರ್ಶಿಸಲಿ
ಕಡಲಂತಿರುವ ಎದೆಯಾಳದ
ಪ್ರೀತಿಯ ತಳವ
ಓ ಗೆಳತಿ ದೋರು ನೀ ಸಿಹಿ ಮಾರ್ಗವ..

ಆಡ ಬಯಸುವೆ ನಿನ್ನೊಡನೆ ಜೋಕಾಲಿ
ಕೆಳ ಬಯಸುವೆ ಮಡಿಲಿನಲಿ ನೀ ಹಾಡುವ ಲಾಲಿ
ಜಿನುಗ ಬಯಸಿಹೆ ನಿನ್ನಾಸರೆಯಲಿ ಸುವ್ವಾಲಿ
ಲೀನವಾಗ ಬಯಸಿಹೆ ಪ್ರೀತಿ ತುಂಬಿದ ನಿನ ಕಂಗಳಲಿ

ಓ ಗೆಳತಿ ನೀ ದೊರು ಸಿಹಿ ಮಾರ್ಗವ..

- Manju..

15 Jun 2018, 09:25 am

ಮೌನದ ಹಾದಿ..

ಸುಮ್ಮನೆ ಏಕೆ ಕಾಡುತಿರುವೆ ನಿಶ್ಚಲ ಮೌನದಿ..
ಹರಿಸಬಾರದೆ ನನ್ನೆಡೆಗೆ ಕೆಲ ಕ್ಷಣವಾದರೂ
ನಿನ್ನ ಒಲುಮೆಯ ಸಿಹಿ ನುಡಿ..

ಮೌನ ವ್ರತದಿ ನನ್ನ ನೀ ದೂರ ಸರಿಸುತಿಹೆ..
ಅದೇ ಮೌನದ ನೋವಿನಲಿ ನಿನ್ನ ನಾ ನೆನೆಯುತಿಹೆ..

ಮಾಡದಿರು ಹೀಗೆ,
ಮನವು ನೋಯುವ ಹಾಗೆ,
ಬೇಗ ಬಂದು ತಡೆಯ ನೀಡು
ನನ್ನ ಮನದ ಬೇಗೆಗೆ ....

- ಮಂಜುನಾಥ್
- ಚಾಮರಾಜನಗರ

- Manju..

15 Jun 2018, 01:23 am

ಪ್ರೀತಿ ಮಡಿಲು

ಈ ನನ್ನ ಪ್ರೀತಿ ...

ಅಳೆಯಲಾಗದ ಕಡಲಿನ ನೀರಿನಂತೆ....
ಒಮ್ಮೊಮ್ಮೆ ನಿನಗೆ ಉಪ್ಪುಪ್ಪೆನಿಸಿದರು
ನಿಷ್ಕಲ್ಮಶವಾದ ಖನಿಜ ತುಂಬಿದ ಸಾರ...

ಈ ನನ್ನ ಪ್ರೀತಿ ...

ಕಷ್ಟಗಳೆಂಬ ಎಷ್ಟು ಮೊಡಗಳಿದ್ದರು
ಮುಗಿಲಲಿ ಕಾಣುವ ತಿಳಿನೀಲಿ ಬಣ್ಣದಂತೆ..
ಮೊಡವೆಷ್ಟೆ ಇದ್ದರೂ ಬಣ್ಣವೆಂದೂ ಮಾಸದು..

ಈ ನನ್ನ ಪ್ರೀತಿ ...

ಮುರಳಿಯ ಕೊಳಲಲಿ ಮೂಡುವ
ನಾದಲಹರಿಯ ಸಂಗೀತದಂತೆ..
ಸಂಗೀತಕೆಂದೂ ಕೊನೆಯೇ ಇರದು..

ಈ ನನ್ನ ಪ್ರೀತಿ ...

ಮಗುವಿನ ನಗುವಿನ ಇಂಪಂತೆ..
ಮಗುವಿನ ನಗುವಿನ ಇಂಪು
ಮನಕೆ ಎಂದೆಂದೂ ತಂಪು...

ಈ ನನ್ನ ಪ್ರೀತಿ ...

ಕೊನೆಯೇ ಸಿಗದ ದಾರಿಯಂತೆ..
ನಾನೆಲ್ಲೇ ಓಡಿದರು, ಮತ್ತೆ ಬಂದು ಬೀಳುವೆ
ನಿನ್ನ ಮಡಿಲಲ್ಲೆ...

- ಮಂಜುನಾಥ್. ಸಿ
ಚಾಮರಾಜನಗರ..

- Manju..

