Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಹೃದಯದ ಬಡಿತ

ನನ್ನ ಹೃದಯದ ಬಡಿತ ಕೇಳು ಗೆಳತಿ....
ನನ್ನ ಉಸಿರು ನಿಲ್ಲುವ ಮೊದಲೇ...
ನನ್ನ ಹೃದಯದ ಬಡಿತದಲ್ಲಿ ನಿನ್ನ ಹೆಸರೇ ಪಿಸುಗುಡುವುದು ....
ನನ್ನ ಹೃದಯದ ಬಡಿತ ಕೇಳಿದ ಕ್ಷಣವೇ ಸೋತು ಶರಣಾಗುವೆ ನನ್ನ ಪ್ರೀತಿಗೆ.....
ನನ್ನ ಪ್ರೀತಿಯಾ ಕೋತಿಮರಿ.....

- ShruthiR

26 Mar 2018, 10:47 pm

ಅರಿ ನೀನು ನಿನ್ನನ್ನ. . . .

ಆತ್ಮವೆಂಬಾ ರಸವತ್ತಾದ ಇಳೆಯಲ್ಲಿ,
ಅಸ್ತಿ ಎನ್ನುವ ನಿನ್ನ ಆಸ್ತಿಯು,
ಸುತ್ತಿ‌‌ ಸುಸ್ತಾಗಿ ನಶಿಸಿ‌ ಹೋಗುವಾ ಮುನ್ನ,
ದುರ್ಗುಣಗಳ ಕಳೆಯನ್ನು ಕಳೆದು,
ಸದ್ಗುಣಗಳ ಬೀಜಗಳ ಬಿತ್ತಿ,
ಪ್ರೇಮವೆಂಬಾ ನೀರನ್ನು ಹಾಯಿಸಿ,
ಶಾಂತಿಯಿಂದ ಕಾದು ಕಾಪಾಡಿ,
ಪರಿಶುದ್ಧತೆಯ ಫಸಲನ್ನು ಬೆಳೆದು,
ಪ್ರೀತಿಯಿಂದ ಹಂಚಿ‌ ತಿನ್ನುವವಗೆ,
ಬೇಕಿಲ್ಲ ಯಾವ ದೈವದಾ ಗೊಡವೆ,
ಕಾಯಕವೇ ಅವಗೆ ತರುವುದು ಕೀರ್ತಿಯ ಒಡವೆ,
ಹೊತ್ತು ಹೋಗುವಾ ಮುನ್ನ,
ಅರಿ ನೀನು ನಿನ್ನನ್ನ,
ಅದುವೇ ಆತ್ಮ‌ಸಾಕ್ಷಾತ್ಕಾರದ ಸತ್ಯ ಪರಮಾನ್ನ. . .
----- ತಿಪ್ಪೇಸ್ವಾಮಿ -----

