ಅಷ್ಟೇ ಕಣ್ರೀ ಈ ಜನ
ಎಷ್ಟೇ ಡಂಗೂರ ಸಾರಿದ್ರೂ ಬಿಡಲ್ಲ ಇವರ ಬುದ್ದಿನಾ..
ನೋಟಿನ ಆಸೆಗೆ ಮಾರಿಕೊಳ್ತಾರೆ ಓಟನ್ನ
ಇನ್ನೇಲ್ಲಿ ಉದ್ದಾರ ಆಗುತ್ತೆ ಇವರ ಜೀವನ..
ಯಾರು ಜಾಸ್ತಿ ಕೊಡ್ತಾರೋ ಅವ್ರಿಗೆ ನಮ್ಮ ಓಟು ಅಂತಾರೆ
ಅವನು ನಮ್ಮ ಜಾತಿ ಅವನಿಗೆ ನಮ್ಮ ಸಪೋರ್ಟು ಅಂತಾರೆ..
ಶಿಷ್ಟ ನಾಯಕ ಇವ್ರಿಗೆ ಎಂದೂ ಬೇಕಿಲ್ಲ
ಭ್ರಷ್ಟ ಪಾತಕನಿಗೆ ಗೆಲ್ಲಿಸೋದು ಬಿಡಲ್ಲ..
ಸುಳ್ಳು ಭರವಸೆಗಳಿಗೆ ಜೈಕಾರ ಹಾಕ್ತಾರೆ
ಗುಳ್ಳೆ ನರಿಗಳಿಗೆ ಅಧಿಕಾರ ನೀಡ್ತಾರೆ..
ನೆಚ್ಚಿನ ನಾಯಕನ ವಹಿಸಿಕೊಂಡು ನೂರಾರು ಚರ್ಚೆ ಮಾಡೋದು ಬಿಡಲ್ಲ
ನಾಡಿನ ಸಮಸ್ಯೆಗಳನ್ನ ತಿಳಿದುಕೊಂಡು ಒಂಚೂರು ಯೋಚನೆ ಮಾಡೋದು ಇಲ್ಲ..
ಗುರಿ ಇಟ್ಟು ಹೋದೆ ಕಾಲೇಜಿಗೆ
ಪ್ರೀತಿ ಪ್ರೇಮ ಬೇಡವೆಂದು
ಅನಿಸಿತ್ತು
ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗ
ಬೇಕೆಂಬ ಆಸೆ ನನ್ನಲ್ಲಿ
ಆದರೆ ಕಾಲೇಜಿಗೆ ಬಂದಿಳಿದಳು
ಕಪ್ಪುಗೆಯ ರಾಣಿ.
ನೋಡುವುದಕ್ಕೆ ಚೆಂದವಿಲ್ಲದಿದ್ದರೂ
ನಾ ಬಿದ್ದೆ ಅವಳ ನಡೆತೆಗೆ
ಕೆಲವರು ಇದು ನಿನಗೆ ಬೇಡವೆಂದು
ಹೇಳಿದರೂ
ನನ್ನ ಮನಸ್ಸಿನ ದಾರೆ ಅವಳ ಗುನಕ್ಕೆ
ಕಟ್ಟಿಯಾಗಿತ್ತು.
ಸಮಯ ಬಂದಲ್ಲಿ ನಾ ಬಂದು
ಕೇಳುವೆ ನೆಂಬ
ಭರವಸೆಯನ್ನು ಕೊಟ್ಟೆ,
ಇದೀಗ ಕಾಯುತಿರುವೆ ಆ ಕರಗೆ
ಒಬ್ಬ ಭ್ರಷ್ಟ, ಇನ್ನೊಬ್ಬ ದುಷ್ಟ
ಅವನು ಕಳ್ಳ, ಇವನು ಸುಳ್ಳ
ಆ ಪಕ್ಷ ಕೋಮುವಾದಿ
ಈ ಪಕ್ಷ ಜಾತಿವಾದಿ..
ಯಾರಿಗೆ ಮುದ್ರೆಯೊತ್ತಲಯ್ಯ ನಾನು?
ಅವನಿಗೆ ಗೊತ್ತಿದೆ ಕೋಟಿ ದೋಚುವ ಕಲೆ
ಇವನ ಕೈಗೆ ಅಂಟಿಕೊಂಡಿದೆ
ಅಮಾಯಕರ ರಕ್ತದ ಕಲೆ !
ಅದೋ ನಾಮಪತ್ರ ಸಲ್ಲಿಸಿ ಆಯ್ತು ಅತ್ಯಾಚಾರಿ
ಇದೋ ಕೈ ಮುಗಿದು ಬೇಡಿ ಬರುತಿಹನು
ನಿತ್ಯ ದುರಹಂಕಾರಿ..
ಯಾರಿಗೆ ಮುದ್ರೆಯೊತ್ತಲಯ್ಯ ನಾನು?
ಜನರ ಜೇಬಿಗೆ ಕತ್ತರಿ ಹಾಕುವ ಕದಿಮನೊಬ್ಬ
ತಿಜೋರಿ ದೋಚಿ ವಿದೇಶದಲ್ಲಿ
ಬಚ್ಚಿಡುವ ಭೂಪನೊಬ್ಬ.
ಕೊರಳ ಪಟ್ಟಿ ಹಿಡಿದು ಹೊಡೆದಾಡಿಕೊಂಡ
ಬದ್ದ ರಾಜಕೀಯ ವೈರಿಗಳು
ದಿನಾ ರಾತ್ರಿ ಒಂದೇ ತಟ್ಟೆಯಲ್ಲಿ
ಬಡವರ ಹೆಣ ತಿನ್ನುತಿಹರು!
ಯಾರಿಗೆ ಮುದ್ರೆಯೊತ್ತಲಯ್ಯ ನಾನು?