15 Jun 2018, 12:51 am

ನನ್ನಾಕೆ

ನನ್ನವಳು ನನ್ನವಳು ನನ್ನರಸಿ ಬರುವವಳು,
ನನ್ನ ಒಲವಿನಾ ಬೆಳಕಿನಲಿ ಪುಟಿದೆದ್ದು ಅರಳುವಳು,
ಸಮಯದಾ ಅರಿವಿನಲಿ ಸೌಖ್ಯದಿ ಸಂತೈಸುವಳು,
ಮೋಹದಾ ಮಡುವಿನಲಿ ರಸದೌತಣ ಉಣಿಸುವಳು,
ಅಕ್ಕರೆಯ ಭಾವದಲಿ ಎಲ್ಲರ ನಲಿಸುವಳು,
ಸಾಮ್ಯತೆಯ ನಡತೆಯಲಿ ಹಿರಿಯರ ನಗಿಸುವಳು,
ಚಿತ್ತಾರದ ಚೆಲುವಿನಲಿ ನನಬದುಕಿಗೆ ಬಣ್ಣವ ಹಚ್ಚುವಳು,
ಈ ಒಂಟಿ ಬದುಕಿಗೆ ಜೊತೆಯಾಗಲು ಬರುತಿಹಳು,
ನನ್ನೆದೆಯ ಪ್ರೀತಿಗೆ ಪ್ರೇಮಾಂಕುರವ ಬೇರೆಸುವಳು,
ನನ್ನಾಸೆಯ ಜೀವ, ನನ ನಗುವಿನ ಮೂಲ, ನನ್ನೊಲವಿನ ಚೇತನ, ನನ ನಡೆತೆಯ ಕನ್ನಡಿಯಾಗಿ , ಮಧುಮಗಳಾಗಿ ಅರ್ಧಾಂಗಿಯಾಗಲೆಂದು ಬರುತಿಹಳು..
ನನ್ನಾತ್ಮದ ಆತ್ಮ - ನನ್ನಾಕೆ...

- Manju..

15 Jun 2018, 12:09 am

ಸಮಾಜ...

ಯಾವ ಕೆಟ್ಟ ಚಟದ ಅಮಲೊ
ಮೋರಿಯಂಚಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದೆ ಸಮಾಜ
ಕೊಚ್ಚೆಯೊಳಗೆ ಜಾರಿ ಬಿದ್ದು ನಾರುವುದೊಂದು ಬಾಕಿ

ಮೋರಿ ಸೇರಿ ಮಿಂದೆದ್ದು ಅದರ ವಾಸನೆಯ
ನಡೆದಲ್ಲೆಲ್ಲ ಹರಡಿ ಸೋಂಕು ತಗುಲಿ ನರಳಿಸಿ
ಕಾಲಿಟ್ಟಲೆಲ್ಲ ಅಮಲೇರಿಸಿ ಸಾಗುವಾಸೆಯ ಧ್ಯೇಯವಿರಬೇಕು ಅದಕೆ

ಯಾರು ಎಬ್ಬಿಸುವವರಿಲ್ಲ ಒಂದಿಷ್ಟು ನೀರು ಸುರಿದು.
ಬಡಿದು ಚಿಕಿತ್ಸೆ ಕೊಡಿಸಿ, ಹಿಡಿದ ಅಮಲ ಬಿಡಿಸಿ
ಅದರ ಸ್ವಾಸ್ಥ್ಯ ಕಾಪಾಡುವ ಮನಸು ಯಾರಿಗೂ ಇದ್ದಂತಿಲ್ಲ

ಎಲ್ಲ ಅದರತ್ತ ತಿರುಗಿ ತಿರುಗಿ ನೋಡಿ ನಗುವವರೆ
ಮೂಗು ಮುಚ್ಚಿಕೊಂಡು ಏನು ನಡಿದಿಲ್ಲವೆಂಬಂತೆ ನಡೆವವರೆ
ಬಿದ್ದು ಹೊರಳಾಡುತ್ತಿರುವದ ನೋಡಿ ಜರಿದು ಸಾಗುವವರಷ್ಟೆ

- ಶ್ರೀಕಾವ್ಯ

14 Jun 2018, 06:35 pm

ತುಸು ಕಾಡೊ ಗೆಳತಿ ನಾನು....

ಭುವಿಗೆ ಸುರಿವ ಚೆಲುವ ಮಳೆಯು
ನೀನು ತರುವ ಮಾತಿನ ಸವಿಯು
ಸಾಕೆನಿಸಿದರು ಒಮ್ಮೊಮ್ಮೆ ನಿಲ್ಲದ ಅತಿವೃಷ್ಟಿ
ಮಗದೊಮ್ಮೆ ಕಾಣದೆ ಬರಡಾಗಿಸೊ ಅನಾವೃಷ್ಟಿ

ಮಳೆಯೊಳಗೆ ತನುವು ನಲಿದ ಮೇಲೂ
ಬೇಕೆನಿಸದಿರುವುದೆ ಮತ್ತೆ ಹನಿಗಳ‌ ಸಾಲು
ತುಸು ಹೆಚ್ಚೇ ಕಾಡೋ ಗೆಳತಿ ನಾನು
ಮುನಿಸು ಸಹಿಸಿ ಮುದ್ದಿಸು ನನ್ನನು

ಕಣ್ಣ ಅಂಚಲಿ ಕೇಳದೆ ಕಂಬನಿ ಜಾರುವಾಗ
ತಂದುಕೊಡು ಕಣ್ಣೀರು ಮರೆಸೊ ಮಾತು ಬೇಗ
ಅನುಬಂಧದ ಭಾವಕೆ‌ ಮಿತಿ ಹಾಕಲಾಗದವಳು ನಾನು
ಅತಿಯಾದರೆ ಒಮ್ಮೆ ಅಪ್ಪಿ ಮನ್ನಿಸು ನನ್ನನು