- tippu

26 Mar 2018, 06:00 pm

ಸಮಯ

ಎ! ಸಮಯ, ಏಕೆ ನೀನು ದುಃಖಿತನಾಗಿದ್ದೀಯಾ
ನೀನು ತೋರಿಸುತ್ತವೆ, ನಿ ನಿಮ್ಮನ್ನು ನಿಯಂತ್ರಿಸುತ್ತಿದ್ದೀಯಾ
ನಿ ಪ್ರಕೃತಿ ಸೇರಿದಂತೆ ವಿವಿಧ ಹೆಸರುಗಳನ್ನು ಹೊಂದಿರುವಿಯಾ
ಆದರೆ, ನಿನ್ನು ನಿಯಂತ್ರಿಸುತ್ತಿರುವವರು ಯಾರು ಹೇಳಯಾ
ಯಾವಾಗಲೂ ನಾವು ಒಂದು ಕಲಿತಿದ್ದೇವೆ
ನಿರ್ಮಾಪಕನು ಉತ್ಪಾದಿಸಿದಾದರೆ ಇಲ್ಲಿ ಏನೂ ಇಲ್ಲದೆಯೇ
ನಿನ್ನ ಮೌನನ್ನು ನಿನಗೆ ಬಿಡಬೇಕಾಗುತ್ತದೆ
ನಿನ್ನನ್ನು ನಿರ್ಮಿಸಿದ ಯಾರು ನಿಜವಾಗಿ ಹೇಳಯಾ
ನೀನು ಬಲವಂತ, ನೀನೆ ಎಲ್ಲೆಡೆ
ನೀ ಒಂದು ಮತ್ತು ಒಂದೇ, ನೀ ಎಲ್ಲವನ್ನೂ ಎಲ್ಲವೂ ಸೇರಿದ್ದು
ಕೋಪ, ಕಾಮ, ಆಸೆಗಳು ನಿನ್ನ ನಿಯಂತ್ರಣದಲ್ಲಿದೆಯಾ
ಇದಲ್ಲದೆ, ಅವರೊಂದಿಗೆ ನಿಮ್ಮೊಂದಿಗೆ ಪ್ರೀತಿಯು ತುಂಬಿದೆಯಾ
ನೀ ಶಕ್ತಿಯುತ ಮತ್ತು ವಾಹ್ ಪೂರ್ಣವಾಗಿರುವುದಕ್ಕಿಂತ ಹೆಚ್ಚು
ನಿನ್ನ ಪ್ರೀತಿಯ ಚಿಹ್ನೆ ಪ್ರೀತಿಯಿಂದ ಹೃದಯವನ್ನು ತುಂಬಿತ್ತುದೆಯಾ
ನಾವು ಎಲ್ಲವನ್ನೂ ಬಿಟ್ಟು,
ಸಮಯವಿಲ್ಲದೆ ಸಮಯದಲ್ಲಿ ಹೋಗುತ್ತೇವೆಯಾ
ನಿನ್ನ ಜೊತೆಯಲ್ಲಿ ಭಾವಿಸುತ್ತೇವೆ,
ನೀನು ನಮ್ಮವ ಮತ್ತು ನೀನು ನಮ್ಮ ಸಲುವಾಗಿಯಾ

ಬಂಡೂಪಂತ ಕುಲಕರ್ಣಿ ಸೊಲಾಪುರ

- Bandopant Kulkarni Solapur

25 Mar 2018, 08:29 pm

ಇಳಿ ಸಂಜೆ ಮಾತು

ರವಿ ಜಾರಿ ಚಂದ್ರ ಏರಿ ಕುಳಿತು ಚೆಲುವೆಗೆ ಹೇಳಿದ
ನೀ ಹೊರ ಬರದಿದ್ದರೆ ಒಳಿತು
ಬಂದರೆ ಎಲ್ಲರೂ ನೋಡುವರು ನಿನ್ನ
ನೋಡಿದರೆ ಪರವಾಗಿಲ್ಲಮರೆತೆ ಬಿಡುವರು ನನ್ನ

- ChetanJain

23 Mar 2018, 10:42 pm

ಅರ್ಧ ಮಾತು

ಮಳೆ ನಿಂತ ಮೇಲೂ ಮುಗಿಲಲ್ಲಿ ಮಿಂಚು
ಮನದಾಳದಲ್ಲಿ ನೂರಾರು ಸಂಚು
ಮುಗಿದ ಭಾಗಕ್ಕೂ ಹೊಸತನದ ನಂಟು
ಸಂಚೆಂಬ ಮಿಂಚು ನಂಟಿನೋಳಗಡೆ ಸುಳಿದರೆ ನಂಟು ಬಿಡಿಸಲಾದ ಕಗ್ಗಂಟು

- ChetanJain

23 Mar 2018, 08:03 pm

ಬದುಕಿನ ಬಣ್ಣ

ಬಯಲು ರಂಗದಿ ಬದಲಾಯಿತು ಬಣ್ಣ
ಬಿಳುಪಿದ್ದದ್ದು ಕಡುಗಪ್ಪು ನೋಡಿದರೆ
ಕೆರೆ ಆಚೆ ಎಲ್ಲೋ ಕಾಮನಬಿಲ್ಲು
ಹುಡುಕುತ್ತ ಹೊರಟರೆ ಅಲ್ಲೂ ಬಯಲು

