Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಸೆಯ ಕೂಸು

ಆಸೆಯ ಕೂಸಿಗೆ
ಜೋಗುಳವ ನಾ ಹಾಡಿ!!
ತೂಗಿದೆ ಮಮತೆಯ
ತೂಗು ಮಂಚವ ಕಟ್ಟಿ!!

ಸಾವಿರ ಬಯಕೆಯು
ಈ ನನ್ನಯ ಮನದಲಿ!!
ಮೂಡಿದೆ ಮಮತೆಯ
ಹೊಸದಾದ ಬಂದದಲಿ!!

ನಗುವಿಗು ಅಳುವಿಗೂ
ಆ ಕಂದನ ಹೆಸರಿದೆ!!
ಚಂದದ ಬದುಕಿನ
ಒಂದು ಸುಂದರ ಕನಸಿದೆ!!

- ಪಿ.ಜಿ.ಜ್ಯೋತಿ

17 Apr 2018, 10:56 pm

..........?

ನೀನೇ ನನ್ನ ಜೀವ ಎಂದು ನಾ ಹೇಗೆ ಹೇಳಲೊ
ನೀನಿಲ್ಲದೆ ನಾ ಹೇಗೆ ಬದುಕಲೋ
ನೀನೇ ಬೇಕು ,ನೀನೇ ಬೇಕು ಎಂದು ಕೂಗಿ ಕರೆಯುತ್ತಿದೆ ಈ ಮನಸ್ಸು ......


ಅದ ತಿಳಿಯೋ ಒಮ್ಮೆ ನೀನು ....
ಈ ಕೋಪ -ತಾಪಗಳ ನಡುವೆ ನಿಂತು ಈ ಪ್ರೀತಿ ಬಲಿಯಾಗುವುದು ಸರಿ ಯೇ ನಿನಗೆ .....

ಈ ಸಣ್ಣ -ಪುಟ್ಟ ಜಗಳಗಳ ಕೊಟ್ಟೆ ಕಟ್ಟುವುದು ಸರಿಯೇ....ನಿನಗೆ ......


ಮುಗ್ದ ಮನಸುಗಳ ನೋವಿಗೆ ಕಾರಣವಾಗುವುದು ಸರಿಯೇ.........

ಪ್ರೀತಿಯಿಂದ ಪ್ರೀತಿಯಾ ಅರಮನೆಯ ಕಟ್ಟೋಣವೇ ಗೆಳೆಯಾ

- Acchu love

17 Apr 2018, 08:16 pm

ಆಕಾಶ ಪ್ರೇಮ

ಆಕಾಶದಲ್ಲಿ ನಕ್ಷತ್ರ ಕೋಟಿ
ಆ ಚಂದ್ರನಂತೆ ನೀ ತುಂಬ ಚೂಟಿ!!
ತಂಗಾಳಿ ಜೋಡಿ ಹೊಂಬಾಳೆ ಹಾಡಿ
ತಿಂಗಳ ಬೆಳಕಲ್ಲಿ ನಿನ್ನಯ ಮೋಡಿ!!

ಓ ನನ್ನ ಪ್ರೇಮಿ ನಾನಾದೆ ಮೌನಿ
ಮಾತಾಡೋ ಮುನ್ನ ನೀ ನೋಡು ನನ್ನ!!
ಈ ನನ್ನ ಕಣ್ಣ ಒಳಗಿರುವ ನಿನ್ನ
ಹೊಳಪೆಂಬ ಹುಣ್ಣಿಮೆಯೇ ಬಲು ಚೆನ್ನ!!

ಸಾಗರದ ಆಚೆ ಸಾವಿರದ ಕನಸು
ನೀ ಸಿಕ್ಕ ಮೇಲೆ ಕನಸೆಲ್ಲ ನನಸು!!
ಅಪರೂಪವಾದ ಈ ನಮ್ಮ ಪ್ರೇಮ
ಇರಬೇಕು ಹೀಗೆ ಪ್ರತಿಯೊಂದು ಜನುಮ!!

- ಪಿ.ಜಿ.ಜ್ಯೋತಿ

16 Apr 2018, 10:20 pm

ಪ್ರೀತಿ

ಎ ಹುಡುಗ
ನಿನ್ನದು ಏನು ತಪ್ಪಿಲ್ಲ
ನಾನೆ ನಿನ್ನ ಅತಿಯಾಗಿ ಪ್ರೀತಿಸಿಬಿಟ್ಟೆ..
ಅತಿಯಾಗಿ ನಂಬಿಕೊಂಡೇ...
ನಿನು ಅತಿಯಾಗಿ ಕಾಡಿದರು..
ನಿನ್ನೊಳಗಿನ ಪ್ರೀತಿ ಚಿಗುರಲಿಲ್ಲ ಅಂದ್ರೆ...
ನೀನು ಒಣಗಿದ ಮರದ ಆಗೇ.....
ನಿನ್ನ ಹೃದಯ ಬರಡು ತುಂಬಿದ ಮರಳಿನ ಆಗೇ.....
ಕ್ಸಮಿಸು ಗೆಳೆಯ.....