ಬಾಡುತಿದೆ ಮಳೆಗೆ ಕಾದು ಕುಳಿತ ಹೂವು
ಹನಿಯಾದರು ಚೆಲ್ಲು ಮಾತಿನಮಳೆಗೆ ತರದೆ ಸಾವು
ಒಲವ ನವಿರು ಮಾತಿಗೆ ಕಾದು ಕುಳಿತಿರುವೆ ನಾನು
ಒಮ್ಮೆ ನೆನೆದು ಬಂದು ಮಾತ ಸುರಿಸಿ ಅರಳಿಸು ನನ್ನನು

- ಶ್ರೀಕಾವ್ಯ

14 Jun 2018, 06:35 pm

ತಂಗಿಗಾಗಿ

ನಿನ್ನ ಬಾಳ ಹಾದಿಗೆ
ಚೆಲ್ಲಿರಲೆಂದು ಮೃದು ಮಲ್ಲಿಗೆ
ನಗಿಸಿ ನಲಿಸುವ ನಿನ್ನ ಮಾತಿಗೆ
ಸಿಗಲಿ ಸಕಲ ಸುಖದ ಬಾಡಿಗೆ

ನೋವೆನಿದ್ದರು ಸರಿದು ಬಿಡಲಿ ಪಾದದಡಿಗೆ
ಗೆಲುವಿಗಷ್ಟೆ ಜೊತೆಯಾಗಲಿ ನಿನ್ನ ನಡಿಗೆ
ಜನನ ಮರಣದ ನಡುವಿನ ಬಾಳಿಗೆ
ನನಸಾದ ಕನಸುಗಳಾಗಲಿ ದೀವಟಿಗೆ

ಎಂದೂ ಮುಗಿಯದ ನಿನ್ನ ಪ್ರೀತಿಗೆ
ಸವಿಯಾದ ಬೆಚ್ಚನೆಯ ಅಪ್ಪುಗೆ
ಮನದೊಡಲ ನಿಶ್ಕಲ್ಮಶ ಚೆಲುವಿಗೆ
ಕಾಡಿಸಿ ಕೆಣಕುವ ಗುಣವೆ ದೃಷ್ಟಿಬೊಟ್ಟಿನ ಕಾಡಿಗೆ

ಜಂಭ ತೋರಿ ಕಾಡಿಸಿ ರಮಿಸೊ ಮುದ್ದು ತಂಗಿಗೆ
ತೆರೆದಿಡುತಿರುವೆ ಶುಭಾಷಯದ ಮಳಿಗೆ
ಹುಟ್ಟಿದ ದಿನದ ಶುಭಾಶಯಗಳು ಕಣೆ ನಿನಗೆ
ನಿನ್ನ ಬಾಳಗಲಿ ಸಕಲೈಶ್ವರ್ಯ ತುಂಬಿದ ಜೋಳಿಗೆ

- ಶ್ರೀಕಾವ್ಯ

14 Jun 2018, 06:31 pm

ಮನದನ್ನೆ..

ಏಕೋ ಏನೋ ಸದಾ ನೀನದೆ ನೆನಪು..
ಬೇಳ್ಮುಂಜಾನೆಯಿಂದ ಮಲಗುವವರೆಗೂ..
ಕಾಡುವುದೇಕೂ ನಿನದೇ ನೆನಪು....

ಗೋಡೆಗಳ ಪ್ರತಿ ಧ್ವನಿಯಲು ನೀನೆ..
ಹಕ್ಕಿಗಳ ಚಿಲಿಪಿಲಿಯಲೂ ನೀನೆ...
ಆಗಸದಲು ನೀನೆ, ಸೂರ್ಯ ಚಂದ್ರರಲೂ ನೀನೆ..
ಇರುಳಲಿ ಅರಳುವ ಸವಿಗನಸಲು ನೀನೆ..

ಓ...
ಮನದನ್ನೆ ಈ ಪರಿಯಾಗಿ ಕಾಡುತಿರುವೆಯೇಕೆ ನನ್ನನ್ನೆ...


ಹಗಲುಗನಸಿನಲು ನೀನೇ...
ಮಾತಿನ ಮಂಪರಲು ನೀನೆ..
ಮಿನುಗುವ ನಕ್ಷತ್ರದಲು ನೀನೆ..
ಮನೆಯೊಳುರಿವ ದೀಪದಲೂ ನೀನೆ..
ನನ್ನುಸಿರಿನ ಬಿಸಿಯಲೂ ನೀನೆ..
ತಂಗಾಳಿಯ ತಂಪಲೂ ನೀನೆ...

ಹೇ ಮನದನ್ನೆ ... ಕಾಡುವೆ ಏಕೆ ನೀ ನನ್ನನ್ನೇ....‌

- Manju..

14 Jun 2018, 06:04 pm