- ವಿ ರಾ ಗಿ

- ChetanJain

23 Mar 2018, 05:30 pm

ಮುತ್ತಿನ ಮತ್ತು

ಗೆಳತಿ ನೀ ಅಂದು ನೀಡಿದ ಮುತ್ತಿನ
ಮತ್ತಿನಲ್ಲೆ ನಾ ಇಲ್ಲಿಯವರೆಗು ಜೀವಿಸುತ್ತಿದೆ.
ಮತ್ತಿನಿಂದ ಹೊರ ಬಂದಾಗಲೆ ತಿಳಿದಿದ್ದು
ಇದು ನೀ ನನ್ನ ಜೊತೆ ಇರುವ ತನಕವಷ್ಟೇ ಎಂದೂ.
ನಾ ಮತ್ತೆ ಆ ಮತ್ತಿನಲ್ಲೆ ಇರಬೇಕೆನಿಸುತ್ತಿದೆ.
ಆದರೆ ನೀ ನನ್ನಿಂದ ಇಂದು ದೂರ ಹೋಗಿರುವೆ.
ಆ ಮುತ್ತಿನ ಮತ್ತನ್ನು ಮರೆಯಲು ನನ್ನಿಂದಾಗುತ್ತಿಲ್ಲ
ಆದಷ್ಟು ಬೇಗ ನೀ ನನ್ನ ಬಳಿ ಬಂದು ಬಿಡು.

ನಿಮ್ಮ ಪ್ರೀತಿಯ ಹುಡುಗ "ರಾಜ್"

- ರಾಜ್

23 Mar 2018, 03:24 pm

ಹಕ್ಕಿಗಳ ಬೇಸಿಗೆಯ ವ್ಯತೆ



ಮಲೆನಾಡ ಮಡಿಲಿನಲಿ. ಪ್ರಕ್ರುತಿಯ ಸೊಬಗಿನಲಿ .ಬಗೆ ಬಗೆಯ ಹಕ್ಕಿಗಳು ಮೈ ಕೊಡವುತ ಕುಳಿತಿವೆ ಗೂಡಿನಲಿ. ಗರಿಯೊಳಗೆ ಮುದುಡಿ ಮಲಗಿವೆ ಮುದ್ದಾದ ಕಂದಮ್ಮಗಳು.

ದಾಹಕ್ಕೆ ನೀರನ್ನು ಬಯಸಿ ಹಾರಿವೆ. ಈ ಬರದ ಬೇಸಿಗೆಯಲ್ಲಿ .ಸುತ್ತಲೂ ನೀರಿಲ್ಲ ದಾಹಕ್ಕೆ ಬಾರವಿಲ್ಲ . ಪ್ರಕ್ರುತಿಯ ವಿನಾಶವೇ ಇದಕ್ಕೆ ಕಾರಣವೆಲ್ಲ .

ನಿಮ್ಮಲ್ಲಿ ನನ್ನದೊಂದು‌ ಬೇಡಿಕೆ

- ಸಂತೋಷ್//ಜೀತು

23 Mar 2018, 09:22 am

ತಡೆಗೋಡೆ

ತಡೆಗೋಡೆ
-------------------
ಪ್ರತಿಬಾರಿ ರಕ್ಷಣೆ ಮರೆತಾಗಲೆಲ್ಲ
ನಿರಾಶೆಯಾಗುತ್ತದೆ
ಎದುರಾಗಿ ಬರುವ ಹೊಸ ಸವಾಲುಗಳು
ಹಾಸಿಗೆಯಿದ್ದರೂ ದಿಂಬಿನ ಅನಿವಾರ್ಯ ಕರ್ಮ.

ಮುಖದ ಮೇಲಿನ ಮಂದಹಾಸ;
ಮರೆಯಾದ ಬಿಕ್ಕಳಿಕೆಗಳಾಗುವವು
ಒಡನೆಯೇ ಕಿರುಚಾಡುತ್ತವೆ!
'ಏನಾಗುವುದು' ಮತ್ತು' ಬಿಡುವುದಿಲ್ಲ '
ಎಂಬ ತಿಳುವಳಿಕೆಯ ಆ ನೋವು.

ನನ್ನಲ್ಲಿದ್ದ ಗಾಳಿಯ ಚೀಲ
ಒಡೆದು ಹೋಗುವ ಮುನ್ನ
ಉಸಿರಾಡುವಷ್ಟೂ ತಾಕತ್ತು ನನ್ನಲ್ಲಿಲ್ಲ.
'ನನ್ನ ಕತ್ತೆಗೆ ನನ್ನನ್ನು ಒದ್ದದ್ದಷ್ಟೇ ನೆನಪು'
ಉಸಿರಾಟದ ನಿಮಿಷಗಳು-ಗಂಟೆ-ದಿನಗಳು-ತಿಂಗಳು
ಒಟ್ಟಿಗೆ ಬರುತ್ತಿವೆ.