- ShruthiR

16 Apr 2018, 02:18 pm

ಒಲವ ಮಳೆ

ಸುರಿಯುತಿದೆ ಎದೆಯೂರಿಗೆ ಮತ್ತೆ ಒಲವ ಮಳೆ
ಬೀಗಿ ನಲಿಯ ಬೇಡ ಮನವೆ ಹೇಳುವುದ ಕೇಳೆ
ಸಂಧಾನವೊ ಕರುಣೆಯಲಿ ಸಿಕ್ಕ ಅನುದಾನವೊ ತಿಳಿದವರ್ಯಾರು ಹೇಳೆ
ಯೋಚಿಸೊಮ್ಮೆ ಎದೆಯೂರಿನಲಿ ಬೆಳೆವ ಮುನ್ನ ಒಲವ ಬೆಳೆ

- ಶ್ರೀಕಾವ್ಯ

14 Apr 2018, 08:49 am

ಬೇಕು ಬೇಡ

ಬದುಕಲಿ ನಿತ್ಯ ನಡೆವುದು ಸದನ
ಬೇಕು ಬೇಡಗಳಿಗಾಗಿ ಮನಸೊಳಗೆ ಕದನ
ಬೇಕದ್ದು‌ ಸಿಕ್ಕಾಗ ಅರಳುವುದು ವದನ
ಸಿಗದಿದ್ದರೆ ಪಡೆಯಲು ನಿರಾಸೆಯೊಡನೆ ಶುರು ಸಂಧಾನ

- ಶ್ರೀಕಾವ್ಯ

14 Apr 2018, 08:48 am

ತವಕ

ಎದೆಯಾಳದ ಕವಿತೆಯೊಂದು ಪುಟಿದೆದ್ದು ಮಾತನಾಡುತಿದೆ ಭಾವ ತುಂಬಿದ ಪದಗಳಲ್ಲಿ ಕಂಡ ಮನಮೋಹಕ ಮನಸೊಂದನು ಸೇರಲೆಂದು ತನ್ನ ಚೆಲುವಿನಿಂದ.

ಬಿಡಲಾರದೆ ಈ ಮನ ತಾನು ಮೆಚ್ಚಿದ ಕವನ, ನಿನ್ನೊಡನೆ ಕೂಡಿ ಕಳಿದ ಕ್ಷಣಗಳ ಛಾಯಾಚಿತ್ರಗಳನ್ನು ಹುಡುಕುತಿದೆ ನೀ ನಿಂತ ಕಣ್ಣಲ್ಲಿ ತಾ ಸೇರುವ ಮುನ್ನ ಕರುನಾಡ ಮಣ್ಣಲ್ಲಿ.

ಮುಂದೆಂದೋ ಬಾರದ ಸಾಲೊಂದು ನೆನ್ನೆಯ ಕನವರಿಕೆಯಲಿ ಕಂಡಂತೆ, ಕ್ಷಣಮಾತ್ರ ಮರೆಯಾದರೂನು ನಿನ್ನ ಹುಡುಕಿ ಬರುವಂತೆ ಬರುತಿದೆಯೇ ಪದಗಳಲ್ಲಿ ನೀನಾಗಿ.

ಸನಿಹ ಸುಳಿಯದ ಶಶಿಯ ಬಿಂಬ ನೋಡಲೆಂದು ಕಣ್ಣಲ್ಲಿ ಒಂದು ಪ್ರೀತಿಯ ಚಿಲುಮೆಯನ್ನೇ ಸೃಷ್ಟಿಸಿದೆ ಬಚ್ಚಿಡಲು ನಿನ್ನ ಪ್ರತಿಬಿಂಬವಾದರೂ ನನ್ನಲ್ಲಿ.

- ಚುಕ್ಕಿ

11 Apr 2018, 08:01 pm

ಆಸರೆಯ ಹೊನಲು......

ಹುಟ್ಟುತಿರುವ ಕನಸೊಂದು
ಮೊಳಕೆಯಂತೆ ಚಿಗುರೊಡೆದು
ಬೆಳೆದು ಹೆಮ್ಮರವಾಗಿ ಮುದ್ದು
ಹಕ್ಕಿಗಳಿಗೆ ಆಸರೆ ನೀಡುವ ಬಯಕೆ
ಆದರೆ ಬೆಳೆಯುವ ಮುನ್ನವೆ
ಹಬ್ಬಿನಿಂತಿರುವ ಬಳ್ಳಿಗಳ ಬಂದವನ್ನೆ
ಕಳಚುವುದಾದರೆ ಹೇಗೆ
ತಾಯಿ ಬಳ್ಳಿಯ ಕಳಚಿದರೆ ಆ ಮರದ
ಜೀವ ಒಣಗಿ ಬರಿದಾಗಿ ಬಿಡುವುದು
ನೂರಾರೂ ಹಕ್ಕಿಗಳಿಗೆ ನೆರವಾಗುವ ಆ ಕನಸು
ನನಸಾಗಿಯೆ ಉಳಿದು ಬಿಡಲೆ ಹೀಗೆ
ಪುಟ್ಟದೊಂದು ಮೊಳಕೆ ದೊಡ್ಡದಾಗುವ ಮುನ್ನವೆ
ಕಳಚದಿರಿ ಹುಟ್ಟದೆ ಆಗೆ ಇದ್ದು ಬಿಡಲಿ
ಆ ಕನಸ್ಸು........... ಎಂದಿಗು .........