ಕಠಿಣ ಕೆಲಸದ ಗಾಯಗೊಂಡ ಹೃದಯ
ಸುತ್ತಲೂ ಕಾಯ್ದು ನಿಂತಿರುವ ತಡೆಗೋಡೆಗಳು
'ಬಾರ್ ಕೋಡ್' ಹಾಕಲು ಹವನಿಸುತ್ತಲಿದೆ ಸಾವು.
ಊಹಿಸಿಕೊಳ್ಳಲೇ ? ಹೆಚ್ಚು ಮೂಖ ಮತ್ತು
ಗಲಿಬಿಲಿಯ ಆ ನನ್ನ ಭಾವನೆ.

ಕನಿಷ್ಠ ಸಂಖ್ಯೆಯ ಆಳವಾದ ಬಣ್ಣಗಳನ್ನು
ನೋಡಿದಾಗಲೊಮ್ಮೆ
ನನ್ನನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲದಷ್ಟು
ನಿರಾಶೆ, ಮೌನ ಮತ್ತು ಹತಾಶೆ!
ತಡೆಗೋಡೆಗಳು ಇಲ್ಲವಾಗುತ್ತವೇನೋ
ನಾನೊಮ್ಮೆ ಬಿದ್ದು ಹೋದ ಮೇಲೆ
---ಸುರೇಶ ಜಕಾತಿ.ಜಮಖಂಡಿ.

- ಸುರೇಶ ಜಕಾತಿ.ಜಮಖಂಡಿ

22 Mar 2018, 11:10 pm

ಇದ್ದಿದ್ದೆ ದಿನ ಚಿಂತೆ

ಇದ್ದಿದ್ದೆ ದಿನ ಚಿಂತೆ
ಮಾಡು ನೀ ಹರುಷದ ಸಂತೆ..
ಬಂದಿದ್ದೆ ನಿನ್ನದಂತೆ
ಸಾಗು ನೀ ನಗುವಿನ ಜೊತೆ..
ಇದು ಮುಗಿಯದ ಕಥೆ
ಸೇರಿಸು ನಿನ್ನ ಸಾಹಸಗಾಥೆ.." ಪ "

ಈ ಬದುಕು ಒಂದು ಜಾತ್ರೆ
ಮಾರು ನೀ ಪ್ರೀತಿ ಸ್ನೇಹದ ಅಕ್ಷಯ ಪಾತ್ರೆ..
ನೂರು ವರ್ಷ ಸ್ವಾರ್ಥ ಸಾಮ್ರಾಜ್ಯ ಆಳಿದರೇನು
ಮೂರು ದಿನ ಸ್ನೇಹ ಸಾಗರ ಈಜಿದರೆ ಸಾಕು ನೀನು..
ಮಣ್ಣಿನೊಳಗೆ ಬರುವುದೇನು ನೋಟು
ಮನುಷನಿಗೆ ಇರಬೇಕು ಒಳ್ಳೆತನದ ನಂಟು..
ಹರುಷಕ್ಕೆ ದಾರಿ ಇದೆ ಇರುವ ಭಾಗ್ಯ ನೆನೆದರೆ
ನಿನಗೆ ಒಂದು ಹೆಸರಿದೆ ನಾಲ್ಕು ಜನರಿಗಾಗಿ ಬಾಳಿದರೆ..

ಏನು ನಷ್ಟ ಇಲ್ಲ ನೀ ಸತ್ತರೆ
ಏನು ಕಷ್ಟ ಆಗೋಲ್ಲ ನೀ ಧೈರ್ಯದಿ ಮುನ್ನಡೆದರೆ.
ಬಿರುಗಾಳಿ ಗುಡುಗು ಸಿಡಿಲು ಬಂದರೇನು
ಹಕ್ಕಿ ಗೂಡು ಕಟ್ಟಲು ಅಂಜುವುದೇನು..
ನೂರು ಸೋಲುಗಳು ಎದುರಾದರೇನು
ಗೆಲುವಿನ ಸಾಲಲಿ ನಿಲ್ಲುವೆ ಎನ್ನು..
ಅಪವಾದ ಅಪಮಾನ ಗೆದ್ದರೆ ನೀನು
ಈಜಗದ ದಂತಕಥೆ ಆಗುವೆ ನೀನು..

- ಸುರೇಶ್ ಟಿ ವಿ

22 Mar 2018, 08:41 pm