- ರಾಗಸಿರಿ....

11 Apr 2018, 01:25 pm

ಜೊತೆಗಾರ

ನಿನ್ನ ಮತ್ತು ನನ್ನ ಪ್ರೀತಿ ಪರಿಗಣಿಸಲಾಗಿದೆ
ನನ್ನ ಕೈ ನಿನ್ನ ಕೈಯಿಂದ ಬಿಟ್ಟು ಬೇರೆ ಆಗುತ್ತದೆ
ಯಾವಾಗಲೂ ನೀನು ನನ್ನ ಸಂಗಾತಿ ತಪ್ಪಲಾರದೆ
ನಿನ್ನ ಕೈಗಳ ಪರೀಮಳ ಇನ್ನೂ ನನ್ನ ಕೈಯಲ್ಲಿದೆ
ನಿನ್ನ ಆ ಸೊಗಸು ಇಂದು ನಿನ್ನ ನೆನಪು ನೀಡುತ್ತದೆ

- Bandopant Kulkarni Solapur

10 Apr 2018, 04:27 pm

ಕೃತಘ್ನ

ಸೌಂದರ್ಯದಲಿ ರತಿಯು, ಮಾತಿನಲ್ಲಿ ಸೋತಿಲ್ಲದ ವಕೀಲೆಯು, ಬುದ್ಧಿಮತ್ತೆಯಲಿ ಸರಿಸಾಟಿಯಿಲ್ಲದ ಸರಸ್ವತಿಯು ನೀನು;

ನಿನ್ನಂತರಂಗಕ್ಕೆ ಲಗ್ಗೆ ಇಡಲು ಸಾಲುಗಟ್ಟಿದ್ದ ಬೃಹಸ್ಪತಿಗಳನ್ನೇ ತೊರೆದು ನನ್ನ ಸನಿಹದಲ್ಲೇ ಸ್ವರ್ಗ ಸುಖವನ್ನು ಕಂಡುಕೊಂಡವಳು ನೀನು;

ಮರದ ಕೊರಡಿನಲ್ಲೊಂದು ಚಿಗುರೊಡೆಸಿ, ಅನುಪಯುಕ್ತ ಕಲ್ಲಿನಲ್ಲಿ ಅನರ್ಘ್ಯ ರತ್ನವನು ಕಡೆದು ತೆಗೆದು, ಹಳ್ಳಿಯ ಗಮಾರನಲ್ಲೂ ಸಂಸ್ಕಾರವನ್ನು ಬೆಳೆಸಿದ ಪ್ರತಿಭಾನ್ವಿತೆ ನೀನು;

ಸಾಲು ಸಾಲು ಹೊಗಳುಭಟ್ಟರು, ಹೆಗಲು ನೋಯುವಷ್ಟು ಹೂವಿನ ಹಾರಗಳು, ಕಿವಿ ಗಡಚಿಕ್ಕುವ ಚಪ್ಪಾಳೆಗಳ ಮದ್ಯೆ ಕಳೆದು ಹೋಗದಂತೆ ಎಚ್ಚರಿಸಿದವಳು ನೀನು;

ಪ್ರೀತಿ, ಪ್ರೇಮ, ಸ್ನೇಹ, ಮಮತೆ, ಮಮಕಾರಗಳ ಪರಿಚಯ ಮಾಡಿಕೊಟ್ಟು ,ಈ ಪ್ರಭೇದಗಳ ದುರುಪಯೋಗವಾಗದಂತೆ ತರಬೇತಿ ಕೊಟ್ಟಳು ನೀನು;

ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಹಕರಿಸಿದಳು ನೀನು;

ಕೊರಡಾಗಿ, ಕಲ್ಲಾಗಿ, ಹಳ್ಳಿಯ ಗಮಾರನಾಗಿ ಮತ್ತೆ ಬದಲಾಗಿ ಮೃದು - ಮಧುರ, ಸುಂದರ - ಸುಮಧುರ ಸಹೃದಯಿಯ ಹೃದಯವನ್ನು ಬಗೆದ ಕೃತಘ್ನ ನಾನು.

ಕ್ಷಮಿಸುವುದಾದರೊಮ್ಮೆ ಕ್ಷಮಿಸಿಬಿಡು,
ನೆಮ್ಮದಿಯಿಂದ ಬಾಳು, ನೂರ್ಕಾಲ ಬಾಳು,
ಸ್ನೇಹ ಮಾಡುವ ಮುನ್ನ ಇನ್ನೊಮ್ಮೆ ಚಿಂತಿಸಿ ನೋಡು.

- ಡಾ!ಸಿ.ಮುರಳೀಧರ

10 Apr 2018, 10:46 am